ಚೌಕ 18ಎ
ಬರಲಿರೋ ಮಹಾ ಯುದ್ಧದ ಬಗ್ಗೆ ಯೆಹೋವನು ಎಚ್ಚರಿಸಿದ್ದಾನೆ
ಯೆಹೋವ ದೇವರನ್ನ ಮತ್ತು ಆತನ ಜನರನ್ನ ವಿರೋಧಿಸೋ ಎಲ್ಲರನ್ನ ನಾಶಮಾಡೋ ಒಂದು ಕೊನೆ ಯುದ್ಧದ ಬಗ್ಗೆ ಬೈಬಲಿನಲ್ಲಿರೋ ತುಂಬ ಭವಿಷ್ಯವಾಣಿಗಳು ತಿಳಿಸುತ್ತವೆ. ಅವುಗಳಲ್ಲಿ ಕೆಲವನ್ನ ಇಲ್ಲಿ ಕೊಡಲಾಗಿದೆ. ಈ ಭವಿಷ್ಯವಾಣಿಗಳಲ್ಲಿ ಯಾವ ಹೋಲಿಕೆಗಳಿವೆ? ತನ್ನ ಎಚ್ಚರಿಕೆಯನ್ನ ಕೇಳಿ ತಿದ್ದಿಕೊಳ್ಳೋ ಜನರನ್ನ ಯೆಹೋವನು ಹೇಗೆ ಕಾಪಾಡ್ತಾನೆ ಅನ್ನೋದನ್ನು ಗಮನಿಸಿ.
ಇಸ್ರಾಯೇಲ್ಯರ ದಿನಗಳಲ್ಲಿ
ಯೆಹೆಜ್ಕೇಲ: “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನ ಎಲ್ಲ ಬೆಟ್ಟಗಳ ಮೇಲೆ ಗೋಗನ ವಿರುದ್ಧ ನಾನು ಒಂದು ಕತ್ತಿ ಕಳಿಸ್ತೀನಿ.”—ಯೆಹೆ. 38:18-23.
ಯೆರೆಮೀಯ: “[ಯೆಹೋವನೇ] ಖುದ್ದಾಗಿ ಎಲ್ಲ ಮಾನವರಿಗೆ ತೀರ್ಪು ಮಾಡ್ತಾನೆ. ಆತನು ಕೆಟ್ಟವರನ್ನ ಕತ್ತಿಯಿಂದ ಕೊಲ್ತಾನೆ.”—ಯೆರೆ. 25:31-33.
ದಾನಿಯೇಲ: “ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ . . . ಈ ಎಲ್ಲ ಸಾಮ್ರಾಜ್ಯಗಳನ್ನ ನಜ್ಜುಗುಜ್ಜು ಮಾಡಿ ನಾಶ ಮಾಡುತ್ತೆ.”—ದಾನಿ. 2:44.
ಕ್ರಿ.ಶ. ಮೊದಲನೇ ಶತಮಾನದಲ್ಲಿ
ಯೇಸು: “ಆಗ ಮಹಾ ಸಂಕಟ ಇರುತ್ತೆ. ಲೋಕ ಆರಂಭ ಆದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದಿಲ್ಲ.”—ಮತ್ತಾ. 24:21, 22.
ಪೌಲ: ‘ಯೇಸು ಬಲಿಷ್ಠ ದೇವದೂತರ ಜೊತೆ ಸ್ವರ್ಗದಿಂದ ಬರುವಾಗ ದೇವರನ್ನ ತಿಳ್ಕೊಳ್ಳದವ್ರಿಗೆ ಶಿಕ್ಷೆ ಕೊಡ್ತಾನೆ.’—2 ಥೆಸ. 1:6-9.
ಪೇತ್ರ: “ಯೆಹೋವನ ದಿನ ಕಳ್ಳನ ತರ ಬರುತ್ತೆ . . . ಭೂಮಿ ಮತ್ತು ಅದ್ರಲ್ಲಿ ನಡಿಯೋ ಕೆಲಸಗಳೆಲ್ಲ ಬಟ್ಟ ಬಯಲಾಗುತ್ತೆ.”—2 ಪೇತ್ರ 3:10.
ಯೋಹಾನ: “[ಯೇಸುವಿನ] ಬಾಯಿಂದ ಒಂದು ದೊಡ್ಡ ಕತ್ತಿ ಹೊರಗೆ ಬರ್ತಾ ಇತ್ತು. ಅದು ತುಂಬಾ ಉದ್ದ ಇತ್ತು, ಚೂಪಾಗಿತ್ತು. ಆತನು ಅದನ್ನ ದೇಶಗಳನ್ನ ನಾಶಮಾಡೋಕೆ ಬಳಸ್ತಾನೆ.”—ಪ್ರಕ. 19:11-18.
ಈಗಿನ ಕಾಲ
ಬೈಬಲಷ್ಟು ಹೆಚ್ಚು ಭಾಷೆಯಲ್ಲಿ ಭಾಷಾಂತರವಾಗಿ ವಿತರಿಸಲ್ಪಟ್ಟಿರೋ ಪುಸ್ತಕ ಮತ್ತೊಂದಿಲ್ಲ
ಯೆಹೋವನ ಈಗಿನ ಸೇವಕರು
-
ಬೈಬಲ್ ಪ್ರಕಾಶನಗಳನ್ನ ನೂರಾರು ಭಾಷೆಗಳಲ್ಲಿ ಪ್ರಕಾಶಿಸುತ್ತಿದ್ದಾರೆ ಮತ್ತು ವಿತರಣೆ ಮಾಡ್ತಿದ್ದಾರೆ
-
ಸಿಹಿಸುದ್ದಿಯನ್ನ ಸಾರೋಕೆ ಪ್ರತಿ ವರ್ಷ ಕೋಟ್ಯಾಂತರ ತಾಸುಗಳನ್ನ ವ್ಯಯಿಸುತ್ತಿದ್ದಾರೆ