ಆದಿಕಾಂಡ 14:1-24

  • ಅಬ್ರಾಮ ಲೋಟನನ್ನ ಕಾಪಾಡಿದ (1-16)

  • ಮೆಲ್ಕಿಜೆದೇಕನಿಂದ ಅಬ್ರಾಮನಿಗೆ ಆಶೀರ್ವಾದ (17-24)

14  ಆಗ ಶಿನಾರಲ್ಲಿ+ ಅಮ್ರಾಫೆಲ ರಾಜನಾಗಿದ್ದ. ಎಲ್ಲಸಾರಿನಲ್ಲಿ ಅರ್ಯೋಕ ರಾಜನಾಗಿದ್ದ. ಏಲಾಮಿನಲ್ಲಿ+ ಕೆದೊರ್ಲಗೋಮರ+ ರಾಜನಾಗಿದ್ದ. ಗೋಯಿಮಿನಲ್ಲಿ ತಿದ್ಗಾಲ ರಾಜನಾಗಿದ್ದ.  ಈ ರಾಜರು ಐದು ರಾಜರ ಜೊತೆ ಅಂದ್ರೆ ಸೊದೋಮಿನ+ ರಾಜ ಬೆರಗ, ಗೊಮೋರದ+ ರಾಜ ಬಿರ್ಶಗ, ಅದ್ಮಾದ ರಾಜ ಶಿನಾಬ, ಚೆಬೋಯೀಮಿನ+ ರಾಜ ಶೆಮೇಬರ ಮತ್ತು ಬೆಳದ (ಅಂದ್ರೆ ಚೋಗರಿನ) ರಾಜನ ಜೊತೆ ಯುದ್ಧ ಮಾಡಿದ್ರು.  ಇವರೆಲ್ರೂ ತಮ್ಮ ತಮ್ಮ ಸೈನ್ಯದ ಜೊತೆ ಸಿದ್ದೀಮ್‌ ಕಣಿವೆಗೆ+ ಬಂದ್ರು. ಈ ಕಣಿವೆ ಈಗ ಲವಣ ಸಮುದ್ರವಾಗಿದೆ.*+  ಆ ಐದು ರಾಜರು 12 ವರ್ಷ ಕೆದೊರ್ಲಗೋಮರ ರಾಜನ ಮಾತು ಕೇಳಿದ್ರು. ಆದ್ರೆ 13ನೇ ವರ್ಷದಲ್ಲಿ ಆ ರಾಜನಿಗೆ ತಿರುಗಿಬಿದ್ರು.  ಹಾಗಾಗಿ 14ನೇ ವರ್ಷದಲ್ಲಿ ಕೆದೊರ್ಲಗೋಮರ, ಅವನ ಜೊತೆ ಇದ್ದ ರಾಜರು ಬಂದು ಅಷ್ಟರೋತ್‌ ಕರ್ನಯಿಮಿನಲ್ಲಿ ರೆಫಾಯರನ್ನ, ಹಾಮಿನಲ್ಲಿ ಜೂಜ್ಯರನ್ನ, ಶಾವೆಕಿರ್ಯಾತಯಿಮಿನಲ್ಲಿ ಏಮಿಯರನ್ನ+ ಸೋಲಿಸಿದ್ರು.  ಸೇಯೀರ್‌ ಬೆಟ್ಟದಲ್ಲಿದ್ದ+ ಹೋರಿಯರನ್ನ+ ಅಲ್ಲಿಂದ ಕಾಡಲ್ಲಿರೋ* ಏಲ್ಪಾರಾನ್‌ ತನಕ ಬೆನ್ನಟ್ಟಿ ಸೋಲಿಸಿದ್ರು.  ಆಮೇಲೆ ಅವರು ಹಿಂದೆ ಬಂದು ಕಾದೇಶ್‌+ ಅನ್ನೋ ಹೆಸರಿನ ಎನ್ಮಿಷ್ಪಾಟಿಗೆ ಹೋದ್ರು, ಅಮಾಲೇಕ್ಯರ+ ಪ್ರದೇಶವನ್ನೆಲ್ಲ ವಶಮಾಡ್ಕೊಂಡ್ರು. ಹಚಚೋನ್‌-ತಾಮರಿನಲ್ಲಿ+ ವಾಸ ಮಾಡ್ತಿದ್ದ ಅಮೋರಿಯರನ್ನೂ+ ಸೋಲಿಸಿದ್ರು.  ಆಗ ಸೊದೋಮ್‌, ಗೊಮೋರ, ಅದ್ಮಾ, ಚೆಬೋಯೀಮ್‌, ಬೆಳ (ಅಂದರೆ ಚೋಗರ್‌) ಈ ಪಟ್ಟಣಗಳ ರಾಜರು ಹೋಗಿ ಸಿದ್ದೀಮ್‌ ಕಣಿವೆಯಲ್ಲಿ ಅವರ ವಿರುದ್ಧ ಯುದ್ಧ ಮಾಡಿದ್ರು.  ಅಂದ್ರೆ ಏಲಾಮಿನ ರಾಜ ಕೆದೊರ್ಲಗೋಮರ, ಗೋಯಿಮಿನ ರಾಜ ತಿದ್ಗಾಲ, ಶಿನಾರಿನ ರಾಜ ಅಮ್ರಾಫೆಲ, ಎಲ್ಲಸಾರಿನ ರಾಜ ಅರ್ಯೋಕನ+ ವಿರುದ್ಧ ಯುದ್ಧ ಮಾಡಿದ್ರು. ಹೀಗೆ ನಾಲ್ಕು ರಾಜರು ಐದು ರಾಜರ ವಿರುದ್ಧ ಯುದ್ಧ ಮಾಡಿದ್ರು. 10  ಇದರಿಂದ ಸೊದೋಮ್‌ ಮತ್ತು ಗೊಮೋರದ ರಾಜರು ಜೀವ ಉಳಿಸ್ಕೊಳ್ಳೋಕೆ ಅಲ್ಲಿಂದ ಓಡಿಹೋದ್ರು. ಆದ್ರೆ ಓಡಿ ಹೋಗುವಾಗ ಸಿದ್ದೀಮ್‌ ಕಣಿವೆಯಲ್ಲಿ ಟಾರಿನ ತರ ಇದ್ದ ಅಂಟಿನ ಹೊಂಡದಲ್ಲಿ ಬಿದ್ರು. ಉಳಿದವರು ಬೆಟ್ಟ ಪ್ರದೇಶಕ್ಕೆ ಓಡಿಹೋದ್ರು. 11  ಆಮೇಲೆ ಗೆದ್ದ ಆ ನಾಲ್ಕು ರಾಜರು ಸೊದೋಮ್‌ ಮತ್ತು ಗೊಮೋರದಲ್ಲಿದ್ದ ಎಲ್ಲ ಸೊತ್ತನ್ನ, ಅಲ್ಲಿದ್ದ ಎಲ್ಲ ಆಹಾರ ತಗೊಂಡು ಹೋದ್ರು.+ 12  ಅವರು ಅಬ್ರಾಮನ ಸಹೋದರನ ಮಗ ಅಂದ್ರೆ ಸೊದೋಮಲ್ಲಿ ವಾಸವಾಗಿದ್ದ ಲೋಟನನ್ನ ಹಿಡ್ಕೊಂಡು ಹೋದ್ರು.+ ಅವನ ಸೊತ್ತನ್ನೂ ತಗೊಂಡು ಹೋದ್ರು. 13  ಅಲ್ಲಿಂದ ಒಬ್ಬ ತಪ್ಪಿಸ್ಕೊಂಡು ಇಬ್ರಿಯನಾದ ಅಬ್ರಾಮನ ಹತ್ರ ಬಂದು ನಡೆದ ವಿಷ್ಯ ಹೇಳಿದ. ಆಗ ಅಬ್ರಾಮ ಅಮೋರಿಯನಾದ ಮಮ್ರೆಗೆ ಸೇರಿದ್ದ ದೊಡ್ಡ ಮರಗಳ ಹತ್ರ ಡೇರೆ ಹಾಕೊಂಡಿದ್ದ.+ ಮಮ್ರೆ ಎಷ್ಕೋಲ್‌ ಮತ್ತು ಆನೇರನ ಅಣ್ಣ.+ ಒಬ್ಬರಿಗೊಬ್ರು ಸಹಾಯ ಮಾಡ್ತೀವಿ ಅಂತ ಅಬ್ರಾಮ ಮತ್ತು ಆ ಮೂರು ಜನ ಒಪ್ಪಂದ ಮಾಡ್ಕೊಂಡಿದ್ರು. 14  ತನ್ನ ಸಂಬಂಧಿಕನನ್ನ+ ಹಿಡ್ಕೊಂಡು ಹೋಗಿದ್ದಾರೆ ಅಂತ ಅಬ್ರಾಮಗೆ ಗೊತ್ತಾದ ತಕ್ಷಣ ತನ್ನ ಮನೆಯಲ್ಲೇ ಹುಟ್ಟಿ ಬೆಳೆದು ಯುದ್ಧ ತರಬೇತಿ ಪಡೆದಿದ್ದ 318 ಸೇವಕರನ್ನ ಕೂಡಿಸಿದ. ಅವರನ್ನ ಕರ್ಕೊಂಡು ಆ ರಾಜರನ್ನ ದಾನಿನ+ ತನಕ ಬೆನ್ನಟ್ಟಿದ. 15  ರಾತ್ರಿ ಅವನು ತನ್ನ ಸೇವಕರನ್ನ ಬೇರೆ ಬೇರೆ ಗುಂಪು ಮಾಡಿದ. ಆಮೇಲೆ ಅವನೂ ಅವನ ಸೇವಕರೂ ಆ ರಾಜರ ಮೇಲೆ ದಾಳಿ ಮಾಡಿ ಅವರನ್ನ ಸೋಲಿಸಿದ್ರು. ಆಮೇಲೆ ಅಬ್ರಾಮ ಅವರನ್ನ ದಮಸ್ಕದ ಉತ್ತರಕ್ಕಿರೋ ಹೋಬಾದ ತನಕ ಅಟ್ಟಿಸ್ಕೊಂಡು ಹೋದ. 16  ಅವನು ಅವ್ರಿಂದ ಎಲ್ಲ ಸೊತ್ತನ್ನ ಬಿಡಿಸ್ಕೊಂಡು ಬಂದ. ತನ್ನ ಸಂಬಂಧಿಕ ಲೋಟನನ್ನ, ಲೋಟನಿಗೆ ಸೇರಿದ ಸೊತ್ತನ್ನ, ಸ್ತ್ರೀಯರನ್ನ, ಬೇರೆ ಜನ್ರನ್ನ ಬಿಡಿಸ್ಕೊಂಡು ಬಂದ. 17  ಕೆದೊರ್ಲಗೋಮರ ಮತ್ತು ಅವನ ಜೊತೆ ಇದ್ದ ಬೇರೆ ರಾಜರನ್ನ ಅಬ್ರಾಮ ಸೋಲಿಸಿ ವಾಪಸ್ಸಾದ ಮೇಲೆ ಸೊದೋಮಿನ ರಾಜ ಅಬ್ರಾಮನನ್ನ ಭೇಟಿ ಮಾಡೋಕೆ ಶಾವೆ ಕಣಿವೆಗೆ ಬಂದ. ಇದಕ್ಕೆ ರಾಜನ ಕಣಿವೆ+ ಅನ್ನೋ ಹೆಸರಿದೆ. 18  ಸಾಲೇಮಿನ ರಾಜ+ ಮೆಲ್ಕಿಜೆದೇಕ+ ಬಂದು ಅಬ್ರಾಮನನ್ನ ಭೇಟಿಯಾಗಿ ಅವನಿಗೆ ರೊಟ್ಟಿ ದ್ರಾಕ್ಷಾಮದ್ಯ ಕೊಟ್ಟ. ಮೆಲ್ಕಿಜೆದೇಕ ಸರ್ವೋನ್ನತ ದೇವರ ಪುರೋಹಿತನಾಗಿದ್ದ.+ 19  ಅವನು ಅಬ್ರಾಮನನ್ನ ಆಶೀರ್ವದಿಸ್ತಾ, “ಭೂಮಿ ಆಕಾಶವನ್ನ ನಿರ್ಮಿಸಿದ ಸರ್ವೋನ್ನತ ದೇವರುನಿನ್ನನ್ನ ಆಶೀರ್ವದಿಸಲಿ. 20  ನಿನ್ನ ಶತ್ರುಗಳನ್ನ ನಿನ್ನ ಕೈಗೆ ಒಪ್ಪಿಸಿದಸರ್ವೋನ್ನತ ದೇವರನ್ನ ಹೊಗಳಲಿ” ಅಂದ. ಅಬ್ರಾಮ ಬಿಡಿಸಿ ತಂದ ಎಲ್ಲ ಸೊತ್ತಿಂದ ಹತ್ತನೇ ಒಂದು ಭಾಗ ಅವನಿಗೆ ಕೊಟ್ಟ.+ 21  ಆಮೇಲೆ ಸೊದೋಮಿನ ರಾಜ ಅಬ್ರಾಮನಿಗೆ “ಈ ಜನ್ರನ್ನ ನನಗೆ ಕೊಡು, ಸೊತ್ತನ್ನೆಲ್ಲ ನೀನೇ ಇಟ್ಕೊ” ಅಂದ. 22  ಅದಕ್ಕೆ ಅಬ್ರಾಮ “ಭೂಮಿ ಆಕಾಶವನ್ನ ಸೃಷ್ಟಿ ಮಾಡಿದ ಸರ್ವೋನ್ನತ ದೇವರಾದ ಯೆಹೋವನ ಕಡೆಗೆ ನಾನು ಕೈಯೆತ್ತಿ ಮಾತು ಕೊಡ್ತೀನಿ. 23  ನಿನ್ನ ಆಸ್ತಿಯಲ್ಲಿ ನನಗೇನೂ ಬೇಡ. ಒಂದು ನೂಲಾಗಲಿ ಚಪ್ಪಲಿ ದಾರ ಆಗ್ಲಿ ನಿನ್ನಿಂದ ತಗೊಳಲ್ಲ. ಯಾಕಂದ್ರೆ ‘ನನ್ನಿಂದಾನೇ ಅಬ್ರಾಮ ಶ್ರೀಮಂತ ಆದ’ ಅಂತ ನೀನು ಹೇಳಬಾರದು. 24  ನನ್ನ ಜೊತೆ ಇರೋ ಹುಡುಗರು ಈಗಾಗ್ಲೇ ತಗೊಂಡ ಊಟ ಬಿಟ್ಟು ಬೇರೇನೂ ನನಗೆ ಬೇಡ. ನನ್ನ ಜೊತೆ ಯುದ್ಧಕ್ಕೆ ಬಂದಿದ್ದ ಆನೇರ, ಎಷ್ಕೋಲ್‌, ಮಮ್ರೆ+ ಅವರವರ ಭಾಗ ತಗೊಳ್ಳಲಿ” ಅಂದ.

ಪಾದಟಿಪ್ಪಣಿ

ಅಂದ್ರೆ, ಮೃತ ಸಮುದ್ರ.
ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.