ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜ್ಞಾಪಿಸಿಕೊಳ್ಳಬೇಕಾಗಿರುವ ಒಂದು ದಿನ

ಜ್ಞಾಪಿಸಿಕೊಳ್ಳಬೇಕಾಗಿರುವ ಒಂದು ದಿನ

ಜ್ಞಾಪಿಸಿಕೊಳ್ಳಬೇಕಾಗಿರುವ ಒಂದು ದಿನ

ತಾನು ಮರಣಪಡುವ ಮುಂಚಿನ ಸಾಯಂಕಾಲವೇ ಯೇಸು ಕ್ರಿಸ್ತನು ಹುಳಿಯಿಲ್ಲದ ರೊಟ್ಟಿಯನ್ನು ಮತ್ತು ಕೆಂಪು ದ್ರಾಕ್ಷಾಮದ್ಯವನ್ನು ತನ್ನ ಶಿಷ್ಯರಿಗೆ ದಾಟಿಸಿ, ಅದನ್ನು ತಿನ್ನುವಂತೆ ಹಾಗೂ ಕುಡಿಯುವಂತೆ ತಿಳಿಸಿದನು. ಅಷ್ಟುಮಾತ್ರವಲ್ಲದೆ ಅವನು ಅವರಿಗೆ ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡುತ್ತಾ ಇರಿ.”​—⁠ಲೂಕ 22:⁠19, NW.

ಈ ವರ್ಷದಲ್ಲಿ ಈ ಘಟನೆಯ ವಾರ್ಷಿಕೋತ್ಸವವು, ಏಪ್ರಿಲ್‌ 4ರ ಭಾನುವಾರ ಸಾಯಂಕಾಲ ಸೂರ್ಯಾಸ್ತಮಾನದ ಬಳಿಕ ಜರುಗಲಿರುವುದು. ಆ ರಾತ್ರಿಯಂದು, ಯೇಸು ಆಜ್ಞಾಪಿಸಿದಂಥ ರೀತಿಯಲ್ಲಿ ಈ ಜ್ಞಾಪಕವನ್ನು ಆಚರಿಸಲಿಕ್ಕಾಗಿ ಲೋಕದಾದ್ಯಂತ ಇರುವ ಯೆಹೋವನ ಸಾಕ್ಷಿಗಳು ಒಟ್ಟುಗೂಡುವರು. ಅವರೊಂದಿಗೆ ಜೊತೆಗೂಡುವಂತೆ ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸಲಾಗುತ್ತದೆ. ಈ ವಿಶೇಷ ಕೂಟವು ನಡೆಯುವ ನಿಖರವಾದ ಸಮಯ ಹಾಗೂ ಸ್ಥಳಕ್ಕಾಗಿ, ಸ್ಥಳಿಕ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ.