ಶಿಕ್ಷಕನೊಬ್ಬನ ಪೂರ್ವಕಲ್ಪಿತ ಅಭಿಪ್ರಾಯಕ್ಕೆ ಹೆತ್ತವರ ವಿರೋಧ
ಶಿಕ್ಷಕನೊಬ್ಬನ ಪೂರ್ವಕಲ್ಪಿತ ಅಭಿಪ್ರಾಯಕ್ಕೆ ಹೆತ್ತವರ ವಿರೋಧ
ಇಟಲಿಯ ಕಾಸಾನೋ ಮರ್ಜಿ ಎಂಬಲ್ಲಿ, ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬನು ತನ್ನ ಕೆಲವು ವಿದ್ಯಾರ್ಥಿಗಳಿಗೆ ಸ್ಟಿಕ್ಕರ್ಗಳನ್ನು ಕೊಟ್ಟನು. ಈ ಸ್ಟಿಕ್ಕರ್ಗಳನ್ನು ಮನೆಯ ಮುಂಬಾಗಿಲಿನ ಮೇಲೆ ಅಂಟಿಸುವಂತೆ ಅವನು ಹೇಳಿದನು. ಆ ಸ್ಟಿಕ್ಕರಿನ ಮೇಲೆ, “ನಾವು ಕ್ಯಾಥೊಲಿಕರು. ಯೆಹೋವನ ಸಾಕ್ಷಿಗಳು ಈ ಮನೆಯ ಬಾಗಿಲನ್ನು ತಟ್ಟಕೂಡದು” ಎಂದು ಬರೆಯಲಾಗಿತ್ತು.
ಕೆಲವು ವಿದ್ಯಾರ್ಥಿಗಳ ಹೆತ್ತವರು ಯೆಹೋವನ ಸಾಕ್ಷಿಗಳಾಗಿರದಿದ್ದರೂ, ಈ ಶಿಕ್ಷಕನ ವರ್ತನೆಯನ್ನು ಬಲವಾಗಿ ವಿರೋಧಿಸಿದರು. ಮ್ವೋವೀಟೀ ಮ್ವೋವೀಟೀ ಎಂಬ ವಾರ್ತಾ ಪತ್ರಿಕೆಗನುಸಾರ, ‘ಈ ರೀತಿಯ ಸಂದೇಶವು, ತಾವು ಆಲೋಚಿಸುವಂತಹ ರೀತಿಯಲ್ಲಿ ಆಲೋಚಿಸದೇ ಇರುವ ಜನರನ್ನು ತಿರಸ್ಕರಿಸುವಂತೆ ಇಲ್ಲವೇ ತಮಗಿಂತ “ಭಿನ್ನವಾಗಿರುವ” ಒಂದು ಧರ್ಮದ ಜನರನ್ನು ಸೇರಿಸಿಕೊಳ್ಳದಿರುವಂತೆ ಮಕ್ಕಳಿಗೆ ಹೇಳಿಕೊಡುತ್ತದೆ’ ಎಂದು ಆ ಹೆತ್ತವರು ವಿರೋಧಿಸಿದರು. ಈ ಪತ್ರಿಕೆಗೆ ಪತ್ರವನ್ನು ಬರೆದ ಒಬ್ಬ ಹೆತ್ತವಳು, ಈ ಸ್ಟಿಕ್ಕರನ್ನು “ಕಳೆಯ ಬೀಜವೆಂದು, ಅಜ್ಞಾನ ಹಾಗೂ ಮೂರ್ಖತನದ ಫಲವೆಂದು” ಹೇಳಿದಳು.
ಈ ವರದಿಯು ತೋರಿಸುವಂತೆ, ನಿಷ್ಪಕ್ಷಪಾತಿಗಳಾದ ಅನೇಕ ಜನರು, ಈ ರೀತಿಯ ಪೂರ್ವಕಲ್ಪಿತ ಅಭಿಪ್ರಾಯದ ಕಳೆಗಳನ್ನು ಬಿತ್ತುವುದರಿಂದ ಆಗುವ ಅಪಾಯಗಳನ್ನು ಗ್ರಹಿಸುತ್ತಾರೆ. ಇಟಲಿ ಮತ್ತು ಲೋಕದಾದ್ಯಂತ ಯೆಹೋವನ ಸಾಕ್ಷಿಗಳು ಮಾಡುತ್ತಿರುವ ಸಾಕ್ಷಿಕಾರ್ಯದ ವಿಷಯದಲ್ಲಿಯೂ ಅವರು ಗೌರವವನ್ನು ತೋರಿಸುತ್ತಾರೆ. ‘ನಿಮ್ಮ ನಿರೀಕ್ಷೆಗೆ ಆಧಾರವೇನು’ ಎಂದು ಯೆಹೋವನ ಸಾಕ್ಷಿಗಳನ್ನು ನೀವೇಕೆ ಕೇಳಬಾರದು? ಈ ವಿಚಾರವನ್ನು ನಿಮ್ಮೊಂದಿಗೆ ಚರ್ಚಿಸಲು ಅವರು ಕಾತುರರಾಗಿರುವರು. ಮತ್ತು ಇದನ್ನು ಅವರು “ಗೌರವಭಾವದಿಂದ” ತಿಳಿಸುವರು.—1 ಪೇತ್ರ 3:15, NW.