ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಒಂದೇ ಹೃದಯ ಹಾಗೂ ಮನಸ್ಸಿನಿಂದ’ ದೇವರನ್ನು ಸೇವಿಸುವುದು

‘ಒಂದೇ ಹೃದಯ ಹಾಗೂ ಮನಸ್ಸಿನಿಂದ’ ದೇವರನ್ನು ಸೇವಿಸುವುದು

‘ಒಂದೇ ಹೃದಯ ಹಾಗೂ ಮನಸ್ಸಿನಿಂದ’ ದೇವರನ್ನು ಸೇವಿಸುವುದು

ಯೆರೂಸಲೇಮಿನಲ್ಲಿ ಪಂಚಾಶತ್ತಮ ಹಬ್ಬದ ಸಮಯ. ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳು ಯೇಸು ಕ್ರಿಸ್ತನ ಶಿಷ್ಯರ ಸುತ್ತಲೂ ನೆರೆದಿದ್ದಾರೆ. ಇವರು ಪಶ್ಚಿಮದ ರೋಮ್‌ನಿಂದ ಪೂರ್ವದ ಪಾರ್ಥಿಯದಷ್ಟು ದೂರದ ಪ್ರದೇಶಗಳಿಂದ ಬಂದಿದ್ದಾರೆ. ಅವರ ಗುಂಪಿನಲ್ಲಿ ವಿವಿಧ ಭಾಷೆಗಳು ಕೇಳಿಬರುತ್ತಿವೆ. ಯೇಸುವಿನ ಶಿಷ್ಯರು ಗಲಿಲಾಯದವರಾಗಿದ್ದರೂ ಆ ಗುಂಪಿನ ಪ್ರತಿಯೊಬ್ಬರೊಂದಿಗೆ ಅವರವರ ಭಾಷೆಗಳಲ್ಲಿ ಮಾತನಾಡುತ್ತಿದ್ದಾರೆ. ಆ ಸಂದರ್ಶಕರಲ್ಲಿ ಆಶ್ಚರ್ಯಚಕಿತರಾದ ಕೆಲವರು, “ನಾವು ಪ್ರತಿಯೊಬ್ಬರು ನಮ್ಮನಮ್ಮ ಹುಟ್ಟುಭಾಷೆಯಲ್ಲಿ ಇವರು ಮಾತಾಡುವದನ್ನು ಕೇಳುತ್ತೇವಲ್ಲಾ, ಇದು ಹೇಗೆ?” ಎಂದು ಕೇಳುತ್ತಾರೆ.—ಅ. ಕೃ. 2:8.

ಅಪೊಸ್ತಲ ಪೇತ್ರನು ಎದ್ದು ನಿಂತು ಈ ಜನರ ಗುಂಪಿಗೆ, ಅವರ ಕಣ್ಮುಂದೆ ನಡೆಯುತ್ತಿರುವ ಅದ್ಭುತಕ್ಕೆ ಕಾರಣವೇನೆಂಬದನ್ನು ವಿವರಿಸುತ್ತಾನೆ. ಈ ಸಂದೇಶಕ್ಕೆ ಆ ಗುಂಪು ಕೂಡಲೇ ಪ್ರತಿಕ್ರಿಯಿಸುತ್ತದೆ. ಸಾವಿರಾರು ಮಂದಿ ಹೊಸಬರು ದೀಕ್ಷಾಸ್ನಾನ ಪಡೆಯುತ್ತಾರೆ! (ಅ. ಕೃ. 2:41) ಕ್ರೈಸ್ತ ಸಭೆಯು ಕ್ಷಿಪ್ರವಾಗಿ ಬೆಳೆಯುತ್ತದಾದರೂ ಅದು ಐಕ್ಯವಾಗಿ ಉಳಿಯುತ್ತದೆ. “ವಿಶ್ವಾಸಿಗಳೆಲ್ಲರ ಹೃದಯ ಹಾಗೂ ಮನಸ್ಸುಗಳು ಒಂದಾಗಿದ್ದವು” ಎಂದು ಬೈಬಲಿನ ಲೇಖಕರಲ್ಲೊಬ್ಬನಾದ ಲೂಕನು ಬರೆಯುತ್ತಾನೆ.—ಅ. ಕೃ. 4:32, NIBV.

ಸಾ.ಶ. 33ರ ಪಂಚಾಶತ್ತಮದ ದಿನದಂದು ದೀಕ್ಷಾಸ್ನಾನ ಪಡೆದ ಸಾವಿರಾರು ಮಂದಿ ತಮ್ಮ ಹೊಸ ನಂಬಿಕೆಯ ಕುರಿತು ಹೆಚ್ಚಿನದ್ದನ್ನು ಕಲಿಯುವ ಉದ್ದೇಶದಿಂದ ಯೆರೂಸಲೇಮಿನಲ್ಲೇ ಇನ್ನಷ್ಟು ಸಮಯ ಇರಬಯಸಿದರು. ಆದರೆ ಇದಕ್ಕಾಗಿ ಅವರು ಸಿದ್ಧರಾಗಿ ಬಂದಿರದಿದ್ದ ಕಾರಣ ಅವರ ಸಹಾಯಕ್ಕಾಗಿ ಹಣಸಂಗ್ರಹ ಮಾಡುವ ತಾತ್ಕಾಲಿಕ ಏರ್ಪಾಡನ್ನು ಮಾಡಲಾಯಿತು. ಕೆಲವು ವಿಶ್ವಾಸಿಗಳು ತಮ್ಮ ಸೊತ್ತುಗಳನ್ನು ಸ್ವಇಚ್ಛೆಯಿಂದ ಮಾರಿ, ಬಂದ ಹಣವನ್ನು ಅಗತ್ಯದಲ್ಲಿದ್ದವರಿಗೆ ಕೊಡುವಂತೆ ಅಪೊಸ್ತಲರಿಗೆ ತಂದೊಪ್ಪಿಸಿದರು. (ಅ. ಕೃ. 2:42-47) ಎಂಥ ಪ್ರೀತಿ ಮತ್ತು ಉದಾರತೆ!

ನಿಜ ಕ್ರೈಸ್ತರು ಯಾವಾಗಲೂ ಅಂಥ ಪ್ರೀತಿ ಮತ್ತು ಉದಾರ ಮನೋಭಾವವನ್ನು ತೋರಿಸಿದ್ದಾರೆ. ಕ್ರೈಸ್ತ ಸಭೆಯು ಇಂದು ಸಹ ಐಕ್ಯವಾಗಿ ‘ಒಂದೇ ಹೃದಯ ಹಾಗೂ ಮನಸ್ಸಿನಿಂದ’ ಯೆಹೋವನನ್ನು ಸೇವಿಸುತ್ತಾ ಇದೆ. ಕ್ರೈಸ್ತರು ವ್ಯಕ್ತಿಗತವಾಗಿ ಸುವಾರ್ತೆ ಸಾರಲು ಮತ್ತು ದೇವರ ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸಲು ತಮ್ಮ ಸಮಯ, ಶಕ್ತಿ ಹಾಗೂ ಹಣವನ್ನು ಉದಾರವಾಗಿ ವಿನಿಯೋಗಿಸುತ್ತಿದ್ದಾರೆ.​—⁠“ಕೆಲವರು ದಾನಕೊಡುವ ವಿಧಗಳು” ಎಂಬ ಚೌಕ ನೋಡಿ.

[ಪುಟ 6, 7ರಲ್ಲಿರುವ ಚೌಕ]

ಕೆಲವರು ದಾನಕೊಡುವ ವಿಧಗಳು

ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು

ಅನೇಕರು, “ಲೋಕವ್ಯಾಪಕ ಕೆಲಸ” ಎಂದು ಗುರುತುಮಾಡಲಾಗಿರುವ ಕಾಣಿಕೆ ಪೆಟ್ಟಿಗೆಗಳಲ್ಲಿ ತಾವು ಹಾಕಲು ಬಯಸುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್‌ಮಾಡುತ್ತಾರೆ.

ಪ್ರತಿ ತಿಂಗಳಲ್ಲಿ ಸಭೆಗಳು ಈ ಮೊತ್ತವನ್ನು ತಮ್ಮ ದೇಶದ ಕೆಲಸವನ್ನು ನೋಡಿಕೊಳ್ಳುತ್ತಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಕಳುಹಿಸುತ್ತವೆ. ಸ್ವಯಂಪ್ರೇರಿತರಾಗಿ ಹಣವನ್ನು ದಾನವಾಗಿ ಕೊಡಬಯಸುವವರೂ ನೇರವಾಗಿ ಅದನ್ನು ಈ ಆಫೀಸುಗಳಿಗೆ ಕಳುಹಿಸಬಹುದು. ಬ್ರಾಂಚ್‌ ಆಫೀಸುಗಳ ವಿಳಾಸಗಳನ್ನು ಈ ಪತ್ರಿಕೆಯ 2ನೇ ಪುಟದಲ್ಲಿ ಕೊಡಲಾಗಿದೆ. ಚೆಕ್‌ಗಳಲ್ಲಿ “ವಾಚ್‌ಟವರ್‌”ಗೆ * ಸಂದಾಯವಾಗಬೇಕೆಂದು ನಿಖರವಾಗಿ ನಮೂದಿಸಿರಿ. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರ ಇಂತಹ ಕಾಣಿಕೆಗಳೊಂದಿಗೆ ಜೊತೆಗೂಡಿರಬೇಕು.

ಷರತ್ತುಬದ್ಧ ದಾನದ ಏರ್ಪಾಡು  *

ಹಣವನ್ನು ಲೋಕವ್ಯಾಪಕವಾಗಿ ಉಪಯೋಗಿಸಲಾಗುವಂತೆ ಅದನ್ನು ವಾಚ್‌ಟವರ್‌ ಸೊಸೈಟಿಯ ಬಳಿ ಇಡಬಹುದು. ಆದರೆ, ಹಣವನ್ನು ವಿನಂತಿಸಲಾಗುವಾಗ ಅದನ್ನು ಹಿಂದಿರುಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಿಮ್ಮ ದೇಶದ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿರಿ.

ಚ್ಯಾರಿಟಬಲ್‌ ಯೋಜನೆ *

ನೇರವಾದ ಹಣದ ಕೊಡುಗೆಗಳೊಂದಿಗೆ, ಲೋಕವ್ಯಾಪಕ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಕಾಣಿಕೆಕೊಡುವ ವಿಧಾನಗಳಿವೆ. ಈ ಮುಂದಿನ ವಿಧಾನಗಳು ಅದರಲ್ಲಿ ಒಳಗೂಡಿವೆ:

ವಿಮೆ: ವಾಚ್‌ಟವರ್‌ ಸೊಸೈಟಿ ಅನ್ನು ಒಂದು ಜೀವ ವಿಮಾ ಪಾಲಿಸಿ ಇಲ್ಲವೆ ನಿವೃತ್ತಿ/ಪಿಂಚಣಿ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.

ಬ್ಯಾಂಕ್‌ ಖಾತೆಗಳು: ಬ್ಯಾಂಕ್‌ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು, ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳಿಕ ಬ್ಯಾಂಕ್‌ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ವಾಚ್‌ಟವರ್‌ ಸೊಸೈಟಿಯೊಂದಿಗೆ ಇಟ್ಟುಕೊಳ್ಳಬಹುದು ಅಥವಾ ದಾನಿಯು ಮರಣಹೊಂದುವಲ್ಲಿ ಅವು ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ ಹಾಗೂ ಬಾಂಡ್‌ಗಳನ್ನು ನೇರವಾದ ಕೊಡುಗೆಯಾಗಿ ವಾಚ್‌ಟವರ್‌ ಸೊಸೈಟಿಗೆ ದಾನಮಾಡಬಹುದು.

ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಕೊಡುಗೆಯಾಗಿ ದಾನಮಾಡಬಹುದು, ಇಲ್ಲವೆ ವಾಸದ ಮನೆಯಿರುವ ಆಸ್ತಿಯಾಗಿರುವಲ್ಲಿ ದಾನಿಯು ಜೀವದಿಂದಿರುವ ವರೆಗೂ ಅದರಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ದಾನಕೊಡುವ ಕರಾರುಪತ್ರವನ್ನು ತಯಾರಿಸುವ ಮೊದಲು ನಿಮ್ಮ ದೇಶದ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿರಿ.

ವರ್ಷಾಶನ ದಾನ: ವರ್ಷಾಶನ ದಾನದ ಏರ್ಪಾಡು ಅಂದರೆ ಒಬ್ಬನು ತನ್ನಲ್ಲಿರುವ ಹಣವನ್ನು ಅಥವಾ ಬಂಡವಾಳ ಪತ್ರಗಳನ್ನು ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲಾಗುವ ಒಂದು ನೇಮಿತ ಸಂಸ್ಥೆಗೆ ವರ್ಗಾಯಿಸುತ್ತಾನೆ. ಇದಕ್ಕೆ ಪ್ರತಿಯಾಗಿ, ದಾನಿಯು ಅಥವಾ ಅವನಿಂದ ನೇಮಿಸಲ್ಪಟ್ಟವನು ತನ್ನ ಜೀವಮಾನದಾದ್ಯಂತ ಪ್ರತಿ ವರುಷ ನಿರ್ದಿಷ್ಟ ವಾರ್ಷಿಕ ವೇತನವನ್ನು ಪಡೆಯುತ್ತಾನೆ. ಅಷ್ಟುಮಾತ್ರವಲ್ಲದೆ, ವರ್ಷಾಶನ ದಾನವು ಸ್ಥಾಪಿತವಾದ ವರುಷ ದಾನಿಗೆ ವರಮಾನ ತೆರಿಗೆಯಲ್ಲಿ ಕಡಿತ ಸಿಗುತ್ತದೆ.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ವಾಚ್‌ಟವರ್‌ ಸೊಸೈಟಿಗೆ ಕಾನೂನುಬದ್ಧವಾಗಿ ಉಯಿಲು ಬರೆಯಬಹುದು. ಅಥವಾ ವಾಚ್‌ಟವರ್‌ ಸೊಸೈಟಿಯನ್ನು * ಒಂದು ಟ್ರಸ್ಟ್‌ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಕೆಲವು ದೇಶಗಳಲ್ಲಿ, ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನವನ್ನು ನೀಡುವಂಥ ಟ್ರಸ್ಟ್‌, ನಿರ್ದಿಷ್ಟ ತೆರಿಗೆ ವಿನಾಯಿತಿಗಳನ್ನು ನೀಡಬಹುದು.

“ಚ್ಯಾರಿಟಬಲ್‌ ಯೋಜನೆ” ಎಂಬ ಪದ ಸೂಚಿಸುವಂತೆ, ಈ ರೀತಿಯ ದಾನಗಳು ದಾನಿಯು ಸ್ವಲ್ಪ ಯೋಜನೆಯನ್ನು ಮಾಡುವಂತೆ ಅಗತ್ಯಪಡಿಸುತ್ತವೆ. ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ಯಾವುದೇ ರೀತಿಯ ಚ್ಯಾರಿಟಬಲ್‌ ಯೋಜನೆಯಿಂದ ಪ್ರಯೋಜನವಾಗುವಂತೆ ಬಯಸುವ ವ್ಯಕ್ತಿಗಳಿಗೆ ನೆರವು ನೀಡಲು, “ಲೋಕವ್ಯಾಪಕ ರಾಜ್ಯ ಸೇವೆಯನ್ನು ಬೆಂಬಲಿಸಲು ಚ್ಯಾರಿಟಬಲ್‌ ಯೋಜನೆ” * ಎಂಬ ಬ್ರೋಷರ್‌ ಅನ್ನು ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿ ತಯಾರಿಸಲಾಗಿದೆ. ಈಗ ಅಥವಾ ಅಂತಿಮ ಉಯಿಲಿನ ಮೂಲಕ ಕೊಡುಗೆಗಳನ್ನು ನೀಡಬಹುದಾದ ವಿವಿಧ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಲಿಕ್ಕಾಗಿ ಈ ಬ್ರೋಷರನ್ನು ತಯಾರಿಸಲಾಗಿದೆ. ಬ್ರೋಷರನ್ನು ಓದಿದ ಮತ್ತು ತಮ್ಮ ಸ್ವಂತ ಕಾನೂನು ಇಲ್ಲವೆ ತೆರಿಗೆ ಸಲಹೆಗಾರರೊಂದಿಗೆ ಚರ್ಚಿಸಿದ ಬಳಿಕ ಅನೇಕರು, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಧಾರ್ಮಿಕ ಹಾಗೂ ಮಾನವೋಪಕಾರಿ ಚಟುವಟಿಕೆಗಳಿಗೆ ಬೆಂಬಲ ನೀಡಲು ಶಕ್ತರಾಗಿದ್ದಾರೆ ಮತ್ತು ಅದೇ ಸಮಯದಲ್ಲಿ ಈ ರೀತಿಯಾಗಿ ಮಾಡುವ ಮೂಲಕ ತಮ್ಮ ತೆರಿಗೆ ಪ್ರಯೋಜನಗಳನ್ನು ಸಹ ಹೆಚ್ಚಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, ಪತ್ರ ಅಥವಾ ಫೋನಿನ ಮೂಲಕ ಕೆಳಗೆ ನೀಡಲಾಗಿರುವ ವಿಳಾಸದಲ್ಲಿ ಯೆಹೋವನ ಸಾಕ್ಷಿಗಳನ್ನು ಅಥವಾ ನಿಮ್ಮ ದೇಶದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವನ್ನು ನೋಡಿಕೊಳ್ಳುವ ಆಫೀಸನ್ನು ನೀವು ಸಂಪರ್ಕಿಸಬಹುದು.

Jehovah’s Witnesses,

Post Box 6440,

Yelahanka,

Bangalore 560 064,

Karnataka.

Telephone: (080) 28468072

[ಪಾದಟಿಪ್ಪಣಿಗಳು]

^ ಪ್ಯಾರ. 10 ಭಾರತದಲ್ಲಾದರೆ, “ದ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಇಂಡಿಯಾ”ಗೆ ಸಂದಾಯವಾಗಬೇಕೆಂದು ನಮೂದಿಸತಕ್ಕದ್ದು.

^ ಪ್ಯಾರ. 11 ಭಾರತಕ್ಕೆ ಅನ್ವಯಿಸುವುದಿಲ್ಲ.

^ ಪ್ಯಾರ. 13 ಗಮನಿಸಿ: ತೆರಿಗೆಯ ವಿಧಿನಿಯಮಗಳು ವಿಭಿನ್ನ ದೇಶಗಳಲ್ಲಿ ವಿಭಿನ್ನವಾಗಿರಬಲ್ಲವು. ನಿಮ್ಮ ಅಕೌಂಟೆಂಟ್‌ ಅಥವಾ ವಕೀಲನೊಂದಿಗೆ ಮಾತಾಡಿ ತೆರಿಗೆ ನಿಯಮಗಳು ಮತ್ತು ಯೋಜನೆಯ ಬಗ್ಗೆ ತಿಳಿದುಕೊಳ್ಳಿರಿ. ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುಂಚೆ ದಯವಿಟ್ಟು ಸ್ಥಳೀಯ ಬ್ರಾಂಚ್‌ ಆಫೀಸನ್ನು ಸಹ ಸಂಪರ್ಕಿಸಿರಿ.

^ ಪ್ಯಾರ. 20 ಭಾರತದಲ್ಲಿ, “ದ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಇಂಡಿಯಾ.”

^ ಪ್ಯಾರ. 21 ಭಾರತದಲ್ಲಿ ಲಭ್ಯವಿಲ್ಲ.