ಭಾಗ 4-ಪರಿಚಯ
ಈ ಭಾಗದಲ್ಲಿ ನಾವು ಯೋಸೇಫ, ಯೋಬ, ಮೋಶೆ ಹಾಗೂ ಇಸ್ರಾಯೇಲ್ಯರ ಬಗ್ಗೆ ಕಲಿಯುತ್ತೇವೆ. ಸೈತಾನನು ತುಂಬ ಕಷ್ಟಗಳನ್ನು ಕೊಟ್ಟರೂ ಇವರು ತಾಳಿಕೊಂಡರು. ಕೆಲವರು ಅನ್ಯಾಯ, ಸೆರೆವಾಸ, ಗುಲಾಮಗಿರಿ ಅಷ್ಟೇ ಅಲ್ಲ ಸಾವನ್ನೂ ಅನುಭವಿಸಿದರು. ಆದರೂ ಯೆಹೋವನು ಅವರನ್ನು ಬೇರೆಬೇರೆ ವಿಧಗಳಲ್ಲಿ ಕಾಪಾಡಿದನು. ಯೆಹೋವನ ಸೇವಕರು ಎಷ್ಟೇ ಕಷ್ಟ ಬಂದರೂ ನಂಬಿಕೆಯನ್ನು ಮಾತ್ರ ಬಿಡಲಿಲ್ಲ ಎಂದು ನಿಮ್ಮ ಮಗುವಿಗೆ ಮನಗಾಣಿಸಿ.
ಯೆಹೋವನು ಹತ್ತು ಬಾಧೆಗಳನ್ನು ತರುವ ಮೂಲಕ ಈಜಿಪ್ಟ್ನ ಎಲ್ಲಾ ದೇವ-ದೇವತೆಗಳಿಗಿಂತ ತಾನೇ ಅತ್ಯಂತ ಶಕ್ತಿಶಾಲಿ ಎಂದು ರುಜುಪಡಿಸಿದನು. ಯೆಹೋವನು ತನ್ನ ಜನರನ್ನು ಈ ಹಿಂದೆ ಹೇಗೆ ರಕ್ಷಿಸಿದನು ಹಾಗೂ ಈಗ ಹೇಗೆ ರಕ್ಷಿಸುವನು ಎಂದು ಮಗುವಿಗೆ ಒತ್ತಿಹೇಳಿ.
ಈ ಭಾಗದಲ್ಲಿ
ಪಾಠ 14
ಒಬ್ಬ ಆಳು ದೇವರಿಗೆ ವಿಧೇಯನಾದ
ಯೋಸೇಫನು ಸರಿಯಾದದ್ದನ್ನೇ ಮಾಡಿದನಾದರೂ ಅವನು ತುಂಬಾ ಕಷ್ಟಗಳನ್ನು ಅನುಭವಿಸಿದ ಏಕೆ?
ಪಾಠ 15
ಯೆಹೋವನು ಯೋಸೇಫನನ್ನು ಯಾವತ್ತೂ ಮರೆಯಲಿಲ್ಲ
ಯೋಸೇಫ ತನ್ನ ಕುಟುಂಬದಿಂದ ದೂರವಿದ್ದರೂ ದೇವರು ಆತನೊಟ್ಟಿಗೆ ಇದ್ದನೆಂದು ಆತನು ತೋರಿಸಿಕೊಟ್ಟನು.
ಪಾಠ 22
ಕೆಂಪು ಸಮುದ್ರದ ಬಳಿ ನಡೆದ ಅದ್ಭುತ
ಫರೋಹ ಹತ್ತು ಬಾಧೆಗಳನ್ನು ಅನುಭವಿಸಬೇಕಾಯಿತು. ದೇವರು ಮಾಡಿದ ಈ ಅದ್ಭುತಗಳಿಂದ ಅವನು ಬಚಾವಾಗಲೂ ಸಾಧ್ಯವಾಯಿತಾ?