ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂಗಳದಲ್ಲಿ ನಿರಾಕರಣೆಗಳು

ಅಂಗಳದಲ್ಲಿ ನಿರಾಕರಣೆಗಳು

ಅಧ್ಯಾಯ 120

ಅಂಗಳದಲ್ಲಿ ನಿರಾಕರಣೆಗಳು

ಯೇಸುವನ್ನು ಗೆತ್ಸೇಮನೆ ತೋಟದಲ್ಲಿ ತೊರೆದು, ಹೆದರಿಕೆಯಿಂದ ಇತರ ಎಲ್ಲಾ ಅಪೊಸ್ತಲರೊಂದಿಗೆ ಪಲಾಯನ ಮಾಡಿದ ನಂತರ, ಪೇತ್ರ ಮತ್ತು ಯೋಹಾನರು ತಮ್ಮ ಪಲಾಯನವನ್ನು ನಿಲ್ಲಿಸುತ್ತಾರೆ. ಯೇಸುವನ್ನು ಅನ್ನನ ಮನೆಗೆ ಕೊಂಡು ಹೋದಾಗ, ಪ್ರಾಯಶಃ ಅವರು ನಡೆದು ಅಲ್ಲಿಗೆ ತಲುಪುತ್ತಾರೆ. ಅನ್ನನು ಅವನನ್ನು ಮಹಾ ಯಾಜಕನಾದ ಕಾಯಫನ ಬಳಿಗೆ ಕಳುಹಿಸಿದಾಗ, ಅವರ ಸ್ವಂತ ಜೀವಗಳ ಹೆದರಿಕೆ ಮತ್ತು ತಮ್ಮ ಪ್ರಭುವಿಗೆ ಏನು ಸಂಭವಿಸುತ್ತದೋ ಎಂಬ ಅವರ ಗಾಢವಾದ ಕಾತರದ ನಡುವೆ ಪ್ರಾಯಶಃ ತೊಯ್ದಾಡುತ್ತಾ, ಪೇತ್ರ, ಯೋಹಾನರು ಅವನನ್ನು ದೂರದಿಂದ ಹಿಂಬಾಲಿಸುತ್ತಿರಬೇಕು.

ಕಾಯಫನ ವಿಶಾಲ ನಿವಾಸದ ಬಳಿಗೆ ಬಂದಾಗ, ಯೋಹಾನನಿಗೆ ಮಹಾ ಯಾಜಕನ ಪರಿಚಿತಿ ಇದ್ದದರಿಂದ, ಅಂಗಳದೊಳಕ್ಕೆ ಪ್ರವೇಶವನ್ನು ಪಡೆಯಲು ಶಕ್ತನಾಗುತ್ತಾನೆ. ಆದರೆ ಪೇತ್ರನಾದರೋ ಹೊರಗೆ ಬಾಗಲ ಹತ್ತರ ನಿಂತಿದ್ದನು. ಆದರೆ ಕೂಡಲೇ ಯೋಹಾನನು ಹಿಂತೆರಳಿ ಬಂದು, ದಾಸಿಯಾಗಿದ್ದ ಬಾಗಲು ಕಾಯುವವಳ ಸಂಗಡ ಮಾತಾಡುತ್ತಾನೆ ಮತ್ತು ಪೇತ್ರನಿಗೆ ಒಳಕ್ಕೆ ಹೋಗಲು ಅನುಮತಿಸಲಾಗುತ್ತದೆ.

ಈಗ ಚಳಿಯಾಗಿತ್ತು ಮತ್ತು ಮಹಾ ಯಾಜಕನ ಆಳುಗಳೂ ಒಲೇಕಾರರೂ ಇದ್ದಲಿನ ಬೆಂಕಿಯನ್ನು ಮಾಡಿದ್ದರು. ಯೇಸುವಿನ ವಿಚಾರಣೆಯ ಫಲಿತಾಂಶವೇನು ಎಂದು ಕಾಯುತ್ತಾ, ಪೇತ್ರನು ಅವರೊಂದಿಗೆ ಸೇರಿ ಚಳಿಕಾಸಿಕೊಳ್ಳುತ್ತಿದ್ದನು. ಅಲ್ಲಿ, ಬೆಂಕಿಯ ಬೆಳಕಿನ ಪ್ರಕಾಶದಲ್ಲಿ ಪೇತ್ರನನ್ನು ಒಳಗೆ ಬಿಟ್ಟ ಬಾಗಲು ಕಾಯುವವಳು ಅವನನ್ನು ಚೆನ್ನಾಗಿ ದೃಷ್ಟಿಸಿ ನೋಡಿದಳು. “ನೀನು ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು!” ಎಂದು ಆಕೆ ಉದ್ಗರಿಸುತ್ತಾಳೆ.

ಗುರುತು ಹಿಡಿಯಲ್ಪಟ್ಟದರ್ದಿಂದ ಕ್ಷೋಭೆಗೊಂಡವನಾಗಿ, ಪೇತ್ರನು ಎಲ್ಲರ ಮುಂದೆ ತಾನು ಯೇಸುವನ್ನು ಅರಿಯನೆಂದು ನಿರಾಕರಿಸುತ್ತಾನೆ: “ಅಲ್ಲ; ಅವನು ಯಾರೆಂದು ನಾನು ಗೊತ್ತಿಲ್ಲ, ಹಾಗೂ ನೀನು ಏನನ್ನುತೀಯ್ತೋ ನನಗೆ ತಿಳಿಯುವದಿಲ್ಲ,” ಎಂದನು ಅವನು.

ಆಗ, ಪೇತ್ರನು ಅಲ್ಲಿಂದ ಬಾಗಲಿನ ಕಡೆಗೆ ಹೊರಟುಹೋದನು. ಅಲ್ಲಿ ಇನ್ನೊಬ್ಬ ಹುಡುಗಿಯು ಅವನನ್ನು ಕಂಡು ಅಲ್ಲಿ ನಿಂತಿದ್ದವರಿಗೆ ಅವಳು ಕೂಡ ಹೇಳುವದು: “ಇವನೂ ನಜರೇತಿನ ಯೇಸುವಿನ ಕೂಡ ಇದ್ದನು.” ಪುನೊಮ್ಮೆ ಪೇತ್ರನು ಅದನ್ನು ನಿರಾಕರಿಸುತ್ತಾ, ಆಣೆಯಿಡಲಾರಂಭಿಸಿದನು: “ಅಲ್ಲ, ಆ ಮನುಷ್ಯನನ್ನು ನಾನರಿಯೆನು!”

ಪೇತ್ರನು ಹೊರಂಗಳದಲ್ಲಿ ನಿಂತುಕೊಂಡು, ಸಾಧ್ಯವಾದಷ್ಟು ಮರೆಯಾಗಿರಲು ಪ್ರಯತ್ನಿಸುತ್ತಿದ್ದಿರಬೇಕು. ಇಷ್ಟರೊಳಗೆ ಪ್ರಾಯಶಃ ಬೆಳಗ್ಗಿನ ಜಾವದ ಕತ್ತಲೆಯಲ್ಲಿ ಕೋಳಿಯ ಕೂಗಿನಿಂದ ಅವನು ಬೆಚ್ಚಿಬಿದ್ದಿರಬೇಕು. ತನ್ಮಧ್ಯೆ, ಯೇಸುವಿನ ವಿಚಾರಣೆಯು ಅಂಗಳದ ಮೇಲ್ಭಾಗದಲ್ಲಿರುವ ಮನೆಯಲ್ಲಿ ನಡೆಯುತ್ತಿದ್ದಿರಬೇಕೆಂದು ತೋರುತ್ತದೆ. ಸಾಕ್ಷ್ಯ ನುಡಿಯಲು ತರಲ್ಪಟ್ಟ ಬೇರೆ ಬೇರೆ ಸಾಕ್ಷಿಗಳು ಬರುವದನ್ನು ಮತ್ತು ಹೋಗುವದನ್ನು ಕೆಳಗಡೆ ಇದ್ದ ಪೇತ್ರನೂ, ಇತರರೂ ಕಾದುಕೊಂಡು ನೋಡುತ್ತಿದ್ದರು ಎಂಬುದರಲ್ಲಿ ಸಂದೇಹವಿಲ್ಲ.

ಯೇಸುವಿನ ಸಂಗಡಿಗನೆಂದು ಪೇತ್ರನನ್ನು ಗುರುತಿಸಿ ಈಗ ಸುಮಾರು ಒಂದು ತಾಸು ಕಳೆದಿರಬೇಕು. ಅಲ್ಲಿ ನಿಂತಿದ್ದವರಲ್ಲಿ ಅನೇಕರು ಈಗ ಪೇತ್ರನ ಬಳಿಗೆ ಬಂದು, ಹೀಗೆ ಹೇಳಿದರು: “ನಿಶ್ಚಯವಾಗಿ ನೀನು ಸಹ ಅವರಲ್ಲಿ ಒಬ್ಬನು, ನಿನ್ನ ಭಾಪಷೆಯೇ ನಿನ್ನನ್ನು ತೋರಿಸಿ ಕೊಡುತ್ತದೆ.” ಪೇತ್ರನು ಕಿವಿ ಕತ್ತರಿಸಿದವನಾಗಿದ್ದ ಮಲ್ಕನ ಬಂಧುವಾಗಿದ್ದ ಒಬ್ಬನು ಆ ಗುಂಪಿನಲ್ಲಿ ಇದ್ದನು. “ನಾನು ನಿನ್ನನ್ನು ತೋಟದಲ್ಲಿ ಅವನ ಸಂಗಡ ಕಂಡೆನಲ್ಲವೇ?” ಅಂದನು ಅವನು.

“ನೀನು ಹೇಳುವ ಆ ಮನುಷ್ಯನನ್ನು ನಾನರಿಯೆನು!” ಎಂದು ದೃಢವಾಗಿ ನಿರಾಕರಿಸಿದನು ಪೇತ್ರನು. ವಾಸ್ತವದಲ್ಲಿ ಅವರೆಲ್ಲರೂ ತಪ್ಪು ಮಾಡಿದ್ದಾರೆಂದು ಅವರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿ ಆ ವಿಷಯವಾಗಿ ಅವನು ಶಪಿಸಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು, ಆ ಮೂಲಕ ಅವನು ಸತ್ಯವನ್ನು ಹೇಳದಿದ್ದರೆ ಕೆಡುಕು ಅವನ ಮೇಲೆ ಬರಲಿ ಎಂದು ಸ್ವತಃ ಹೇಳಿಕೊಳ್ಳುವದಾಗಿದೆ.

ಪೇತ್ರನು ಈ ಮೂರನೆಯ ನಿರಾಕರಣೆಯ ಮಾಡಿದ ಕೂಡಲೆ ಕೋಳಿ ಕೂಗಿತು. ಮತ್ತು ಆ ಕ್ಷಣದಲ್ಲಿ ಅಂಗಳದ ಮೇಲಿರುವ ಕೈಸಾಲೆಗೆ ಬಂದಿರಬಹುದಾದ ಯೇಸು, ತಿರಿಗಿಕೊಂಡು ಅವನನ್ನು ದೃಷ್ಟಿಸುತ್ತಾನೆ. ತಕ್ಷಣವೇ, ಮೇಲಂತಸ್ತಿನ ಕೋಣೆಯಲ್ಲಿ ಕೇವಲ ಕೆಲವು ತಾಸುಗಳ ಹಿಂದೆ ಯೇಸುವು ಹೇಳಿದ್ದನ್ನು ಪೇತ್ರನು ನೆನಪಿಸಿಕೊಳ್ಳುತ್ತಾನೆ: “ಕೋಳಿ ಎರಡು ಸಾರಿ ಕೂಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅರಿಯೆನು ಎಂದು ಹೇಳುವಿ.” ತನ್ನ ಪಾಪದ ಭಾರದಿಂದ ಜಜ್ಜಲ್ಪಟ್ಟು, ಪೇತ್ರನು ಹೊರಗೆ ಹೋಗಿ ಬಹು ವ್ಯಥೆ ಪಟ್ಟು ಅತನ್ತು.

ಇದು ಹೇಗೆ ಸಂಭವಿಸಸಾಧ್ಯವಿದೆ? ತನ್ನ ಆತ್ಮಿಕ ಬಲದ ಕುರಿತು ಅಷ್ಟೊಂದು ನಿಶ್ಚಿತನಾಗಿದ್ದ ಮೇಲೆ, ಬೇಗ ಬೇಗನೆ ಮೂರು ಬಾರಿ ಪೇತ್ರನು ಅವನ ಪ್ರಭುವನ್ನು ಹೇಗೆ ನಿರಾಕರಿಸಸಾಧ್ಯವಿದೆ? ಪೇತ್ರನನ್ನು ಪರಿಸ್ಥಿತಿಗಳು ಅವನಿಗರಿವಿಲ್ಲದೆ ಮುತ್ತಿದವು ಎನ್ನುವದರಲ್ಲಿ ಸಂದೇಹವಿಲ್ಲ. ಸತ್ಯವು ತಿರಿಚಲ್ಪಟ್ಟಿತು ಮತ್ತು ಯೇಸುವು ಒಬ್ಬ ಅಧಮನಾದ ಪಾತಕಿಯಂತೆ ಚಿತ್ರಿಸಲ್ಪಟ್ಟನು. ಸರಿಯಾದದ್ದು ಯಾವುದಾಗಿತ್ತೋ ಅದನ್ನು ತಪ್ಪು ಎಂದೂ, ನಿರಪರಾಧಿಯು ತಪ್ಪಿತಸ್ಥನೆಂದೂ ತೋರಿಸಲ್ಪಟ್ಟಿತು. ಆದುದರಿಂದ, ಸಂದರ್ಭದ ಒತ್ತಡಗಳ ಕೆಳಗೆ, ಪೇತ್ರನ ಸಮತೂಕವು ತಪ್ಪಿಹೋಯಿತು. ನಿಷ್ಠೆಯ ಯೋಗ್ಯ ಚಿತ್ತವು ಫಕ್ಕನೇ ಬುಡಮೇಲಾಯಿತು; ಅವನ ದುಃಖಕ್ಕೆ ಮನುಷ್ಯರ ಭಯವು ಅವನನ್ನು ನಿಷ್ಕ್ರಿಯನನ್ನಾಗಿ ಮಾಡಿತು. ಅದು ನಮಗೆಂದಿಗೂ ಸಂಭವಿಸದಿರಲಿ! ಮತ್ತಾಯ 26:57, 58, 69-75; ಮಾರ್ಕ 14:30, 53,54, 66-72; ಲೂಕ 22:54-62; ಯೋಹಾನ 18:15-18, 25-27.

▪ ಮಹಾ ಯಾಜಕನ ಅಂಗಳದೊಳಗೆ ಪೇತ್ರ , ಯೋಹಾನರು ಪ್ರವೇಶವನ್ನು ಪಡೆದದ್ದು ಹೇಗೆ?

▪ ಪೇತ್ರ , ಯೋಹಾನರು ಅಂಗಳದಲ್ಲಿದ್ದಾಗ, ಮನೆಯಲ್ಲಿ ಏನು ನಡೆಯುತ್ತಾ ಇತ್ತು?

▪ ಕೋಳಿಯು ಎಷ್ಟು ಸಾರಿ ಕೂಗಿತು, ಮತ್ತು ಕ್ರಿಸ್ತನನ್ನು ಅರಿಯನೆಂದು ಎಷ್ಟು ಬಾರಿ ಪೇತ್ರನು ನಿರಾಕರಿಸಿದನು?

▪ ಪೇತ್ರನು ಶಪಿಸುವದೂ, ಆಣೆಯಿಡುವದೂ, ಅದರ ಅರ್ಥವೇನು?

▪ ಯೇಸುವನ್ನು ತಾನು ತಿಳಿದಿರುವದನ್ನು ನಿರಾಕರಿಸಲು ಪೇತ್ರನಿಗೆ ಕಾರಣವಾದದ್ದು ಯಾವುದು?