ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಾಹಿತಿಗಾಗಿ

ನಿಮ್ಮ ಮಾಹಿತಿಗಾಗಿ

ನಿಮ್ಮ ಮಾಹಿತಿಗಾಗಿ

ಸಹಾಯಕರು ನಿಮಗೆ ನೆರವು ನೀಡಲೆಂದೇ ಸಹಾಯಕರನ್ನು ನೇಮಿಸಲಾಗಿದೆ. ವಾಹನ ನಿಲುಗಡೆ, ಜನರ ಗುಂಪು ನಿಯಂತ್ರಣ, ಸೀಟು ಹಿಡಿಯುವಿಕೆಯಂಥ ವಿಷಯಗಳ ಕುರಿತು ಅವರು ಕೊಡುವ ಮಾರ್ಗದರ್ಶನವನ್ನು ದಯವಿಟ್ಟು ಪಾಲಿಸಿ, ಅವರಿಗೆ ಪೂರ್ಣ ಸಹಕಾರ ನೀಡಿ.

ಕಾಣಿಕೆಗಳು ಅಧಿವೇಶನದ ಕಾರ್ಯಕ್ರಮವನ್ನು ಎಲ್ಲರೂ ಆನಂದಿಸಿ ಯೆಹೋವ ದೇವರಿಗೆ ಆಪ್ತರಾಗಬೇಕೆನ್ನುವ ಸಲುವಾಗಿ ಸೀಟಿನ ವ್ಯವಸ್ಥೆ, ಧ್ವನಿವರ್ಧಕ ಮತ್ತು ಇತರ ಸೌಲಭ್ಯಗಳನ್ನು ಮಾಡಲಾಗಿದೆ. ಇದಕ್ಕಾಗಿ ಖರ್ಚು ತಗಲುತ್ತದೆ. ನೀವು ಮನಸಾರೆ ಕೊಡುವ ಕಾಣಿಕೆಗಳು ಈ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳಲು ನೆರವಾಗುತ್ತದೆ ಮತ್ತು ಲೋಕವ್ಯಾಪಕ ಕೆಲಸವನ್ನೂ ಬೆಂಬಲಿಸುತ್ತದೆ. ನಿಮ್ಮ ಅನುಕೂಲಕ್ಕಾಗಿ ಅಲ್ಲಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿದೆ. ನೀವು ದೇವರ ರಾಜ್ಯಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ಮನಸಾರೆ ಕೊಡುತ್ತಿರುವ ಬೆಂಬಲಕ್ಕಾಗಿ ಆಡಳಿತ ಮಂಡಲಿ ನಿಮಗೆ ಧನ್ಯವಾದ ಹೇಳುತ್ತದೆ. ನಿಮ್ಮೆಲ್ಲರ ಕಾಣಿಕೆಗಳನ್ನು ತುಂಬ ಅಮೂಲ್ಯವಾಗಿ ಎಣಿಸುತ್ತದೆ.

ಪ್ರಥಮ ಚಿಕಿತ್ಸೆ ಇದು ತುರ್ತು ಪರಿಸ್ಥಿತಿಗಳಿಗಾಗಿ ಮಾತ್ರ ಎನ್ನುವುದನ್ನು ದಯವಿಟ್ಟು ನೆನಪಿಡಿ.

ಲಾಸ್ಟ್‌ ಆ್ಯಂಡ್‌ ಫೌಂಡ್‌ ಬೇರೆಯವರ ವಸ್ತು ಸಿಕ್ಕಿದರೆ ಲಾಸ್ಟ್‌ ಆ್ಯಂಡ್‌ ಫೌಂಡ್‌ ಇಲಾಖೆಗೆ ಕೊಡಿ. ನಿಮ್ಮ ವಸ್ತು ಕಳೆದು ಹೋಗಿರುವಲ್ಲಿ ಈ ಇಲಾಖೆಗೆ ಹೋಗಿ ಕೇಳಿನೋಡಿ. ಹೆತ್ತವರ ಕೈತಪ್ಪಿದ ಮಕ್ಕಳನ್ನು ಈ ಇಲಾಖೆಗೆ ಒಪ್ಪಿಸಿ. ಆದರೆ ಈ ಇಲಾಖೆಗೆ ಹೆಚ್ಚು ಒತ್ತಡ ನೀಡದಿರಲು ನಿಮ್ಮ ಮಕ್ಕಳು ನಿಮ್ಮೊಟ್ಟಿಗೇ ಇರುವಂತೆ ದಯವಿಟ್ಟು ನೋಡಿಕೊಳ್ಳಿ.

ಸೀಟಿನ ವ್ಯವಸ್ಥೆ ದಯವಿಟ್ಟು ಇತರರಿಗೆ ಪರಿಗಣನೆ ತೋರಿಸಿ. ನಿಮ್ಮ ಕಾರ್‌ನಲ್ಲಿ ಪ್ರಯಾಣಿಸುತ್ತಿರುವವರಿಗೆ, ನಿಮ್ಮೊಟ್ಟಿಗೆ ವಾಸಿಸುತ್ತಿರುವವರಿಗೆ, ಈಗ ನೀವು ಬೈಬಲ್‌ ಅಧ್ಯಯನ ಮಾಡುತ್ತಿರುವವರಿಗೆ ಮಾತ್ರ ಸೀಟುಗಳನ್ನು ಕಾದಿರಿಸಬಹುದು. ನಿಮಗೆ ಬೇಕಾದಷ್ಟು ಸೀಟುಗಳನ್ನು ಕಾದಿರಿಸಿದ ಮೇಲೆ ದಯವಿಟ್ಟು ಬೇರೆ ಸೀಟುಗಳನ್ನು ಕಾದಿರಿಸಬೇಡಿ.

ಸ್ವಯಂಸೇವೆ ಅಧಿವೇಶನಕ್ಕೆ ಸಂಬಂಧಪಟ್ಟ ಕೆಲಸಕ್ಕೆ ಸಹಾಯಮಾಡಲು ನೀವು ಇಷ್ಟಪಡುವುದಾದರೆ ಮಾಹಿತಿ ಮತ್ತು ಸ್ವಯಂ​ಸೇವೆಯ ಇಲಾಖೆಯನ್ನು ಸಂಪರ್ಕಿಸಿ.

ವಿಶೇಷ ಕೂಟಗಳು

ರಾಜ್ಯ ಪ್ರಚಾರಕರ ಶಾಲೆ 23 ರಿಂದ 65 ವಯಸ್ಸಿನೊಳಗಿನ ಪಯನೀಯರರು ಸೇವೆಯನ್ನು ಹೆಚ್ಚಿಸಲು ಬಯಸುವಲ್ಲಿ ಈ ಕೂಟಕ್ಕೆ ಹಾಜರಾಗಬಹುದು. ಈ ಶಾಲೆಗೆ ಅರ್ಜಿಹಾಕಲು ಬಯಸುವವರಿಗಾಗಿ ಭಾನುವಾರ ಮಧ್ಯಾಹ್ನ ಕೂಟ ನಡೆಸಲಾಗುತ್ತದೆ. ಕೂಟ ನಡೆಯುವ ಸ್ಥಳ ಹಾಗೂ ಸಮಯವನ್ನು ತಿಳಿಸಲಾಗುವುದು.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಿಂದ ಏರ್ಪಡಿಸಲಾಗಿದೆ