ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಗಾದವೊಂದು ಸ್ಫೋಟಿಸುತ್ತದೆ

ವಾಗಾದವೊಂದು ಸ್ಫೋಟಿಸುತ್ತದೆ

ಅಧ್ಯಾಯ 115

ವಾಗಾದವೊಂದು ಸ್ಫೋಟಿಸುತ್ತದೆ

ಸಾಯಂಕಾಲದ ಆರಂಭದಲ್ಲಿ, ಅವನ ಅಪೊಸ್ತಲರ ಕಾಲುಗಳನ್ನು ತೊಳೆಯುವದರ ಮೂಲಕ ನಮ್ರತೆಯ ಸೇವೆಯ ಕುರಿತು ಒಂದು ಸುಂದರವಾದ ಪಾಠವನ್ನು ಯೇಸುವು ಕಲಿಸಿದ್ದನು. ಅನಂತರ, ಸಮೀಪಿಸುತ್ತಿರುವ ಅವನ ಮರಣದ ಜ್ಞಾಪಕಾಚರಣೆಯನ್ನು ಅವನು ಪ್ರಸ್ತಾಪಿಸಿದ್ದನು. ಈಗಾಗಲೇ ನಡೆದ ಸಂಗತಿಗಳ ನೋಟದಲ್ಲಿ ಒಂದು ಆಶ್ಚರ್ಯವನ್ನುಂಟುಮಾಡುವ ಘಟನೆಯು ಸಂಭವಿಸುತ್ತದೆ. ತಮ್ಮಲ್ಲಿ ಹೆಚ್ಚಿನವನೆನಿಸಿಕೊಳ್ಳುವವನು ಯಾರು ಎಂಬ ವಿಷಯದಲ್ಲಿ ಒಂದು ಬಿಸಿ ವಾಗ್ವಾದದಲ್ಲಿ ಅಪೊಸ್ತಲರು ಒಳಗೂಡಿದ್ದರು! ಪ್ರಾಯಶಃ ಇದೊಂದು ಮುಂದುವರಿಯುತ್ತಾ ಇದ್ದ ವಿವಾದದ ಭಾಗವಾಗಿರಬೇಕು.

ಯೇಸುವು ಪರ್ವತದ ಮೇಲೆ ಪ್ರಕಾಶರೂಪವನ್ನು ಹೊಂದಿಯಾದ ನಂತರ, ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅಪೊಸ್ತಲರು ವಿವಾದಿಸುತ್ತಿದ್ದರು ಎಂಬುದನ್ನು ನೆನಪಿಗೆ ತನ್ನಿರಿ. ಅಷ್ಟಲ್ಲದೆ, ಯಾಕೋಬ ಮತ್ತು ಯೋಹಾನರು ರಾಜ್ಯದಲ್ಲಿ ಪ್ರತಿಷ್ಠೆಯ ಸ್ಥಾನವನ್ನು ಕೋರಿದರ್ದಿಂದ, ಅದು ಅಪೊಸ್ತಲರಲ್ಲಿ ಇನ್ನಷ್ಟು ವಿವಾದಕ್ಕೆ ಕಾರಣವಾಯಿತು. ಈಗ ಅವರೊಂದಿಗಿನ ಕೊನೆಯ ರಾತ್ರಿಯ ಸಂದರ್ಭದಲ್ಲಿ, ಅವರು ತಮ್ಮೊಳಗೆ ಈ ರೀತಿಯಲ್ಲಿ ಜಗಳವಾಡುವದನ್ನು ನೋಡಿ ಯೇಸುವು ಎಷ್ಟೊಂದು ದುಃಖಿತನಾಗಿರಬೇಕು! ಅವನೇನು ಮಾಡುತ್ತಾನೆ?

ಅವರ ವರ್ತನೆಗಾಗಿ ಅಪೊಸ್ತಲರನ್ನು ಗದರಿಸುವ ಬದಲಾಗಿ, ಪುನೊಮ್ಮೆ ಯೇಸುವು ಅವರೊಂದಿಗೆ ತಾಳ್ಮೆಯಿಂದ ತರ್ಕಿಸುತ್ತಾನೆ: “ಅನ್ಯ ದೇಶದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮೇಲೆ ಅಧಿಕಾರ ನಡಿಸುವವರು ಧರ್ಮಿಷ್ಠರೆನಿಸಿಕೊಳ್ಳುತ್ತಾರೆ. ನೀವು ಹಾಗಿರಬಾರದು. . . . ಯಾವನು ಹೆಚ್ಚಿನವನು? ಊಟಕ್ಕೆ ಕೂತವನೋ ಸೇವೆ ಮಾಡುವವನೋ?” ಅನಂತರ, ಅವನು ತನ್ನ ಉದಾಹರಣೆಯನ್ನು ಅವರಿಗೆ ನೆನಪಿಸುತ್ತಾನೆ: “ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.”

ಅವರ ಅಪರಿಪೂರ್ಣತೆಗಳ ಹೊರತಾಗಿಯೂ, ಅವನ ಕಷ್ಟಗಳಲ್ಲಿ ಅಪೊಸ್ತಲರು ಅವನ ಸಂಗಡ ಎಡೆಬಿಡದೆ ಇದ್ದವರಾಗಿದ್ದರು. ಆದುದರಿಂದ ಅವನು ಹೇಳುವದು: “ಒಂದು ರಾಜ್ಯಕ್ಕಾಗಿ ನನ್ನ ತಂದೆಯು ನನ್ನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡಂತೆ, ನಾನೂ ನಿಮ್ಮ ಸಂಗಡ ಒಂದು ಒಡಂಬಡಿಕೆಯನ್ನು ಮಾಡುತ್ತೇನೆ.” (NW) ಯೇಸುವಿನ ಮತ್ತು ಅವನ ನಿಷ್ಠೆಯ ಹಿಂಬಾಲಕರ ನಡುವಿನ ಈ ವೈಯಕ್ತಿಕ ಒಡಂಬಡಿಕೆಯು ಅವನ ರಾಜ್ಯಾಧಿಕಾರದ ಪ್ರಭುತ್ವದಲ್ಲಿ ಅವರು ಅವನೊಂದಿಗೆ ಪಾಲಿಗರಾಗಲು ಸಾಧ್ಯ ಮಾಡುತ್ತದೆ. ರಾಜ್ಯಕ್ಕೋಸ್ಕರ ಈ ಒಡಂಬಡಿಕೆಯಲ್ಲಿ ಕೊನೆಯಲ್ಲಿ ಒಂದು ಸೀಮಿತ ಸಂಖ್ಯೆಯಾದ 1,44,000 ಮಂದಿಯನ್ನು ಮಾತ್ರ ತೆಗೆದು ಕೊಳ್ಳಲಾಗುತ್ತದೆ.

ಕ್ರಿಸ್ತನೊಂದಿಗೆ ರಾಜ್ಯಾಡಳಿತೆಯಲ್ಲಿ ಪಾಲಿಗರಾಗುವ ಈ ಅದ್ಭುತಕರ ಪ್ರತೀಕ್ಷೆಯು ಅಪೊಸ್ತಲರ ಮುಂದೆ ಸಾದರಪಡಿಸಲ್ಪಟ್ಟರೂ ಕೂಡ, ಅವರು ಈಗ ಆತ್ಮಿಕವಾಗಿ ಬಹಳ ನಿರ್ಬಲರಾಗಿದ್ದರು. “ನೀವೆಲ್ಲರೂ ಈ ರಾತ್ರಿ ದಿಗಿಲುಪಟ್ಟು ಹಿಂಜರಿಯುವಿರಿ,” ಅನ್ನುತ್ತಾನೆ ಯೇಸು. ಆದಾಗ್ಯೂ, ಪೇತ್ರನ ಪರವಾಗಿ ತಾನು ಪ್ರಾರ್ಥಿಸಿದ್ದೇನೆಂದು ಅವನಿಗೆ ಹೇಳಿದ ಮೇಲೆ, ಯೇಸುವು ಪ್ರಚೋದಿಸುವದು: “ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು.”

“ಪ್ರಿಯ ಮಕ್ಕಳೇ,” ಯೇಸುವು ವಿವರಿಸುವದು, “ಇನ್ನು ಸ್ವಲ್ಪ ಕಾಲವೇ ನಿಮ್ಮ ಸಂಗಡ ಇರುತ್ತೇನೆ. ನನ್ನನ್ನು ಹುಡುಕುವಿರಿ, ಆದರೆ ನಾನು ಹೋಗುವಲಿಗ್ಲೆ ನೀವು ಬರಲಾರಿರಿ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆ ಈಗ ನಿಮಗೂ ಹೇಳುತ್ತೇನೆ. ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ. ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”

“ಸ್ವಾಮೀ, ಎಲ್ಲಿಗೆ ಹೋಗುತ್ತೀ?” ಪೇತ್ರನು ವಿಚಾರಿಸುತ್ತಾನೆ.

“ನಾನು ಹೋಗುವಲಿಗ್ಲೆ ನೀನು ಈಗ ನನ್ನ ಹಿಂದೆ ಬರಲಾರಿ,” ಯೇಸುವು ಪ್ರತ್ಯುತ್ತರ ಕೊಡುತ್ತಾನೆ, “ತರುವಾಯ ನನ್ನ ಹಿಂದೆ ಬರುವಿ.”

“ಸ್ವಾಮೀ, ನಾನು ಯಾಕೆ ಈಗ ನಿನ್ನ ಹಿಂದೆ ಬರಲಾರೆನು?” ಪೇತ್ರನು ತಿಳಿಯಲು ಬಯಸಿದನು. “ನಿನಗಾಗಿ ನನ್ನ ಪ್ರಾಣವನ್ನಾದರೂ ಕೊಟ್ಟೇನು.”

“ನನಗಾಗಿ ಪ್ರಾಣ ಕೊಟ್ಟೀಯಾ?” ಯೇಸುವು ಕೇಳುತ್ತಾನೆ. “ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನ ವಿಷಯದಲ್ಲಿ ಅವನನ್ನು ಅರಿಯೆನೆಂದು ಮೂರು ಸಾರಿ ಹೇಳುವ ತನಕ ಕೋಳಿ ಕೂಗುವದೇ ಇಲ್ಲ.”

“ನಾನು ನಿನ್ನ ಸಂಗಡ ಸಾಯಬೇಕಾದರೂ,” ಪೇತ್ರನು ಪ್ರತಿಭಟಿಸುವದು, “ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲ.” ಅದನ್ನೇ ಇತರ ಅಪೊಸ್ತಲರು ಹೇಳಿದರೂ, ಪೇತ್ರನು ಕೊಚ್ಚಿಕೊಳ್ಳುವದು: “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಎಂದಿಗೂ ಹಿಂಜರಿಯುವದಿಲ್ಲ!”

ಹಮ್ಮೀಣಿ ಹಸಿಬೆ ಜೋಡುಗಳಿಲದ್ಲೆ ಗಲಿಲಾಯದ ಸಾರುವ ಸಂಚಾರಕ್ಕೆ ಅವನು ಅಪೊಸ್ತಲರನ್ನು ಕಳುಹಿಸಿದ ಸಮಯಕ್ಕೆ ಸೂಚಿಸುತ್ತಾ, ಯೇಸುವು ಕೇಳುವದು: “ನಿಮಗೆ ಏನಾದರೂ ಕೊರತೆಯಾಯಿತೋ?”

“ಏನೂ ಇಲ್ಲ!” ಎಂದವರು ಉತ್ತರಿಸಿದರು.

“ಈಗಲಾದರೋ ಹಮ್ಮೀಣಿಯಿದ್ದವರು ಅದನ್ನು ತಕ್ಕೊಳ್ಳಲಿ, ಹಸಿಬೆಯಿದ್ದವನು ಅದನ್ನು ತಕ್ಕೊಳ್ಳಲಿ,” ಅವನು ಹೇಳುತ್ತಾನೆ, “ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ. ಯಾಕಂದರೆ—ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ; ನನ್ನ ವಿಷಯವಾದದ್ದು ಕೊನೆಗಾಣಬೇಕು.”

ದುಷ್ಟರ ಇಲ್ಲವೆ ದುಷ್ಕರ್ಮಿಗಳ ಸಂಗಡ ಅವನನ್ನು ವಧಾಸ್ತಂಭಕ್ಕೆ ಏರಿಸಲಾಗುವ ಸಮಯದ ಕುರಿತು ಯೇಸುವು ನಿರ್ದೇಶಿಸುತ್ತಿದ್ದನು. ಅದರ ನಂತರ ಅವನ ಹಿಂಬಾಲಕರು ತೀವ್ರ ಹಿಂಸೆಯನ್ನು ಎದುರಿಸಲಿರುವರು ಎಂಬುದನ್ನು ಕೂಡ ಅವನು ಸೂಚಿಸುತ್ತಿದ್ದನು. “ಸ್ವಾಮೀ, ಇಗೋ ಇಲ್ಲಿ ಎರಡು ಕತ್ತಿಗಳಿವೆ,” ಎಂದವರು ಹೇಳುತ್ತಾರೆ.

“ಅಷ್ಟು ಸಾಕು,” ಎಂದವನು ಉತ್ತರಿಸುತ್ತಾನೆ. ಯೇಸುವು ಅವರಿಗೆ ಇನ್ನೊಂದು ಅತ್ಯಾವಶ್ಯಕ ಪಾಠವನ್ನು ಕಲಿಸಲು ಇರುವ ಆ ಕತ್ತಿಗಳು ಶೀಘ್ರದಲ್ಲಿಯೇ ಬಳಸಲ್ಪಡುವದನ್ನು ನಾವು ನೋಡಲಿದ್ದೇವೆ. ಮತ್ತಾಯ 26:31-35; ಮಾರ್ಕ 14:27-31; ಲೂಕ 22:24-38; ಯೋಹಾನ 13:31-38; ಪ್ರಕಟನೆ 14:1-3.

▪ ಅಪೊಸ್ತಲರ ವಾಗ್ವಾದವು ಅಷ್ಟೊಂದು ಆಶ್ವರ್ಯವನ್ನುಂಟುಮಾಡುವದು ಯಾಕೆ?

▪ ಯೇಸುವು ಆ ಚರ್ಚೆಯನ್ನು ಹೇಗೆ ನಿಭಾಯಿಸುತ್ತಾನೆ?

▪ ಅವನ ಶಿಷ್ಯರೊಂದಿಗೆ ಯೇಸುವು ಮಾಡುವ ಒಡಂಬಡಿಕೆಯಿಂದ ಏನು ಪೂರೈಸಲ್ಪಡುತ್ತದೆ?

▪ ಯೇಸುವು ಯಾವ ಹೊಸ ಆಜ್ಞೆಯನ್ನು ಕೊಡುತ್ತಾನೆ, ಮತ್ತು ಅದು ಎಷ್ಟು ಪ್ರಾಮುಖ್ಯವಾಗಿರುತ್ತದೆ?

▪ ಪೇತ್ರನು ಯಾವ ಮಿತಿಮೀರಿದ ಆತ್ಮ-ವಿಶ್ವಾಸವನ್ನು ಪ್ರದರ್ಶಿಸುತ್ತಾನೆ, ಮತ್ತು ಯೇಸುವು ಏನು ಹೇಳುತ್ತಾನೆ?

▪ ಹಮ್ಮೀಣಿ ಮತ್ತು ಹಸಿಬೆಗಳನ್ನು ಕೊಂಡೊಯ್ಯುವದರ ಕುರಿತು ಯೇಸುವು ಕೊಟ್ಟ ಆಜ್ಞೆಗಳು ಮೊದಲಿನವುಗಳಿಗಿಂತ ಭಿನ್ನವಾಗಿದ್ದದ್ದು ಯಾಕೆ?