ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 4-ಪರಿಚಯ

ಭಾಗ 4-ಪರಿಚಯ

ಈ ಭಾಗದಲ್ಲಿ ನಾವು ಯೋಸೇಫ, ಯೋಬ, ಮೋಶೆ ಹಾಗೂ ಇಸ್ರಾಯೇಲ್ಯರ ಬಗ್ಗೆ ಕಲಿಯುತ್ತೇವೆ. ಸೈತಾನನು ತುಂಬ ಕಷ್ಟಗಳನ್ನು ಕೊಟ್ಟರೂ ಇವರು ತಾಳಿಕೊಂಡರು. ಕೆಲವರು ಅನ್ಯಾಯ, ಸೆರೆವಾಸ, ಗುಲಾಮಗಿರಿ ಅಷ್ಟೇ ಅಲ್ಲ ಸಾವನ್ನೂ ಅನುಭವಿಸಿದರು. ಆದರೂ ಯೆಹೋವನು ಅವರನ್ನು ಬೇರೆಬೇರೆ ವಿಧಗಳಲ್ಲಿ ಕಾಪಾಡಿದನು. ಯೆಹೋವನ ಸೇವಕರು ಎಷ್ಟೇ ಕಷ್ಟ ಬಂದರೂ ನಂಬಿಕೆಯನ್ನು ಮಾತ್ರ ಬಿಡಲಿಲ್ಲ ಎಂದು ನಿಮ್ಮ ಮಗುವಿಗೆ ಮನಗಾಣಿಸಿ.

ಯೆಹೋವನು ಹತ್ತು ಬಾಧೆಗಳನ್ನು ತರುವ ಮೂಲಕ ಈಜಿಪ್ಟ್‌ನ ಎಲ್ಲಾ ದೇವ-ದೇವತೆಗಳಿಗಿಂತ ತಾನೇ ಅತ್ಯಂತ ಶಕ್ತಿಶಾಲಿ ಎಂದು ರುಜುಪಡಿಸಿದನು. ಯೆಹೋವನು ತನ್ನ ಜನರನ್ನು ಈ ಹಿಂದೆ ಹೇಗೆ ರಕ್ಷಿಸಿದನು ಹಾಗೂ ಈಗ ಹೇಗೆ ರಕ್ಷಿಸುವನು ಎಂದು ಮಗುವಿಗೆ ಒತ್ತಿಹೇಳಿ.

ಈ ಭಾಗದಲ್ಲಿ

ಪಾಠ 14

ಒಬ್ಬ ಆಳು ದೇವರಿಗೆ ವಿಧೇಯನಾದ

ಯೋಸೇಫನು ಸರಿಯಾದದ್ದನ್ನೇ ಮಾಡಿದನಾದರೂ ಅವನು ತುಂಬಾ ಕಷ್ಟಗಳನ್ನು ಅನುಭವಿಸಿದ ಏಕೆ?

ಪಾಠ 15

ಯೆಹೋವನು ಯೋಸೇಫನನ್ನು ಯಾವತ್ತೂ ಮರೆಯಲಿಲ್ಲ

ಯೋಸೇಫ ತನ್ನ ಕುಟುಂಬದಿಂದ ದೂರವಿದ್ದರೂ ದೇವರು ಆತನೊಟ್ಟಿಗೆ ಇದ್ದನೆಂದು ಆತನು ತೋರಿಸಿಕೊಟ್ಟನು.

ಪಾಠ 16

ಯೋಬ ಯಾರು?

ತುಂಬಾ ಕಷ್ಟದ ಪರಿಸ್ಥಿತಿಯಲ್ಲೂ ಅವನು ಯೆಹೋವನಿಗೆ ವಿಧೇಯನಾದನು.

ಪಾಠ 17

ಮೋಶೆ ಯೆಹೋವನನ್ನು ಆರಾಧಿಸುವ ಆಯ್ಕೆ ಮಾಡಿದ

ತನ್ನ ತಾಯಿಯ ಬುದ್ಧಿವಂತಿಕೆಯಿಂದ ಪುಟ್ಟ ಮೋಶೆ ರಕ್ಷಿಸಲ್ಪಟ್ಟನು.

ಪಾಠ 18

ಉರಿಯುತ್ತಿರುವ ಪೊದೆ

ಬೆಂಕಿ ಪೊದೆಯನ್ನು ಸುಡಲಿಲ್ಲ ಏಕೆ?

ಪಾಠ 19

ಮೊದಲ ಮೂರು ಬಾಧೆಗಳು

ಅಹಂಕಾರಿ ಫರೋಹ ಒಂದು ಚಿಕ್ಕ ಕೆಲಸ ಮಾಡದೇ ಈಜಿಪ್ಟಿನವರ ಮೇಲೆ ತೊಂದರೆಗಳನ್ನು ತಂದ.

ಪಾಠ 20

ಮುಂದಿನ ಆರು ಬಾಧೆಗಳು

ಈ ಆರು ಬಾಧೆಗಳು ಮೊದಲ ಮೂರು ಬಾಧೆಗಳಿಗಿಂತ ಹೇಗೆ ಭಿನ್ನವಾಗಿತ್ತು?

ಪಾಠ 21

ಹತ್ತನೇ ಬಾಧೆ

ಈ ಬಾಧೆ ಎಷ್ಟು ಭೀಕರವಾಗಿತ್ತೆಂದರೆ ಅಹಂಕಾರಿ ಫರೋಹ ಕೊನೆಗೂ ಬಿಟ್ಟುಕೊಟ್ಟ.

ಪಾಠ 22

ಕೆಂಪು ಸಮುದ್ರದ ಬಳಿ ನಡೆದ ಅದ್ಭುತ

ಫರೋಹ ಹತ್ತು ಬಾಧೆಗಳನ್ನು ಅನುಭವಿಸಬೇಕಾಯಿತು. ದೇವರು ಮಾಡಿದ ಈ ಅದ್ಭುತಗಳಿಂದ ಅವನು ಬಚಾವಾಗಲೂ ಸಾಧ್ಯವಾಯಿತಾ?