ಬೈಬಲ್‌ ಕಥೆಗಳ ನನ್ನ ಪುಸ್ತಕ

116 ಬೈಬಲ್‌ ಕಥೆಗಳನ್ನು ಓದಿ ಆನಂದಿಸಿ. ಅವು ನಿಷ್ಕೃಷ್ಟವಾಗಿವೆ, ಸುಲಭವಾಗಿ ಅರ್ಥವಾಗುತ್ತವೆ, ಸುಂದರ ಚಿತ್ರಗಳಿವೆ.

ಪೀಠಿಕೆ

ವಿಶ್ವದಲ್ಲೇ ಮಹಾನ್‌ ಪುಸ್ತಕವಾದ ಬೈಬಲಿನಲ್ಲಿರುವ ನಿಜವಾದ ಘಟನೆಗಳು, ಸೃಷ್ಟಿಯಿಂದ ಆರಂಭಿಸಿ ವಿಶ್ವದ ಇತಿಹಾಸ.

ಕಥೆ 1

ದೇವರು ಸೃಷ್ಟಿಮಾಡಲು ಆರಂಭಿಸುತ್ತಾನೆ

ಆದಿಕಾಂಡದಲ್ಲಿರುವ ಸೃಷ್ಟಿಯ ಕಥೆಯು ಸುಲಭವಾಗಿ ಅರ್ಥವಾಗುತ್ತದೆ ಮತ್ತು ಓದುವಾಗ ವಿಸ್ಮಯವಾಗುತ್ತದೆ. ಮಕ್ಕಳಿಗೂ ಸಹ.

ಕಥೆ 2

ಒಂದು ಸುಂದರ ತೋಟ

ಆದಿಕಾಂಡ ಪುಸ್ತಕದಲ್ಲಿ ಹೇಳಿರುವಂತೆ ದೇವರು ಒಂದು ವಿಶೇಷ ಸುಂದರ ಸ್ಥಳವನ್ನು ಮಾಡಿ ಅದಕ್ಕೆ ಏದೆನ್‌ ಎಂದು ಹೆಸರು ಕೊಟ್ಟನು. ಆ ಸುಂದರ ತೋಟದಂತೆಯೇ ಇಡೀ ಭೂಮಿ ಆಗಬೇಕೆಂಬುದು ದೇವರ ಇಚ್ಛೆ.

ಕಥೆ 3

ಮೊದಲನೆಯ ಪುರುಷ ಮತ್ತು ಸ್ತ್ರೀ

ದೇವರು ಆದಾಮ ಹವ್ವರನ್ನು ಸೃಷ್ಟಿಸಿ ಏದೆನ್‌ ತೋಟದಲ್ಲಿ ಇಟ್ಟನು. ಅವರೇ ಮೊದಲ ಪತಿಪತ್ನಿ.

ಕಥೆ 4

ಅವರು ತಮ್ಮ ಬೀಡನ್ನು ಕಳೆದುಕೊಂಡದ್ದಕ್ಕೆ ಕಾರಣ

ಆರಂಭದಲ್ಲಿದ್ದ ಪರದೈಸನ್ನು ಮನುಷ್ಯರು ಏಕೆ ಕಳೆದುಕೊಂಡರೆಂದು ಬೈಬಲಿನ ಆದಿಕಾಂಡ ಪುಸ್ತಕ ತಿಳಿಸುತ್ತದೆ.

ಕಥೆ 5

ಕಷ್ಟದ ಜೀವನ ಆರಂಭ

ಏದೆನ್‌ ತೋಟದ ಹೊರಗೆ ಆದಾಮ ಹವ್ವರಿಗೆ ಅನೇಕ ಸಮಸ್ಯೆಗಳಿದ್ದವು. ಒಂದುವೇಳೆ ಅವರು ದೇವರ ಮಾತನ್ನು ಕೇಳಿದ್ದರೆ ಅವರ ಹಾಗೂ ಅವರ ಮಕ್ಕಳ ಜೀವನ ಆನಂದದಿಂದ ತುಂಬಿರುತ್ತಿತ್ತು.

ಕಥೆ 6

ಒಳ್ಳೆಯ ಮಗ ಮತ್ತು ಕೆಟ್ಟ ಮಗ

ನಾವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಮತ್ತು ನಮ್ಮಲ್ಲಿರುವ ಯಾವ ಮನೋಭಾವಗಳನ್ನು ಕೂಡಲೇ ಬದಲಾಯಿಸಿಕೊಳ್ಳಬೇಕೆಂದು ಆದಿಕಾಂಡದಲ್ಲಿರುವ ಕಾಯಿನ ಮತ್ತು ಹೇಬೆಲನ ಕಥೆಯು ಕಲಿಸುತ್ತದೆ.

ಕಥೆ 7

ಒಬ್ಬ ಧೀರ ಪುರುಷ

ನಮ್ಮ ಸುತ್ತಲಿರುವ ಎಲ್ಲ ಜನರು ಕೆಟ್ಟದ್ದನ್ನೇ ಮಾಡಿದರೂ ನಾವು ಒಳ್ಳೇದನ್ನು ಮಾಡಲು ಸಾಧ್ಯ ಎಂದು ಹನೋಕದ ಮಾದರಿಯಿಂದ ತಿಳಿಯುತ್ತದೆ.

ಕಥೆ 8

ಭೂಮಿಯಲ್ಲಿ ಮಹಾಶರೀರಿಗಳು

ಆದಿಕಾಂಡ 6 ನೇ ಅಧ್ಯಾಯದಲ್ಲಿ ದೈತ್ಯರ ಬಗ್ಗೆ ಹೇಳಲಾಗಿದೆ. ಅವರು ಜನರಿಗೆ ತುಂಬ ತೊಂದರೆ ಕೊಡುತ್ತಿದ್ದರು. ಅವರನ್ನು ನೆಫೀಲಿಯರೆಂದು ಕರೆಯಲಾಗುತ್ತಿತ್ತು. ಸ್ವರ್ಗವನ್ನು ಬಿಟ್ಟುಬಂದು ಮನುಷ್ಯರಾಗಿ ಜೀವಿಸಿದ್ದ ದೇವದೂತರು ಮಕ್ಕಳಿವರು.

ಕಥೆ 9

ನೋಹನು ಒಂದು ನಾವೆಯನ್ನು ಕಟ್ಟುತ್ತಾನೆ

ಬೇರೆ ಜನರು ದೇವರ ಮಾತನ್ನು ಕೇಳದಿದ್ದರೂ ನೋಹ ಮತ್ತು ಅವನ ಕುಟುಂಬ ದೇವರ ಮಾತನ್ನು ಕೇಳಿದರು. ಇದರಿಂದಾಗಿ ಜಲಪ್ರಳಯದಿಂದ ಪಾರಾದರು.

ಕಥೆ 10

ಮಹಾ ಜಲಪ್ರಳಯ

ನೋಹನು ಎಚ್ಚರಿಸಿದಾಗ ಜನರು ನಗಾಡಿದರು. ಆದರೆ ಆಕಾಶದಿಂದ ಮಳೆ ಸುರಿಯಲು ಆರಂಭವಾದಾಗ ಅವರ ನಗು ನಿಂತಿತು. ನೋಹ, ನೋಹನ ಕುಟುಂಬ, ಅನೇಕಾನೇಕ ಪ್ರಾಣಿಗಳು ನಾವೆಯಲ್ಲಿದ್ದು ಹೇಗೆ ಪಾರಾದರು ಎಂದು ತಿಳಿಯಿರಿ.

ಕಥೆ 11

ಮೊದಲ ಮುಗಿಲುಬಿಲ್ಲು

ಮಳೆಬಿಲ್ಲನ್ನು ನೋಡಿದಾಗ ನಿಮಗೆ ಏನು ನೆನಪಾಗಬೇಕು?

ಕಥೆ 12

ಮನುಷ್ಯರು ಒಂದು ದೊಡ್ಡ ಬುರುಜನ್ನು ಕಟ್ಟುತ್ತಾರೆ

ದೇವರಿಗೆ ಇದು ಇಷ್ಟವಾಗಲಿಲ್ಲ, ಆ ಜನರಿಗೆ ಕೊಟ್ಟ ಶಿಕ್ಷೆಯ ಪರಿಣಾಮ ಇಂದಿನವರೆಗೂ ಇದೆ.

ಕಥೆ 13

ಅಬ್ರಹಾಮ—ದೇವರ ಸ್ನೇಹಿತ

ಅಬ್ರಹಾಮನು ಸುಖ-ಸೌಕರ್ಯಗಳಿದ್ದ ತನ್ನ ಮನೆಯನ್ನು ಬಿಟ್ಟುಬಂದು ಉಳಿದ ಜೀವಮಾನವೆಲ್ಲ ಡೇರೆಗಳಲ್ಲಿ ವಾಸ ಮಾಡಿದ್ದೇಕೆ?

ಕಥೆ 14

ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ

ದೇವರು ಅಬ್ರಹಾಮವಿಗೆ ಇಸಾಕನನ್ನು ಯಜ್ಞ ಅರ್ಪಿಸಲು ಕೇಳಿದ್ದು ಯಾಕೆ?

ಕಥೆ 15

ಲೋಟನ ಪತ್ನಿ ಹಿಂದೆ ನೋಡಿದಳು

ಆಕೆ ಏನು ಮಾಡಿದಳೋ ಅದು ನಮಗೆ ಪ್ರಾಮುಖ್ಯ ಪಾಠ ಕಲಿಸುತ್ತದೆ.

ಕಥೆ 16

ಇಸಾಕನು ಒಳ್ಳೆಯ ಪತ್ನಿಯನ್ನು ಪಡೆಯುತ್ತಾನೆ

ರೆಬೆಕ್ಕಳನ್ನು ಒಳ್ಳೇ ಪತ್ನಿ ಎಂದು ಏಕೆ ಹೇಳಲಾಗಿದೆ? ಅವಳ ಸೌಂದರ್ಯಕ್ಕಾಗಿಯಾ, ಅಥವಾ ಬೇರೆ ಯಾವುದೋ ಕಾರಣಕ್ಕಾಗಿಯೋ

ಕಥೆ 17

ಭಿನ್ನರಾಗಿದ್ದ ಅವಳಿಗಳು

ಅವರ ತಂದೆ, ಇಸಾಕ, ಏಸಾವನನ್ನು ಹೆಚ್ಚು ಪ್ರೀತಿಸಿದನು, ಆದರೆ ಅವರ ತಾಯಿ, ರೆಬೆಕ್ಕ, ಯಾಕೋಬನನ್ನು ಹೆಚ್ಚು ಪ್ರೀತಿಸಿದಳು.

ಕಥೆ 18

ಯಾಕೋಬನು ಖಾರಾನಿಗೆ ಹೋಗುತ್ತಾನೆ

ಯಾಕೋಬನು ರಾಹೇಲಳನ್ನು ಪ್ರೀತಿಸಿದನಾದರೂ ಮೊದಲು ಲೇಯಳನ್ನು ಮದುವೆಯಾಗುತ್ತಾನೆ.

ಕಥೆ 19

ಯಾಕೋಬನಿಗೆ ಒಂದು ದೊಡ್ಡ ಕುಟುಂಬವಿದೆ

ಯಾಕೋಬನ 12 ಮಂದಿ ಗಂಡುಮಕ್ಕಳ ಹೆಸರೇ ಆ ಜನಾಂಗದ 12 ಕುಲಗಳಿಗೆ ಬಂತಾ?

ಕಥೆ 20

ದೀನಳು ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಾಳೆ

ಎಲ್ಲದಕ್ಕೂ ಕೆಟ್ಟವರ ಸ್ನೇಹ ಮಾಡಿದ್ದೇ ಕಾರಣ.

ಕಥೆ 21

ಯೋಸೇಫನ ಅಣ್ಣಂದಿರು ಅವನನ್ನು ದ್ವೇಷಿಸುತ್ತಾರೆ

ಕೆಲವರು ತಮ್ಮ ಸ್ವಂತ ಸಹೋದರನನ್ನೇ ಕೊಲ್ಲುವ ಮಟ್ಟಿಗೆ ಹೋಗಲು ಯಾವುದು ಕಾರಣವಾಗಿರುತ್ತದೆ?

ಕಥೆ 22

ಯೋಸೇಫನನ್ನು ಸೆರೆಮನೆಗೆ ಹಾಕುತ್ತಾರೆ

ಅವನು ಅಲ್ಲಿರುವುದು ಕಾನೂನನ್ನು ಮೀರಿದ್ದಕ್ಕಲ್ಲ, ಸರಿಯಾದದ್ದನ್ನು ಮಾಡಿದ್ದಕ್ಕಾಗಿ.

ಕಥೆ 23

ಫರೋಹನ ಕನಸುಗಳು

ಏಳು ಹಸುಗಳು ಮತ್ತು ಏಳು ತೆನೆಗಳ ವಿಷಯದಲ್ಲಿ ಯಾವುದೋ ಒಂದು ಸಮಾನ ಅಂಶವಿದೆ.

ಕಥೆ 24

ಯೋಸೇಫನು ತನ್ನ ಅಣ್ಣಂದಿರನ್ನು ಪರೀಕ್ಷಿಸುತ್ತಾನೆ

ತನ್ನನ್ನು ದಾಸನಾಗಿ ಮಾರಿದ ಅಣ್ಣಂದಿರು ಈಗ ಬದಲಾಗಿದ್ದಾರಾ ಇಲ್ಲವಾ ಎಂದು ಯೋಸೇಫನು ತಿಳಿದುಕೊಳ್ಳುವುದು ಹೇಗೆ?

ಕಥೆ 25

ಇಡೀ ಕುಟುಂಬವು ಐಗುಪ್ತಕ್ಕೆ ಸ್ಥಳಾಂತರಿಸುತ್ತದೆ

ಯಾಕೋಬನ ಕುಟುಂಬವನ್ನು ಯಾಕೋಬ್ಯರು ಎಂದು ಕರೆಯದೆ ಇಸ್ರಾಯೇಲ್ಯರು ಎಂದು ಕರೆಯುವುದೇಕೆ?

ಕಥೆ 26

ಯೋಬನು ದೇವರಿಗೆ ನಂಬಿಗಸ್ತನಾಗಿರುತ್ತಾನೆ

ಯೋಬನು ತನ್ನ ಸಂಪತ್ತು, ಆರೋಗ್ಯ, ಎಲ್ಲ ಮಕ್ಕಳನ್ನು ಕಳೆದುಕೊಳ್ಳುತ್ತಾನೆ. ದೇವರು ಈ ರೀತಿ ಯೋಬನಿಗೆ ಶಿಕ್ಷೆ ಕೊಡುತ್ತಿದ್ದನಾ?

ಕಥೆ 27

ಒಬ್ಬ ಕೆಟ್ಟ ಅರಸನು ಐಗುಪ್ತವನ್ನು ಆಳುತ್ತಾನೆ

ಅವನು ತನ್ನ ಜನರಿಗೆ ಇಸ್ರಾಯೇಲ್ಯರ ಎಲ್ಲ ಗಂಡು ಕೂಸುಗಳನ್ನು ಕೊಲ್ಲುವಂತೆ ಹೇಳಿದ್ದೇಕೆ?

ಕಥೆ 28

ಪುಟಾಣಿ ಮೋಶೆ ಸಂರಕ್ಷಿಸಲ್ಪಟ್ಟ ವಿಧ

ಇಸ್ರಾಯೇಲ್ಯರ ಎಲ್ಲ ಗುಂಡು ಕೂಸುಗಳನ್ನು ಕೊಲ್ಲಬೇಕೆಂಬ ಆಜ್ಞೆ ಮೋಶೆಯ ತಾಯಿಗೆ ಗೊತ್ತಿತ್ತು. ಮೋಶೆಯನ್ನು ಅದರಿಂದ ರಕ್ಷಿಸಲು ಆಕೆ ಒಂದು ಉಪಾಯ ಮಾಡುತ್ತಾಳೆ.

ಕಥೆ 29

ಮೋಶೆ ಓಡಿಹೋಗಲು ಕಾರಣ

ಮೋಶೆ 40 ವರ್ಷದವನಾದಾಗ ತಾನು ಇಸ್ರಾಯೇಲ್ಯರನ್ನು ಈಜಿಪ್ಟಿನಿಂದ ಬಿಡಿಸಲು ಸಿದ್ಧನಾಗಿದ್ದೇನೆಂದು ನೆನಸಿದನು, ಆದರೆ ಅವನು ನಿಜವಾಗಿಯೂ ಸಿದ್ಧನಾಗಿರಲಿಲ್ಲ.

ಕಥೆ 30

ಉರಿಯುತ್ತಿರುವ ಪೊದೆ

ಅನೇಕ ಅದ್ಭುತಗಳನ್ನು ತೋರಿಸಿ ದೇವರು ಮೋಶೆಗೆ, ಇಸ್ರಾಯೇಲ್ಯರನ್ನು ಈಜಿಪ್ಟಿನಿಂದ ಬಿಡಿಸಿ ತರುವ ಸಮಯ ಬಂದಿದೆಯೆಂದು ಹೇಳುತ್ತಾನೆ.

ಕಥೆ 31

ಮೋಶೆ-ಆರೋನರು ಫರೋಹನನ್ನು ಭೇಟಿಯಾಗುತ್ತಾರೆ

ಫರೋಹನು ಮೋಶೆಯ ಮಾತಿಗೆ ಯಾಕೆ ಕಿವಿಗೊಡುವುದಿಲ್ಲ? ಯಾಕೆ ಇಸ್ರಾಯೇಲ್ಯರನ್ನು ಕಳುಹಿಸುವುದಿಲ್ಲ?

ಕಥೆ 32

ಹತ್ತು ಬಾಧೆಗಳು

ಈಜಿಪ್ಟಿನ ಅರಸ ಫರೋಹನು ಹಠಮಾರಿತನದಿಂದ ಇಸ್ರಾಯೇಲ್ಯರನ್ನು ಕಳುಹಿಸಿ ಕೊಡದ ಕಾರಣದಿಂದಲೇ ದೇವರು ಈಜಿಪ್ಟಿನ ಮೇಲೆ 10 ವಿಪತ್ತುಗಳನ್ನು ತಂದನು.

ಕಥೆ 33

ಕೆಂಪು ಸಮುದ್ರವನ್ನು ದಾಟುವುದು

ಮೋಶೆಯು ದೇವರ ಶಕ್ತಿಯಿಂದ ಕೆಂಪು ಸಮುದ್ರವನ್ನು ಇಬ್ಭಾಗ ಮಾಡುತ್ತಾನೆ. ಇಸ್ರಾಯೇಲ್ಯರು ಒಣನೆಲದಲ್ಲಿ ನಡೆದು ಸಮುದ್ರವನ್ನು ದಾಟುತ್ತಾರೆ.

ಕಥೆ 34

ಹೊಸ ವಿಧದ ಆಹಾರ

ದೇವರು ಕೊಟ್ಟ ಈ ವಿಶೇಷ ಆಹಾರ ಆಕಾಶದಿಂದ ಬೀಳುತ್ತಿತ್ತು.

ಕಥೆ 35

ಯೆಹೋವನು ನಿಯಮಗಳನ್ನು ಕೊಡುತ್ತಾನೆ

ದಶಾಜ್ಞೆಗಳಿಗಿಂತ ಪ್ರಾಮುಖ್ಯವಾಗಿರುವ ಎರಡು ನಿಯಮಗಳು ಯಾವುವು?

ಕಥೆ 36

ಚಿನ್ನದ ಬಸವ

ಜನರು ಯಾಕೆ ತಮ್ಮ ಕಿವಿಯೋಲೆಗಳನ್ನು ಕರಗಿಸಿ ಮಾಡಿದ ಮೂರ್ತಿಯನ್ನು ಆರಾಧಿಸುತ್ತಾರೆ?

ಕಥೆ 37

ಆರಾಧನೆಗಾಗಿ ಒಂದು ಡೇರೆ

ಅದರ ಚಿಕ್ಕ ಕೋಣೆಯಲ್ಲಿ ಒಡಂಬಡಿಕೆಯ ಮಂಜೂಷವಿದೆ.

ಕಥೆ 38

ಹನ್ನೆರಡು ಗೂಢಚಾರರು

10 ಮಂದಿ ಒಂದು ರೀತಿಯಾಗಿ ವರದಿ ಹೇಳಿದರೆ, ಉಳಿದ ಇಬ್ಬರು ಮಂದಿ ಬೇರೆ ರೀತಿಯಾಗಿ ಹೇಳುತ್ತಾರೆ. ಯಾರ ವರದಿಯನ್ನು ಇಸ್ರಾಯೇಲ್ಯರು ನಂಬುತ್ತಾರೆ?

ಕಥೆ 39

ಆರೋನನ ಕೋಲು ಹೂಬಿಡುತ್ತದೆ

ರಾತ್ರಿ ಬೆಳಗಾಗುವುದರೊಳಗೆ ಜೀವವಿಲ್ಲದ ಮರದ ತುಂಡಿನಲ್ಲಿ ಹೂವು ಅರಳಿ ಹಣ್ಣುಗಳು ಹೇಗೆ ಬೆಳೆದವು?

ಕಥೆ 40

ಮೋಶೆ ಬಂಡೆಯನ್ನು ಹೊಡೆಯುತ್ತಾನೆ

ಮೋಶೆ ಬಂಡೆಗೆ ಬಡಿದಾಗ ನೀರು ಬಂತು, ಆದರೆ ಅದೇ ಸಮಯದಲ್ಲಿ ಯೆಹೋವನಿಗೆ ಮೋಶೆಯ ಮೇಲೆ ಸಿಟ್ಟುಬಂತು.

ಕಥೆ 41

ತಾಮ್ರದ ಸರ್ಪ

ಇಸ್ರಾಯೇಲ್ಯರಿಗೆ ಕಚ್ಚುವಂತೆ ಹಾವುಗಳನ್ನು ದೇವರು ಕಳುಹಿಸಿದ್ದೇಕೆ?

ಕಥೆ 42

ಕತ್ತೆ ಮಾತಾಡುತ್ತದೆ

ಕತ್ತೆಗೆ ಏನೋ ಕಾಣಿಸುತ್ತದೆ, ಆದರೆ ಅದು ಬಿಳಾಮನಿಗೆ ಕಾಣಿಸುವುದಿಲ್ಲ.

ಕಥೆ 43

ಯೆಹೋಶುವನು ನಾಯಕನಾಗುತ್ತಾನೆ

ಮೋಶೆಯು ಇನ್ನೂ ಸುದೃಢನಾಗಿದ್ದಾನೆ, ಹಾಗಿದ್ದ ಮೇಲೆ ಯಾಕೆ ಯೆಹೋಶುವನನ್ನು ಮೋಶೆಗೆ ಬದಲಾಗಿ ನಾಯಕನಾಗಿ ನೇಮಿಸಲಾಯಿತು?

ಕಥೆ 44

ರಾಹಾಬಳು ಗೂಢಚಾರರನ್ನು ಅಡಗಿಸಿಡುತ್ತಾಳೆ

ರಾಹಾಬಳು ಇಬ್ಬರು ಪುರುಷರಿಗೆ ಹೇಗೆ ಸಹಾಯ ಮಾಡುತ್ತಾಳೆ? ಅವರಿಂದ ಅವಳು ಯಾವ ಸಹಾಯ ಕೇಳುತ್ತಾಳೆ?

ಕಥೆ 45

ಯೊರ್ದನ್‌ ಹೊಳೆಯನ್ನು ದಾಟುವುದು

ಯಾಜಕರು ನೀರಿನಲ್ಲಿ ಕಾಲಿಟ್ಟ ಕೂಡಲೇ ಒಂದು ಅದ್ಭುತ ನಡೆಯುತ್ತದೆ.

ಕಥೆ 46

ಯೆರಿಕೋವಿನ ಗೋಡೆಗಳು

ಒಂದು ಕೆಂಪು ದಾರದಿಂದಾಗಿ ಹೇಗೆ ಗೋಡೆ ಸ್ಥಿರವಾಗಿ ನಿಲ್ಲುತ್ತದೆ?

ಕಥೆ 47

ಇಸ್ರಾಯೇಲಿನಲ್ಲಿ ಒಬ್ಬ ಕಳ್ಳ

ಒಬ್ಬ ಕೆಟ್ಟ ಮನುಷ್ಯನಿಂದ ಇಡೀ ಜನಾಂಗಕ್ಕೆ ಆಪತ್ತನ್ನು ಬರಬಲ್ಲದೇ?

ಕಥೆ 48

ವಿವೇಕಿಗಳಾದ ಗಿಬ್ಯೋನ್ಯರು

ಅವರು ಉಪಾಯಮಾಡಿ ಯೆಹೋಶುವನು ಮತ್ತು ಇಸ್ರಾಯೇಲ್ಯರು ತಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಮಾಡುತ್ತಾರೆ. ಇಸ್ರಾಯೇಲ್ಯರು ತಮ್ಮ ಮಾತನಂತೆ ನಡೆಯುತ್ತಾರೆ.

ಕಥೆ 49

ಸೂರ್ಯನು ಕದಲದೆ ನಿಲ್ಲುತ್ತಾನೆ

ದೇವರು ಯೆಹೋಶುವನಿಗಾಗಿ ಒಂದು ಅದ್ಭುತ ಮಾಡುತ್ತಾನೆ. ಹಿಂದೆಂದೂ ಮಾಡಿರದ, ಅದರ ನಂತರವೂ ಮಾಡಿರದ ಅದ್ಭುತವದು!

ಕಥೆ 50

ಧೀರೆಯರಾದ ಇಬ್ಬರು ಸ್ತ್ರೀಯರು

ಬಾರಾಕ ಇಸ್ರಾಯೇಲ್ಯರನ್ನು ಯುದ್ಧಕ್ಕೆ ನಡೆಸಿದರು ಆದರೆ ಯಾಯೇಲಳಿಗೆ ಯಾಕೆ ಹೆಸರು ಬಂತು?

ಕಥೆ 51

ರೂತ್‌ ಮತ್ತು ನೊವೊಮಿ

ರೂತಳು ತನ್ನ ಮನೆಯನ್ನು ಬಿಟ್ಟು ನೊವೋಮಿಯ ಜೊತೆ ವಾಸಿಸುತ್ತಾಳೆ ಮತ್ತು ಯೆಹೋವನನ್ನು ಆರಾಧಿಸುತ್ತಾಳೆ.

ಕಥೆ 52

ಗಿದ್ಯೋನ ಮತ್ತು ಅವನ 300 ಪುರುಷರು

ನೀರನ್ನು ಹೇಗೆ ಕುಡಿಯುತ್ತಾರೆ ಅನ್ನೋ ವಿಚಿತ್ರ ಪರೀಕ್ಷೆಯ ಮೂಲಕ ಯೆಹೋವನು ಈ ಚಿಕ್ಕ ಸೈನ್ಯವನ್ನು ಆರಿಸುತ್ತಾನೆ.

ಕಥೆ 53

ಯೆಪ್ತಾಹನ ವಚನ

ಯೆಪ್ತಾಹನ ವಚನ ತನ್ನನ್ನು ಮಾತ್ರವಲ್ಲ ತನ್ನ ಮಗಳನ್ನೂ ಬಾಧಿಸಿತು.

ಕಥೆ 54

ಅತಿ ಬಲಿಷ್ಠ ಪುರುಷ

ಸಂಸೋನನಿಗಿರುವ ಶಕ್ತಿಯ ಗುಟ್ಟು ದೆಲೀಲಾಗೆ ಹೇಗೆ ಗೋತ್ತಾಯಿತು?

ಕಥೆ 55

ಪುಟ್ಟ ಬಾಲಕನು ದೇವರ ಸೇವೆಮಾಡುತ್ತಾನೆ

ಬಾಲಕ ಸಮುವೇಲನ ಮೂಲಕ ದೇವರು ಏಲೀಯನಿಗೆ ದುಃಖದ ಒಂದು ಸಂದೇಶವನ್ನು ತಿಳಿಸುತ್ತಾರಿ.

ಕಥೆ 56

ಸೌಲ—ಇಸ್ರಾಯೇಲಿನ ಮೊದಲನೆಯ ಅರಸ

ಸೌಲ ನಮಗೆ ಒಂದು ಒಳ್ಳೇ ಪಾಠ. ಮೊದಲು ಯೆಹೋವನು ಅವನನ್ನು ಆರಿಸುತ್ತಾನೆ ನಂತರ ತ್ಯಜಿಸುತ್ತಾನೆ.

ಕಥೆ 57

ದೇವರು ದಾವೀದನನ್ನು ಆರಿಸುತ್ತಾನೆ

ಸಾಮುವೇಲನು ನೋಡದ ಯಾವ ವಿಷಯವನ್ನು ದೇವರು ದಾವೀದನಲ್ಲಿ ನೋಡುತ್ತಾನೆ?

ಕಥೆ 58

ದಾವೀದ ಮತ್ತು ಗೊಲ್ಯಾತ

ದಾವೀನು ಗೊಲ್ಯಾತನ ವಿರುದ್ಧ ಒಂದು ಕವಣಿಯನ್ನು ಬಳಸಿ ಮಾತ್ರವಲ್ಲ ಅದಕ್ಕಿಂದ ಬಲಿಷ್ಠವಾದ ಆಯುದದ ಸಹಾಯದಿಂದ ಜಯಗಳಿಸಿದನು.

ಕಥೆ 59

ದಾವೀದನು ಓಡಿಹೋಗಲು ಕಾರಣ

ಸೌಲನು ಮೊದಲು ದಾವೀದನನ್ನು ಮೆಚ್ಚುತ್ತಾನೆ. ಆದರೆ ನಂತರ ದಾವೀದನನ್ನು ಹೊಟ್ಟೆಕಿಚ್ಚಿನಿಂದ ಕೊಲ್ಲುವಷ್ಟು ಸೌಲನು ಬದಲಾಗುತ್ತಾನೆ. ಯಾಕೆ?

ಕಥೆ 60

ಅಬೀಗೈಲ್‌ ಮತ್ತು ದಾವೀದ

ಅಬೀಗೈಲ್‌ ತನ್ನ ಗಂಡನನ್ನು ಮೂರ್ಖ ಎಂದು ಕರೆಯುತ್ತಾಳೆ. ಹೀಗೆ ಮಾಡಿದ್ದರಿಂದ ಅವನ ಪ್ರಾಣವನ್ನು ಉಳಿಸುತ್ತಾಳೆ.

ಕಥೆ 61

ದಾವೀದನು ಅರಸನಾಗುತ್ತಾನೆ

ದಾವೀದನು ಮಾಡಿದ ಮತ್ತು ಮಾಡಲು ನಿರಾಕರಿಸಿದ ವಿಷಯಗಳಿಂದ ಅವನು ಇಸ್ರಾಯೇಲಿನ ಅರಸನಾಗಲು ಯೋಗ್ಯನೆಂದು ತೋರಿಸಿಕೊಟ್ಟ.

ಕಥೆ 62

ದಾವೀದನ ಮನೆಯಲ್ಲಿ ತೊಂದರೆ

ದಾವೀದ ಒಂದು ತಪ್ಪು ಮಾಡಿದ್ದದಿಂದ ತನಗೆ ಮತ್ತು ತನ್ನ ಕುಟುಂಬದ ಮೇಲೆ ವರ್ಷಗಳ ತನಕ ತೊಂದರೆಯನ್ನು ತಂದುಕೊಳ್ಳುತ್ತಾನೆ.

ಕಥೆ 63

ವಿವೇಕಿ ಅರಸ ಸೊಲೊಮೋನ

ಸೊಲೊಮೋನನು ನಿಜವಾಗಲೂ ಮಗುವನ್ನು ಎರಡು ತುಂಡುಗಳಾಗಿ ಮಾಡುತ್ತಿದ್ದನಾ?

ಕಥೆ 64

ಸೊಲೊಮೋನ ದೇವಾಲಯ ಕಟ್ಟುತ್ತಾನೆ

ಸೊಲೊಮೋನನು ತುಂಬ ವಿವೇಕಿಯಾಗಿದ್ದರೂ ಮೂರ್ಖತನವಾದ ಮತ್ತು ತಪ್ಪಾದ ಕೆಲಸ ಮಾಡುವ ಒತ್ತಡಕ್ಕೆ ಬಲಿಬೀಳುತ್ತಾನೆ.

ಕಥೆ 65

ರಾಜ್ಯವು ಇಬ್ಭಾಗವಾಗುತ್ತದೆ

ಯಾರೊಬ್ಬಾಮ ರಾಜ್ಯವನ್ನು ಆಳಲು ಶುರುಮಾಡಿದಂದಿನಿಂದ ಜನರು ದೇವರ ನಿಯಮಗಳನ್ನು ಮುರಿಯುವಂತೆ ಮಾಡುತ್ತಾನೆ.

ಕಥೆ 66

ದುಷ್ಟ ರಾಣಿ-ಈಜಬೇಲ್‌

ತನಗೆ ಏನು ಬೇಕಿತ್ತೋ ಅದನ್ನುರಾಣಿ ಈಜಬೇಲ್‌ ಕೊಣೆಗೂ ಪಡೆದುಕೊಂಡಳು

ಕಥೆ 67

ಯೆಹೋಷಾಫಾಟನು ಯೆಹೋವನಲ್ಲಿ ಭರವಸೆಯಿಡುತ್ತಾನೆ

ಯಾವುದೇ ಅಸ್ತ್ರಗಳಿಲ್ಲದೆ ಕೇವಲ ಗಾಯಕರ ಜೊತೆ ಹೋಗಿ ಈ ಸೈನ್ಯ ಏನನ್ನು ಸಾಧಿಸಿತು?

ಕಥೆ 68

ಪುನಃ ಜೀವ ಪಡೆದ ಇಬ್ಬರು ಹುಡುಗರು

ಸತ್ತು ಹೋಗಿರುವವರು ಪುನಃ ಬದುಕಲು ಸಾಧ್ಯಾನಾ? ಈ ಮುಂಚೆ ಇದು ಸಂಬವಿಸಿದೆ!

ಕಥೆ 69

ಪರಾಕ್ರಮಶಾಲಿಗೆ ಚಿಕ್ಕ ಹುಡುಗಿ ಸಹಾಯಮಾಡುತ್ತಾಳೆ

ಅವಳು ಧೈರ್ಯದಿಂದ ಮಾತಾಡಿದರಿಂದ ಅದ್ಭುತ ಆಗುತ್ತದೆ.

ಕಥೆ 70

ಯೋನ ಮತ್ತು ದೊಡ್ಡ ಮೀನು

ಯೆಹೋವನು ಹೇಳಿದಂತೆ ಮಾಡಬೇಕು ಎಂಬ ದೊಡ್ಡ ಪಾಠವನ್ನು ಯೋನ ಕಲೆತ

ಕಥೆ 71

ದೇವರು ವಾಗ್ದಾನಿಸುವ ಪರದೈಸ್‌

ಆರಂಭದ ಪರದೈಸ್‌ ಚಿಕ್ಕದ್ದಾಗಿತ್ತು; ಆದರೆ ಮುಂದಕ್ಕೆ ಇಡೀ ಭೂಮಿಯೇ ಪರದೈಸಾಗುತ್ತದೆ.

ಕಥೆ 72

ರಾಜ ಹಿಜ್ಕೀಯನಿಗೆ ದೇವರು ಸಹಾಯಮಾಡುತ್ತಾನೆ

ಒಂದೇ ರಾತ್ರಿಯಲ್ಲಿ ದೇವದೂತನು 1,85,000 ಮಂದಿ ಅಶ್ಯೂರ್ಯದ ಸೈನಿಕರನ್ನು ಕೊಲ್ಲುತ್ತಾನೆ.

ಕಥೆ 73

ಇಸ್ರಾಯೇಲಿನ ಕೊನೆಯ ಒಳ್ಳೆಯ ಅರಸ

ಯೋಷೀಯ ತನ್ನ ಚಿಕ್ಕ ಪ್ರಾಯದಲ್ಲಿ ತುಂಬ ಚತುರನಾಗಿದ್ದನು.

ಕಥೆ 74

ಭಯಪಡದ ಒಬ್ಬ ಮನುಷ್ಯ

ತಾನು ಇನ್ನೂ ಚಿಕ್ಕ ಬಾಲಕ ಎಂದು ಯೆರೆಮೀಯ ನೆನಸಿದ್ದ, ಹಾಗಾಗಿಯೇ ಪ್ರವಾದಿಯಾಗಲು ಹೆದರಿದ. ಆದರೆ ಯೆಹೋವ ದೇವರಿಗೆ ಗೊತ್ತಿತ್ತು ಯೆರೆಮೀಯನಿಂದ ಇದು ಸಾಧ್ಯ ಅಂತ.

ಕಥೆ 75

ಬಾಬೆಲಿನಲ್ಲಿ ನಾಲ್ವರು ಹುಡುಗರು

ಅವರು ತಮ್ಮ ಕುಟುಂಬಗಳಿಂದ ದೂರ ಇದ್ದರೂ ಒತ್ತಡವನ್ನು ಜಯಿಸಿದರು.

ಕಥೆ 76

ಯೆರೂಸಲೇಮ್‌ ನಾಶವಾಗುತ್ತದೆ

ಇಸ್ರಾಯೇಲ್ಯರ ವಿರೋಧಿಗಳಾಗಿದ್ದ ಅನ್ಯ ಬಾಬೆಲಿನವರು ಬಂದು ನಾಶಮಾಡುವಂತೆ ಯೆಹೋವನು ಯಾಕೆ ಬಿಟ್ಟುಬಿಟ್ಟನು?

ಕಥೆ 77

ಅವರು ಅಡ್ಡಬೀಳುವುದಿಲ್ಲ

ಈ ಮೂವರು ಒಳ್ಳೇ ವಿಧೇಯ ಯುವಕರನ್ನು ಬೆಂಕಿಯಲ್ಲಿ ಸುಡುವಂತೆ ದೇವರು ಬಿಡುತ್ತಾನಾ? ನೋಡೋಣ ಬನ್ನಿ.

ಕಥೆ 78

ಗೋಡೆಯ ಮೇಲೆ ಕೈಬರಹ

ನಾಲ್ಕು ನಿಗೂಢ ಪದಗಳ ಅರ್ಥವನ್ನು ದಾನಿಯೇಲನು ಬಿಡಿಸಿ ಹೇಳುತ್ತಾನೆ.

ಕಥೆ 79

ಸಿಂಹಗಳ ಗವಿಯಲ್ಲಿ ದಾನಿಯೇಲ

ದಾನಿಯೇಲನಿಗೆ ಬಂದ ಮರಣ ಶಿಕ್ಷೆಯನ್ನು ಅವನು ತಪ್ಪಿಸಿಕೊಳ್ಳಬಹುದಿತ್ತಾ?

ಕಥೆ 80

ದೇವಜನರು ಬಾಬೆಲನ್ನು ಬಿಟ್ಟುಬರುತ್ತಾರೆ

ಪಾರಸಿಯ ರಾಜ ಬಾಬೆಲನ್ನು ಮುತ್ತಿಗೆ ಹಾಕುವ ಮೂಲಕ ಬೈಬಲಿನ ಒಂದು ಪ್ರವಾದನೆಯನ್ನು ನೆರವೇರಿಸಿದ, ಈಗ ಇನ್ನೊಂದನ್ನೂ ನೆರವೇರಸಲಿದ್ದಾನೆ.

ಕಥೆ 81

ದೇವರ ಸಹಾಯದಲ್ಲಿ ಭರವಸೆ

ದೇವರಿಗೆ ವಿಧೇಯರಾಗಲು ಇಸ್ರಾಯೇಲ್ಯರು ಮನುಷ್ಯರ ಆಜ್ಞೆಯನ್ನು ಮೀರುತ್ತಾರೆ. ದೇವರು ಅವರನ್ನು ಆಶೀರ್ವದಿಸಿದನಾ?

ಕಥೆ 82

ಮೊರ್ದೆಕೈ ಮತ್ತು ಎಸ್ತೇರ್‌

ರಾಣಿ ವಷ್ಟಿ ಸುಂದರಿಯಾಗಿದ್ದಳು. ಆದರೂ ರಾಜ ಅಹಶ್ವೇರೋಷನು ವಷ್ಟಿಯ ಬದಲಾಗಿ ಎಸ್ತೇರಳನ್ನು ರಾಣಿಯಾಗಿ ಮಾಡಿದನು. ಏಕೆ?

ಕಥೆ 83

ಯೆರೂಸಲೇಮಿನ ಗೋಡೆಗಳು

ಗೋಡೆ ಕಟ್ಟುವಾಗ ಕೆಲಸಗಾರರು ಹಗಲು ರಾತ್ರಿ ತಮ್ಮ ಕತ್ತಿ ಮತ್ತು ಬರ್ಜಿಗಳನ್ನು ತಯಾರಾಗಿ ಇಟ್ಟಿರಬೇಕಿತ್ತು.

ಕಥೆ 84

ಒಬ್ಬ ದೇವದೂತನು ಮರಿಯಳನ್ನು ಭೇಟಿಯಾಗುತ್ತಾನೆ

ದೇವರಿಂದ ಒಂದು ಸಂದೇಶವನ್ನು ಅವನು ತರುತ್ತಾನೆ: ನಿತ್ಯಕ್ಕೂ ರಾಜನಾಗಿರುವ ಒಂದು ಮಗು ಅವಳಿಗೆ ಹುಟ್ಟುತ್ತದೆ.

ಕಥೆ 85

ಯೇಸು ಒಂದು ಹಟ್ಟಿಯಲ್ಲಿ ಜನಿಸುತ್ತಾನೆ

ಭವಿಷ್ಯದಲ್ಲಿ ರಾಜ ಆಗಲಿದ್ದವನು ಪ್ರಾಣಿಗಳ ಹಟ್ಟಿಯಲ್ಲಿ ಯಾಕೆ ಹುಟ್ಟಿದ?

ಕಥೆ 86

ಒಂದು ನಕ್ಷತ್ರದಿಂದ ಮಾರ್ಗದರ್ಶಿಸಲ್ಪಟ್ಟ ಪುರುಷರು

ಪುರುಷರನ್ನು ಯೇಸುವಿನ ಹತ್ತಿರ ಮಾರ್ಗದರ್ಶಿಸಿದ್ದು ಯಾರು? ಉತ್ತರ ನಿಮಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ.

ಕಥೆ 87

ಬಾಲಕನಾದ ಯೇಸು ದೇವಾಲಯದಲ್ಲಿ

ದೇವಾಲಯದ ಹಿರಿಪುರುಷರು ಸಹ ಅವನನ್ನು ಕಂಡು ಆಶ್ಚರ್ಯಪಡುವಂತ ವಿಷಯ ಯೇಸುವಿನಲ್ಲಿತ್ತು.

ಕಥೆ 88

ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆ

ಯೋಹಾನನು ಪಾಪಿಗಳಿಗೆ ದೀಕ್ಷಾಸ್ನಾನ ಕೂಡುತ್ತಿದ್ದ ಯೊರ್ದಾನ್‌ ಹೊಲೆಗೆ ಯೇಸು ಬರುತ್ತಾನೆ. ಯೇಸು ಯಾವತ್ತೂ ಪಾಪಮಾಡಿಲ್ಲ. ಆದರೆ ಯೋಹಾನ ಯಾಕೆ ಯೇಸುವಿಗೆ ದೀಕ್ಷಾಸ್ನಾನ ಕೊಡುತ್ತಾನೆ?

ಕಥೆ 89

ಯೇಸು ದೇವಾಲಯವನ್ನು ಶುದ್ಧಮಾಡುತ್ತಾನೆ

ಯೇಸುವಿನ ಕೋಪ ಅವನಿಗೆಷ್ಟು ಪ್ರೀತಿ ಇತ್ತೆಂದು ತೋರಿಸಿತು.

ಕಥೆ 90

ಬಾವಿಯ ಬಳಿ ಸ್ತ್ರೀಯೊಂದಿಗೆ

ಯೇಸು ಕೊಡುವ ನೀರನ್ನು ಕುಡಿದರೆ ಆ ಸ್ತ್ರೀಗೆ ಬಾಯರಿಕೆಯೇ ಆಗದಿರುವುದು ಹೇಗೆ?

ಕಥೆ 91

ಯೇಸು ಪರ್ವತದ ಮೇಲೆ ಕಲಿಸುತ್ತಾನೆ

ಅವನ ಪರ್ವತ ಪ್ರಸಂಗದಲ್ಲಿ ಎಂದೆಂದಿಗೂ ಬೆಲೆಬಾಳುವ ಪಾಠಗಳನ್ನು ಕಲಿಯಿರಿ.

ಕಥೆ 92

ಯೇಸು ಸತ್ತವರನ್ನು ಎಬ್ಬಿಸುತ್ತಾನೆ

ದೇವರ ಶಕ್ತಿಯನ್ನು ಬಳಸಿ ಯೇಸು ಬರೀ ಎರಡೇ ಪದಗಳನ್ನು ಹೇಳಿದನು. ಹೀಗೆ ಯಾಯೀರನ ಮಗಳನ್ನು ಪುನರುತ್ಥಾನ ಮಾಡಿದನು.

ಕಥೆ 93

ಯೇಸು ಅನೇಕ ಜನರಿಗೆ ಉಣಿಸುತ್ತಾನೆ

ಅದ್ಭುತವಾಗಿ ಸಾವಿರಾರು ಮಂದಿಗೆ ಉಣಿಸುವ ಮೂಲಕ ಯೇಸು ಯಾವ ವಿಷಯವನ್ನು ಸಾಬೀತುಪಡಿಸಿದನು?

ಕಥೆ 94

ಅವನು ಚಿಕ್ಕ ಮಕ್ಕಳನ್ನು ಪ್ರೀತಿಸುತ್ತಾನೆ

ಚಿಕ್ಕ ಮಕ್ಕಳ ಕುರಿತು ಅಷ್ಟೇ ಅಲ್ಲ, ಚಿಕ್ಕ ಮಕ್ಕಳಿಂದ ಸಹ ತುಂಬ ವಿಷಯಗಳನ್ನು ತನ್ನ ಅಪೋಸ್ತಲರು ಕಲಿಯಲಿಕ್ಕಿದೆ ಎಂದು ಯೇಸು ಹೇಳಿದನು.

ಕಥೆ 95

ಯೇಸು ಕಲಿಸುವ ವಿಧ

ಪಕ್ಕದ ಊರಿನ ಸಮಾರ್ಯದವನ ದೃಷ್ಟಾಂತ ಯೇಸುವಿನ ಬೋಧನೆ ಹೇಗಿತ್ತು ಎಂಬುದಕ್ಕೊಂದು ಉದಾಹರಣೆ.

ಕಥೆ 96

ಯೇಸು ರೋಗಿಗಳನ್ನು ಗುಣಪಡಿಸುತ್ತಾನೆ

ಯೇಸು ಅಧ್ಬುತಗಳನ್ನು ಮಾಡುವ ಮೂಲಕ ಏನನ್ನು ಸಾಬೀತುಪಡಿಸಿದನು?

ಕಥೆ 97

ಯೇಸು ರಾಜನೋಪಾದಿ ಬರುತ್ತಾನೆ

ದೊಡ್ಡ ಗುಂಪೊಂದು ಅವನನ್ನು ಸ್ವಾಗತಿಸುತ್ತೆ. ಆದರೆ ಎಲ್ಲರಿಗೂ ಇದರ ಬಗ್ಗೆ ಸಂತೋಷವಿಲ್ಲ.

ಕಥೆ 98

ಆಲಿವ್‌ ಮರಗಳ ಗುಡ್ಡದ ಮೇಲೆ

ನಮ್ಮ ಸಮಯಗಳಲ್ಲಿ ಆಗುತ್ತಿರುವ ಸಂಗತಿಗಳ ಬಗ್ಗೆ ಯೇಸು ತನ್ನ ನಾಲ್ಕು ಮಂದಿ ಶಿಷ್ಯರಿಗೆ ಹೇಳುತ್ತಿದ್ದಾನೆ.

ಕಥೆ 99

ಮಾಳಿಗೆಯ ಒಂದು ಕೋಣೆಯಲ್ಲಿ

ಈ ವಿಶೇಷ ಭೋಜನವನ್ನು ಪ್ರತಿ ವರ್ಷ ಮಾಡಬಬೇಕೆಂದು ಯೇಸು ಹೇಳಿದ್ದೇಕೆ?

ಕಥೆ 100

ತೋಟದಲ್ಲಿ ಯೇಸು

ಯೂದನು ಯೇಸುವಿಗೆ ಮುದ್ದಿಟ್ಟು ದ್ರೋಹವೆಸಗಿದ್ದು ಏಕೆ?

ಕಥೆ 101

ಯೇಸು ಕೊಲ್ಲಲ್ಪಡುತ್ತಾನೆ

ಕಂಬದ ಮೇಲೆ ತೂಗುಹಾಕಿದ್ದಾಗ ಯೇಸು ಪರದೈಸಿನ ಬಗ್ಗೆ ವಚನಕೊಟ್ಟನು.

ಕಥೆ 102

ಯೇಸು ಜೀವದಿಂದಿದ್ದಾನೆ

ಯೇಸುವಿನ ಸಮಾಧಿಗೆ ಮುಚ್ಚಲಾಗಿದ್ದ ಕಲ್ಲನ್ನು ದೇವದೂತನು ತೆಗೆದಮೇಲೆ ಒಳಗೆ ನೋಡಿದ ಕಾವಲುಗಾರರು ಸ್ತಬ್ಧರಾಗುತ್ತಾರೆ.

ಕಥೆ 103

ಬಾಗಿಲುಮುಚ್ಚಿದ್ದ ಕೋಣೆಯಲ್ಲಿ

ಯೇಸು ಪುನರುತ್ಥಾನಗೊಂಡ ಮೇಲೆ ಶಿಷ್ಯರಿಗೆ ಏಕೆ ಅವನ ಗುರುತು ಸಿಗುವುದಿಲ್ಲ?

ಕಥೆ 104

ಯೇಸು ಪರಲೋಕಕ್ಕೆ ಹಿಂದಿರುಗುತ್ತಾನೆ

ಯೇಸು ಸ್ವರ್ಗಕ್ಕೆ ಹೋಗುವುದಕ್ಕಿಂತ ಮುಂಚೆ ತನ್ನ ಶಿಷ್ಯರಿಗೆ ಕೊನೇ ಆಜ್ಞೆಯನ್ನು ಕೊಡುತ್ತಾನೆ.

ಕಥೆ 105

ಯೆರೂಸಲೇಮಿನಲ್ಲಿ ಕಾಯುವುದು

ಪಂಚಶತ್ತಮದಂದು ಯೇಸು ಏಕೆ ಪವಿತ್ರಾತ್ಮವನ್ನು ತನ್ನ ಶಿಷ್ಯರ ಮೇಲೆ ಪವಿತ್ರಾತ್ಮವನ್ನು ಸುರಿದನು?

ಕಥೆ 106

ಸೆರೆಮನೆಯಿಂದ ಬಿಡುಗಡೆ

ಸಾರುವ ಕೆಲಸವನ್ನು ನಿಲ್ಲಿಸಲು ಯೆಹೂದ ಧಾರ್ಮಿಕ ಮುಖಂಡರು ಅಪೊಸ್ತಲರನ್ನು ಸೆರೆಮನೆಯಲ್ಲಿ ಹಾಕಿದರು. ಆದರೆ ದೇವರ ಮನಸ್ಸಲ್ಲಿ ಬೇರೆ ವಿಷಯವಿತ್ತು.

ಕಥೆ 107

ಸ್ತೆಫನನ್ನು ಕಲ್ಲೆಸೆದು ಕೊಲ್ಲಲಾಗುತ್ತದೆ

ಸ್ತೆಫನನ್ನು ಕಲ್ಲೆಸೆದು ಕೊಲ್ಲಲಾಗುತ್ತಿರುವಾಗ ಅವನೊಂದು ಅಸಾಮಾನ್ಯ ಪ್ರಾರ್ಥನೆ ಮಾಡುತ್ತಾನೆ.

ಕಥೆ 108

ದಮಸ್ಕಕ್ಕೆ ಹೋಗುವ ದಾರಿಯಲ್ಲಿ

ಪ್ರಕಾಶವಾದ ಬೆಳಕು ಮತ್ತು ಸ್ವರ್ಗದಿಂದ ಬಂದ ಶಬ್ಧ ಸೌಲನ ಜೀವನ ಬದಲಾಯಿಸುತ್ತದೆ.

ಕಥೆ 109

ಪೇತ್ರನು ಕೊರ್ನೇಲ್ಯನನ್ನು ಭೇಟಿಯಾಗುತ್ತಾನೆ

ಒಂದು ಜಾತಿಯ ಜನರು ಇನ್ನೊಂದಕ್ಕಿಂತ ಮೇಲು ಎಂದು ದೇವರು ನೆನಸುತ್ತಾರಾ?

ಕಥೆ 110

ತಿಮೊಥೆಯ—ಪೌಲನ ಹೊಸ ಸಹಾಯಕ

ತಿಮೊಥೆಯನು ಮನೆಬಿಟ್ಟು ಪೌಲನ ಜೊತೆ ಸೇರಿ ಸುವಾರ್ತೆ ಸಾರಲು ಉತ್ಸಾಹದಿಂದ ಹೋಗುತ್ತಾನೆ.

ಕಥೆ 111

ನಿದ್ದೆಹೋದ ಒಬ್ಬ ಹುಡುಗ

ಪೌಲನ ಮೊದಲನೇ ಭಾಷಣದಲ್ಲಿ ಯೂತಿಖನು ನಿದ್ದೆ ಹೋದ, ಆದರೆ ಎರಡನೆಯ ಭಾಷಣದಲ್ಲಿ ಅಲ್ಲ. ಈ ಎರಡು ಭಾಷಣಗಳ ಮಧ್ಯೆ ನಡೆದ ವಿಷಯ ಒಂದು ಅದ್ಭುತವಾಗಿತ್ತು.

ಕಥೆ 112

ದ್ವೀಪವೊಂದರಲ್ಲಿ ಹಡಗು ಒಡೆದುಹೋದದ್ದು

ಇನ್ನೇನು ಯಾವ ನಿರೀಕ್ಷೆಯು ಇಲ್ಲವೆಂದು ಪೌಲನಿಗೆ ಅನಿಸಿತು. ಆಗ ದೇವರಿಂದ ಅವನಿಗೆ ನಿರೀಕ್ಷೆ ಕೊಡುವ ಸಂದೇಶ ಸಿಕ್ಕಿತು.

ಕಥೆ 113

ರೋಮ್‌ನಲ್ಲಿ ಪೌಲನು

ಸೆರೆಮನೆಯಲ್ಲಿರುವಾಗ ತನ್ನ ಅಪೊಸ್ತಲ ಕೆಲಸವನ್ನು ಪೌಲನು ಹೇಗೆ ಮಾಡ ಸಾಧ್ಯ?

ಕಥೆ 114

ಎಲ್ಲಾ ದುಷ್ಟತನಗಳ ಅಂತ್ಯ

ತನ್ನ ಸೈನ್ಯವನ್ನು ಅರ್ಮಗೆದೋನ್‌ ಯುದ್ಧದಲ್ಲಿ ಯೇಸು ನಡೆಸಲಿಕ್ಕೆ ದೇವರು ಯಾಕೆ ಕಳುಹಿಸಿದನು?

ಕಥೆ 115

ಭೂಮಿಯ ಮೇಲೆ ಹೊಸ ಪರದೈಸ್‌

ಒಮ್ಮೆ ಜನರೆಲ್ಲರೂ ಪರದೈಸ್‌ ಭೂಮಿಯಲ್ಲಿ ಜೀವಿಸಿದ್ದರು, ಮತ್ತೊಮ್ಮೆ ಮುಂದೆ ಹಾಗೆ ಆಗಲಿದೆ.

ಕಥೆ 116

ನಾವು ಹೇಗೆ ಸದಾಕಾಲ ಜೀವಿಸಬಲ್ಲೆವು?

ಸದಾಕಾಲ ಜೀವಿಸಬೇಕಾದರೆ ನಾವೇನನ್ನು ಕಲಿಯುವ ಅಗತ್ಯವಿದೆ? ಯೆಹೋವ ದೇವರು ಮತ್ತು ಯೇಸು ಬಗ್ಗೆ ತಿಳಿದುಕೊಂಡರೆ ಮಾತ್ರ ಸಾಕಾಗುತ್ತದಾ? ಬೇರೆ ಇನ್ನೇನು ಬೇಕು?

ಬೈಬಲ್‌ ಕಥೆಗಳ ನನ್ನ ಪುಸ್ತಕ್ಕಾಗಿ ಅಧ್ಯಯನ ಪ್ರಶ್ನೆಗಳು

ಪ್ರತಿಯೊಂದು ಬೈಬಲ್‌ ಕಥೆಗಳ ಬಗ್ಗೆ ಮಕ್ಕಳು ಹೆಚ್ಚು ತಿಳಿಯಲಿಕ್ಕಾಗಿ ವಚನಗಳನ್ನು ಮತ್ತು ಅಧ್ಯಯನ ಪ್ರಶ್ನೆಗಳನ್ನು ಕೊಡಲಾಗಿದೆ.