ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಃಖಾಶ್ರುಗಳು ಮಹಾ ಹರ್ಷೋನ್ಮಾದವಾಗಿ ಪರಿವರ್ತಿಸಿದ್ದು

ದುಃಖಾಶ್ರುಗಳು ಮಹಾ ಹರ್ಷೋನ್ಮಾದವಾಗಿ ಪರಿವರ್ತಿಸಿದ್ದು

ಅಧ್ಯಾಯ 47

ದುಃಖಾಶ್ರುಗಳು ಮಹಾ ಹರ್ಷೋನ್ಮಾದವಾಗಿ ಪರಿವರ್ತಿಸಿದ್ದು

ಸ್ತ್ರೀಯ ರಕ್ತ ಕುಸುಮ ರೋಗವು ವಾಸಿಯಾದದ್ದನ್ನು ನೋಡಿದ ಯಾಯಿರನ ಭರವಸವು ಯೇಸುವಿನ ಅದ್ಭುತ ಶಕ್ತಿಯ ಮೇಲೆ ಅಧಿಕಗೊಂಡಿತು ಎನ್ನುವುದರಲ್ಲಿ ಸಂದೇಹವಿಲ್ಲ. ಮರಣಶಯ್ಯೆಯಲ್ಲಿದ್ದ ತನ್ನ ಪ್ರೀತಿಯ 12 ವಯಸ್ಸಿನ ಮಗಳಿಗೆ ಸಹಾಯ ಮಾಡುವಂತೆ ಯಾಯಿರನು ಅದಕ್ಕೆ ಮೊದಲೇ ಯೇಸುವನ್ನು ವಿನಂತಿಸಿದ್ದನು. ಈ ಮಧ್ಯೆಯಾದರೋ, ಯಾಯಿರನು ಯಾತಕ್ಕಾಗಿ ಹೆದರಿದ್ದನೋ ಅದು ಸಂಭವಿಸುತ್ತದೆ. ಯೇಸುವಿನ್ನೂ ಆ ಸ್ತ್ರೀಯೊಂದಿಗೆ ಮಾತಾಡುತ್ತಿದ್ದಾಗಲೇ ಕೆಲವರು ಬಂದು ಯಾಯಿರನಿಗೆ “ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವುದು?” ಎಂದನ್ನುತ್ತಾರೆ ಮೆಲ್ಲನೇ.

ಎಂತಹ ಭೀಕರ ವಾರ್ತೆಯದು! ಸ್ವಲ್ಪ ಆಲೋಚಿಸಿರಿ: ಸಮಾಜದಲ್ಲಿ ಬಹಳಷ್ಟು ಮರ್ಯಾದೆ ಪಡೆಯುತ್ತಿದ್ದ ಈ ವ್ಯಕ್ತಿ, ತನ್ನ ಮಗಳ ಮರಣ ವಾರ್ತೆಯಿಂದ ಪೂರ್ಣವಾಗಿ ನಿಸ್ಸಹಾಯಕನಾಗುತ್ತಾನೆ. ಆದರೆ ಯೇಸುವಿಗೆ ಸಂಭಾಷಣೆ ಕೇಳಿಸಿತು. ಯಾಯಿರನ ಕಡೆಗೆ ತಿರುಗಿ, ಉತ್ತೇಜನೀಯವಾಗಿ ಆತನಂದದ್ದು: “ಅಂಜಬೇಡ, ನಂಬಿಕೆ ಮಾತ್ರ ಇರಲಿ.”

ಆ ದುಃಖಿತ ಮನುಷ್ಯನೊಂದಿಗೆ ಯೇಸು ಅವನ ಮನೆಗೆ ಹೋಗುತ್ತಾನೆ. ಅವರಲ್ಲಿ ತಲುಪಿದಾಗ, ಬಹಳವಾಗಿ ಅಳುವುದನ್ನೂ ಗೋಳಾಡುವುದನ್ನೂ ಕಾಣುತ್ತಾನೆ. ಜನರ ಗುಂಪೊಂದು ಒಟ್ಟು ಸೇರಿತ್ತು ಮತ್ತು ಅವರು ದುಃಖದಿಂದ ಎದೆ ಬಡಕೊಳ್ಳುತ್ತಿದ್ದರು. ಒಳಗೆ ಬಂದಾಗ, “ನೀವು ಗದ್ದಲ ಮಾಡುವದೂ ಅಳುವದೂ ಯಾಕೆ? ಹುಡುಗಿ ಸತ್ತಿಲ್ಲ; ನಿದ್ದೆ ಮಾಡುತ್ತಾಳೆ” ಅನ್ನುತ್ತಾನೆ ಯೇಸು.

ಇದನ್ನು ಕೇಳಿದ ಜನರು ಯೇಸುವೆಡೆಗೆ ಅಪಹಾಸ್ಯದಿಂದ ನಗುತ್ತಾರೆ ಯಾಕಂದರೆ ಹುಡುಗಿ ನಿಜವಾಗಿಯೂ ಸತ್ತಿದ್ದಳೆಂದು ಅವರಿಗೆ ಗೊತ್ತಿತ್ತು. ಆಕೆ ಮಲಗಿದ್ದಾಳೆ ಎಂದು ಯೇಸು ಹೇಳಿದ್ದು ಏಕೆಂದರೆ, ಗಾಢ ನಿದ್ದೆಯಿಂದ ಜನರನ್ನು ಹೇಗೆ ಸುಲಭವಾಗಿ ಎಚ್ಚರಿಸಬಹುದೋ ಹಾಗೆ ಸತ್ತವರನ್ನೂ ತನ್ನ ದೇವದತ್ತ ಶಕ್ತಿಯಿಂದ ಎಬ್ಬಿಸ ಸಾಧ್ಯವಿದೆಂದು ತೋರಿಸುವುದಕ್ಕಾಗಿಯೇ.

ಪೇತ್ರ, ಯೋಹಾನ, ಯಾಕೋಬ ಮತ್ತು ಮೃತ ಹುಡುಗಿಯ ತಂದೆತಾಯಿ ಬಿಟ್ಟು ಬೇರೆಲ್ಲರನ್ನು ಯೇಸುವೀಗ ಹೊರಗೆ ಕಳುಹಿಸುತ್ತಾನೆ. ಈ ಐವರೊಂದಿಗೆ ಅವನು ಮೃತಹುಡುಗಿ ಮಲಗಿರುವಲ್ಲಿಗೆ ಹೋಗಿ ಅವಳ ಕೈಹಿಡಿದು, “ತಲೀಥಾ ಕೂಮ್‌” ಅಂದನು. ಈ ಮಾತಿಗೆ: “ಅಮ್ಮಣ್ಣೀ, ಏಳನ್ನುತ್ತೇನೆ ಎಂದರ್ಥ.” ತಕ್ಷಣ ಹುಡುಗಿಯು ಎದ್ದು ನಡೆದಾಡುತ್ತಾಳೆ! ಈ ದೃಶ್ಯವು ಅವಳ ಹೆತ್ತವರನ್ನು ಹರ್ಷದಿಂದ ದಿಕ್‌-ಭ್ರಾಂತರನ್ನಾಗಿ ಮಾಡುತ್ತದೆ.

ಏನಾದರೂ ತಿನ್ನಲು ಮಗಳಿಗೆ ಕೊಡಿರೆಂದು ಹೇಳಿದ ನಂತರ, ಸಂಭವಿಸಿದ್ದನ್ನು ಯಾರಿಗೂ ತಿಳಿಸಬಾರದೆಂದು ಯೇಸುವು ಯಾಯಿರನಿಗೂ ಅವನ ಹೆಂಡತಿಗೂ ಅಪ್ಪಣೆ ಕೊಡುತ್ತಾನೆ. ಆದಾಗ್ಯೂ, ಈ ಸುದ್ದಿಯು ಆ ಪ್ರದೇಶದಲ್ಲೆಲ್ಲಾ ಹಬ್ಬುತ್ತದೆ. ಇದು ಯೇಸು ನಡಿಸಿದ ಎರಡನೆಯ ಪುನರುತ್ಥಾನವಾಗಿತ್ತು. ಮತ್ತಾಯ 9:18-26; ಮಾರ್ಕ 5:35-43; ಲೂಕ 8:41-56.

▪ ಯಾವ ಸುದ್ದಿಯು ಯಾಯಿರನಿಗೆ ತಲಪುತ್ತದೆ, ಮತ್ತು ಯೇಸು ಅವನನ್ನು ಪ್ರೋತ್ಸಾಹಿಸಿದ್ದು ಹೇಗೆ?

▪ ಯಾಯಿರನ ಮನೆಗೆ ಬಂದಾಗ ಯಾವ ಪರಿಸ್ಥಿತಿ ಅಲ್ಲಿತ್ತು?

▪ ಮೃತಹುಡುಗಿ ಕೇವಲ ನಿದ್ದೆ ಮಾಡುತ್ತಾಳೆಂದು ಯೇಸು ಹೇಳಿದ್ದು ಯಾಕೆ?

▪ ಆ ಪುನರುತ್ಥಾನಕ್ಕೆ ಸಾಕ್ಷಿಗಳಾಗಿ ಯೇಸುವೊಂದಿಗಿದ್ದ ಐವರು ಯಾರು?