ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 47

ಸುವಾರ್ತೆಯನ್ನು ಪ್ರಕಟಿಸಿರಿ

ಸುವಾರ್ತೆಯನ್ನು ಪ್ರಕಟಿಸಿರಿ

(ಪ್ರಕಟನೆ 14:6, 7)

1. ರಾಜ್ಯ ಸತ್ಯದ ಪೂರ್ಣಾರ್ಥ ಗುಟ್ಟಾಗಿತ್ತು.

ಈಗ ಈ ಸಂತಾನದ ಅರ್ಥ ರಟ್ಟಾಯ್ತು.

ಯೆಹೋವನ ಕರುಣೆ ಮತ್ತು ಪ್ರೀತಿಯು

ಅರಿಯಿತು ಮಾನವ ದುಸ್ಥಿತಿಯನ್ನು.

ದೇವರ ಉದ್ದೇಶ, ಪುತ್ರನ ರಾಜತ್ವ,

ತಕ್ಕ ಕಾಲದಲ್ಲಿ ಆಳುವುದು ಆ ರಾಜ್ಯ.

ಕ್ರಿಸ್ತನ ವಧುವ ದೇವ ಕೂಡಿಸಿದ,

ಚಿಕ್ಕ ಹಿಂಡಿಗೆ ಆ ಮಹಿಮೆಯು ಲಭ್ಯ.

2. ಮುನ್ನರಿವಿತ್ತು ಈ ಸುವಾರ್ತೆಯ ಬಗ್ಗೆ.

ಅರ್ಥ ಗ್ರಹಿಸುವ ಕಾಲವು ಈಗಲೇ.

ದೂತವರ್ಗ ಪಾಲಿಗರು ನಮ್ಮೊಂದಿಗೆ,

ರಾಜ್ಯ ಸತ್ಯವ ಬಿತ್ತಲು ಸಹಾಯಕ್ಕೆ.

ಈಗ ಕರ್ತವ್ಯ, ಸುಯೋಗ ನಮಗಿದೆ

ದೇವ ನಾಮದ ಶುದ್ಧೀಕರಣ, ಸ್ತುತಿಗೆ.

ಸಾಕ್ಷಿಗಳಾಗೋ ಗೌರವ ನಮಗಿದೆ,

ಸಾರಿ ಹೇಳುತ್ತೇವೆ ಈ ನಿತ್ಯ ಸುವಾರ್ತೆ.