ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನ್ನನ ಬಳಿಗೆ ಕೊಂಡೊಯ್ಯಲಾಯಿತು, ಅನಂತರ ಕಾಯಫನ ಬಳಿಗೆ

ಅನ್ನನ ಬಳಿಗೆ ಕೊಂಡೊಯ್ಯಲಾಯಿತು, ಅನಂತರ ಕಾಯಫನ ಬಳಿಗೆ

ಅಧ್ಯಾಯ 119

ಅನ್ನನ ಬಳಿಗೆ ಕೊಂಡೊಯ್ಯಲಾಯಿತು, ಅನಂತರ ಕಾಯಫನ ಬಳಿಗೆ

ಯೇಸುವನ್ನು ಒಬ್ಬ ಸಾಮಾನ್ಯ ಪಾತಕಿಯಂತೆ, ಪ್ರಭಾವಶಾಲಿಯಾಗಿದ್ದ ಮಾಜೀ ಮಹಾ ಯಾಜಕನಾಗಿದ್ದ ಅನ್ನನ ಬಳಿಗೆ ಕೊಂಡೊಯುತ್ತಾರೆ. ಯೇಸುವು 12-ವರ್ಷದ ಬಾಲಕನಾಗಿದ್ದಾಗ ದೇವಾಲಯದಲ್ಲಿದ್ದ ಬೋಧಕರನ್ನು ಬೆರಗುಗೊಳಿಸಿದ ಸಮಯದಲ್ಲಿ ಅನ್ನನು ಮಹಾ ಯಾಜಕನಾಗಿದ್ದನು. ಅನಂತರ ಅನ್ನನ ಕೆಲವಾರು ಪುತ್ರರು ಮಹಾ ಯಾಜಕರುಗಳಾಗಿ ಸೇವೆ ಸಲ್ಲಿಸಿದ್ದರು, ಮತ್ತು ಪ್ರಚಲಿತದಲ್ಲಿ ಅವನ ಅಳಿಯನಾದ ಕಾಯಫನು ಆ ಸ್ಥಾನದಲ್ಲಿದ್ದನು.

ಯೆಹೂದ್ಯರ ಧಾರ್ಮಿಕ ಜೀವನದಲ್ಲಿ ಈ ಮಹಾ ಯಾಜಕನ ದೀರ್ಘಕಾಲದ ಪ್ರತಿಷ್ಠೆಯಿಂದಾಗಿ, ಯೇಸುವನ್ನು ಪ್ರಾಯಶಃ ಮೊದಲು ಅನ್ನನ ಮನೆಗೆ ಕೊಂಡೊಯ್ದಿರಬಹುದು, ಅನ್ನನು ನೋಡಲು ಮಾಡಿದ ಈ ನಿಲುಗಡೆಯು, ಮಹಾ ಯಾಜಕನಾದ ಕಾಯಫನಿಗೆ 71-ಸದಸ್ಯರುಗಳ ಯೆಹೂದ್ಯ ಮುಖ್ಯ ನ್ಯಾಯಾಲಯವಾದ ಸನ್ಹೇದ್ರಿನ್‌ನನ್ನೂ, ಸುಳ್ಳು ಸಾಕ್ಷಿಗಳನ್ನೂ ಒಟ್ಟುಗೂಡಿಸಲು ಸಾಕಷ್ಟು ಸಮಯವನ್ನಿತಿತ್ತು.

ಮಹಾ ಯಾಜಕನಾದ ಅನ್ನನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಉಪದೇಶದ ವಿಷಯವಾಗಿಯೂ ಈಗ ಪ್ರಶ್ನಿಸುತ್ತಾನೆ. ಆದಾಗ್ಯೂ, ಉತ್ತರವಾಗಿ ಯೇಸುವು ಹೇಳುವದು: “ನಾನು ಧಾರಾಳವಾಗಿ ಲೋಕದ ಮುಂದೆ ಮಾತಾಡಿದ್ದೇನೆ; ಯೆಹೂದ್ಯರೆಲ್ಲಾ ಕೂಡುವಂಥ ಸಭಾಮಂದಿರಗಳಲ್ಲಿಯೂ ದೇವಾಲಯದಲ್ಲಿಯೂ ಯಾವಾಗಲೂ ಉಪದೇಶ ಮಾಡುತ್ತಾ ಬಂದೆನು; ಮರೆಯಾಗಿ ಯಾವದನ್ನೂ ಮಾಡಲಿಲ್ಲ. ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತಾಡಿದ್ದೆನೋ ಅದನ್ನು ಕೇಳಿದವರಲ್ಲಿ ವಿಚಾರಿಸು; ನಾನು ಹೇಳಿದ್ದು ಇವರಿಗೆ ತಿಳಿದದೆಯಲ್ಲಾ.”

ಆಗ ಹತ್ತರ ನಿಂತಿದ್ದ ಒಲೇಕಾರರಲ್ಲಿ ಒಬ್ಬನು ಯೇಸುವಿನ ಕೆನ್ನೆಗೆ ಏಟುಹಾಕುತ್ತಾ, ಹೇಳುವದು: “ಮಹಾ ಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯಾ?”

“ನಾನು ಮಾತಾಡಿದರ್ದಲ್ಲಿ ಏನಾದರೂ ದೋಷವಿದ್ದರೆ,” ಯೇಸುವು ಉತ್ತರಿಸುವದು, “ಆ ದೋಷ ಇಂಥದೆಂದು ಸಾಕ್ಷಿ ಹೇಳು; ನಾನು ಮಾತಾಡಿದ್ದು ಸರಿಯಾಗಿದ್ದರೆ ನನ್ನನ್ನು ಯಾಕೆ ಹೊಡೆಯುತ್ತೀ?” ಇದರ ನಂತರ, ಅನ್ನನು ಯೇಸುವನ್ನು ಕಟ್ಟಿಸಿ ಕಾಯಫನ ಬಳಿಗೆ ಕಳುಹಿಸಿದನು.

ಇಷ್ಟರೊಳಗೆ ಎಲ್ಲಾ ಮಹಾ ಯಾಜಕರುಗಳೂ, ಹಿರೀ ಪುರುಷರೂ ಮತ್ತು ಶಾಸ್ತ್ರಿಗಳೂ, ಹೌದು ಇಡೀ ಸನ್ಹೇದ್ರಿನ್‌, ಒಟ್ಟು ಸೇರಲು ಆರಂಭಿಸಿದರು. ಅವರ ಕೂಟದ ಸ್ಥಳವು ಕಾಯಫನ ಮನೆಯಾಗಿತ್ತೆಂದು ತೋಚುತ್ತದೆ. ಪಸ್ಕ ಹಬ್ಬದ ರಾತ್ರಿಯಲ್ಲಿ ಅಂಥ ಒಂದು ವಿಚಾರಣೆಯನ್ನು ನಡಿಸುವದು ಯೆಹೂದ್ಯರ ನಿಯಮಕ್ಕೆ ಸ್ಪಷ್ಟವಾಗಿ ವಿರುದ್ಧವಾಗಿತ್ತು. ಆದರೆ ಇದು ಅವರ ದುಷ್ಟ ಉದ್ದೇಶದಿಂದ ಧಾರ್ಮಿಕ ಮುಖಂಡರನ್ನು ತಡೆಯುವದಿಲ್ಲ.

ಲಾಜರನನ್ನು ಯೇಸುವು ಪುನರುತ್ಥಾನಗೊಳಿಸಿದಾಗ, ವಾರಗಳ ಹಿಂದೆಯೇ, ಅವನನ್ನು ಕೊಲ್ಲಬೇಕೆಂದು ಆಗಲೇ ಸನ್ಹೇದ್ರಿನ್‌ ತಮ್ಮೊಳಗೆ ನಿರ್ಧರಿಸಿತ್ತು. ಮತ್ತು ಕೇವಲ ಎರಡು ದಿನಗಳ ಹಿಂದೆ, ಬುಧವಾರ ದಿನ, ಯೇಸುವನ್ನು ಕೊಲ್ಲುವದಕ್ಕಾಗಿ ಅವನನ್ನು ಕುತಂತ್ರದಿಂದ ಹಿಡಿಯುಲು ಧಾರ್ಮಿಕ ಮುಖಂಡರುಗಳು ಒಟ್ಟಿಗೆ ಸಮಾಲೋಚನೆ ನಡಿಸಿದ್ದರು. ನೆನಸಿರಿ, ಅವನ ವಿಚಾರಣೆಯ ಮೊದಲೇ ಅವನಿಗೆ ವಾಸ್ತವದಲ್ಲಿ ನ್ಯಾಯತೀರ್ಪು ಕೊಡಲ್ಪಟ್ಟಿತ್ತು!

ಯೇಸುವಿನ ವಿರುದ್ಧ ಒಂದು ಆಪಾದನೆ ಹೊರಿಸಲ್ಪಡುವಂತೆ, ಸುಳ್ಳು ರುಜುವಾತುಗಳನ್ನು ಒದಗಿಸಲು ಸಾಕ್ಷಿಗಳಿಗಾಗಿ ಹುಡುಕಾಟದ ಪ್ರಯತ್ನಗಳು ನಡೆಯುತ್ತಿದ್ದವು. ಆದಾಗ್ಯೂ, ಬಹುಮಂದಿ ಸಾಕ್ಷಿಗಳು ಅವರ ಸಾಕ್ಷ್ಯಗಳಲ್ಲಿ ಒಂದಕ್ಕೊಂದು ಸಹಮತದಲ್ಲಿರಲಿಲ್ಲ. ಕಟ್ಟಕಡೆಗೆ, ಇಬ್ಬರು ಮುಂದೆ ಬಂದು, ಹೀಗೆಂದು ಸಮರ್ಥಿಸಿದರು: “ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು ಎಂದು ಇವನು ಹೇಳಿದ್ದನ್ನು ನಾವು ಕೇಳಿದ್ದೇವೆ.”

“ನೀನೇನೂ ಉತ್ತರ ಹೇಳುವದಿಲ್ಲವೋ?” ಕಾಯಫನು ಕೇಳುತ್ತಾನೆ. “ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು?” ಆದರೆ ಯೇಸುವು ಸುಮ್ಮನಿದ್ದು ಏನೂ ಉತ್ತರ ಹೇಳಲಿಲ್ಲ. ಇಲ್ಲಿಯೂ ಈ ಸುಳ್ಳು ಆಪಾದನೆಯಲ್ಲಿ ಸನ್ಹೇದ್ರಿನ್‌ಗೆ ನಾಚಿಕೆಯಾಗುವಂಥ ರೀತಿಯಲ್ಲಿ, ಅವರ ಕಥೆಗಳನ್ನು ಸಾಕ್ಷಿಗಳು ಒಂದಕ್ಕೊಂದು ಸರಿಬೀಳುವ ರೀತಿಯಲ್ಲಿ ಹೇಳಶಕ್ತರಾಗಿರಲಿಲ್ಲ. ಆದುದರಿಂದ ಮಹಾ ಯಾಜಕನು ಇನ್ನೊಂದು ತಂತ್ರವನ್ನು ಬಳಸಿದನು.

ಯಾರಾದರೊಬ್ಬರು ತಾನು ದೇವರ ಮಗನು ಎಂದು ಹೇಳಿಕೊಂಡರೆ, ಯೆಹೂದ್ಯರು ಎಷ್ಟೊಂದು ಸೂಕ್ಷ್ಮವೇದಿಗಳಾಗಿದ್ದರೆಂದು ಕಾಯಫನಿಗೆ ತಿಳಿದಿತ್ತು. ಈ ಮೊದಲಿನ ಎರಡು ಸಂದರ್ಭಗಳಲ್ಲಿ, ಅವಸರದಿಂದ ಯೇಸುವು ಮರಣ ದಂಡನೆಗೆ ಯೋಗ್ಯನಾದ ದೇವದೂಷಕನು ಎಂದು ಆಪಾದಿಸಿದ್ದರು, ಒಮ್ಮೆ ತಪ್ಪಾಗಿ, ದೇವರಿಗೆ ಅವನನ್ನು ಸರಿಗಟ್ಟಿಸುವ ವಾದವನ್ನು ಮಾಡುತ್ತಾನೆಂದು ಊಹಿಸಿದ್ದರು. ಈಗ ಕಾಯಫನು ಕುತಂತ್ರದಿಂದ ಕೇಳುವದು: “ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂಬದನ್ನು ನಮಗೆ ಹೇಳಬೇಕು!”

ಯೆಹೂದ್ಯರು ಏನನ್ನೇ ಚಿಂತಿಸಲಿ, ಯೇಸುವು ನಿಜವಾಗಿ ದೇವರ ಕುಮಾರನಾಗಿದ್ದನು. ಮತ್ತು ಸುಮ್ಮನೆ ಇರುವದು, ಅವನ ಕ್ರಿಸ್ತನೆಂಬುದರ ನಿರಾಕರಣೆ ಎಂದು ಪರಿಗಣಿಸಸಾಧ್ಯವಿತ್ತು. ಆದುದರಿಂದ ಯೇಸುವು ಧೈರ್ಯದಿಂದ ಉತ್ತರಿಸುವದು: “ನಾನೇ; ಇದಲ್ಲದೆ ಮನುಷ್ಯ ಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳೊಂದಿಗೆ ಬರುವದನ್ನು ನೋಡುವಿರಿ.”

ಆಗ ಕಾಯಫನು, ಒಂದು ನಾಟಕೀಯ ಪ್ರದರ್ಶನದಲ್ಲಿ, ತನ್ನ ಅಂಗಿಗಳನ್ನು ಹರಕೊಂಡು, ಒದರಿಕೊಳ್ಳುವದು: “ಇದು ದೇವದೂಷಣೆಯ ಮಾತು; ನಮಗೆ ಸಾಕ್ಷಿಗಳು ಯಾತಕ್ಕೆ ಬೇಕು? ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರ್ದಲ್ಲಾ; ನಿಮಗೆ ಹೇಗೆ ತೋರುತ್ತದೆ?”

“ಇವನು ಮರಣ ದಂಡನೆ ಹೊಂದತಕ್ಕವನು,” ಸನ್ಹೇದ್ರಿನ್‌ ತೀರ್ಪು ಮಾಡುತ್ತದೆ. ಅನಂತರ ಅವರು ಅವನನ್ನು ಅಪಹಾಸ್ಯ ಮಾಡಲು ಆರಂಭಿಸಿದರು ಮತ್ತು ಅವನಿಗೆ ಅನೇಕ ದೂಷಣೆಯ ಮಾತುಗಳನ್ನು ಹೇಳಿದರು. ಅವರು ಅವನ ಮುಖಕ್ಕೆ ಗುದ್ದಿದರು ಮತ್ತು ಅದರ ಮೇಲೆ ಉಗುಳಿದರು. ಇತರರು ಅವನ ಇಡೀ ಮುಖಕ್ಕೆ ಮುಸುಕುಹಾಕಿ ಅವರ ಮುಷ್ಟಿಯಿಂದ ಹೊಡೆದು, ಅವಮಾನಿಸುವ ರೀತಿಯಲ್ಲಿ ಹೇಳುವದು: “ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು.” ಈ ದೂಷಣೀಯ, ಕಾನೂನು ಬಾಹಿರವರ್ತನೆಯು ರಾತ್ರಿ ಸಮಯದ ವಿಚಾರಣೆಯಲ್ಲಿ ನಡಿಸಲ್ಪಟ್ಟಿತು. ಮತ್ತಾಯ 26:57-68; 26:3, 4; ಮಾರ್ಕ 14:53-65; ಲೂಕ 22:54, 63-65; ಯೋಹಾನ 18:13-24; 11:45-53; 10:31-39; 5:16-18.

▪ ಮೊದಲು ಯೇಸುವನ್ನು ಎಲ್ಲಿಗೆ ಕೊಂಡೊಯ್ಯಲಾಯಿತು, ಮತ್ತು ಅಲ್ಲಿ ಏನು ಸಂಭವಿಸುತ್ತದೆ?

▪ ಅನಂತರ ಯೇಸುವನ್ನು ಎಲ್ಲಿಗೆ ಕೊಂಡೊಯ್ಯಲಾಯಿತು, ಮತ್ತು ಯಾವ ಉದ್ದೇಶಕ್ಕಾಗಿ?

▪ ಯೇಸುವು ಮರಣ ದಂಡನೆಗೆ ಯೋಗ್ಯನು ಎಂದು ಸನ್ಹೇದ್ರಿನ್‌ ತೀರ್ಪು ಮಾಡುವಂತೆ ಕಾಯಫನು ಮಾಡಶಕ್ತನಾದದ್ದು ಹೇಗೆ?

▪ ವಿಚಾರಣೆಯ ಸಮಯದಲ್ಲಿ ಯಾವ ದೂಷಣೀಯ, ಕಾನೂನುಬಾಹಿರ ವರ್ತನೆಯು ನಡಿಸಲ್ಪಡುತ್ತದೆ?