ಗೀತೆ 47
ಸುವಾರ್ತೆಯನ್ನು ಪ್ರಕಟಿಸಿರಿ
1. ರಾಜ್ಯ ಸತ್ಯದ ಪೂರ್ಣಾರ್ಥ ಗುಟ್ಟಾಗಿತ್ತು.
ಈಗ ಈ ಸಂತಾನದ ಅರ್ಥ ರಟ್ಟಾಯ್ತು.
ಯೆಹೋವನ ಕರುಣೆ ಮತ್ತು ಪ್ರೀತಿಯು
ಅರಿಯಿತು ಮಾನವ ದುಸ್ಥಿತಿಯನ್ನು.
ದೇವರ ಉದ್ದೇಶ, ಪುತ್ರನ ರಾಜತ್ವ,
ತಕ್ಕ ಕಾಲದಲ್ಲಿ ಆಳುವುದು ಆ ರಾಜ್ಯ.
ಕ್ರಿಸ್ತನ ವಧುವ ದೇವ ಕೂಡಿಸಿದ,
ಚಿಕ್ಕ ಹಿಂಡಿಗೆ ಆ ಮಹಿಮೆಯು ಲಭ್ಯ.
2. ಮುನ್ನರಿವಿತ್ತು ಈ ಸುವಾರ್ತೆಯ ಬಗ್ಗೆ.
ಅರ್ಥ ಗ್ರಹಿಸುವ ಕಾಲವು ಈಗಲೇ.
ದೂತವರ್ಗ ಪಾಲಿಗರು ನಮ್ಮೊಂದಿಗೆ,
ರಾಜ್ಯ ಸತ್ಯವ ಬಿತ್ತಲು ಸಹಾಯಕ್ಕೆ.
ಈಗ ಕರ್ತವ್ಯ, ಸುಯೋಗ ನಮಗಿದೆ
ದೇವ ನಾಮದ ಶುದ್ಧೀಕರಣ, ಸ್ತುತಿಗೆ.
ಸಾಕ್ಷಿಗಳಾಗೋ ಗೌರವ ನಮಗಿದೆ,
ಸಾರಿ ಹೇಳುತ್ತೇವೆ ಈ ನಿತ್ಯ ಸುವಾರ್ತೆ.
(ಮಾರ್ಕ 4:11; ಅ. ಕಾ. 5:31; 1 ಕೊರಿಂ. 2:1, 7 ಸಹ ನೋಡಿ.)