ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆ ಮೊದಲ ಪ್ರೀತಿಯನ್ನು ಪುನಃ ಹೊತ್ತಿಸು!

ಆ ಮೊದಲ ಪ್ರೀತಿಯನ್ನು ಪುನಃ ಹೊತ್ತಿಸು!

ಅಧ್ಯಾಯ 7

ಆ ಮೊದಲ ಪ್ರೀತಿಯನ್ನು ಪುನಃ ಹೊತ್ತಿಸು!

ಎಫೆಸ

1. ಯೇಸುವಿನ ಮೊದಲ ಸಂದೇಶವು ಯಾವ ಸಭೆಗೆ ನಿರ್ದೇಶಿಸಲ್ಪಟ್ಟಿದೆ, ಮತ್ತು ಮೇಲ್ವಿಚಾರಕರಿಗೆ ಅವನು ಏನನ್ನು ನೆನಪಿಸುತ್ತಾನೆ?

ಯೇಸುವಿನ ಮೊದಲ ಸಂದೇಶವು ಆ ಸಮಯದಲ್ಲಿ ಪ್ಯಾಟ್ಮಸ್‌ ದ್ವೀಪಕ್ಕೆ ಸಮೀಪದ ಏಷಿಯ ಮೈನರಿನ ಏಳಿಗೆ ಹೊಂದುತ್ತಿದ್ದ ಒಂದು ಕರಾವಳೀ ನಗರವಾಗಿದ್ದ ಎಫೆಸದಲ್ಲಿರುವ ಸಭೆಗಾಗಿ ಇತ್ತು. ಅವನು ಯೋಹಾನನಿಗೆ ಆಜ್ಞಾಪಿಸುವುದು: “ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ: ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡಿದುಕೊಂಡು ಏಳು ಚಿನ್ನದ ದೀಪಸ್ತಂಭಗಳ ಮಧ್ಯದಲ್ಲಿ ತಿರುಗಾಡುವಾತನು ಹೇಳುವ ಸಂಗತಿಗಳು ಇವುಗಳಾಗಿವೆ.” (ಪ್ರಕಟನೆ 2:1, NW)  ಇತರ ಆರು ಸಂದೇಶಗಳಲ್ಲಿರುವಂತೆ, ಅವನ ಅಧಿಕಾರಯುಕ್ತ ಸ್ಥಾನವನ್ನು ಸೂಚಿಸುವ ಒಂದು ವೈಶಿಷ್ಟ್ಯಕ್ಕೆ ಯೇಸುವು ಇಲ್ಲಿ ಗಮನ ಸೆಳೆಯುತ್ತಾನೆ. ಎಲ್ಲಾ ಹಿರಿಯರು ಅವನ ಸ್ವಂತ ರಕ್ಷಣೆಯ ಮೇಲ್ವಿಚಾರಣೆಯ ಕೆಳಗೆ ಇರುತ್ತಾರೆ ಮತ್ತು ಅವನು ಎಲ್ಲಾ ಸಭೆಗಳನ್ನು ಪರೀಕ್ಷಿಸುತ್ತಿದ್ದಾನೆ ಎಂದು ಎಫೆಸದ ಮೇಲ್ವಿಚಾರಕರಿಗೆ ಅವನು ಜ್ಞಾಪಕ ಕೊಡುತ್ತಾನೆ. ನಮ್ಮ ಈ 20 ನೆಯ ಶತಮಾನದಲ್ಲಿಯೂ, ಅವನು ಈ ಪ್ರೀತಿಯ ಶಿರಸ್ಸುತನವನ್ನು ಚಲಾಯಿಸುವುದನ್ನು, ಹಿರಿಯರ ಮೇಲೆ ನಿಗಾ ಇಡುವುದನ್ನು ಮತ್ತು ಸಭೆಯೊಂದಿಗೆ ಸಹವಾಸ ಮಾಡುವವರೆಲ್ಲರನ್ನು ದಯೆಯಿಂದ ಕುರಿಪಾಲನೆ ಮಾಡುವುದನ್ನು ಮುಂದರಿಸಿದ್ದಾನೆ. ಆಗಿಂದಾಗ್ಗೆ, ಬೆಳಕು ಹೆಚ್ಚು ಪ್ರಕಾಶಮಯವಾಗಿ ಬೆಳಗುವಂತೆ ಸಭಾ ಏರ್ಪಾಡುಗಳಲ್ಲಿ ಅವನು ಹೊಂದಾಣಿಕೆ ಮಾಡುತ್ತಾನೆ. ಹೌದು, ದೇವರ ಮಂದೆಯ ಮೇಲೆ ಯೇಸು ಮುಖ್ಯ ಕುರುಬನಾಗಿರುತ್ತಾನೆ.—ಮತ್ತಾಯ 11:28-30; 1 ಪೇತ್ರ 5:2-4.

2. (ಎ) ಎಫೆಸದ ಸಭೆಯನ್ನು ಯಾವ ಉತ್ತಮ ಸಂಗತಿಗಳಿಗಾಗಿ ಯೇಸು ಶ್ಲಾಘಿಸಿದನು? (ಬಿ) ಎಫೆಸದ ಹಿರಿಯರುಗಳು ಅಪೊಸ್ತಲ ಪೌಲನ ಯಾವ ಬುದ್ಧಿವಾದಕ್ಕೆ ವಿಧೇಯರಾಗಿದ್ದರೆಂದು ರುಜುವಾಗುತ್ತದೆ?

2 ಅನಂತರ ಯೇಸುವು ಅವನ ಏಳು ಸಂದೇಶಗಳಲ್ಲಿ ಎರಡರ ಹೊರತಾಗಿ, ಬೇರೆಲ್ಲವುಗಳಿಗೆ ಶ್ಲಾಘನೆಯ ಉತ್ಸಾಹದ ಮಾತುಗಳಿಂದ ಆರಂಭಿಸುವುದರೊಂದಿಗೆ ಒಂದು ಮಾದರಿಯನ್ನು ಇಡುತ್ತಾನೆ. ಎಫೆಸದವರಿಗೆ, ಅವನ ಸಂದೇಶ ಹೀಗಿತ್ತು: “ನಿನ್ನ ಕೃತ್ಯಗಳನ್ನೂ, ಮತ್ತು ನಿನ್ನ ಪ್ರಯಾಸವನ್ನೂ, ಮತ್ತು ತಾಳ್ಮೆಯನ್ನೂ ನಾನು ಬಲ್ಲೆನು, ಮತ್ತು ನೀನು ದುಷ್ಟ ಜನರನ್ನು ಸಹಿಸಲಾರಿ, ಮತ್ತು ಅವರು ಅಂತಹವರಲ್ಲದಿದ್ದರೂ, ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕೆಗ್ಷೊಳಪಡಿಸುತ್ತೀ, ಮತ್ತು ಅವರು ಸುಳ್ಳುಗಾರರೆಂದು ಕಂಡುಕೊಂಡಿ. ನೀನು ತಾಳ್ಮೆಯನ್ನು ಕೂಡ ತೋರಿಸುತ್ತೀ, ಮತ್ತು ನನ್ನ ಹೆಸರಿನ ನಿಮಿತ್ತ ಸೈರಣೆಯನ್ನು ತೋರಿಸುತ್ತೀ, ಮತ್ತು ಬೇಸರಗೊಂಡಿಲ್ಲ.” (ಪ್ರಕಟನೆ 2:2, 3, NW)  ವರ್ಷಗಳ ಮೊದಲೇ ಅಪೊಸ್ತಲ ಪೌಲನು ಎಫೆಸದ ಹಿರಿಯರಿಗೆ “ಕ್ರೂರವಾದ ತೋಳಗಳ,” ಮಂದೆಯನ್ನು ಧರ್ಮಭ್ರಷ್ಟ ದಾಂಧಲೆಗೊಳಿಸುವವರ ಕುರಿತು ಎಚ್ಚರಿಸಿದ್ದನು, ಮತ್ತು ತನ್ನ ಸ್ವಂತ ಅವಿರತ ಮಾದರಿಯನ್ನು ಅನುಸರಿಸುತ್ತಾ, “ಎಚ್ಚರವಾಗಿರುವಂತೆ” ಹೇಳಿದ್ದನು. (ಅ. ಕೃತ್ಯಗಳು 20:29, 31) ಅವರ ಪ್ರಯಾಸ ಮತ್ತು ತಾಳ್ಮೆಗಾಗಿ ಮತ್ತು ಅವರು ಸುಸ್ತಾಗದೇ ಇರುವುದಕ್ಕಾಗಿ ಯೇಸುವು ಈಗ ಶ್ಲಾಘಿಸುತ್ತಿರುವುದರಿಂದ, ಅವರು ಆ ಬುದ್ಧಿವಾದವನ್ನು ಅನ್ವಯಿಸಿದ್ದಿರಬೇಕು.

3. (ಎ) ನಮ್ಮ ದಿನಗಳಲ್ಲಿ “ಸುಳ್ಳು ಅಪೊಸ್ತಲರು” ನಂಬಿಗಸ್ತರನ್ನು ಹೇಗೆ ಮೋಸಪಡಿಸಲು ನೋಡಿದ್ದಾರೆ? (ಬಿ) ಧರ್ಮಭ್ರಷ್ಟರ ಕುರಿತಾಗಿ ಯಾವ ಎಚ್ಚರಿಕೆಯನ್ನು ಪೇತ್ರನು ಕೊಟ್ಟನು?

3 ಕರ್ತನ ದಿನದಲ್ಲಿ ಕೂಡ, “ತಮ್ಮ ಹಿಂದೆ ಶಿಷ್ಯರನ್ನು ಎಳೆದುಕೊಳ್ಳಲು ತಿರುಚಲ್ಪಟ್ಟ ಸಂಗತಿಗಳನ್ನು ಮಾತಾಡುತ್ತಿದ್ದ” “ಸುಳ್ಳು ಅಪೊಸ್ತಲರು” ಕಾಣಿಸಿಕೊಂಡಿದ್ದಾರೆ. (2 ಕೊರಿಂಥ 11:13; ಅ. ಕೃತ್ಯಗಳು 20:30, NW; ಪ್ರಕಟನೆ 1:10) ಪರಸ್ಪರ ವಿರೋಧದ ಮತಪಂಥೀಯ ಧರ್ಮಗಳಲ್ಲಿಲ್ಲಾ ಅವರು ಒಳ್ಳೆಯದನ್ನು ಕಾಣುತ್ತಾರೆ, ದೇವರಿಗೆ ಒಂದು ಸಂಸ್ಥೆಯಿರುವುದಿಲ್ಲ ಎಂದು ವಾದಿಸುತ್ತಾರೆ ಮತ್ತು 1914 ರಲ್ಲಿ ಯೇಸುವು ರಾಜ್ಯಾಧಿಕಾರವನ್ನು ಪಡೆದಿದ್ದಾನೆ ಎಂಬುದನ್ನು ನಿರಾಕರಿಸುತ್ತಾರೆ. ಅವರು 2 ಪೇತ್ರ 3:3, 4ರ (NW) ಪ್ರವಾದನೆಯನ್ನು ನೆರವೇರಿಸುತ್ತಾರೆ: “ಕೊನೆಯ ದಿನಗಳಲ್ಲಿ ಕುಚೋದ್ಯಗಾರರು ತಮ್ಮ ಕುಚೋದ್ಯದೊಡನೆ ಬರುವರು. ಅವರು ತಮ್ಮ ಸ್ವಂತ ಆಶೆಗಳಿಗನುಸಾರ ನಡೆಯುತ್ತ ಹೇಳುವುದು: ‘ಅವನ ವಾಗ್ದಾನಿತ ಸಾನಿಧ್ಯವೆಲ್ಲಿ? ಅಷ್ಟೇಕೆ, ನಮ್ಮ ಪೂರ್ವಜರು ಮರಣದಲ್ಲಿ ನಿದ್ರೆಹೋದಂದಿನಿಂದ ಸಕಲ ಸಂಗತಿಗಳು ಸೃಷ್ಟಿಯ ಮೊದಲಿನಿಂದ ಹಿಡಿದು ಹಾಗೆಯೇ ಮುಂದುವರಿಯುತ್ತಿದೆಯಲ್ಲ’ ಎಂದು ಹೇಳುವರು.”

4. (ಎ) ಕುಚೋದ್ಯಗಾರರ ಅಹಂಕಾರ ಮತ್ತು ದಂಗೆಕೋರತನವು ಹೇಗೆ ತೋರಿಸಲ್ಪಡುತ್ತದೆ? (ಬಿ) ಸುಳ್ಳು ವಿರೋಧಕರ ವಿರುದ್ಧ ತೆಗೆದುಕೊಳ್ಳುವ ಯಾವ ಕಾರ್ಯದ ಮೂಲಕ, ಇಂದಿನ ಕ್ರೈಸ್ತರು ಎಫೆಸದವರಂತೆ ಇದ್ದಾರೆ ಎಂದು ತೋರಿಸುತ್ತಾರೆ?

4 ತಮ್ಮ ನಂಬಿಕೆಯ ಬಹಿರಂಗ ಘೋಷಣೆಯನ್ನು ಮಾಡುವುದರ ವಿಚಾರದಲ್ಲಿ ಈ ಕುಚೋದ್ಯಗಾರರು ದಂಗೆಯೇಳುತ್ತಾರೆ. (ರೋಮಾಪುರ 10:10) ತಮ್ಮ ಮೊದಲಿನ ಸಂಗಾತಿಗಳ ಕುರಿತು ಸುಳ್ಳಾದ ವರದಿಗಳನ್ನು ಹಬ್ಬಿಸಲು, ಅವರು ಕ್ರೈಸ್ತಪ್ರಪಂಚದ ವೈದಿಕರ ಬೆಂಬಲವನ್ನು ಮತ್ತು ವಾರ್ತಾ ಪತ್ರಿಕೆಗಳ ಮತ್ತು ಟೀವೀ ಸ್ಟೇಶನುಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಈ ಮೋಸಗಾರರ ಮಾತುಗಳು ಮತ್ತು ನಡತೆಯು ಸತ್ಯವಲ್ಲದ್ದು ಎಂದು ನಂಬಿಗಸ್ತರಾಗಿರುವವರು ಬಲುಬೇಗನೆ ಕಂಡುಕೊಳ್ಳುತ್ತಾರೆ. ಎಫೆಸದವರಂತೆ, ಇಂದು ಕ್ರೈಸ್ತರು ‘ದುಷ್ಟ ಜನರನ್ನು ಸಹಿಸಿಕೊಳ್ಳಲಾರರು,’ ಆದುದರಿಂದ ಅವರು ತಮ್ಮ ಸಭೆಗಳಿಂದ ಅವರನ್ನು ಬಹಿಷ್ಕಾರ ಮಾಡುತ್ತಾರೆ. *

5. (ಎ) ಎಫೆಸದವರಲ್ಲಿ ಯಾವ ಬಲಹೀನತೆ ಇದೆ ಎಂದು ಯೇಸುವು ಹೇಳಿದನು? (ಬಿ) ಯಾವ ಮಾತುಗಳನ್ನು ಎಫೆಸದವರು ನೆನಪಿನಲ್ಲಿಡಬೇಕಿತ್ತು?

5 ಆದಾಗ್ಯೂ ಈಗ, ಏಳು ಸಭೆಗಳಲ್ಲಿ ಐದಕ್ಕೆ ತಾನು ಮಾಡುವಂತೆ, ಯೇಸುವು ಒಂದು ಗಂಭೀರ ಸಮಸ್ಯೆಯನ್ನು ಪ್ರತ್ಯೇಕಿಸಿ ತೋರಿಸುತ್ತಾನೆ. ಅವನು ಎಫೆಸದವರಿಗೆ ಹೇಳುವುದು: “ಆದಾಗ್ಯೂ, ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀ ಎಂದು ನಾನು ನಿನ್ನ ಮೇಲೆ ತಪ್ಪುಹೊರಿಸುತ್ತೇನೆ.” (ಪ್ರಕಟನೆ 2:4, NW)  ಈ ವಿಷಯದಲ್ಲಿ ಅವರು ತಪ್ಪಿಬೀಳಬಾರದಿತ್ತು, ಯಾಕಂದರೆ ಪೌಲನು 35 ವರ್ಷಗಳ ಹಿಂದೆ ದೇವರು ‘ನಮ್ಮನ್ನು ಮಹಾ ಪ್ರೀತಿ’ ಯನ್ನು ಸೂಚಿಸಿ ಹೀಗೆ ಬರೆದಿದ್ದನು ಮತ್ತು ಅವರನ್ನು ಹೀಗೆ ಪ್ರೋತ್ಸಾಹಿಸಿದ್ದನು: “ಆದುದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ದೇವರನ್ನು ಅನುಕರಿಸಿರಿ, ಮತ್ತು ಕ್ರಿಸ್ತನು ಕೂಡ ನಿಮ್ಮನ್ನು ಪ್ರೀತಿಸಿದ ಮೇರೆಗೆ, ನೀವೂ ಪ್ರೀತಿಯಲ್ಲಿ ನಡೆಯುತ್ತಾ ಹೋಗಿರಿ.” (ಎಫೆಸ 2:4; 5:1, 2, NW) ಇನ್ನೂ ಹೆಚ್ಚಾಗಿ, ಯೇಸುವಿನ ಮಾತುಗಳು ಅಳಿಸಲಾಗದ ರೀತಿಯಲ್ಲಿ ಅವರ ಹೃದಯದ ಮೇಲೆ ಕೆತ್ತಲ್ಪಟ್ಟಿರಬೇಕಿತ್ತು: “ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು, ಮತ್ತು ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣ ಹೃದಯದಿಂದ ಮತ್ತು ನಿಮ್ಮ ಪೂರ್ಣ ಆತ್ಮದಿಂದ ಮತ್ತು ನಿಮ್ಮ ಪೂರ್ಣ ಮನಸ್ಸಿನಿಂದ ಮತ್ತು ನಿಮ್ಮ ಪೂರ್ಣ ಶಕ್ತಿಯಿಂದ ನೀವು ಪ್ರೀತಿಸತಕ್ಕದ್ದು.” (ಮಾರ್ಕ 12:29-31, NW) ಎಫೆಸದವರು ಆ ಮೊದಲ ಪ್ರೀತಿಯನ್ನು ಕಳೆದುಕೊಂಡಿದ್ದರು.

6. (ಎ) ನಾವು ಸಭೆಯಲ್ಲಿ ಹಳಬರಿರಲಿ ಹೊಸ ಸಹವಾಸಿಗಳಾಗಿರಲಿ, ಯಾವ ಅಪಾಯ ಮತ್ತು ಪ್ರವೃತ್ತಿಗಳ ವಿರುದ್ಧವಾಗಿ ನಾವು ಕಾದುಕೊಳ್ಳತಕ್ಕದ್ದು? (ಬಿ) ದೇವರೆಡೆಗಿನ ನಮ್ಮ ಪ್ರೀತಿಯು ನಾವೇನು ಮಾಡುವಂತೆ ಪ್ರಚೋದಿಸತಕ್ಕದ್ದು?

6 ನಾವು ಸಭೆಯಲ್ಲಿ ಹಳಬರಾಗಿರಲಿ ಇಲ್ಲವೇ ಹೊಸ ಸಹವಾಸಿಗಳಾಗಿರಲಿ, ಯೆಹೋವನಿಗಾಗಿರುವ ನಮ್ಮ ಪ್ರಥಮ ಪ್ರೀತಿಯನ್ನು ಕಳೆದುಕೊಳ್ಳುವುದರ ವಿರುದ್ಧ ನಾವು ಕಾಪಾಡಿಕೊಳ್ಳತಕ್ಕದ್ದು. ಈ ನಷ್ಟವು ಹೇಗೆ ಬರಸಾಧ್ಯವಿದೆ? ನಮ್ಮ ಲೌಕಿಕ ಕೆಲಸಕ್ಕೆ ಅಂಟಿಕೊಳ್ಳುವಿಕೆ, ತುಂಬಾ ಹಣವನ್ನು ಮಾಡುವ ಆಶೆ, ಇಲ್ಲವೆ ಸುಖಭೋಗಗಳ ಬೆನ್ನಟ್ಟುವಿಕೆ ನಮ್ಮ ಜೀವಿತಗಳಲ್ಲಿ ದೊಡ್ಡ ವಿಷಯಗಳಾಗುವಂತೆ ನಾವು ಬಿಡಸಾಧ್ಯವಿದೆ. ಈ ರೀತಿಯಲ್ಲಿ ನಾವು ಆತ್ಮಿಕ ಮನಸ್ಸುಳ್ಳವರಾಗುವ ಬದಲು, ಮಾಂಸಿಕ ಮನಸ್ಸುಳ್ಳವರಾಗಸಾಧ್ಯವಿದೆ. (ರೋಮಾಪುರ 8:5-8; 1 ತಿಮೊಥೆಯ 4:8; 6:9, 10) ಅಂತಹ ಯಾವುದೇ ಪ್ರವೃತ್ತಿಗಳನ್ನು ಸರಿಪಡಿಸಿಕೊಳ್ಳಲು, ಮತ್ತು ‘ದೇವರ ರಾಜ್ಯವನ್ನು ಮತ್ತು ಅವನ ನೀತಿಯನ್ನು ಮೊದಲಾಗಿ ಹುಡುಕಲು,’ ಆ ಮೂಲಕ ‘ಪರಲೋಕದಲ್ಲಿ ನಮಗೋಸ್ಕರ ಸಂಪತ್ತುಗಳನ್ನು ಶೇಖರಿಸಿಡಲು’ ಯೆಹೋವನಿಗಾಗಿರುವ ನಮ್ಮ ಪ್ರೀತಿಯು ನಮ್ಮನ್ನು ಪ್ರೇರಿಸತಕ್ಕದ್ದು.—ಮತ್ತಾಯ 6:19-21, 31-33.

7. (ಎ) ಯೆಹೋವನ ಕಡೆಗಿನ ನಮ್ಮ ಸೇವೆಯು ಯಾವುದರಿಂದ ಪ್ರಚೋದಿಸಲ್ಪಡಬೇಕು? (ಬಿ) ಪ್ರೀತಿಯ ವಿಷಯದಲ್ಲಿ ಯೋಹಾನನು ಏನು ಹೇಳಿದನು?

7 ಯೆಹೋವನೆಡೆಗಿನ ನಮ್ಮ ಸೇವೆಯು ಯಾವಾಗಲೂ ಅವನ ಕಡೆಗಿರುವ ಆಳವಾದ ಪ್ರೀತಿಯಿಂದ ಪ್ರೇರಿಸಲ್ಪಡಲಿ. ನಮಗಾಗಿ ಯೆಹೋವನು ಮತ್ತು ಯೇಸು ಕ್ರಿಸ್ತನು ಮಾಡಿರುವ ಎಲ್ಲದಕ್ಕಾಗಿ ಉತ್ಸಾಹಪೂರಿತವಾದ ಗಣ್ಯತೆಯು ನಮ್ಮಲ್ಲಿ ಇರಲಿ. ತದನಂತರ ಯೋಹಾನನು ಸ್ವತಃ ಬರೆದಂತೆ ಅದಿರಬೇಕು: “ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದ್ದರಲ್ಲಿಯೇ ಪ್ರೀತಿಯ ನಿಜಗುಣವು ತೋರಿಬರುತ್ತದೆ.” ಅನಂತರ ಯೋಹಾನನು ನಮಗೆ ಹೇಳುತ್ತಾ ಮುಂದರಿಯುವುದು: “ದೇವರು ಪ್ರೀತಿಸ್ವರೂಪಿ; ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ, ಮತ್ತು ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.” ಯೆಹೋವನಿಗಾಗಿ, ಕರ್ತನಾದ ಯೇಸು ಕ್ರಿಸ್ತನಿಗಾಗಿ ಮತ್ತು ದೇವರ ಸಜೀವವಾಗಿರುವ ವಾಕ್ಯಕ್ಕಾಗಿ ಇರುವ ನಮ್ಮ ಪ್ರೀತಿಯು ಕಳೆಗುಂದಲು ನಾವೆಂದೂ ಬಿಡದಿರೋಣ! ದೇವರ ಕಡೆಗೆ ನಮ್ಮ ಹುರುಪಿನ ಸೇವೆಯಲ್ಲಿ ಮಾತ್ರ ನಾವಿದನ್ನು ವ್ಯಕ್ತ ಪಡಿಸುವುದು ಮಾತ್ರವಲ್ಲ, “ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂದು ನಾವು ಆತನಿಂದ ಹೊಂದಿರುವ ಆಜ್ಞೆಗೆ” ವಿಧೇಯರಾಗುವುದರಿಂದಲೂ ತೋರಿಸತಕ್ಕದ್ದು.—1 ಯೋಹಾನ 4:10, 16, 21; ಇಬ್ರಿಯ 4:12; ಇದನ್ನೂ ನೋಡಿರಿ 1 ಪೇತ್ರ 4:8; ಕೊಲೊಸ್ಸೆ 3:10-14; ಎಫೆಸ 4:15.

“ಮೊದಲಿನ ಕೃತ್ಯಗಳನ್ನು ಮಾಡು”

8. ಎಫೆಸದವರು ಹೇಗೆ ವರ್ತಿಸತಕ್ಕದ್ದು ಎಂದು ಯೇಸುವು ಹೇಳಿದನು?

8 ಆ ಎಫೆಸದವರು ನಷ್ಟಹೊಂದಲು ಬಯಸದಿದ್ದರೆ ಅವರಲ್ಲಿದ್ದ ಆ ಮೊದಲ ಪ್ರೀತಿಯನ್ನು ಪುನಃ ಹೊತ್ತಿಸಬೇಕಿತ್ತು. “ಆದಕಾರಣ,” ಯೇಸುವು ಅವರಿಗೆ ಹೇಳುವುದು, “ನೀನು ಯಾವುದರಿಂದ ಬಿದ್ದಿದ್ದೀಯೋ ಅದನ್ನು ನೆನಪಿಸಿಕೊ, ಮತ್ತು ಪಶ್ಚಾತ್ತಾಪ ಪಡು ಮತ್ತು ಮೊದಲಿನ ಕೃತ್ಯಗಳನ್ನು ಮಾಡು. ನೀನು ಮಾಡದಿದ್ದರೆ, ನಾನು ನಿನ್ನಲಿಗ್ಲೆ ಬರುವೆನು, ಮತ್ತು ನೀನು ಪಶ್ಚಾತ್ತಾಪ ಪಡದೆ ಇರುವುದಾದರೆ, ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ನಾನು ತೆಗೆದುಹಾಕುವೆನು.” (ಪ್ರಕಟನೆ 2:5, NW) ಈ ಮಾತುಗಳನ್ನು ಎಫೆಸ ಸಭೆಯಲ್ಲಿದ್ದ ಕ್ರೈಸ್ತರು ಹೇಗೆ ಸ್ವೀಕರಿಸಿದರು? ನಾವು ಅದನ್ನು ಅರಿಯೆವು. ಅವರು ಪಶ್ಚಾತ್ತಾಪ ಪಟ್ಟರು ಮತ್ತು ಯೆಹೋವನ ಕಡೆಗಿನ ಮೊದಲ ಪ್ರೀತಿಯನ್ನು ಪುನಃ ಹೊತ್ತಿಸುವುದರಲ್ಲಿ ಯಶಸ್ವಿಯಾದರು ಎಂದು ನಾವು ನಿರೀಕ್ಷಿಸುತ್ತೇವೆ. ಅವರು ಹಾಗೆ ಮಾಡಿರದಿದ್ದರೆ, ಅವರ ದೀಪವು ನಂದಿಸಲ್ಪಡಲಿಕ್ಕಿತ್ತು ಮತ್ತು ಅವರ ದೀಪಸ್ತಂಭವು ತೆಗೆದು ಹಾಕಲ್ಪಡಲಿಕ್ಕಿತ್ತು. ಸತ್ಯವನ್ನು ಪ್ರಕಾಶಿಸುವ ಅವರ ಸುಯೋಗವನ್ನು ಅವರು ಕಳೆದುಕೊಳ್ಳಲಿಕ್ಕಿದ್ದರು.

9. (ಎ) ಎಫೆಸದವರಿಗಾಗಿ ಯೇಸುವಿನ ಹತ್ತಿರ ಯಾವ ಪ್ರೋತ್ಸಾಹದಾಯಕ ಮಾತು ಇತ್ತು? (ಬಿ) ಎಫೆಸದವರಿಗೆ ಕೊಟ್ಟ ಯೇಸುವಿನ ಬುದ್ಧಿವಾದವನ್ನು ಆಲಿಸಲು ಯೋಹಾನನ ದಿನಗಳ ನಂತರದ ಸಭೆಗಳು ಹೇಗೆ ತಪ್ಪಿಹೋದವು?

9 ಆದಾಗ್ಯೂ, ಎಫೆಸದವರಿಗೆ ಈ ಪ್ರೋತ್ಸಾಹದಾಯಕವಾದ ಮಾತುಗಳು ಯೇಸುವಿನ ಹತ್ತಿರವಿದ್ದವು: “ಆದರೂ, ನಿನ್ನಲ್ಲಿ ಇದು ಉಂಟು, ಏನೆಂದರೆ ನಾನು ಸಹ ದ್ವೇಷಿಸುತ್ತಿರುವ ನಿಕೊಲೇಅಸನ ಪಂಥದ ಕೃತ್ಯಗಳನ್ನು ನೀನು ದ್ವೇಷಿಸುತ್ತೀ.” (ಪ್ರಕಟನೆ 2:6, NW) ಕಡಿಮೆಪಕ್ಷ ಅವರು, ಕರ್ತನಾದ ಯೇಸು ಕ್ರಿಸ್ತನು ಅದನ್ನು ದ್ವೇಷಿಸಿದಂತೆ, ಮತಪಂಥೀಯ ವಿಭಾಗವನ್ನು ದ್ವೇಷಿಸಿದರು. ಆದಾಗ್ಯೂ, ವರ್ಷಗಳು ಸಂದಂತೆ, ಅನೇಕ ಸಭೆಗಳು ಯೇಸುವಿನ ಈ ಮಾತುಗಳನ್ನು ಆಲಿಸಲು ತಪ್ಪಿಹೋದರು. ಯೆಹೋವನ ಕಡೆಗೆ, ಸತ್ಯದ ಕಡೆಗೆ ಮತ್ತು ಒಬ್ಬರಿಗೆ ಇನ್ನೊಬ್ಬರೆಡೆಗೆ ಇರುವ ಪ್ರೀತಿಯ ಕೊರತೆಯು ಅವರು ಆತ್ಮಿಕ ಅಂಧಕಾರದೊಳಗೆ ತೇಲಿಕೊಂಡು ಹೋಗುವುದರಲ್ಲಿ ಕೊನೆಗೊಂಡಿತು. ಜಗಳಾಡುವ ಅನೇಕ ಮತಪಂಥಗಳಾಗಿ ಅವರು ಒಡೆದುಹೋದರು. ಯೆಹೋವನ ಕಡೆಗೆ ಪ್ರೀತಿಯಿಲ್ಲದ “ಕ್ರೈಸ್ತ” ನಕಲುಗಾರರು ಬೈಬಲಿನ ಗ್ರೀಕ್‌ ಹಸ್ತಪ್ರತಿಗಳಿಂದ ದೇವರ ಹೆಸರನ್ನೇ ತೆಗೆದು ಹಾಕಿದರು. ಪ್ರೀತಿಯ ಕೊರತೆಯು ನರಕಾಗ್ನಿ, ಪರ್ಗೆಟರಿ, ಮತ್ತು ತ್ರಯೈಕ್ಯದಂತಹ ಬ್ಯಾಬಿಲನರ ಮತ್ತು ಗ್ರೀಕರ ಬೋಧನೆಗಳಿಗೆ ಕ್ರೈಸ್ತತ್ವದ ಹೆಸರಿನಲ್ಲಿ ಎಡೆಮಾಡಿಕೊಟ್ಟಿತು. ದೇವರ ಕಡೆಗೆ ಮತ್ತು ಸತ್ಯದ ಕಡೆಗೆ ಯಾವುದೇ ಪ್ರೀತಿಯಿಲ್ಲದಿರುವ ಕಾರಣ, ಕ್ರೈಸ್ತರೆಂದು ಹೇಳಿಕೊಳ್ಳುತ್ತಿರುವ ಅನೇಕರು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದನ್ನು ನಿಲ್ಲಿಸಿದರು. ಭೂಮಿಯ ಮೇಲೆ ತನ್ನ ಸ್ವಂತ ರಾಜ್ಯವನ್ನು ಮಾಡಿಕೊಂಡ ಒಂದು ಸ್ವಾರ್ಥ ವೈದಿಕ ವರ್ಗವು ಅವರ ಮೇಲೆ ಪ್ರಭುತ್ವ ನಡಿಸುವಂತೆ ಆಯಿತು.—ಹೋಲಿಸಿರಿ 1 ಕೊರಿಂಥ 4:8.

10. 1918 ರಲ್ಲಿ ಕ್ರೈಸ್ತಪ್ರಪಂಚದಲ್ಲಿ ಧಾರ್ಮಿಕ ಸನ್ನಿವೇಶವು ಏನಾಗಿತ್ತು?

10 ದೇವರ ಮನೆಯಲ್ಲಿ ನ್ಯಾಯವಿಚಾರಣೆ 1918 ರಲ್ಲಿ ಆರಂಭಗೊಂಡಾಗ, ಕ್ರೈಸ್ತಪ್ರಪಂಚದ ಮತಪಂಥೀಯ ವೈದಿಕರು ಮೊದಲನೆಯ ಲೋಕಯುದ್ಧಕ್ಕೆ ಬಹಿರಂಗವಾಗಿ ಬೆಂಬಲಕೊಡುತ್ತಾ, ಒಬ್ಬರು ಇನ್ನೊಬ್ಬರನ್ನು ಹತಿಸುವಂತೆ, ಎರಡೂ ಪಕ್ಷದ ಕ್ಯಾತೊಲಿಕರನ್ನು ಮತ್ತು ಪ್ರಾಟೆಸ್ಟಂಟರನ್ನು ಹುರಿದುಂಬಿಸಿದರು. (1 ಪೇತ್ರ 4:17) ನಿಕೊಲೇಅಸನ ಪಂಥದವರು ಮಾಡುತ್ತಿರುವುದನ್ನು ದ್ವೇಷಿಸುತ್ತಿದ್ದ ಎಫೆಸದವರಿಗೆ ವ್ಯತಿರಿಕ್ತವಾಗಿ, ಕ್ರೈಸ್ತಪ್ರಪಂಚದ ಧರ್ಮಗಳು, ದೀರ್ಘಕಾಲದಿಂದ ಪರಸ್ಪರ ವಿರೋಧದ, ದೇವ-ವಿರೋಧಿ ಬೋಧನೆಗಳಿಂದ ರಂಧ್ರಮಯವಾಗಿದ್ದವು ಮತ್ತು ಅವರ ವೈದಿಕರು, ಯಾವುದರ ಭಾಗವಾಗಿ ತನ್ನ ಶಿಷ್ಯರು ಇರಬಾರದೆಂದು ಯೇಸುವು ಹೇಳಿದ್ದನೋ, ಆ ಲೋಕದ ಭಾಗವಾಗಿ, ತಮ್ಮನ್ನು ಅದರೊಂದಿಗೆ ಸೇರಿಸಿಕೊಂಡಿದ್ದರು. (ಯೋಹಾನ 15:17-19) ಬೈಬಲಿನ ಮುಖ್ಯ ವಿಷಯವಾದ ದೇವರ ರಾಜ್ಯದ ಕುರಿತು ಅವುಗಳ ಸಭೆಗಳು ತಿಳಿಯದೆ ಇದ್ದಕಾರಣ, ಅವುಗಳು ಶಾಸ್ತ್ರೀಯ ಸತ್ಯವನ್ನು ಪ್ರಕಾಶಿಸುವ ದೀಪಸ್ತಂಭಗಳಾಗಿಯಾಗಲಿ, ಅವುಗಳ ಸದಸ್ಯರುಗಳು ಯೆಹೋವನ ಆತ್ಮಿಕ ದೇವಾಲಯದ ಭಾಗವಾಗಿಯಾಗಲಿ ಇರಲಿಲ್ಲ. ಅವುಗಳ ಮುಂದಾಳುಗಳಾಗಿದ್ದ ಪುರುಷರು (ಮತ್ತು ಸ್ತ್ರೀಯರು) ನಕ್ಷತ್ರಗಳಾಗಿ ಇರದೆ “ನಿಯಮರಹಿತನಾದ ಪುರುಷನ” ಸದಸ್ಯರುಗಳಾಗಿ ಪ್ರಕಟಗೊಂಡರು.—2 ಥೆಸಲೊನೀಕ 2:3, NW; ಮಲಾಕಿಯ 3:1-3.

11. (ಎ) ಲೋಕ ದೃಶ್ಯದಲ್ಲಿದ್ದ ಯಾವ ಕ್ರೈಸ್ತ ಗುಂಪು 1918 ರಲ್ಲಿ ಎಫೆಸದವರಿಗೆ ಕೊಟ್ಟ ಯೇಸುವಿನ ನುಡಿಗಳನ್ನು ಕಾರ್ಯರೂಪಕ್ಕೆ ಹಾಕಿತು? (ಬಿ) ಯೋಹಾನ ವರ್ಗವು 1919 ರಿಂದ ಏನನ್ನು ಮಾಡಿತು?

11 ಆದಾಗ್ಯೂ, ಯೋಹಾನ ವರ್ಗದವರು, ಮೊದಲನೆಯ ಲೋಕಯುದ್ಧದ ಗೊಂದಲಮಯ ದಿನಗಳಿಂದ, ಯೆಹೋವನಿಗೆ ಉರಿಯುವ ಹುರುಪಿನಿಂದ ಸೇವೆಮಾಡುವಂತೆ ಅವರನ್ನು ಪ್ರಚೋದಿಸಿದ ಆತನಿಗಾಗಿ ಮತ್ತು ಸತ್ಯಕ್ಕಾಗಿ ಪ್ರೀತಿಯುಳ್ಳವರಾಗಿ ಹೊರಬಂದರು. ವಾಚ್‌ ಟವರ್‌ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್‌ ಟಿ. ರಸೆಲ್‌ 1916 ರಲ್ಲಿ ಮೃತರಾದಾಗ, ಅವರನ್ನು ಕಾರ್ಯತಃ ಪೂಜಿಸುವ ಮೂಲಕ ಮತಪಂಥವನ್ನು ಒಳತರಲು ಪ್ರಯತ್ನಿಸಿದವರನ್ನು ಅವರು ಪ್ರತಿರೋಧಿಸಿದರು. ಹಿಂಸೆ ಮತ್ತು ವಿಪತ್ತುಗಳಿಂದ ಶಿಸ್ತಿಗೊಳಪಟ್ಟು, ಈ ಕ್ರೈಸ್ತ ಗುಂಪು ಯಜಮಾನನಿಂದ “ಭಲಾ,” ಎಂಬ ನ್ಯಾಯತೀರ್ಪೊಂದನ್ನು ಮತ್ತು ಅವನ ಸಂತೋಷದಲ್ಲಿ ಸೇರಲು ಒಂದು ಆಮಂತ್ರಣವನ್ನು ಸ್ಪಷ್ಟವಾಗಿ ಪಡೆಯಿತು. (ಮತ್ತಾಯ 25:21, 23) ಲೋಕ ಘಟನೆಗಳ ಪಥಕ್ರಮದಲ್ಲಿ, ಮತ್ತು ತಮ್ಮ ಸ್ವಂತ ಅನುಭವಗಳಲ್ಲಿ, ರಾಜ್ಯಬಲದೊಂದಿಗೆ ತನ್ನ ಅದೃಶ್ಯ ಸಾನ್ನಿಧ್ಯವನ್ನು ಗುರುತಿಸಲು ಯೇಸುವು ಕೊಟ್ಟ ಸೂಚನೆಯ ನೆರವೇರಿಕೆಯನ್ನು ಅವರು ಅರಿತರು. ಯೇಸುವಿನ ಈ ಮಹಾ ಪ್ರವಾದನೆಯ ಇನ್ನೂ ಹೆಚ್ಚಿನ ನೆರವೇರಿಕೆಯಲ್ಲಿ ಭಾಗಿಗಳಾಗಲು ಅವರು 1919 ರಿಂದ ಮುಂದಕ್ಕೆ ಚಲಿಸಿದರು: “ಮತ್ತು ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು; ಮತ್ತು ನಂತರ ಅಂತ್ಯವು ಬರುವುದು.” (ಮತ್ತಾಯ 6:9, 10; 24:3-14) ಯೆಹೋವನ ಕಡೆಗಿನ ಅವರ ಪ್ರೀತಿಯು ಯಾವುದೇ ರೀತಿಯಲ್ಲಿ ಕೊರತೆಯದ್ದಾಗಿದ್ದರೆ, ಆ ಸಮಯದಿಂದ ಮುಂದಕ್ಕೆ ಒಂದು ಜ್ವಾಲೆಯಾಗುವಂತೆ ಅದಕ್ಕೆ ಗಾಳಿ ಹಾಕಲಾಯಿತು.

12. (ಎ) 1922ರ ಒಂದು ಐತಿಹಾಸಿಕ ಅಧಿವೇಶನದಲ್ಲಿ, ಯಾವ ಕರೆಯು ಹೊರಟಿತು? (ಬಿ) ಯಾವ ಹೆಸರನ್ನು ಸತ್ಯ ಕ್ರೈಸ್ತರು 1931 ರಲ್ಲಿ ಆದರದಿಂದ ಸ್ವೀಕರಿಸಿದರು, ಮತ್ತು ಯಾವುದಕ್ಕಾಗಿ ಅವರು ಪಶ್ಚಾತ್ತಾಪ ಪಟ್ಟರು?

12 ಸಪ್ಟಂಬರ 5-13, 1922 ರಲ್ಲಿ ಅಮೆರಿಕದ ಒಹೈಯೋವಿನ ಸೀಡರ್‌ ಪಾಯಿಂಟ್‌ನಲ್ಲಿ ಈ ಕ್ರೈಸ್ತರ 18,000 ಮಂದಿ ಹಾಜರಾದ, ಒಂದು ಐತಿಹಾಸಿಕ ಅಧಿವೇಶನದಲ್ಲಿ, ಒಂದು ಕರೆಯು ನೀಡಲ್ಪಟ್ಟಿತು: “ಮಹೋನ್ನತ ಪರಾತ್ಪರ ದೇವರ ಪುತ್ರರುಗಳಾದ ನೀವು, ಹಿಂದೆರಳಿರಿ ಕ್ಷೇತ್ರಕ್ಕೆ! . . . ಯೆಹೋವನು ದೇವರು ಮತ್ತು ಯೇಸು ಕ್ರಿಸ್ತನು ರಾಜಾಧಿರಾಜನೂ, ಕರ್ತರ ಕರ್ತನೂ ಎಂದು ಲೋಕವು ತಿಳಿಯ ತಕ್ಕದ್ದು. . . . ಆದುದರಿಂದ ರಾಜನನ್ನೂ, ಮತ್ತು ಅವನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ.” ಯೆಹೋವನ ಅತ್ಯಮೂಲ್ಯ ನಾಮವು ಅಧಿಕ ಪ್ರಾಮುಖ್ಯಕ್ಕೆ ಏರಿಸಲ್ಪಟ್ಟಿತು. ಅಮೆರಿಕದ ಒಹೈಯೋವಿನ ಕೊಲಂಬಸ್‌ನ ಅಧಿವೇಶನವೊಂದರಲ್ಲಿ 1931 ರಲ್ಲಿ ನೆರೆದಿದ್ದ ಈ ಕ್ರೈಸ್ತರು ಯೆಶಾಯನ ಪ್ರವಾದನೆಯಲ್ಲಿ ದೇವರಿಂದ ಸೂಚಿಸಲ್ಪಟ್ಟ—ಯೆಹೋವನ ಸಾಕ್ಷಿಗಳು—ಹೆಸರನ್ನು ಆದರದಿಂದ ಸ್ವೀಕರಿಸಲು ಮತ್ತು ಅದನ್ನು ತೆಗೆದುಕೊಳ್ಳಲು ಸಂತೋಷಿಸಿದರು. (ಯೆಶಾಯ 43:10, 12) ಮಾರ್ಚ್‌ 1, 1939ರ ಸಂಚಿಕೆಯಿಂದ, ಸಂಸ್ಥೆಯ ಪ್ರಮುಖ ಪತ್ರಿಕೆಯ ಹೆಸರನ್ನು ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ದ ವಾಚ್‌ಟವರ್‌ ಎನೌನ್ಸಿಂಗ್‌ ಜೆಹೋವಾಸ್‌ ಕಿಂಗ್‌ಡಮ್‌) ಎಂದು ಬದಲಾಯಿಸಲಾಯಿತು, ಆ ಮೂಲಕ ನಮ್ಮ ನಿರ್ಮಾಣಿಕನಿಗೆ ಮತ್ತು ಅವನ ರಾಜವೈಭವದ ಸರಕಾರಕ್ಕೆ ಪ್ರಧಾನ ಗೌರವ ಕೊಡಲಾಯಿತು. ಯೆಹೋವನ ಕಡೆಗಿನ ಪುನಃ ಚೇತರಿಸಲ್ಪಟ್ಟ ಪ್ರೀತಿಯೊಂದಿಗೆ ಯೆಹೋವನ ಸಾಕ್ಷಿಗಳು, ಅವನ ಆದರ್ಶಪ್ರಾಯ ನಾಮವನ್ನು ಮತ್ತು ರಾಜ್ಯವನ್ನು ಗೌರವಿಸಲು ಮತ್ತು ಮಹಿಮೆಗೇರಿಸಲು ಯಾವುದೇ ರೀತಿಯಲ್ಲಿ ಈ ಹಿಂದೆ ತಪ್ಪಿಹೋಗಿರುವುದಕ್ಕಾಗಿ ಪಶ್ಚಾತ್ತಾಪ ಪಟ್ಟರು.—ಕೀರ್ತನೆ 106:6, 47, 48.

“ಜಯಹೊಂದುವವನಿಗೆ”

13. (ಎ) ಅವರು ‘ಜಯಹೊಂದುವುದಾದರೆ’ ಎಫೆಸದವರಿಗೆ ಯಾವ ಆಶೀರ್ವಾದ ಕಾದಿತ್ತು? (ಬಿ) ಎಫೆಸದ ಕ್ರೈಸ್ತರು ಹೇಗೆ ‘ಜಯಹೊಂದ’ ಬಹುದಿತ್ತು?

13 ಬೇರೆ ಸಂದೇಶಗಳಲ್ಲಿ ಯೇಸು ಮಾಡಿರುವಂತೆಯೇ, ನಂಬಿಗಸ್ತಿಕೆಗಾಗಿ ಬಹುಮಾನಗಳನ್ನು ದೇವರಾತ್ಮವು ತನ್ನ ಮೂಲಕ ತಿಳಿಯ ಪಡಿಸುತ್ತಿರುವಂತೆ ಯೇಸುವು ಕೊನೆಯಲ್ಲಿ ಗಮನವನ್ನು ಸೆಳೆಯುತ್ತಾನೆ. ಎಫೆಸದವರಿಗೆ ಅವನು ಹೇಳುವುದು: “ಆತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ: ಜಯಹೊಂದುವವನಿಗೆ ನಾನು ದೇವರ ಪರದೈಸಿನಲ್ಲಿರುವ ಜೀವವೃಕ್ಷದಿಂದ ತಿನ್ನುವುದಕ್ಕೆ ಕೊಡುವೆನು.” (ಪ್ರಕಟನೆ 2:7, NW) ಆಲಿಸುವ ಕಿವಿಯುಳ್ಳವರು, ಇದು ಯೇಸುವಿನಿಂದ ಆರಂಭಗೊಂಡಿಲ್ಲ, ಸಾರ್ವಭೌಮ ಕರ್ತನಾದ ಯೆಹೋವನಿಂದಲೇ, ಆತನ ಪವಿತ್ರಾತ್ಮ ಇಲ್ಲವೆ ಕ್ರಿಯಾಶೀಲ ಶಕ್ತಿಯಿಂದ ಹರಿದು ಬಂತೆಂದು ತಿಳಿದು ಆ ಜೀವಾವಶ್ಯಕ ಸಂದೇಶಕ್ಕೆ ಕಿವಿಗೊಡಲು ಉತ್ಸುಕರಾಗುವರು. ಅವರು ‘ಜಯಹೊಂದುವುದು’ ಹೇಗೆ? ಯಾರು ಮರಣದ ತನಕ ಸಮಗ್ರತೆಯನ್ನು ಕಾಪಾಡಿಕೊಂಡ ಕಾರಣ, “ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಶಕ್ತನಾಗಿದ್ದನೋ ಆ ಯೇಸುವಿನ ಹೆಜ್ಜೇಜಾಡನ್ನು ಒತ್ತಾಗಿ ಅನುಸರಿಸುವ ಮೂಲಕವೇ.—ಯೋಹಾನ 8:28; 16:33; ಇದನ್ನೂ ನೋಡಿರಿ 1 ಯೋಹಾನ 5:4.

14. ಯೇಸುವಿನಿಂದ ಹೇಳಲ್ಪಟ್ಟ “ದೇವರ ಪರದೈಸ” ಯಾವುದನ್ನು ಸೂಚಿಸಬೇಕು?

14 ಐಹಿಕ ಪರದೈಸಿನಲ್ಲಿ ಜೀವಿಸುವ ಪ್ರತೀಕ್ಷೆಯು ಅವರಿಗೆ ಇಲ್ಲದಿರುವುದರಿಂದ, ಎಫೆಸದವರಂತಹ ಅಭಿಷಿಕ್ತ ಕ್ರೈಸ್ತರು, “ದೇವರ ಪರದೈಸಿನಲ್ಲಿರುವ ಜೀವವೃಕ್ಷದಿಂದ” ತಿನ್ನುವ ಬಹುಮಾನ ಪಡೆಯುವುದು ಹೇಗೆ? ಇದು ಭೂಮಿಯ ಮೇಲೆ ಪುನಃ ಸ್ಥಾಪಿತವಾದ ಪ್ರಮೋದವನವಾಗಿರಲು ಸಾಧ್ಯವಿಲ್ಲ, ಯಾಕಂದರೆ ಎಫೆಸ ಸಭೆಯಲ್ಲಿರುವವರ ಸಹಿತ 1,44,000 ಮಂದಿ ಅಭಿಷಿಕ್ತ ಕ್ರೈಸ್ತರು ಕುರಿಮರಿಯಾದ ಕ್ರಿಸ್ತ ಯೇಸುವಿನೊಂದಿಗೆ ಸ್ವರ್ಗೀಯ ಚೀಯೋನಿನ ಮೇಲೆ ಆತ್ಮ ಪುತ್ರರುಗಳಾಗಿ ಆಳಲು ಮಾನವ ಕುಲದಿಂದ ಖರೀದಿಸಲ್ಪಟ್ಟಿರುತ್ತಾರೆ. (ಎಫೆಸ 1:5-12; ಪ್ರಕಟನೆ 14:1, 4) ಆದಕಾರಣ, ಈ ಜಯಹೊಂದುವವರಿಂದ ಬಾಧ್ಯತೆಯಾಗಿ ಪಡೆಯಲಾದ ಉದ್ಯಾನದಂತಹ ಸ್ವರ್ಗೀಯ ಕ್ಷೇತ್ರವನ್ನು ಇಲ್ಲಿ ಸೂಚಿಸಿರಬೇಕು. ಅಲ್ಲಿ, “ದೇವರ ಪರದೈಸಿನ”, ಹೌದು, ಸ್ವತಃ ಯೆಹೋವನ ಸಮ್ಮುಖದಲ್ಲಿಯೇ, ಇಲ್ಲಿ ಜೀವವೃಕ್ಷದಿಂದ ಅವರ ತಿನ್ನುವಿಕೆಯಿಂದ ಸಾಂಕೇತಿಸಲ್ಪಟ್ಟಂತೆ, ಸದಾಕಾಲ ಜೀವಿಸುವುದನ್ನು ಮುಂದುವರಿಸಲು ಅಮರತ್ವವನ್ನು ಈ ಜಯಶಾಲಿಗಳಿಗೆ ಕೊಡಲಾಗುವುದು.

15. ಜಯಗಳಿಸಲು ಯೇಸುವು ಕೊಟ್ಟ ಪ್ರೋತ್ಸಾಹವು ಇಂದು ಮಹಾ ಸಮೂಹದವರಿಗೆ ಏಕೆ ಮಹತ್ವದ ಆಸಕ್ತಿಯದ್ದಾಗಿದೆ?

15 ಹಾಗಿರುವುದಾದರೆ, 1,44,000 ಅಭಿಷಿಕ್ತರ ನಿಷ್ಠ ಐಹಿಕ ಬೆಂಬಲಿಗರ ಕುರಿತಾಗಿ ಏನು? ಈ ಸಂಗಾತಿ ಸಾಕ್ಷಿಗಳ ಒಂದು ಮಹಾ ಸಮೂಹವು ಕೂಡ ಜಯಶಾಲಿಯಾಗುತ್ತದೆ. ಆದರೆ ಅವರ ನಿರೀಕ್ಷೆಯು ಒಂದು ಐಹಿಕ ಪ್ರಮೋದವನದಲ್ಲಿ ಪ್ರವೇಶಿಸುವುದರ ಮೇಲೆ ಆತುಕೊಂಡಿದೆ, ಅಲ್ಲಿ ಅವರು “ಜೀವಜಲದ ನದಿ”ಯಿಂದ ಕುಡಿಯುವರು ಮತ್ತು ಆ ನದಿಯ ಪಕ್ಕಗಳಲ್ಲಿ ನೆಡಲ್ಪಟ್ಟ “ಮರಗಳ ಎಲೆಗಳಿಂದ” ರೋಗವಾಸಿಯನ್ನು ಪಡೆಯುವರು. (ಪ್ರಕಟನೆ 7:4, 9, 17; 22:1, 2) ಈ ಗುಂಪಿನಲ್ಲಿ ನೀವೊಬ್ಬರಾಗಿರುವುದಾದರೆ, ಯೆಹೋವನಿಗಾಗಿ ನಿಮ್ಮ ಉತ್ಸಾಹದ ಪ್ರೀತಿಯನ್ನು ನೀವು ಕೂಡ ವ್ಯಕ್ತಪಡಿಸಬಹುದು ಮತ್ತು ನಂಬಿಕೆಯ ಈ ವಿಜಯದಲ್ಲಿ ನೀವು ಜಯಗಳಿಸಬಹುದು. ಈ ರೀತಿಯಲ್ಲಿ ಪ್ರಮೋದವನವಾದ ಭೂಮಿಯಲ್ಲಿ ನಿತ್ಯ ಜೀವದ ಆನಂದವು ನಿಮಗೆ ಲಭ್ಯವಾಗಬಹುದು.—ಹೋಲಿಸಿರಿ 1 ಯೋಹಾನ 2:13, 14.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 4 ಸುಳ್ಳು ಅಪೊಸ್ತಲರ ಕಾಣಿಸಿಕೊಳ್ಳುವಿಕೆಯ ಕುರಿತಾಗಿ ಐತಿಹಾಸಿಕ ವಿವರಣೆಗಳಿಗಾಗಿ, ಈ ಪುಸ್ತಕದ ಪ್ರಕಾಶಕರೊಡನೆ ದೊರೆಯುವ ರೀಸನಿಂಗ್‌ ಫ್ರಾಮ್‌ ದ ಸ್ಕ್ರಿಪ್ಚರ್ಸ್‌ ಕೈಪಿಡಿಯ ಪುಟ 37-44ನ್ನು ನೋಡಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 47 ರಲ್ಲಿರುವ ಚೌಕ]

ಯೆಹೋವನಿಗೆ ಮತ್ತು ಅವನ ಪುತ್ರನಿಗೆ ಪ್ರೀತಿಯ ಸ್ತುತಿ

ಯೆಹೋವನ ಜನರಿಂದ 1908 ರಲ್ಲಿ ಉತ್ಪಾದಿಸಲ್ಪಟ್ಟ ಸಂಗೀತ ಪುಸ್ತಕದಲ್ಲಿ, ಯೆಹೋವ ದೇವರನ್ನು ಸ್ತುತಿಸುವಂತಹ ಸಂಗೀತಗಳ ಇಮ್ಮಡಿ ಯೇಸುವನ್ನು ಹೊಗಳುವ ಸಂಗೀತಗಳು ಇದ್ದವು. ಅವರ 1928ರ ಸಂಗೀತ ಪುಸ್ತಕದಲ್ಲಿ ಯೆಹೋವನ ಗುಣಗಾನ ಮಾಡುವಷ್ಟೇ ಸಂಖ್ಯೆಯ ಸಂಗೀತಗಳು ಯೇಸುವಿನ ಗುಣಗಾನಕ್ಕಾಗಿ ಇದ್ದವು. ಆದರೆ ಇತ್ತೀಚೆಗಿನ 1984ರ ಸಂಗೀತ ಪುಸ್ತಕದಲ್ಲಿ, ಯೇಸುವನ್ನು ಗೌರವಿಸುವುದಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಸಂಗೀತಗಳು ಯೆಹೋವನಿಗಾಗಿ ಇವೆ. ಇದು ಸ್ವತಃ ಯೇಸುವಿನ ಮಾತುಗಳಿಗನುಸಾರವಾಗಿ ಅದೆ: “ನನ್ನ ತಂದೆಯು ನನಗಿಂತ ದೊಡ್ಡವನು.” (ಯೋಹಾನ 14:28) ಯೆಹೋವನ ಕಡೆಗಿನ ಪ್ರೀತಿಯು ಅಗ್ರಸ್ಥಾನದಲ್ಲಿರಬೇಕು, ಅದರೊಟ್ಟಿಗೆ ಯೇಸುವಿನ ಕಡೆಗೆ ಆಳವಾದ ಪ್ರೀತಿ ಮತ್ತು ದೇವರ ಮಹಾ ಯಾಜಕನು ಮತ್ತು ರಾಜನೋಪಾದಿ ಅವನ ಅಮೂಲ್ಯವಾದ ಯಜ್ಞ ಮತ್ತು ಹುದ್ದೆಗಾಗಿ ಗಣ್ಯತೆಯಿರಬೇಕಾಗಿದೆ.

[ಪುಟ 45 ರಲ್ಲಿರುವ ಚಿತ್ರ]

ಯೇಸುವಿನ ಬುದ್ಧಿವಾದದ ನಮೂನೆ

(ಪ್ರಕಟನೆಯ ಅಧ್ಯಾಯಗಳು ಮತ್ತು ವಚನಗಳನ್ನು ಉದಾಹರಿಸುವುದು)

ಸಭೆಗೆ ಸಂದೇಶ ಬುದ್ಧಿವಾದವನ್ನು ಆರಂಭಿಕ ಶ್ಲಾಘನೆ

ಕೊಡಲು ಅಧಿಕಾರ

ಸಮಸ್ಯೆ ಸ್ಪಷ್ಟವಾಗಿ

ಗುರುತಿಸಲ್ಪಡುವುದು

ತಿದ್ದುಪಾಟು ಮತ್ತು⁄ಯಾ

ಪ್ರೋತ್ಸಾಹ ಫಲಿಸುವ ಆಶೀರ್ವಾದಗಳು

ಎಫೆಸ 2:1 2:2, 3 2:4 2:5, 6 2:7

ಸ್ಮುರ್ನ 2:8 2:9 — 2:10 2:11

ಪೆರ್ಗಮಮ್‌ 2:12 2:13 2:14, 15 2:16 2:17

ಥುವತೈರ 2:18 2:19 2:20, 21 2:24, 25 2:26-28

ಸಾರ್ದಿಸ್‌ 3:1 — 3:1, 2 3:3, 4 3:5

ಫಿಲದೆಲ್ಫಿಯ 3:7 3:8 — 3:8-11 3:12

ಲವೊದಿಕೀಯ 3:14 — 3:15-17 3:18-20 3:21