ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹತಾಶೆಯನ್ನು ಹೋಗಲಾಡಿಸಲು...

ಹತಾಶೆಯನ್ನು ಹೋಗಲಾಡಿಸಲು...

ಹತಾಶೆಯನ್ನು ಹೋಗಲಾಡಿಸಲು...

ಕಷ್ಟ ಯಾರಿಗೂ ತಪ್ಪಿದ್ದಲ್ಲ, ಕೆಲವರಿಗಂತೂ ಕಷ್ಟ ಜಾಸ್ತಿ. ಆದರೆ ಆ ಕಷ್ಟವನ್ನು ನೀವು ಹೇಗೆ ತಗೊಳ್ತೀರೋ ಅದ್ರಿಂದ ನೀವು ಆಶಾವಾದಿನಾ ನಿರಾಶಾವಾದಿನಾ ಅಂತ ಗೊತ್ತಾಗುತ್ತದೆ. ಇದು ಇಂದಿನ ಅನೇಕ ತಜ್ಞರ ನಂಬಿಕೆ. ಕೆಲವರಿಗೆ ಕಷ್ಟಗಳು ಬಂದರೂ ಸೋತುಹೋಗಲ್ಲ, ಗುರಿ ಸಾಧಿಸುವ ತನಕ ಪ್ರಯತ್ನ ಬಿಡಲ್ಲ. ಇನ್ನು ಕೆಲವರು ಚಿಕ್ಕಪುಟ್ಟ ಕಷ್ಟಕ್ಕೇ ಆಕಾಶ ತಲೆ ಮೇಲೆ ಬಿದ್ದ ಹಾಗೆ ಕೂತು ಪ್ರಯತ್ನ ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಯಾಕೆ?

ನೀವು ಕೆಲಸ ಹುಡುಕುತ್ತಾ ಇದ್ದೀರ ಅಂತ ನೆನಸಿ. ಇಂಟರ್‌ವ್ಯುಗೆ ಹೋಗಿದ್ದೀರ. ಆದರೆ ನಿಮ್ಮನ್ನು ರಿಜೆಕ್ಟ್‌ ಮಾಡಿಬಿಡ್ತಾರೆ. ಆಗ ನಿಮಗೆ ಹೇಗೆ ಅನಿಸುತ್ತೆ? ನಿಮ್ಮನ್ನೇ ಅವರು ರಿಜೆಕ್ಟ್‌ ಮಾಡಿದ್ದಾರೆ ಅಂತ ನೆನಸಿ ‘ನನ್ನಂಥವರಿಗೆ ಯಾರೂ ಕೆಲಸ ಕೊಡಲ್ಲ, ಈ ಜನ್ಮದಲ್ಲಿ ನನಗೆ ಕೆಲಸ ಸಿಗಲ್ಲ’ ಅಂತ ಅಂದುಕೊಳ್ಳಬಹುದು. ಅಥವಾ ಒಂದು ಕೆಲಸ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಜೀವನಪೂರ್ತಿ ‘ನಾನೊಬ್ಬ ನಾಲಾಯಕ್ಕು. ನನ್ನಿಂದ ಯಾರಿಗೂ ಉಪಯೋಗ ಇಲ್ಲ’ ಅಂತ ನೆನಸಬಹುದು. ಒಟ್ಟಿನಲ್ಲಿ ಇಂಥ ಯೋಚನೆಯೇ ಹತಾಶೆ.

ಹತಾಶೆಯನ್ನು ಹೊಡೆದೋಡಿಸಿ

ಮನಸ್ಸಿನಲ್ಲಿ ಮೂಡುವ ಹತಾಶೆಯ ಭಾವನೆಯನ್ನು ಹೊಡೆದೋಡಿಸಲು ನೀವು ಏನು ಮಾಡಬೇಕು? ಮೊದಲು ಅಂಥ ನಕಾರಾತ್ಮಕ ಯೋಚನೆಗಳನ್ನು ಗುರುತಿಸಿ. ಎರಡನೇದು, ಅಂಥ ಯೋಚನೆಗಳನ್ನು ಕಿತ್ತೆಸೆಯಿರಿ. ಇಂಟರ್‌ವ್ಯುನಲ್ಲಿ ನೀವು ಸೆಲೆಕ್ಟ್‌ ಆಗದೇ ಇರಲಿಕ್ಕಾಗಿ ಬೇರೆ ಏನಾದ್ರೂ ಕಾರಣ ಇರಬಹುದಾ ಅಂತ ಯೋಚಿಸಿ. ಆ ಕಂಪನಿಯ ಬಾಸ್‌ ನಿಮ್ಮನ್ನು ಕಂಡರೆ ಇಷ್ಟ ಆಗಿಲ್ಲ ಅಂತ ರಿಜೆಕ್ಟ್‌ ಮಾಡಿದ್ರಾ? ಅಥವಾ ಆ ಕೆಲಸಕ್ಕೆ ಬೇಕಾದ ಅರ್ಹತೆಗಳಿರುವ ಇನ್ನೊಬ್ಬರನ್ನು ಎದುರುನೋಡುತ್ತಿದ್ರಾ?

ನೀವು ಕುಗ್ಗಿ ಹೋಗದೆ ಇರಲಿಕ್ಕೆ ಇನ್ನೊಂದು ವಿಷಯವನ್ನು ಮಾಡಿ. ಯಾವಾಗಲೋ ಒಂದು ಸಲ ಇಂಟರ್‌ವ್ಯುನಲ್ಲಿ ಫೇಲ್‌ ಆದ್ರಿ ಅಂದ ತಕ್ಷಣ ಜೀವನದಲ್ಲೇ ಫೇಲ್‌ ಆಗಿಬಿಟ್ರಿ ಅಂತಾನಾ? ನೀವು ದೇವರ ಸೇವೆಯಲ್ಲಿ ಎಷ್ಟೆಷ್ಟೋ ಮಾಡಿರಬಹುದು, ಕುಟುಂಬದಲ್ಲಿ ಒಳ್ಳೇ ವ್ಯಕ್ತಿ ಆಗಿರಬಹುದು, ಒಳ್ಳೇ ಫ್ರೆಂಡ್ಸ್‌ ಮಾಡಿಕೊಂಡಿರಬಹುದು. ಇವೆಲ್ಲಾ ನಿಮಗೆ ಸಿಕ್ಕಿದ ಯಶಸ್ಸುಗಳು ಅಲ್ವಾ? ‘ಮುಂದೆ ಹಾಗೆ ಆಗಬಹುದು, ಹೀಗೆ ಆಗಬಹುದು’ ಅಂತ ನೀವೇ ಏನೇನೋ ಕಲ್ಪನೆ ಮಾಡಿಕೊಳ್ಳಬೇಡಿ. ಕೆಲಸನೇ ಸಿಗಲ್ಲ ಅಂತ ಹೇಗೆ ಹೇಳುತ್ತೀರಾ? ನಿಮಗೇನು ಗೊತ್ತಾ? ನಕಾರಾತ್ಮಕ ಯೋಚನೆಗಳನ್ನು ತೆಗೆದುಹಾಕಲಿಕ್ಕೆ ನೀವು ಇನ್ನೇನು ಮಾಡಬಹುದು ನೋಡಿ.

ಗುರಿ ಇಡಿ

ಇತ್ತೀಚಿನ ವರ್ಷಗಳಲ್ಲಿ ಸಂಶೋಧಕರು ನಿರೀಕ್ಷೆಗೆ ಆಸಕ್ತಿಕರ ವಿವರಣೆ ಕೊಟ್ಟಿದ್ದಾರೆ. ಅವರ ಪ್ರಕಾರ ನಿರೀಕ್ಷೆ ಅಂದ್ರೆ ನೀವಿಟ್ಟಿರುವ ಗುರಿಗಳನ್ನು ಮುಟ್ಟಲಿಕ್ಕೆ ಆಗುತ್ತದೆ ಅಂತ ನಂಬುವುದೇ. ಹೀಗೆ ನಂಬುವುದರಿಂದ ಸಕಾರಾತ್ಮಕವಾಗಿ ಯೋಚಿಸಲು, ಗುರಿ ಮುಟ್ಟಲು ಆಗುತ್ತದೆ. ನಿರೀಕ್ಷೆ ಬಗ್ಗೆ ಇನ್ನೂ ಹೆಚ್ಚು ವಿಷಯ ಮುಂದಿನ ಲೇಖನದಲ್ಲಿ ನೋಡ್ತೇವೆ.

ಈಗಾಗಲೇ ನಾವು ಗುರಿಗಳನ್ನು ಇಟ್ಟು ಅವನ್ನು ಮುಟ್ಟಿದ್ದರೆ ಇನ್ನು ಮುಂದೆನೂ ಗುರಿಗಳನ್ನು ಮುಟ್ಟುತ್ತೇವೆ ಎಂಬ ನಂಬಿಕೆ ಬರುತ್ತದೆ. ಒಂದು ಸಲನೂ ಗುರಿ ಇಟ್ಟಿಲ್ಲ ಅಂದ್ರೆ ಮುಂದಕ್ಕೆ ಗುರಿ ಇಡೋದೇ ಕಷ್ಟ. ನಿಮಗೆ ಏನಾದ್ರೂ ಗುರಿ ಇದೆಯಾ? ಪ್ರತಿದಿನದ ಕೆಲಸಗಳಲ್ಲಿ ಮುಳುಗಿ ಹೋದ್ರೆ ಜೀವನದಲ್ಲಿ ಯಾವುದು ಮುಖ್ಯ, ನಮ್ಮ ಗುರಿ ಏನು ಅಂತನೇ ಮರೆತುಹೋಗುತ್ತೇವೆ. ಹಾಗಾಗಿ ಬೈಬಲ್‌ ಹೇಳುವ ಪ್ರಕಾರ “ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು.”—ಫಿಲಿಪ್ಪಿ 1:10.

ನಮ್ಮ ಜೀವನದಲ್ಲಿ ಯಾವುದು ಮುಖ್ಯ ಅಂತ ಗುರುತಿಸಿದರೆ ಕೆಲವು ಪ್ರಾಮುಖ್ಯ ಗುರಿಗಳನ್ನು ಮುಟ್ಟಲು ಆಗುತ್ತದೆ. ಆ ಗುರಿ ದೇವರ ಸೇವೆಗೆ, ಕುಟುಂಬಕ್ಕೆ ಅಥವಾ ನಮ್ಮ ಜೀವನಕ್ಕೆ ಸಂಬಂಧಪಟ್ಟದ್ದಾಗಿ ಇರಬಹುದು. ಒಂದೇ ಸಲಕ್ಕೆ ಹತ್ತಾರು ಗುರಿಗಳನ್ನು ಇಡಬಾರದು. ಅಲ್ಲದೆ, ನಮ್ಮಿಂದ ಮುಟ್ಟಲಿಕ್ಕೆ ಆಗುವ ಗುರಿಗಳನ್ನೇ ಇಡಬೇಕು. ಮುಟ್ಟಲಿಕ್ಕೆ ಆಗದೇ ಇರುವ ಗುರಿ ಇಟ್ಟರೆ ಟೆನ್‌ಶನ್‌ ಜಾಸ್ತಿ ಆಗುತ್ತೆ, ಕುಗ್ಗಿ ಹೋಗುತ್ತೇವೆ. ಆಮೇಲೆ ಗುರಿನೂ ಬೇಡ, ಏನೂ ಬೇಡ ಅಂತ ಸುಮ್ಮನಾಗುತ್ತೇವೆ. ಹಾಗಾಗಿ ದೊಡ್ಡ ದೊಡ್ಡ ಗುರಿ ಮುಟ್ಟಬೇಕಾದರೆ ಸ್ವಲ್ಪ ಸಮಯದಲ್ಲಿ ಮುಟ್ಟಲಿಕ್ಕೆ ಆಗುವಂಥ ಚಿಕ್ಕ ಚಿಕ್ಕ ಗುರಿಗಳನ್ನು ಇಡಬೇಕು.

“ಮನಸ್ಸಿದ್ದರೆ ಮಾರ್ಗ” ಅಲ್ವಾ? ಒಂದು ಗುರಿ ಮುಟ್ಟಬೇಕು ಅಂತ ತೀರ್ಮಾನ ಮಾಡಿಕೊಂಡರೆ ಅದನ್ನು ಮುಟ್ಟಲಿಕ್ಕೆ ಛಲ ಬೇಕು, ಆಸೆ ಬೇಕು, ಗಟ್ಟಿಮನಸ್ಸು ಬೇಕು. ನಾವಿಟ್ಟಿರುವ ಗುರಿ ಎಷ್ಟು ಮುಖ್ಯ, ಅದನ್ನು ಮುಟ್ಟಿದರೆ ಏನೇನು ಪ್ರಯೋಜನ ಸಿಗುತ್ತೆ ಅಂತ ಯೋಚಿಸುತ್ತಾ ಇದ್ದರೆ ಛಲ ಬಿಡಲ್ಲ. ಅಡೆತಡೆಗಳು ಬಂದೇ ಬರುತ್ತೆ. ಆಗ ಎಲ್ಲ ಮುಗಿದು ಹೋಯಿತು ಅಂತ ಅಂದುಕೊಳ್ಳದೆ ಆ ಅಡೆತಡೆಗಳನ್ನು ಸವಾಲಾಗಿ ತಕ್ಕೊಳ್ಳಬೇಕು.

ನಮ್ಮ ಗುರಿ ಮುಟ್ಟಲಿಕ್ಕೆ ಏನೆಲ್ಲ ದಾರಿಗಳಿವೆ ಎಂದು ಯೋಚಿಸಬೇಕು. ನಿರೀಕ್ಷೆ ಎಷ್ಟು ಮುಖ್ಯ ಎಂದು ತಿಳಿದುಕೊಳ್ಳಲು ಆಥರ್‌ C.R. ಸ್ನಯ್‌ಡರ್‌ ಆಳವಾಗಿ ಅಧ್ಯಯನ ಮಾಡಿದ್ದಾನೆ. ಒಂದು ಗುರಿ ಮುಟ್ಟಲಿಕ್ಕೆ ಬೇರೆ ಬೇರೆ ದಾರಿಗಳನ್ನು ಹುಡುಕಬೇಕು ಅನ್ನೋದು ಅವನ ಸಲಹೆ. ಆಗ ಗುರಿ ಮುಟ್ಟಲಿಕ್ಕೆ ನಾವು ಹಿಡಿದಿರುವ ದಾರಿಯಲ್ಲಿ ಯಶಸ್ಸು ಕಾಣಲಿಲ್ಲ ಅಂದ್ರೆ ಇನ್ನೊಂದು ದಾರಿ ಹಿಡಿಯಬೇಕು. ಅದೂ ಆಗಲಿಲ್ಲಾಂದ್ರೆ ಮತ್ತೊಂದು ದಾರಿ ಹಿಡಿಯಬೇಕು.

ಇಟ್ಟಿರುವ ಗುರಿಯನ್ನು ಯಾವಾಗ ಬದಲಾಯಿಸಬೇಕು ಅಂತನೂ ಕಲಿಯಬೇಕು ಎಂದು ಸ್ನಯ್‌ಡರ್‌ ಹೇಳುತ್ತಾನೆ. ಇಟ್ಟಿರುವ ಗುರಿಯನ್ನು ಮುಟ್ಟಲಿಕ್ಕೆ ಆಗೋದೇ ಇಲ್ಲ ಅಂತ ಗೊತ್ತಾದಾಗ ಕೊರಗುತ್ತಾ ಇದ್ದರೆ ಕುಗ್ಗಿ ಹೋಗುತ್ತೇವೆ. ಹಾಗಾಗಿ ಅಂಥ ಸಮಯದಲ್ಲಿ ಮುಟ್ಟಲಿಕ್ಕೆ ಆಗುವಂಥ ಬೇರೆ ಗುರಿ ಇಟ್ಟರೆ ಮನಸ್ಸು ಉಲ್ಲಾಸದಿಂದ ಅರಳುತ್ತದೆ.

ಇದಕ್ಕೊಂದು ಒಳ್ಳೇ ಉದಾಹರಣೆ ಬೈಬಲಲ್ಲಿದೆ. ರಾಜ ದಾವೀದನಿಗೆ ತನ್ನ ದೇವರಾದ ಯೆಹೋವನಿಗೋಸ್ಕರ ಒಂದು ದೇವಾಲಯ ಕಟ್ಟುವ ಗುರಿಯಿತ್ತು. ಇದು ಅವನಿಗೆ ತುಂಬ ಇಷ್ಟವಾದ ಗುರಿ. ಆದರೆ ದೇವರು ದಾವೀದನಿಗೆ ದೇವಾಲಯವನ್ನು ನಿನ್ನ ಮಗ ಸೊಲೊಮೋನ ಕಟ್ಟಲಿ ಅಂದ. ಆಗ ದಾವೀದನಿಗೆ ತುಂಬ ನಿರಾಶೆ ಆಯಿತು. ಆದರೆ ಅವನು ಕುಗ್ಗಿ ಹೋಗಲಿಲ್ಲ. ಬದಲಿಗೆ ಆ ಗುರಿ ಬಿಟ್ಟು ಬೇರೆ ಗುರಿ ಇಟ್ಟ. ದೇವಾಲಯ ಕಟ್ಟಲಿಕ್ಕೆ ಬೇಕಾದ ಹಣ, ಸಾಮಗ್ರಿಗಳನ್ನೆಲ್ಲ ಕೂಡಿಸಿಡುವ ಗುರಿ ಇಟ್ಟ. ತುಂಬ ಶ್ರಮ ಹಾಕಿ ಆ ಗುರಿ ಮುಟ್ಟಿದ.—1 ಅರಸು 8:17-19; 1 ಪೂರ್ವಕಾಲವೃತ್ತಾಂತ 29:3-7.

ಹತಾಶೆ ಹೊಡೆದೋಡಿಸುವುದರಲ್ಲಿ, ಸಕಾರಾತ್ಮಕವಾಗಿ ಯೋಚಿಸುವುದರಲ್ಲಿ, ಗುರಿ ಸಾಧಿಸುವುದರಲ್ಲಿ ನಾವು ಯಶಸ್ಸು ಗಳಿಸಬಹುದು. ಆದರೂ ಕೆಲವೊಮ್ಮೆ ನಿರೀಕ್ಷೆ ಕಳೆದುಕೊಳ್ಳುವ ಸನ್ನಿವೇಶಗಳು ಬರುತ್ತವೆ. ಬಡತನ, ಯುದ್ಧ, ಅನ್ಯಾಯ, ಕಾಯಿಲೆ, ಸಾವು ಇವೆಲ್ಲ ಕೈಮೀರಿದ ಸನ್ನಿವೇಶಗಳು. ಆಗಲೂ ನಾವು ಹೇಗೆ ನಿರೀಕ್ಷೆಯಿಂದ ಇರಬಹುದು?

[ಪುಟ 7 ರಲ್ಲಿರುವ ಚಿತ್ರ]

ನೀವು ಇಷ್ಟಪಟ್ಟಿದ ಕೆಲಸ ಸಿಗಲಿಲ್ಲ ಅಂದ್ರೆ ನಿಮಗೆ ಈ ಜನ್ಮದಲ್ಲಿ ಕೆಲಸ ಸಿಗಲ್ಲ ಅಂತ ಅಂದುಕೊಳ್ತೀರಾ?

[ಪುಟ 8 ರಲ್ಲಿರುವ ಚಿತ್ರ]

ರಾಜ ದಾವೀದ ಅವನಿಟ್ಟ ಗುರಿ ಮುಟ್ಟಲು ಆಗಲ್ಲ ಅಂತ ಗೊತ್ತಾದಾಗ ಬೇರೆ ಗುರಿ ಇಟ್ಟ