ಗೀತೆ 92
“ವಾಕ್ಯವನ್ನು ಸಾರು”
1. ಇಂದಿದೆ ಆಜ್ಞೆ ನಮಗೆ,
ವಿಧೇಯರಾಗಬೇಕು ಅದಕ್ಕೆ.
ಕೊಡಲು ಸಿದ್ಧರಾಗಿ ಸದಾ
ನಿಮ್ಮ ನಿರೀಕ್ಷೆಗೆ ಆಧಾರವ.
(ಪಲ್ಲವಿ)
ವಾಕ್ಯ ಸಾರಿ,
ಸರ್ವರೂ ತಿಳಿಯಲಿ!
ಸಾರಿರಿ,
ವ್ಯವಸ್ಥಾಂತ್ಯ ನಿಕಟ.
ಸಾರಿರಿ,
ದೀನರು ತಿಳಿಯಲಿ.
ಸಾರಿರಿ,
ಭೂವ್ಯಾಪಕ!
2. ಕ್ಲೇಶಕಾಲವಿದೆ ಮುಂದೆ;
ವಿರೋಧ ತಂದೀತು ಹೀಯಾಳಿಕೆ.
ಕಂಡರೂ ಪ್ರತಿಕೂಲ ಕಾಲ,
ಯೆಹೋವನಲ್ಲೇ ನಮ್ಮ ವಿಶ್ವಾಸ.
(ಪಲ್ಲವಿ)
ವಾಕ್ಯ ಸಾರಿ,
ಸರ್ವರೂ ತಿಳಿಯಲಿ!
ಸಾರಿರಿ,
ವ್ಯವಸ್ಥಾಂತ್ಯ ನಿಕಟ.
ಸಾರಿರಿ,
ದೀನರು ತಿಳಿಯಲಿ.
ಸಾರಿರಿ,
ಭೂವ್ಯಾಪಕ!
3. ಕೃಪಾಕಾಲ ಬರಲಿದೆ,
ಕಲಿಸುವ ಕಾಲವೂ ಮುಂದಿದೆ.
ರಕ್ಷಣಾ ಮಾರ್ಗ ಸಾರುತ್ತೇವೆ
ಯೆಹೋವ ನಾಮದ ಪಾವಿತ್ರ್ಯಕ್ಕೆ.
(ಪಲ್ಲವಿ)
ವಾಕ್ಯ ಸಾರಿ,
ಸರ್ವರೂ ತಿಳಿಯಲಿ!
ಸಾರಿರಿ,
ವ್ಯವಸ್ಥಾಂತ್ಯ ನಿಕಟ.
ಸಾರಿರಿ,
ದೀನರು ತಿಳಿಯಲಿ.
ಸಾರಿರಿ,
ಭೂವ್ಯಾಪಕ!
(ಮತ್ತಾ. 10:7; 24:14; ಅ. ಕಾ. 10:42; 1 ಪೇತ್ರ 3:15 ಸಹ ನೋಡಿ.)