ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 27

ಯೇಸು ಜೀವ ಕೊಟ್ಟಿದ್ರಿಂದ ನಮಗೆ ಹೇಗೆ ರಕ್ಷಣೆ ಸಿಗುತ್ತೆ?

ಯೇಸು ಜೀವ ಕೊಟ್ಟಿದ್ರಿಂದ ನಮಗೆ ಹೇಗೆ ರಕ್ಷಣೆ ಸಿಗುತ್ತೆ?

ಆದಾಮ ಹವ್ವ ದೇವರ ಮಾತನ್ನ ಕೇಳದೇ ಹೋಗಿದ್ರಿಂದ ನಾವೆಲ್ಲರೂ ಸಾವು ನೋವು ಕಷ್ಟವನ್ನ ಅನುಭವಿಸಬೇಕಾಯಿತು. a ಆದ್ರೆ ನಮಗೊಂದು ಸಿಹಿಸುದ್ದಿ ಇದೆ. ನಮ್ಮನ್ನ ಪಾಪ ಮತ್ತು ಮರಣದಿಂದ ಬಿಡಿಸಲಿಕ್ಕಾಗಿ ಯೆಹೋವ ದೇವರು ಒಂದು ಏರ್ಪಾಡನ್ನ ಮಾಡಿದ್ದನು. ಆತನು ತನ್ನ ಮಗನಾದ ಯೇಸು ಕ್ರಿಸ್ತನನ್ನ ಬಿಡುಗಡೆಯ ಬೆಲೆಯಾಗಿ ಕೊಟ್ಟನು ಅಂತ ಬೈಬಲ್‌ ಹೇಳುತ್ತೆ. ಬಿಡುಗಡೆಯ ಬೆಲೆ ಅಂದ್ರೆ ಒಬ್ಬ ವ್ಯಕ್ತಿಯನ್ನ ಬಿಡುಗಡೆ ಮಾಡಲು ಕೊಡುವ ಬೆಲೆಯಾಗಿದೆ. ಯೇಸು ಮಾನವರಿಗಾಗಿ ತನ್ನ ಪರಿಪೂರ್ಣ ಜೀವವನ್ನೇ ಬಿಡುಗಡೆಯ ಬೆಲೆಯಾಗಿ ಕೊಟ್ಟನು. (ಮತ್ತಾಯ 20:28 ಓದಿ.) ಆತನಿಗೆ ಭೂಮಿಯಲ್ಲಿ ಶಾಶ್ವತವಾಗಿ ಬದುಕುವ ಹಕ್ಕು ಇತ್ತು. ಆದ್ರೆ ಆ ಹಕ್ಕನ್ನ ತ್ಯಾಗ ಮಾಡಿದನು. ಹೀಗೆ ಆದಾಮ ಹವ್ವ ಕಳೆದುಕೊಂಡ ಎಲ್ಲವನ್ನ ನಾವು ವಾಪಸ್‌ ಪಡೆದುಕೊಳ್ಳೋಕೆ ಸಾಧ್ಯವಾಗುತ್ತೆ. ಈ ಏರ್ಪಾಡಿನಿಂದ ಯೆಹೋವ ದೇವರು ಮತ್ತು ಯೇಸು ನಮ್ಮನ್ನ ಎಷ್ಟು ಪ್ರೀತಿಸ್ತಿದ್ದಾರೆ ಅಂತ ಗೊತ್ತಾಗುತ್ತೆ. ಈ ಪಾಠದಲ್ಲಿ, ಯೇಸು ಕೊಟ್ಟ ಪ್ರಾಣ ತ್ಯಾಗದ ಬಗ್ಗೆ ಹೆಚ್ಚನ್ನ ತಿಳಿಯಲಿದ್ದೇವೆ. ಇದು ಯೇಸುವಿನ ಮತ್ತು ಯೆಹೋವನ ಮೇಲಿರೋ ನಮ್ಮ ಗಣ್ಯತೆಯನ್ನ ಜಾಸ್ತಿ ಮಾಡುತ್ತೆ.

1. ಯೇಸು ಜೀವ ಕೊಟ್ಟಿದ್ರಿಂದ ಈಗ ನಮಗೆ ಯಾವೆಲ್ಲಾ ಪ್ರಯೋಜನಗಳಿವೆ?

ನಾವೆಲ್ಲರೂ ಪಾಪಿಗಳು. ಹಾಗಾಗಿ ಯೆಹೋವನಿಗೆ ಇಷ್ಟ ಇಲ್ಲದ ತುಂಬ ವಿಷಯಗಳನ್ನ ಮಾಡಿ ಬಿಡುತ್ತೇವೆ. ಆದರೂ ನಮ್ಮ ತಪ್ಪುಗಳಿಗಾಗಿ ಮನಸಾರೆ ಪಶ್ಚಾತ್ತಾಪಪಟ್ಟರೆ, ಅದಕ್ಕಾಗಿ ಯೆಹೋವ ದೇವರಿಗೆ ಯೇಸುವಿನ ಮೂಲಕ ಕ್ಷಮೆ ಕೇಳಿದರೆ, ಅಂಥ ತಪ್ಪುಗಳನ್ನ ಮತ್ತೆ ಮಾಡದೆ ಇರೋಕೆ ನಮ್ಮಿಂದ ಆಗುವ ಎಲ್ಲ ಪ್ರಯತ್ನ ಮಾಡಿದರೆ ಯೆಹೋವನು ನಮ್ಮನ್ನ ಕ್ಷಮಿಸುತ್ತಾನೆ. ಆಗ ನಮಗೆ ಯೆಹೋವನ ಜೊತೆ ಒಳ್ಳೇ ಸ್ನೇಹಸಂಬಂಧ ಇರುತ್ತೆ. (1 ಯೋಹಾನ 2:1) “ಅನೀತಿವಂತ ಜನ್ರಿಗೋಸ್ಕರ ಅವ್ರ ಎಲ್ಲ ಪಾಪಗಳು ಹೋಗೋ ತರ ನೀತಿವಂತನಾದ ಕ್ರಿಸ್ತ ಒಂದೇ ಸಲ ಪ್ರಾಣ ಕೊಟ್ಟನು. ನಮ್ಮನ್ನ ದೇವರ ಹತ್ರ ನಡಿಸೋಕೆ ಕ್ರಿಸ್ತ ಹಾಗೆ ಮಾಡಿದನು” ಅಂತ ಬೈಬಲ್‌ ಹೇಳುತ್ತೆ.—1 ಪೇತ್ರ 3:18.

2. ಯೇಸು ಜೀವ ಕೊಟ್ಟಿದ್ರಿಂದ ಮುಂದೆ ನಮಗೇನು ಪ್ರಯೋಜನ ಇದೆ?

‘ಯೇಸುವಿನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.’ ಅದಕ್ಕಾಗಿ ಯೆಹೋವನು ಯೇಸುವನ್ನ ಈ ಭೂಮಿಗೆ ಕಳಿಸಿಕೊಟ್ಟನು. (ಯೋಹಾನ 3:16) ಆದಾಮನು ಪಾಪ ಮಾಡಿದ್ರಿಂದ ಆಗಿರುವ ಎಲ್ಲ ಹಾನಿಯನ್ನ, ಯೇಸು ಕೊಟ್ಟ ಬಿಡುಗಡೆಯ ಬೆಲೆಯ ಆಧಾರದ ಮೂಲಕ ಯೆಹೋವನು ಬೇಗನೇ ಸರಿಪಡಿಸುತ್ತಾನೆ. ಯೇಸು ಕೊಟ್ಟ ಬಿಡುಗಡೆ ಬೆಲೆಯಲ್ಲಿ ನಂಬಿಕೆಯಿಟ್ಟರೆ ನಾವು ಪರದೈಸಲ್ಲಿ ಎಂದೆಂದೂ ಖುಷಿಯಾಗಿ ಇರಬಹುದು.—ಯೆಶಾಯ 65:21-23.

ಹೆಚ್ಚನ್ನ ತಿಳಿಯೋಣ

ಯೇಸು ಯಾಕೆ ಜೀವ ಕೊಟ್ಟನು ಮತ್ತು ಅದರಿಂದ ನಮಗೇನು ಪ್ರಯೋಜನ ಇದೆ ಅನ್ನೋದರ ಬಗ್ಗೆ ಹೆಚ್ಚನ್ನ ತಿಳಿಯಿರಿ.

3. ಯೇಸು ಜೀವ ಕೊಟ್ಟಿದ್ರಿಂದ ನಮಗೆ ಪಾಪ ಮತ್ತು ಮರಣದಿಂದ ಬಿಡುಗಡೆ ಸಿಗುತ್ತೆ

ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

  • ದೇವರ ಮಾತನ್ನ ಕೇಳದೆ ಹೋಗಿದ್ರಿಂದ ಆದಾಮ ಏನನ್ನ ಕಳೆದುಕೊಂಡ?

ರೋಮನ್ನರಿಗೆ 5:12 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಆದಾಮನ ಪಾಪದಿಂದ ನಾವೇನು ಅನುಭವಿಸಬೇಕಾಗಿದೆ?

ಯೋಹಾನ 3:16 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೆಹೋವ ದೇವರು ಯಾಕೆ ತನ್ನ ಮಗನನ್ನ ಭೂಮಿಗೆ ಕಳಿಸಿದನು?

  1. ಆದಾಮನು ಪರಿಪೂರ್ಣನಾಗಿದ್ದನು ಆದರೆ ದೇವರ ಮಾತು ಕೇಳದೇ ಹೋಗಿದ್ರಿಂದ ಮಾನವರೆಲ್ಲರೂ ಇವತ್ತು ಪಾಪ ಮತ್ತು ಮರಣವನ್ನ ಅನುಭವಿಸುತ್ತಿದ್ದಾರೆ

  2. ಪರಿಪೂರ್ಣನಾದ ಯೇಸು ದೇವರ ಮಾತನ್ನ ಕೇಳಿದನು. ಇದ್ರಿಂದ ಎಲ್ಲಾ ಮಾನವರು ಪರಿಪೂರ್ಣತೆಯನ್ನ ಮತ್ತು ಶಾಶ್ವತ ಜೀವನವನ್ನ ಪಡೆದುಕೊಳ್ಳೋಕೆ ಸಾಧ್ಯವಾಗುತ್ತೆ

4. ಯೇಸು ಜೀವ ಕೊಟ್ಟಿದ್ರಿಂದ ಎಲ್ಲರಿಗೂ ಪ್ರಯೋಜನ ಇದೆ

ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

  • ಒಬ್ಬ ವ್ಯಕ್ತಿಯ ಸಾವಿನಿಂದ ಎಲ್ಲರಿಗೂ ಹೇಗೆ ಪ್ರಯೋಜನ ಸಿಗುತ್ತೆ?

1 ತಿಮೊತಿ 2:6 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಆದಾಮ ಪರಿಪೂರ್ಣನಾಗಿದ್ದನು. ಅವನು ಪಾಪ ಮಾಡಿದ್ರಿಂದ ಎಲ್ಲರೂ ಪಾಪ ಮತ್ತು ಮರಣವನ್ನ ಅನುಭವಿಸುತ್ತಿದ್ದಾರೆ. ಯೇಸು ಕೂಡ ಆದಾಮನ ತರ ಪರಿಪೂರ್ಣನಾಗಿದ್ದನು. ಹಾಗಾಗಿ ಆತನಿಗೆ ಏನು ಕೊಡಲು ಸಾಧ್ಯವಾಯಿತು? ಹೇಗೆ?

5. ಬಿಡುಗಡೆ ಬೆಲೆ: ಯೆಹೋವನು ನಿಮಗೆ ಕೊಟ್ಟ ಉಡುಗೊರೆ

ಯೆಹೋವನ ಜನರೆಲ್ಲರೂ ಬಿಡುಗಡೆ ಬೆಲೆಯನ್ನ ತಮಗೆ ಸಿಕ್ಕಿರುವ ಅಮೂಲ್ಯ ಉಡುಗೊರೆ ಅಂತ ನೆನಸುತ್ತಾರೆ. ಉದಾಹರಣೆಗೆ, ಗಲಾತ್ಯ 2:20 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಅಪೊಸ್ತಲ ಪೌಲ ಬಿಡುಗಡೆ ಬೆಲೆ ತನಗೆ ಸಿಕ್ಕ ಅಮೂಲ್ಯ ಉಡುಗೊರೆ ಅಂತ ಹೇಗೆ ತೋರಿಸಿಕೊಟ್ಟ?

ಆದಾಮ ಪಾಪ ಮಾಡಿದ್ರಿಂದ ಅವನ ಸಂತಾನದವರಾದ ನಾವೆಲ್ಲರೂ ಮರಣವನ್ನ ಅನುಭವಿಸಬೇಕಾಗಿದೆ. ಆದರೆ ಯೇಸು ಜೀವ ಕೊಟ್ಟಿದ್ರಿಂದ ನಾವು ಶಾಶ್ವತ ಜೀವನವನ್ನ ಪಡೆದುಕೊಳ್ಳೋಕೆ ಸಾಧ್ಯವಾಗುತ್ತೆ.

ಯೇಸು ಅನುಭವಿಸಿದ ಕಷ್ಟವನ್ನ ನೋಡಿದಾಗ ಯೆಹೋವ ದೇವರಿಗೆ ಹೇಗನಿಸಿತು ಅನ್ನೋದನ್ನ ಕೆಳಗಿನ ವಚನಗಳನ್ನ ಓದುವಾಗ ಸ್ವಲ್ಪ ಊಹಿಸಿ ನೋಡಿ. ಯೋಹಾನ 19:1-7, 16-18 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೆಹೋವ ಮತ್ತು ಯೇಸು ನಿಮಗಾಗಿ ಮಾಡಿದ ತ್ಯಾಗದ ಬಗ್ಗೆ ನಿಮಗೇನು ಅನಿಸುತ್ತೆ?

ಕೆಲವರು ಹೀಗೆ ಕೇಳಬಹುದು: “ಒಬ್ಬ ವ್ಯಕ್ತಿ ಸತ್ತು ಹೋಗಿದ್ರಿಂದ ಎಲ್ಲರಿಗೂ ಶಾಶ್ವತ ಜೀವ ಹೇಗೆ ಸಿಗುತ್ತೆ?”

  • ನೀವೇನು ಉತ್ತರ ಕೊಡುತ್ತೀರಾ?

ನಾವೇನು ಕಲಿತ್ವಿ

ಯೇಸುವಿನ ಬಿಡುಗಡೆಯ ಬೆಲೆಯ ಆಧಾರದ ಮೇಲೆ ಯೆಹೋವ ದೇವರು ನಮ್ಮ ತಪ್ಪುಗಳನ್ನ ಕ್ಷಮಿಸುತ್ತಾನೆ. ಅಷ್ಟೇ ಅಲ್ಲ ಇದರಿಂದ ನಮಗೆ ಎಂದೆಂದೂ ಖುಷಿಯಾಗಿ ಬಾಳುವ ಅವಕಾಶನೂ ಸಿಕ್ಕಿದೆ.

ನೆನಪಿದೆಯಾ

  • ಯೇಸು ಯಾಕೆ ಜೀವಕೊಟ್ಟನು?

  • ಯೇಸುವಿನ ಪರಿಪೂರ್ಣ ಜೀವ ಹೇಗೆ “ಸರಿಸಮವಾದ ಬಿಡುಗಡೆಯ ಬೆಲೆ” ಆಯಿತು?

  • ಯೇಸು ಜೀವ ಕೊಟ್ಟಿದ್ರಿಂದ ನಮಗೇನು ಪ್ರಯೋಜನ ಇದೆ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಯೇಸುವಿನ ಪರಿಪೂರ್ಣ ಜೀವವನ್ನ ಬಿಡುಗಡೆಯ ಬೆಲೆ ಅಂತ ಯಾಕೆ ಹೇಳ್ತಾರೆ ಅನ್ನೋದನ್ನ ನೋಡಿ.

“ಯೇಸುವಿನ ಬಲಿ ಹೇಗೆ ತುಂಬ ಜನರಿಗೆ ಬಿಡುಗಡೆ ಬೆಲೆಯಾಗಿದೆ?” (jw.org ಲೇಖನ)

ನಾವು ರಕ್ಷಣೆ ಪಡೆಯಬೇಕಾದ್ರೆ ಏನು ಮಾಡಬೇಕು ಅಂತ ತಿಳಿಯಿರಿ.

“ಯೇಸುವೇ ನಮ್ಮ ರಕ್ಷಕ—ಇದರ ಅರ್ಥ ಏನು?” (jw.org ಲೇಖನ)

ನಾವು ಮಾಡುವ ದೊಡ್ಡ ತಪ್ಪುಗಳನ್ನೂ ದೇವರು ಕ್ಷಮಿಸುತ್ತಾನಾ?

“ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ” (ಕಾವಲಿನಬುರುಜು ಲೇಖನ)

ಯೇಸು ಮಾಡಿದ ಪ್ರಾಣ ತ್ಯಾಗದ ಬಗ್ಗೆ ಕಲಿತಿದ್ರಿಂದ ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನ ಹೇಗೆ ಬದಲಾಯಿಸಿಕೊಂಡ ಅಂತ ನೋಡಿ.

“ಕ್ರೂರತನ ಬಿಟ್ಟೆ, ಸಾಧುತನ ಕಲಿ (jw.org ಲೇಖನ)

a ಪಾಪ ಅನ್ನೋದು ನಾವು ಮಾಡುವ ಕೆಟ್ಟ ಕೆಲಸಗಳನ್ನ ಮಾತ್ರ ಅಲ್ಲ, ಆದಾಮಹವ್ವರಿಂದ ಪಡೆದಿರುವ ಅಪರಿಪೂರ್ಣತೆಯನ್ನೂ ಸೂಚಿಸುತ್ತೆ.