ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವು ಜೀವಂತನಿದ್ದಾನೆ!

ಯೇಸುವು ಜೀವಂತನಿದ್ದಾನೆ!

ಅಧ್ಯಾಯ 128

ಯೇಸುವು ಜೀವಂತನಿದ್ದಾನೆ!

ಯೇಸುವಿನ ಸಮಾಧಿಯು ಖಾಲಿಯಾಗಿರುವದನ್ನು ಸ್ತ್ರೀಯರು ಕಂಡಾಗ ಮಗಲ್ದದ ಮರಿಯಳು ಪೇತ್ರ, ಯೋಹಾನರಿಗೆ ತಿಳಿಸಲು ಓಡುತ್ತಾಳೆ. ಆದಾಗ್ಯೂ, ಇತರ ಹೆಂಗಸರು ಅಲ್ಲಿಯೇ ಸಮಾಧಿಯ ಬಳಿ ನಿಲ್ಲುತ್ತಾರೆ. ಕೂಡಲೇ ಒಬ್ಬ ದೇವದೂತನು ಗೋಚರಿಸುತ್ತಾನೆ ಮತ್ತು ಅವರನ್ನು ಒಳಗೆ ಬರಲು ಆಮಂತ್ರಿಸುತ್ತಾನೆ.

ಇಲ್ಲಿ ಹೆಂಗಸರು ಇನ್ನೊಬ್ಬ ದೇವದೂತನನ್ನು ಕಾಣುತ್ತಾರೆ. ಮತ್ತು ದೇವದೂತರಲ್ಲೊಬ್ಬನು ಅವರಿಗೆ ಅಂದದ್ದು: “ನೀವು ಹೆದರಬೇಡಿರಿ; ವಧಾಸ್ತಂಭಕ್ಕೇರಿಸಲ್ಪಟ್ಟ ಯೇಸುವನ್ನು ನೀವು ಹುಡುಕುತ್ತೀರೆಂದು ಬಲ್ಲೆನು; ಆತನು ಇಲ್ಲಿ ಇಲ್ಲ; ತಾನು ಹೇಳಿದಂತೆ ಎದ್ದಿದ್ದಾನೆ; ಬನ್ನಿ ಆತನು ಮಲಗಿದ್ದ ಸ್ಥಳವನ್ನು ನೋಡಿರಿ; ಬೇಗ ಹೋಗಿ ಆತನ ಶಿಷ್ಯರಿಗೆ—ಸತ್ತವನು ಬದುಕಿದ್ದಾನೆ ಎಂದು ತಿಳಿಸಿರಿ.” ಆದರೆ ಭಯದಿಂದಲೂ ಮಹಾ ಸಂತೋಷದಿಂದಲೂ ಈ ಸ್ತ್ರೀಯರು ಓಡಿ ಹೋಗುತ್ತಾರೆ.

ಅಷ್ಟರೊಳಗೆ, ಮರಿಯಳು ಪೇತ್ರ, ಯೋಹಾನರನ್ನು ಕಾಣುತ್ತಾಳೆ ಮತ್ತು ಅವರಿಗೆ ತಿಳಿಸುತ್ತಾಳೆ: “ಸ್ವಾಮಿಯನ್ನು ಸಮಾಧಿಯೊಳಗಿಂದ ತೆಗೆದು ಕೊಂಡು ಹೋಗಿ ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲ.” ಕೂಡಲೆ ಇಬ್ಬರು ಅಪೊಸ್ತಲರೂ ಓಡಲಾರಂಭಿಸುತ್ತಾರೆ. ಯೋಹಾನನು ಕಾಲುಗಳಲ್ಲಿ ಚುರುಕು—ಎಳೆಯನೆಂದು ತೋರುತ್ತದೆ—ಅವನು ಸಮಾಧಿಯ ಬಳಿ ಮೊದಲು ತಲುಪುತ್ತಾನೆ. ಅಷ್ಟರೊಳಗೆ ಹೆಂಗಸರು ಅಲ್ಲಿಂದ ತೆರಳಿರುತ್ತಾರೆ ಮತ್ತು ಅಲ್ಲಿ ಸುತ್ತಲೂ ಯಾರೂ ಇರಲಿಲ್ಲ. ಯೋಹಾನನು ಬೊಗ್ಗಿ, ಸಮಾಧಿಯೊಳಗೆ ಇಣಿಕಿದಾಗ ಅಲ್ಲಿ ನಾರುಬಟ್ಟೆಗಳನ್ನು ಕಾಣುತ್ತಾನೆ. ಆದರೆ ಅವನು ಹೊರಗೆ ನಿಲ್ಲುತ್ತಾನೆ.

ಪೇತ್ರನು ಬಂದಾಗ, ಅವನು ಹಿಂದೆಮುಂದೆ ನೋಡುವದಿಲ್ಲ, ನೇರವಾಗಿ ಸಮಾಧಿಯೊಳಗೆ ಹೋಗುತ್ತಾನೆ. ಅಲ್ಲಿ ನಾರುಬಟ್ಟೆಗಳು ಬಿದ್ದಿರುವದನ್ನೂ ಯೇಸುವಿನ ತಲೆಯನ್ನು ಸುತ್ತಿದ್ದ ಕೈಪಾವುಡವನ್ನು ನೋಡುತ್ತಾನೆ. ಆದು ಸುತ್ತಿ ಒಂದು ಕಡೆಯಲ್ಲಿ ಬೇರೆಯೇ ಇತ್ತು. ಈಗ ಯೋಹಾನನು ಕೂಡ ಸಮಾಧಿಯೊಳಗೆ ಪ್ರವೇಶಿಸುತ್ತಾನೆ ಮತ್ತು ಮರಿಯಳ ವರದಿಯನ್ನು ನಂಬುತ್ತಾನೆ. ಆದರೆ ಯೇಸುವು ತಾನು ಏಳಲಿದ್ದೇನೆ ಎಂದು ಅನೇಕ ಬಾರಿ ಅವರಿಗೆ ಹೇಳಿದ್ದನಾದರೂ, ಈಗ ಅವನು ಎಬ್ಬಿಸಲ್ಪಟ್ಟಿದ್ದಾನೆ ಎಂದು ಪೇತ್ರನಾಗಲಿ, ಯೋಹಾನನಾಗಲಿ ಗ್ರಹಿಸುವುದಿಲ್ಲ. ತಬ್ಬಿಬ್ಬಾಗಿ, ಇಬ್ಬರೂ ಮನೆಗೆ ಹಿಂತೆರಳುತ್ತಾರೆ, ಆದರೆ ಮರಿಯಳು ಪುನಃ ಹಿಂತಿರುಗಿ ಬಂದು ಸಮಾಧಿಯ ಬಳಿ ನಿಲ್ಲುತ್ತಾಳೆ.

ದೇವದೂತರು ಅವರಿಗೆ ಮಾಡಲು ಅಪ್ಪಣೆ ಕೊಟ್ಟಂತೆ, ಇತರ ಹೆಂಗಸರು, ಯೇಸುವು ಪುನರುತ್ಥಾನಗೊಂಡಿದ್ದಾನೆ ಎಂದು ಶಿಷ್ಯರಿಗೆ ಹೇಳಲು ಧಾವಿಸುತ್ತಾರೆ. ಎಷ್ಟು ತೀವ್ರವಾಗಿ ಅವರಿಗೆ ಸಾಧ್ಯವೋ ಅಷ್ಟು ಬೇಗನೆ ಅವರು ಓಡುತ್ತಿರುವಾಗ, ಯೇಸುವು ಅವರಿಗೆ ಭೇಟಿಯಾಗಿ, ಹೇಳುವದು: “ನಿಮಗೆ ಶುಭವಾಗಲಿ!” ಅವರು ಅವನ ಹತ್ತರಕ್ಕೆ ಬಂದು ಆತನ ಪಾದಗಳನ್ನು ಹಿಡಿದು ಆತನಿಗೆ ನಮಸ್ಕಾರ ಮಾಡಿದರು. ನಂತರ ಯೇಸುವು ಹೇಳುವದು: “ಹೆದರಬೇಡಿರಿ! ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ನನ್ನನ್ನು ನೋಡುವರು.”

ಇದಕ್ಕೆ ಮೊದಲು, ಭೂಕಂಪವಾದಾಗ ಮತ್ತು ದೇವದೂತರು ಕಾಣಿಸಿಕೊಂಡಾಗ, ಕಾವಲು ನಡಿಸುತ್ತಿದ್ದ ಸಿಪಾಯಿಗಳು ಹೆದರಿ ನಡುಗಿ ಸತ್ತವರ ಹಾಗಾದರು. ಪುನಃ ಚೇತರಿಸಲ್ಪಟ್ಟ ಮೇಲೆ, ಅವರು ಕೂಡಲೇ ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮಹಾ ಯಾಜಕರುಗಳಿಗೆ ತಿಳಿಸಿದರು. ಯೆಹೂದ್ಯರ “ಹಿರಿಯರ” ಸಂಗಡ ಸಮಾಲೋಚನೆ ನಡಿಸಿದ ನಂತರ, ಸಿಪಾಯಿಗಳಿಗೆ ಲಂಚಕೊಟ್ಟು, ವಿಷಯವನ್ನು ಮುಚ್ಚಿಬಿಡುವ ಪ್ರಯತ್ನದ ನಿರ್ಧಾರಕ್ಕೆ ಬಂದರು. ಅವರಿಗೆ ಹೇಳಿದ್ದು: “ಅವನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆ ಮಾಡುತ್ತಿರುವಾಗ ಅವನನ್ನು ಕದ್ದು ಕೊಂಡು ಹೋದರು ಎಂದು ಹೇಳಿರಿ.”

ಅವರ ಕೆಲಸದ ಸ್ಥಾನದಲ್ಲಿ ನಿದ್ದೆ ಮಾಡಿದ್ದಕ್ಕಾಗಿ ರೋಮನ್‌ ಸಿಪಾಯಿಗಳಿಗೆ ಮರಣ ದಂಡನೆಯಾಗಬಹುದಿತ್ತು, ಆದ್ದರಿಂದ ಯಾಜಕರು ಆಶ್ವಾಸನೆಯನ್ನಿತ್ತದ್ದು: “ಈ ಸುದ್ದಿ [ನೀವು ನಿದ್ದೆ ಮಾಡಿರುವ ವರದಿ] ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನ ಪಡಿಸಿ, ನಿಮಗೆ ಭಯವಿಲ್ಲದ ಹಾಗೆ ಮಾಡುತ್ತೇವೆ.” ಕೊಡಲ್ಪಟ್ಟ ಲಂಚದ ಮೊತ್ತವು ಸಾಕಷ್ಟು ದೊಡ್ಡದ್ದಾಗಿರಬಹುದಾದ್ದರಿಂದ, ಸಿಪಾಯಿಗಳು ಅವರಿಗೆ ಹೇಳಿಕೊಟ್ಟ ಹಾಗೆ ಮಾಡಿದರು. ಅದರ ಪರಿಣಾಮವಾಗಿ, ಯೇಸುವಿನ ದೇಹದ ಕಳವಿನ ಸುಳ್ಳು ವರದಿಯು ಯೆಹೂದ್ಯರಲ್ಲಿ ವಿಸ್ತಾರವಾಗಿ ಹಬ್ಬಿತು.

ಸಮಾಧಿಯ ಬಳಿ ನಿಂತಿದ್ದ ಮಗಲ್ದದ ಮರಿಯಳು ದುಃಖದಿಂದ ತಪ್ತಳಾಗಿದ್ದಳು. ಯೇಸುವು ಎಲ್ಲಿರಸಾಧ್ಯವಿದೆ? ಸಮಾಧಿಯೊಳಗೆ ಬೊಗ್ಗಿ ನೋಡಲಾಗಿ, ಬೆಳ್ಳಗಿರುವ ವಸ್ತ್ರ ಹೊದ್ದುಕೊಂಡು ಮರುಗೋಚರಿಸಿದ ಇಬ್ಬರು ದೇವದೂತರನ್ನು ಅವಳು ಕಾಣುತ್ತಾಳೆ! ಯೇಸುವಿನ ದೇಹವು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ತಲೆ ಇದ್ದ ಕಡೆಯಲ್ಲಿ ಇನ್ನೊಬ್ಬನು ಕಾಲಿದ್ದ ಕಡೆಯಲ್ಲಿ ಕೂತಿದ್ದರು. “ಅಮ್ಮಾ, ಯಾಕೆ ನೀನು ಅಳುತ್ತೀ?” ಅವರು ಕೇಳುತ್ತಾರೆ.

“ನನ್ನ ಸ್ವಾಮಿಯನ್ನು ತೆಗೆದು ಕೊಂಡುಹೋಗಿದ್ದಾರೆ,” ಮರಿಯಳು ಉತ್ತರಿಸುವದು, “ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ.” ಅನಂತರ ಅವಳು ತಿರುಗಿಕೊಳ್ಳುತ್ತಾಳೆ ಮತ್ತು ಅದೇ ಪ್ರಶ್ನೆಯನ್ನು ಪುನರಾವರ್ತಿ ಯಾರೋ ಒಬ್ಬನು ಹೇಳುವದನ್ನು ಕೇಳುತ್ತಾಳೆ: “ಅಮ್ಮಾ, ಯಾಕೆ ಅಳುತ್ತೀ?” ಮತ್ತು ಅವನು ಇದನ್ನೂ ಕೇಳುತ್ತಾನೆ: “ನೀನು ಯಾರನ್ನು ಹುಡುಕುತ್ತೀ?”

ಈ ವ್ಯಕ್ತಿಯು ಸಮಾಧಿ ಇದ್ದ ತೋಟದ ತೋಟಗಾರನೆಂದು ಎಣಿಸಿ, ಅವಳು ಅವನೊಡನೆ ಹೇಳುವದು: “ಅಯ್ಯಾ, ಆತನನ್ನು ನೀನು ಎತ್ತಿಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ನನಗೆ ಹೇಳು; ನಾನು ತೆಗೆದುಕೊಂಡು ಹೋಗುತ್ತೇನೆ.”

“ಮರಿಯಳೇ,” ಆ ವ್ಯಕ್ತಿ ಹೇಳುವದು. ಅವಳೊಡನೆ ಮಾತಾಡುವವನ ಪರಿಚಿತವಾದ ರೀತಿಯ ಮೂಲಕ, ಅವನು ಯೇಸುವು ಎಂದು ಅವಳಿಗೆ ಕೂಡಲೇ ಗೊತ್ತಾಗುತ್ತದೆ, ಅವಳೊಡನೆ ಮಾತಾಡುವವನ ರೀತಿಯು ಪರಿಚಿತವಾದದ್ದು, ಅವನು ಯೇಸುವು. “ರಬ್ಬೂನಿ!” (ಅಂದರೆ “ಗುರುವೇ!”) ಅವಳು ಉದ್ಗರಿಸುವದು. ಅಪರಿಮಿತ ಸಂತೋಷದಿಂದ ಅವಳು ಅವನನ್ನು ಗಟ್ಟಿಯಾಗಿ ಹಿಡಿಯುತ್ತಾಳೆ. ಆದರೆ ಯೇಸುವು ಹೇಳುವದು: “ನನ್ನನ್ನು ಹಿಡಿಯಬೇಡ; ಯಾಕಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ—ನಾನು ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗುತ್ತೇನೆ ಎಂದು ಅವರಿಗೆ ಹೇಳು.”

ಅಪೊಸ್ತಲರೂ, ಇತರ ಜೊತೆ ಶಿಷ್ಯರೂ ಎಲ್ಲಿ ಒಟ್ಟುಸೇರಿದ್ದರೋ ಅಲ್ಲಿಗೆ ಮರಿಯಳು ಈಗ ಓಡಿ ಹೋಗುತ್ತಾಳೆ. ಪುನರುತಿತ್ಥ ಯೇಸುವನ್ನು ಕಂಡದ್ದನ್ನು ಈಗಾಗಲೇ ಇತರ ಸ್ತ್ರೀಯರು ತಿಳಿಸಿದ ವರದಿಗೆ ತನ್ನ ವಿಷಯವನ್ನೂ ಅವಳು ಕೂಡಿಸುತ್ತಾಳೆ. ಆದರೂ, ಈ ಪುರುಷರು ಮೊದಲನೆಯ ಸ್ತ್ರೀಯರನ್ನು ನಂಬಲಿಲ್ಲ, ಅದೇ ರೀತಿಯಲ್ಲಿ ಮರಿಯಳನ್ನೂ ನಂಬಲಿಲ್ಲ. ಮತ್ತಾಯ 28:3-15; ಮಾರ್ಕ 16:5-8; ಲೂಕ 24:4-12; ಯೋಹಾನ 20:2-18.

▪ ಸಮಾಧಿಯು ಖಾಲಿಯಾಗಿರುವದನ್ನು ಕಂಡಾದ ನಂತರ, ಮಗಲ್ದದ ಮರಿಯಳು ಏನು ಮಾಡುತ್ತಾಳೆ, ಮತ್ತು ಇತರ ಸ್ತ್ರೀಯರಿಗೆ ಯಾವ ಅನುಭವವಾಯಿತು?

▪ ಸಮಾಧಿಯು ಖಾಲಿಯಾಗಿರುವದನ್ನು ಕಂಡು ಪೇತ್ರ ಮತ್ತು ಯೋಹಾನರು ಹೇಗೆ ಪ್ರತಿವರ್ತಿಸಿದರು?

▪ ಶಿಷ್ಯರಿಗೆ ಯೇಸುವಿನ ಪುನರುತ್ಥಾನವನ್ನು ತಿಳಿಸಲು ಹೋಗುವಾಗ ದಾರಿಯಲ್ಲಿ ಹೆಂಗಸರಿಗೆ ಯಾವುದರ ಸಮಾಗಮವಾಯಿತು?

▪ ಸಿಪಾಯಿಗಳಾಗಿದ್ದ ಕಾವಲುಗಾರರಿಗೆ ಏನು ಸಂಭವಿಸಿತು, ಮತ್ತು ಯಾಜಕರಿಗೆ ಮಾಡಿದ ಅವರ ವರದಿಯ ಪ್ರತಿಕ್ರಿಯೆಯೇನು?

▪ ಸಮಾಧಿಯ ಹತ್ತಿರ ಮಗಲ್ದದ ಮರಿಯಳು ಒಬ್ಬಳೇ ಇದ್ದಾಗ ಏನು ಸಂಭವಿಸುತ್ತದೆ ಮತ್ತು ಸ್ತ್ರೀಯರ ವರದಿಗಳಿಗೆ ಶಿಷ್ಯರ ಪ್ರತಿವರ್ತನೆ ಏನು?