ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತನ್ನ ವಿರೋಧಿಗಳನ್ನು ಯೇಸುವು ಖಂಡಿಸುತ್ತಾನೆ

ತನ್ನ ವಿರೋಧಿಗಳನ್ನು ಯೇಸುವು ಖಂಡಿಸುತ್ತಾನೆ

ಅಧ್ಯಾಯ 109

ತನ್ನ ವಿರೋಧಿಗಳನ್ನು ಯೇಸುವು ಖಂಡಿಸುತ್ತಾನೆ

ಯೇಸುವು ಅವನ ಧಾರ್ಮಿಕ ವಿರೋಧಿಗಳನ್ನು ಎಷ್ಟೊಂದು ದಿಕ್ಕು ತೋಚದಂತೆ ಮಾಡಿದ್ದನೆಂದರೆ ಅಂದಿನಿಂದ ಆತನನ್ನು ಪ್ರಶ್ನೆ ಮಾಡುವದಕ್ಕೆ ಅವರು ಅಂಜಿದರು. ಆದುದರಿಂದ ಅವರ ಅಜ್ಞಾನವನ್ನು ಬಯಲು ಪಡಿಸಲು ಅವನು ತಾನೇ ಮೊದಲ ಹೆಜ್ಜೆಯನ್ನು ತೆಗೆದು ಕೊಳ್ಳುತ್ತಾನೆ. “ಬರಬೇಕಾದ ಕ್ರಿಸ್ತನ ವಿಷಯವಾಗಿ ನಿಮಗೆ ಹೇಗೆ ತೋರುತ್ತದೆ?” ಅವನು ವಿಚಾರಿಸುತ್ತಾನೆ. “ಅವನು ಯಾರ ಮಗನು?”

“ದಾವೀದನ ಮಗನು” ಎಂದು ಫರಿಸಾಯರು ಉತ್ತರಿಸುತ್ತಾರೆ.

ದಾವೀದನು ಕ್ರಿಸ್ತನ ಯಾ ಮೆಸ್ಸೀಯನ ಮಾಂಸಿಕ ಪೂರ್ವಜನಾಗಿದ್ದನು ಎಂಬದನ್ನು ಯೇಸುವು ನಿರಾಕರಿಸದಿದ್ದರೂ, ಅವನು ಕೇಳುವದು: “ಹಾಗಾದರೆ ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು [ಯೆಹೋವನು] ನನ್ನ ಒಡೆಯನಿಗೆ ನುಡಿದನು ಎಂಬ ಮಾತಿನಲ್ಲಿ ದಾವೀದನು ಪವಿತ್ರಾತ್ಮಪ್ರೇರಿತನಾಗಿ [ಕೀರ್ತನೆ 110ರಲ್ಲಿ] ಆತನನ್ನು ಒಡೆಯನು ಅನ್ನುವದು ಹೇಗೆ? ದಾವೀದನು ಆತನನ್ನು ಒಡೆಯನೆಂದು ಹೇಳಿದ ಮೇಲೆ ಆತನು ಅವನಿಗೆ ಮಗನಾಗುವದು ಹೇಗೆ?”

ಫರಿಸಾಯರು ಈಗ ಸುಮ್ಮಗಾಗಿದ್ದರು, ಯಾಕಂದರೆ ಕ್ರಿಸ್ತನ ಅಥವಾ ಅಭಿಷಿಕ್ತನ ನಿಜ ಗುರುತು ಅವರಿಗೆ ತಿಳಿದಿರಲಿಲ್ಲ. ಫರಿಸಾಯರು ಪ್ರಾಯಶಃ ನಂಬುವಂತೆ, ಮೆಸ್ಸೀಯನು ಕೇವಲ ದಾವೀದನ ಮಾನವ ಸಂತಾನದವನಾಗಿರಲಿಲ್ಲ, ಬದಲು ಅವನು ಪರಲೋಕದಲ್ಲಿ ಇದ್ದನು ಮತ್ತು ದಾವೀದನಿಗಿಂತ ಶ್ರೇಷ್ಠನು ಯಾ ಒಡೆಯನು ಆಗಿದ್ದನು.

ಈಗ ಯೇಸು ಜನರ ಗುಂಪಿನ ಮತ್ತು ತನ್ನ ಶಿಷ್ಯರ ಕಡೆಗೂ ತಿರಿಗಿ, ಶಾಸ್ತ್ರಿಗಳ ಮತ್ತು ಫರಿಸಾಯರ ಕುರಿತು ಎಚ್ಚರಿಸುತ್ತಾನೆ. ಇವರು ದೇವರ ನಿಯಮಗಳನ್ನು ಬೋಧಿಸುವವರಾಗಿರುವದರಿಂದ, “ಮೋಶೆಯ ಪೀಠದಲ್ಲಿ ಕೂತುಕೊಂಡಿರುವದರಿಂದ” ಯೇಸುವು ಪ್ರೇರಿಸುವದು: “ಆದದರಿಂದ ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ.” ಆದರೆ ಅವನು ಕೂಡಿಸಿದ್ದು: “ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ.”

ಅವರು ಕಪಟಿಗಳಾಗಿದ್ದರು ಮತ್ತು ಕೆಲವು ತಿಂಗಳುಗಳ ಹಿಂದೆ ಫರಿಸಾಯನೊಬ್ಬನ ಮನೆಯಲ್ಲಿ ಊಟಮಾಡುತ್ತಿರುವಾಗ ತಾನು ಬಳಸಿದ ಅದೇ ಭಾಷೆಯಿಂದ ಅವರನ್ನು ಯೇಸುವು ಖಂಡಿಸುತ್ತಾನೆ. “ಅವರ ತಮ್ಮ ಕೆಲಸಗಳನ್ನೆಲ್ಲಾ” ಅವನು ಹೇಳುವದು, “ಜನರಿಗೆ ಕಾಣಬೇಕೆಂದು ಮಾಡುತ್ತಾರೆ.” ಮತ್ತು ಅವನು ಅವರಿಗೆ ಉದಾಹರಣೆಗಳನ್ನು ಒದಗಿಸುತ್ತಾ, ಗಮನಿಸಿದ್ದು:

“ತಾವು ಕಟ್ಟಿಕೊಳ್ಳುವ ಜ್ಞಾಪಕಪಟ್ಟಗಳನ್ನು ಅಗಲಮಾಡುತ್ತಾರೆ.” ಈ ಜ್ಞಾಪಕಪಟ್ಟಿಗಳು ಚಿಕ್ಕ ಚಿಕ್ಕ ಪೆಟ್ಟಿಗೆಗಳಾಗಿದ್ದು, ಅವುಗಳನ್ನು ಹಣೆಯ ಇಲ್ಲವೆ ಭುಜದ ಮೇಲೆ ಧರಿಸುತ್ತಿದ್ದರು, ಅದರಲ್ಲಿ ನಿಯಮಶಾಸ್ತ್ರದ ನಾಲ್ಕು ವಿಭಾಗಗಳು ಇರುತ್ತವೆ: ವಿಮೋಚನಕಾಂಡ 13:1-10, 11-16; ಮತ್ತು ಧರ್ಮೋಪದೇಶಕಾಂಡ 6:4-9; 11:13-21. ಆದರೆ ಫರಿಸಾಯರು ನಿಯಮಶಾಸ್ತ್ರದ ಕುರಿತು ತಾವು ಬಹಳ ಹುರುಪುಳ್ಳವರಾಗಿದ್ದಾರೆ ಎಂಬ ಭಾವನೆಯನ್ನು ಕೊಡಲು ಈ ಪೆಟ್ಟಿಗೆಯ ಗಾತ್ರವನ್ನು ಹೆಚ್ಚಿಸುತ್ತಿದ್ದರು.

ಯೇಸುವು ಮುಂದುವರಿಸುತ್ತಾ ಅವರು “ಗೊಂಡೆಗಳನ್ನು ಉದ್ದಮಾಡುತ್ತಾರೆ” ಎಂದು ಹೇಳುತ್ತಾನೆ. ಅರಣ್ಯಕಾಂಡ 15:38-40ರಲ್ಲಿ ತಮ್ಮ ಉಡುಪುಗಳ ಮೇಲೆ ಗೊಂಡೆಗಳನ್ನು ಮಾಡುವಂತೆ ಇಸ್ರಾಯೇಲ್ಯರಿಗೆ ತಿಳಿಸಲ್ಪಟ್ಟಿತ್ತು, ಆದರೆ ಫರಿಸಾಯರು ತಮ್ಮದನ್ನು ಬೇರೆಲ್ಲರಿಗಿಂತ ದೊಡ್ಡದಾಗಿ ಮಾಡುತ್ತಿದ್ದರು. ಪ್ರತಿಯೊಂದನ್ನು ಪ್ರದರ್ಶನಕ್ಕಾಗಿ ಮಾಡಲಾಗುತ್ತಿತ್ತು! “ಅವರಿಗೆ ಪ್ರಥಮ ಸ್ಥಾನಗಳೆಂದರೆ ಇಷ್ಟ” ಎಂದು ಯೇಸುವು ತಿಳಿಸುತ್ತಾನೆ.

ದುಃಖಕರವಾಗಿಯೇ, ಪ್ರಮುಖ ಸ್ಥಾನದ ಈ ಆಶೆಯಿಂದ ಅವನ ಸ್ವಂತ ಶಿಷ್ಯರು ಕೂಡ ಬಾಧಿತರಾಗಿದ್ದರು. ಆದುದರಿಂದ ಅವನು ಬುದ್ಧಿವಾದವನ್ನೀಯುವದು: “ಆದರೆ ನೀವು ಬೋಧಕ [ರಬ್ಬಿ] ರೆನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು. ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಿಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮ್ಮ ತಂದೆ. ಮತ್ತು ಗುರುಗಳು [ನಾಯಕರು, NW] ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು.” ಪ್ರಥಮನಾಗಬೇಕೆಂಬ ಆಶೆಯನ್ನು ಶಿಷ್ಯರು ಸ್ವತಃ ತಮ್ಮಿಂದ ಹೋಗಲಾಡಿಸಬೇಕು! “ನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು,” ಎಂದು ಯೇಸುವು ಎಚ್ಚರಿಸುತ್ತಾನೆ.

ಅನಂತರ ಅವನು ಶಾಸ್ತ್ರಿಗಳನ್ನೂ, ಫರಿಸಾಯರನ್ನೂ ಕಪಟಿಗಳೆಂದು ಪುನಃ ಪುನಃ ಕರೆಯುತ್ತಾ, ಅವರ ಮೇಲೆ ಬರುವ ಅನೇಕ ದುರ್ಗತಿಗಳನ್ನು [ಅಯ್ಯೋ] ಉಚ್ಛರಿಸುತ್ತಾನೆ. ಅವರು “ಪರಲೋಕ ರಾಜ್ಯದ ಬಾಗಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತಾರೆ,” ಎಂದವನು ಹೇಳುತ್ತಾನೆ, ಮತ್ತು “ವಿಧವೆಯರ ಮನೆಗಳನ್ನು ನುಂಗಿ ನಟನೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುವವರಾಗಿದ್ದಾರೆ.”

“ಅಯ್ಯೋ, ದಾರಿ ತೋರಿಸುವ ಕುರುಡರೇ,” ಎಂದು ಯೇಸು ಹೇಳುತ್ತಾನೆ. ಅವರು ಸ್ವೇಚ್ಛಾನುಸಾರವಾಗಿ ಮಾಡುವ ವ್ಯತ್ಯಾಸಗಳ ಮೂಲಕ ರುಜುವಾಗುವ ಫರಿಸಾಯರ ಆತ್ಮಿಕ ಮೌಲ್ಯತೆಗಳ ಲೋಪಗಳನ್ನು ಅವನು ಖಂಡಿಸುತ್ತಾನೆ. ಉದಾಹರಣೆಗೆ, ಅವರು ಹೇಳುವದು, ‘ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ, ಆದರೆ ಒಬ್ಬನು ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು.” ಆರಾಧನೆಯ ಸ್ಥಳದ ಆತ್ಮಿಕ ಮೌಲ್ಯತೆಗಳ ಮೇಲೆ ಹೆಚ್ಚು ಒತ್ತರ ಹಾಕುವ ಬದಲು ದೇವಾಲಯದ ಚಿನ್ನದ ಮೇಲೆ ಹೆಚ್ಚು ಒತ್ತರವನ್ನು ಹಾಕುವದರ ಮೂಲಕ, ಅವರ ನೈತಿಕ ಕುರುಡುತನವನ್ನು ಅವರು ಪ್ರಕಟಿಸುತ್ತಾರೆ.

ಅನಂತರ, ಅವನು ಮೊದಲು ಮಾಡಿದಂತೆ, ಫರಿಸಾಯರು ನಗಣ್ಯವಾದ ಗಿಡಮೂಲಿಕೆಗಳ ಹತ್ತರಲ್ಲೊಂದು ಪಾಲು ಇಲ್ಲವೆ ದಶಮಾಂಶ ಕೊಡುವದರ ಕಡೆಗೆ ಹೆಚ್ಚು ಗಮನವನ್ನು ನೀಡುತ್ತಿರುವದರಿಂದ, “ಧರ್ಮ ಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ, ಕರುಣೆಯನ್ನೂ, ನಂಬಿಕೆಯನ್ನೂ” ಅಲಕ್ಷ್ಯ ಮಾಡುತ್ತಿದ್ದರು.

ಯೇಸುವು ಫರಿಸಾಯರನ್ನು “ದಾರಿ ತೋರಿಸುವ ಕುರುಡರು, ನೀವು ಸೊಳ್ಳೇ ಸೋಸುವವರು, ಒಂಟೇ ನುಂಗುವವರು” ಎಂದು ಕರೆಯುತ್ತಾನೆ! ಅವರು ತಮ್ಮ ದ್ರಾಕ್ಷಾರಸದಿಂದ ಸೊಳ್ಳೆಯನ್ನು ಸೋಸುತ್ತಾರೆ, ಕೇವಲ ಅದೊಂದು ಕ್ರಿಮಿಯಾಗಿರುವ ಕಾರಣದಿಂದಲ್ಲ, ಬದಲು ಅದು ಸಂಪ್ರದಾಯಬದ್ಧವಾಗಿ ಅಶುದ್ಧವಾಗಿರುವದರಿಂದ. ಆದರೂ, ಧರ್ಮ ಶಾಸ್ತ್ರದ ಘನವಾದ ಸಂಗತಿಗಳನ್ನು ಅವರು ಅಲಕ್ಷ್ಯಿಸುವದು, ಸಂಪ್ರದಾಯಬದ್ಧವಾಗಿ ಅಶುದ್ಧವಾಗಿರುವ ಒಂಟೆಯೊಂದನ್ನು ನುಂಗುವದಕ್ಕೆ ಸರಿಸಮಾನವಾಗಿರುತ್ತದೆ. ಮತ್ತಾಯ 22:41—23:24; ಮಾರ್ಕ 12:35-40; ಲೂಕ 20:41-47; ಯಾಜಕಕಾಂಡ 11:4, 21-24.

ಕೀರ್ತನೆ 110 ರಲ್ಲಿ ದಾವೀದನು ಏನು ಹೇಳಿದ್ದನೋ ಅದರ ಕುರಿತು ಯೇಸುವು ಫರಿಸಾಯರನ್ನು ಪ್ರಶ್ನಿಸಿದಾಗ ಅವರು ಯಾಕೆ ಸುಮ್ಮಗಿದ್ದರು?

▪ ಶಾಸ್ತ್ರ-ವಚನಗಳಿರುವ ಜ್ಞಾಪಕ ಪಟ್ಟಿಗಳನ್ನು ಮತ್ತು ಅವರ ಉಡುಪುಗಳ ಗೊಂಡೆಗಳನ್ನು ಅವರು ಯಾಕೆ ದೊಡ್ಡದು ಮಾಡುತ್ತಿದ್ದರು?

▪ ತನ್ನ ಶಿಷ್ಯರಿಗೆ ಯೇಸುವು ಯಾವ ಬುದ್ಧಿವಾದವನ್ನು ಕೊಡುತ್ತಾನೆ?

▪ ಫರಿಸಾಯರು ಸ್ವೇಚ್ಛಾನುಸಾರ ಹೇಗೆ ವ್ಯತ್ಯಾಸಗಳನ್ನು ಮಾಡುತ್ತಿದ್ದರು, ಮತ್ತು ಘನವಾದ ಸಂಗತಿಗಳನ್ನು ಅಲಕ್ಷ್ಯ ಮಾಡಿರುವದಕ್ಕಾಗಿ ಯೇಸುವು ಅವರನ್ನು ಹೇಗೆ ಖಂಡಿಸುತ್ತಾನೆ?