ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದೀನರು ದೇಶವನ್ನು ಅನುಭವಿಸುವರು”

“ದೀನರು ದೇಶವನ್ನು ಅನುಭವಿಸುವರು”

ನ್ಯಾಯದ ಬದಲಿಗೆ ಅನ್ಯಾಯವಾಗುವುದನ್ನು, ಕೆಟ್ಟ ಜನರು ಒಳ್ಳೆಯವರನ್ನು, ಅಮಾಯಕರನ್ನು ತುಳಿದು ಬಿಡುವುದನ್ನು ನಮ್ಮಲ್ಲಿ ಹೆಚ್ಚಿನವರು ನೋಡಿದ್ದೇವೆ. ಆದರೆ ಅನ್ಯಾಯ, ದುಷ್ಟತನ ಇಲ್ಲದ ಒಂದು ಕಾಲ ಮುಂದೆ ಯಾವತ್ತಾದರೂ ಬರುತ್ತದಾ?

ಬೈಬಲ್‌ನಲ್ಲಿ ಕೀರ್ತನೆ 37ರಲ್ಲಿ ಇದಕ್ಕೆ ಉತ್ತರವಿದೆ ಮಾತ್ರವಲ್ಲ ನಮಗೆ ಈಗ ಬೇಕಾದ ಮಾರ್ಗದರ್ಶನವೂ ಇದೆ. ಈ ಕೆಳಗಿನ ಪ್ರಶ್ನೆಗಳಿಗೆ ಅದು ಏನು ಉತ್ತರ ಕೊಡುತ್ತದೆಂದು ನೋಡಿ.

  • ದಬ್ಬಾಳಿಕೆ ಮಾಡುವವರ ಬಗ್ಗೆ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು?—ವಚನಗಳು 1, 2.

  • ದುಷ್ಟ ಜನರಿಗೆ ಮುಂದೆ ಏನಾಗುತ್ತದೆ?—ವಚನ 10.

  • ಸರಿಯಾದದ್ದನ್ನೇ ಮಾಡುವವರಿಗೆ ಎಂಥ ಭವಿಷ್ಯವಿದೆ?—ವಚನಗಳು 11, 29.

  • ನಾವೀಗ ಏನು ಮಾಡಬೇಕು?—ವಚನ 34.

‘ಯೆಹೋವನನ್ನು ನಿರೀಕ್ಷಿಸುವವರಾಗಿ ಆತನ ಮಾರ್ಗವನ್ನೇ ಅನುಸರಿಸುವವರಿಗೆ’ ಉಜ್ವಲ ಭವಿಷ್ಯವಿದೆ ಎಂದು ದೇವಪ್ರೇರಣೆಯಿಂದ ಬರೆಯಲಾದ ಕೀರ್ತನೆ 37​ರ ಮಾತುಗಳು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.