ಅರಣ್ಯಕಾಂಡ 24:1-25

  • ಬಿಳಾಮನ 3ನೇ ಸಂದೇಶ (1-11)

  • ಬಿಳಾಮನ 4ನೇ ಸಂದೇಶ (12-25)

24  ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡೋದೇ ಯೆಹೋವನ ಇಷ್ಟ ಅಂತ ಬಿಳಾಮನಿಗೆ ಗೊತ್ತಾಯ್ತು. ಹಾಗಾಗಿ ಅವನು ಮತ್ತೆ ಭವಿಷ್ಯ ನೋಡೋಕೆ ಹೋಗಲಿಲ್ಲ.+ ಆದ್ರೆ ಅವನು ಕಾಡಿಗೆ ಮುಖ ಮಾಡಿ ನಿಂತ.  ಅವನು ಅಲ್ಲಿ ನೋಡಿದಾಗ ಇಸ್ರಾಯೇಲ್ಯರು ತಮ್ಮ ಕುಲದ ಪ್ರಕಾರ ಡೇರೆ ಹಾಕಿದ್ದು ಕಾಣಿಸ್ತು.+ ಆಮೇಲೆ ದೇವರ ಪವಿತ್ರಶಕ್ತಿ ಅವನ ಮೇಲೆ ಬಂತು.+  ಆಗ ಅವನು ಕಾವ್ಯರೂಪವಾಗಿ ಹೀಗೆ ಹೇಳಿದ:+ “ಇವು ಬೆಯೋರನ ಮಗ ಬಿಳಾಮನ ಮಾತುಗಳು,ಯಾರ ಕಣ್ಣು ತೆರಿತೋ ಅವನ ಮಾತುಗಳು,   ದೇವರ ಮಾತನ್ನ ಕೇಳಿಸ್ಕೊಂಡವನ,ಸರ್ವಶಕ್ತನ ದರ್ಶನ ನೋಡಿದವನಕಣ್ತೆರೆದು ಕೆಳಗೆ ಬಿದ್ದವನ ಮಾತುಗಳು:+   ಯಾಕೋಬನೇ, ನಿನ್ನ ಡೇರೆಗಳು ಎಷ್ಟೋ ಸುಂದರ! ಇಸ್ರಾಯೇಲನೇ, ನಿನ್ನ ಜಾಗಗಳು ಎಷ್ಟೋ ಮನೋಹರ!+   ಅವು ಕಣಿವೆಗಳ ತರ ದೂರದ ತನಕ ಇದೆ,+ನದಿತೀರದಲ್ಲಿರೋ ತೋಟಗಳ ತರ ಇದೆ,ಯೆಹೋವ ನೆಟ್ಟ ಅಗರು* ಗಿಡಗಳ ತರ ಇದೆ,ನೀರಿನ ಹತ್ರ ಇರೋ ದೇವದಾರು ಮರಗಳ ತರ ಇದೆ.   ಅವನ ಹತ್ರ ಇರೋ ಎರಡು ಪಾತ್ರೆಗಳಿಂದ ನೀರು ತೊಟ್ಟಿಕ್ತಾ ಇದೆ,ತುಂಬ ನೀರಿರೋ ಕಡೆ+ ಅವನು ಬೀಜ ಬಿತ್ತುತ್ತಾನೆ.* ಅಷ್ಟೇ ಅಲ್ಲ ಅವನ ರಾಜ+ ಅಗಾಗನಿಗಿಂತ ಅವನು ಶ್ರೇಷ್ಠನಾಗ್ತಾನೆ,+ಅವನ ರಾಜ್ಯ ಘನತೆಗೇರುತ್ತೆ.+   ದೇವರು ಅವನನ್ನ ಈಜಿಪ್ಟಿಂದ ಕರ್ಕೊಂಡು ಬರ್ತಿದ್ದಾನೆ,ಆತನು ಅವ್ರಿಗೆ ಕಾಡುಕೋಣದ ಕೊಂಬಿನ ತರ ಇದ್ದಾನೆ. ಇಸ್ರಾಯೇಲನ್ನ ದಬ್ಬಾಳಿಕೆ ಮಾಡೋ ಜನ್ರನ್ನ ನಾಶ ಮಾಡಿಬಿಡ್ತಾನೆ,+ಬಾಣಗಳಿಂದ ಅವ್ರನ್ನ ಚೂರುಚೂರು ಮಾಡ್ತಾನೆ, ಅವ್ರ ಎಲುಬುಗಳನ್ನ ಅಗಿತಾನೆ.   ಸಿಂಹದ ತರ ಅವನು ಕಾಲು ಮುದುರಿ ಕೂತಿದ್ದಾನೆ, ಸಿಂಹದ ತರ ಅವನು ಮಲಗಿದ್ದಾನೆ,ಸಿಂಹದ ತರ ಇರೋ ಅವನನ್ನ ಕೆಣಕೋ ಧೈರ್ಯ ಯಾರಿಗಿದೆ? ನಿನ್ನನ್ನ ಆಶೀರ್ವದಿಸೋ ಜನ್ರಿಗೆ ಆಶೀರ್ವಾದ ಸಿಗುತ್ತೆ,ನಿನ್ನನ್ನ ಶಪಿಸೋ ಜನ್ರಿಗೆ ಶಾಪ ತಟ್ಟುತ್ತೆ.”+ 10  ಬಿಳಾಮನ ಮಾತುಗಳನ್ನ ಕೇಳಿ ಬಾಲಾಕನಿಗೆ ವಿಪರೀತ ಕೋಪ ಬಂತು. ಅವನು ಚಪ್ಪಾಳೆ ಹೊಡೆದು ಅಣಕಿಸ್ತಾ “ನನ್ನ ಶತ್ರುಗಳಿಗೆ ಶಾಪ ಹಾಕು ಅಂತ ನಿನ್ನ ಕರೆದೆ.+ ಆದ್ರೆ ನೀನು ಮೂರು ಸಲನೂ ಅವ್ರಿಗೆ ಆಶೀರ್ವಾದ ಮಾಡ್ದೆ. 11  ಹೋಗು ಇಲ್ಲಿಂದ, ಒಂದು ಕ್ಷಣಾನೂ ಇಲ್ಲಿ ಇರ್ಬೇಡ. ನಿನಗೆ ದೊಡ್ಡ ಸನ್ಮಾನ ಮಾಡಬೇಕಂತ ಇದ್ದೆ.+ ಆದ್ರೆ ಆ ಸನ್ಮಾನ ನಿನಗೆ ಸಿಗ್ದೇ ಇರೋ ತರ ಯೆಹೋವ ತಡಿದಿದ್ದಾನೆ” ಅಂದ. 12  ಅದಕ್ಕೆ ಬಿಳಾಮ “ನಾನು ನಿನ್ನ ಅಧಿಕಾರಿಗಳ ಹತ್ರ 13  ‘ಬಾಲಾಕ ಅವನ ಹತ್ರ ಇರೋ ಚಿನ್ನಬೆಳ್ಳಿ ತುಂಬಿಸ್ಕೊಟ್ರೂ ಯೆಹೋವನ ಅಪ್ಪಣೆ ಮೀರಿ ನನ್ನಿಂದ ಏನೂ ಮಾಡೋಕೆ ಆಗಲ್ಲ. ಒಳ್ಳೇದಾಗ್ಲಿ ಕೆಟ್ಟದ್ದಾಗ್ಲಿ ನನ್ನ ಇಷ್ಟದ ಪ್ರಕಾರ ಏನೂ ಮಾಡೋಕಾಗಲ್ಲ. ಯೆಹೋವ ನನಗೆ ಹೇಳೋ ಮಾತುಗಳನ್ನೇ ಹೇಳ್ತೀನಿ’ ಅಂತ ಮೊದಲೇ ಹೇಳಿದ್ದೆ ತಾನೇ?+ 14  ಈಗ ನಾನು ನನ್ನ ಜನ್ರ ಹತ್ರ ಹೋಗ್ತೀನಿ. ಆದ್ರೆ ಅದಕ್ಕೆ ಮುಂಚೆ, ಈ ಜನ ನಿನ್ನ ಜನ್ರಿಗೆ ಮುಂದೇನು ಮಾಡ್ತಾರೆ ಅಂತ ಹೇಳಿ ಹೋಗ್ತೀನಿ” ಅಂದ. 15  ಅವನು ಕಾವ್ಯರೂಪವಾಗಿ ಹೀಗೆ ಹೇಳಿದ:+ “ಇವು ಬೆಯೋರನ ಮಗ ಬಿಳಾಮನ ಮಾತುಗಳು,ಯಾರ ಕಣ್ಣು ತೆರಿತೋ ಅವನ ಮಾತುಗಳು,+ 16  ದೇವರ ಮಾತನ್ನ ಕೇಳಿಸ್ಕೊಂಡವನ,ಸರ್ವೋನ್ನತನ ಜ್ಞಾನವನ್ನ ಪಡೆದಿರುವವನ,ಸರ್ವಶಕ್ತನ ದರ್ಶನವನ್ನ ನೋಡಿದವನಕಣ್ತೆರೆದು ಕೆಳಗೆ ಬಿದ್ದವನ ಮಾತುಗಳು: 17  ನಾನು ಅವನನ್ನ ನೋಡ್ತೀನಿ, ಆದ್ರೆ ಈಗ ಅಲ್ಲ,ನಾನು ಅವನನ್ನ ಕಣ್ಣಾರೆ ನೋಡ್ತೀನಿ, ಆದ್ರೆ ಬೇಗ ಅಲ್ಲ. ಯಾಕೋಬನ ವಂಶದಿಂದ ಒಂದು ನಕ್ಷತ್ರ+ ಹುಟ್ಟುತ್ತೆ,ಇಸ್ರಾಯೇಲನ ವಂಶದಿಂದ ಒಂದು ರಾಜದಂಡ+ ಬರುತ್ತೆ.+ ಅವನು ಮೋವಾಬಿನ ಹಣೆನ ಒಡೆದುಬಿಡ್ತಾನೆ+ಯುದ್ಧದ ಹುಚ್ಚಿರೋ ಎಲ್ಲ ಜನ್ರ ತಲೆಬುರುಡೆಗಳನ್ನ ಚೂರುಚೂರು ಮಾಡ್ತಾನೆ. 18  ಇಸ್ರಾಯೇಲ ತನ್ನ ಶೌರ್ಯನ ತೋರಿಸ್ತಿರೋವಾಗಎದೋಮ್‌ ಪ್ರದೇಶ ಅವನ ಆಸ್ತಿಯಾಗುತ್ತೆ,+ಸೇಯೀರ್‌ ದೇಶ+ ತನ್ನ ಶತ್ರುಗಳ ಸೊತ್ತಾಗುತ್ತೆ.+ 19  ಯಾಕೋಬನ ವಂಶದಿಂದ ಒಬ್ಬ ಶತ್ರುಗಳ ಮೇಲೆ ಜಯ ಸಾಧಿಸ್ತಾ ಹೋಗ್ತಾನೆ,+ಪಟ್ಟಣದಿಂದ ತಪ್ಪಿಸ್ಕೊಂಡವರನ್ನೆಲ್ಲ ಅವನು ನಾಶಮಾಡ್ತಾನೆ.” 20  ಬಿಳಾಮ ಅಮಾಲೇಕ್ಯರನ್ನ ನೋಡಿದಾಗ ಮತ್ತೆ ಕಾವ್ಯರೂಪವಾಗಿ ಹೀಗಂದ: “ಜನಾಂಗಗಳಲ್ಲಿ ಅಮಾಲೇಕ್ಯರು ಮೊದ್ಲು ಬಂದಿದ್ದಾರೆ,*+ಆದ್ರೆ ಕೊನೆಗೆ ಅವರು ಅಳಿದು ಹೋಗ್ತಾರೆ.”+ 21  ಅವನು ಕೇನ್ಯರನ್ನ+ ನೋಡಿದಾಗ ಮತ್ತೆ ಕಾವ್ಯರೂಪವಾಗಿ ಹೀಗಂದ: “ನಿಮ್ಮ ವಾಸಸ್ಥಳ ಸುರಕ್ಷಿತ, ನಿಮ್ಮ ಮನೆ ಬಂಡೆ ಮೇಲೆ ಭದ್ರ. 22  ಆದ್ರೆ ಕೇನ್ಯರನ್ನ ಒಬ್ಬ ಸುಟ್ಟುಬಿಡ್ತಾನೆ. ಅಶ್ಶೂರ್ಯ ನಿಮ್ಮನ್ನ ಹಿಡ್ಕೊಂಡು ಹೋಗೋ ಸಮಯ ಹತ್ರ ಆಯ್ತು.” 23  ಬಿಳಾಮ ಕಾವ್ಯರೂಪವಾಗಿ ಇನ್ನೂ ಹೇಳಿದ್ದು: “ಅಯ್ಯೋ! ದೇವರು ಹೀಗೆ ಮಾಡೋವಾಗ ಯಾರು ಉಳಿತಾರೆ? 24  ಕಿತ್ತೀಮಿನ+ ಕರಾವಳಿಯಿಂದ ಹಡಗುಗಳು ಬರುತ್ತೆ,ಅವು ಅಶ್ಶೂರ್‌ ದೇಶನ ಬಾಧಿಸುತ್ತೆ,+ಎಬೆರನ್ನ ಪೀಡಿಸುತ್ತೆ. ಆದ್ರೆ ಅವನು ಕೂಡ ಸಂಪೂರ್ಣ ನಾಶ ಆಗ್ತಾನೆ.” 25  ಆಮೇಲೆ ಬಿಳಾಮ+ ತನ್ನ ಜಾಗಕ್ಕೆ ವಾಪಸ್‌ ಹೋದ. ಬಾಲಾಕನೂ ತನ್ನ ದಾರಿಹಿಡಿದ.

ಪಾದಟಿಪ್ಪಣಿ

ಅಗರು ಮರಗಳು ರಾಳ, ಎಣ್ಣೆ ಉತ್ಪಾದಿಸುತ್ತೆ. ಈ ರಾಳ, ಎಣ್ಣೆಯನ್ನ ಸುಗಂಧ ದ್ರವ್ಯದ ತಯಾರಿಕೆಯಲ್ಲಿ ಬಳಸ್ತಿದ್ರು.
ಅಥವಾ “ಅವನ ಸಂತಾನ ಇರುತ್ತೆ.”
ಅಂದ್ರೆ, ಇಸ್ರಾಯೇಲ್ಯರು ಈಜಿಪ್ಟ್‌ ಬಿಟ್ಟು ಬಂದಾಗ ಸುಮ್ಮಸುಮ್ಮನೆ ಅವರ ಮೇಲೆ ಯುದ್ಧಕ್ಕೆ ಹೋದ ಮೊದಲನೇ ಜನಾಂಗ.