ಆಮೋಸ 2:1-16

  • ಪದೇಪದೇ ದಂಗೆ ಎದ್ದಿದಕ್ಕೆ ಶಿಕ್ಷೆ (1-16)

    • ಮೋವಾಬ್‌ (1-3), ಯೆಹೂದ (4, 5), ಇಸ್ರಾಯೇಲ್‌ (6-16)

2  “ಯೆಹೋವ ಹೀಗೆ ಹೇಳ್ತಾನೆ: ‘“ಮೋವಾಬ್‌ ಪದೇಪದೇ* ದಂಗೆ* ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,ಸುಣ್ಣಕ್ಕೋಸ್ಕರ ಅವನು ಎದೋಮಿನ ರಾಜನ ಮೂಳೆಗಳನ್ನ ಸುಟ್ಟುಬಿಟ್ಟ.   ಹಾಗಾಗಿ ನಾನು ಮೋವಾಬಿಗೆ ಬೆಂಕಿ ಕಳಿಸ್ತೀನಿ,ಆ ಬೆಂಕಿ ಕೆರೀಯೋತಿನ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ,+ಯುದ್ಧದ ಕೋಲಾಹಲ, ಯುದ್ಧಘೋಷ, ಕೊಂಬಿನ ಶಬ್ದಕೇಳಿಬರುವಾಗ ಮೋವಾಬ್‌ ಸತ್ತು ಹೋಗುತ್ತೆ.+   ನಾನು ಮೋವಾಬಿನ ಅಧಿಪತಿಯನ್ನ* ತೆಗೆದುಹಾಕ್ತೀನಿ,ಅವನ ಜೊತೆ ಅಲ್ಲಿನ ಎಲ್ಲ ಅಧಿಕಾರಿಗಳನ್ನ ಕೊಲ್ತೀನಿ,”+ ಇದು ಯೆಹೋವನ ಮಾತು.’   ಯೆಹೋವ ಹೀಗೆ ಹೇಳ್ತಾನೆ: ‘ಯೆಹೂದ ಪದೇಪದೇ* ದಂಗೆ ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,ಅವರು ಯೆಹೋವನ ನಿಯಮವನ್ನ* ತಿರಸ್ಕರಿಸಿದ್ರು,ಆತನ ಆಜ್ಞೆಗಳಿಗೆ ಅವಿಧೇಯರಾದ್ರು,+ತಮ್ಮ ಪೂರ್ವಜರು ಅನುಸರಿಸಿದ ಸುಳ್ಳು ಮಾತುಗಳನ್ನೇ ಅನುಸರಿಸಿ ದಾರಿತಪ್ಪಿದ್ದಾರೆ.+   ಹಾಗಾಗಿ ನಾನು ಯೆಹೂದಕ್ಕೆ ಬೆಂಕಿ ಕಳಿಸ್ತೀನಿ,ಆ ಬೆಂಕಿ ಯೆರೂಸಲೇಮಿನ ಭದ್ರ ಕೋಟೆಗಳನ್ನ ಸುಟ್ಟುಬಿಡುತ್ತೆ,’+   ಯೆಹೋವ ಹೀಗೆ ಹೇಳ್ತಾನೆ: ‘ಇಸ್ರಾಯೇಲ್‌ ಪದೇಪದೇ* ದಂಗೆ ಎದ್ದಿದೆ.+ ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,ಯಾಕಂದ್ರೆ ಅವರು ಬೆಳ್ಳಿಗಾಗಿ ನೀತಿವಂತನನ್ನ ಮಾರ್ತಾರೆ,ಒಂದು ಜೋಡಿ ಚಪ್ಪಲಿಗಾಗಿ ಬಡವನನ್ನ ಮಾರ್ತಾರೆ.+   ಕಷ್ಟದಲ್ಲಿ ಇರುವವ್ರ ತಲೆಯನ್ನ ಮಣ್ಣಲ್ಲಿ ಹಾಕಿ ತುಳಿತಾರೆ,+ಸೌಮ್ಯಭಾವದ ಜನ್ರ ದಾರಿಯನ್ನ ಅಡ್ಡಗಟ್ತಾರೆ.+ ತಂದೆ ಮತ್ತು ಮಗ ಇಬ್ರೂ ಒಂದೇ ಹುಡುಗಿ ಜೊತೆ ಸಂಬಂಧ ಇಟ್ಕೊಂಡಿದ್ದಾರೆ,ಹೀಗೆ ನನ್ನ ಪವಿತ್ರ ಹೆಸ್ರನ್ನ ಅಪವಿತ್ರ ಮಾಡಿದ್ದಾರೆ.   ಅವರು ಸಾಲಕ್ಕೆ ಗಿರವಿ ಇಟ್ಕೊಂಡ ಬಟ್ಟೆಗಳನ್ನ+ ಒಂದೊಂದು ಯಜ್ಞವೇದಿಯ ಹತ್ರ+ ಹಾಸ್ಕೊಂಡು ಮೈಚಾಚಿ ಬಿದ್ಕೊಂಡಿರ್ತಾರೆ,ತಾವು ದಂಡಹಾಕಿ ತಗೊಂಡ ಹಣದಿಂದ ದ್ರಾಕ್ಷಾಮದ್ಯ ಖರೀದಿಸಿ ತಮ್ಮ ದೇವರುಗಳ ಆಲಯದಲ್ಲಿ ಕುಡಿತಾರೆ.’   ‘ಆದ್ರೆ ನಾನೇ ಅವ್ರ ಮುಂದೆಯಿಂದ ಅಮೋರಿಯರನ್ನ ನಾಶ ಮಾಡಿದ್ದೆ,+ಆ ಅಮೋರಿಯರು ದೇವದಾರು ಮರಗಳ ತರ ಎತ್ತರವಾಗಿದ್ರು, ಓಕ್‌ ಮರಗಳ ತರ ಬಲಿಷ್ಠರಾಗಿದ್ರು,ನಾನು ಅವುಗಳ ಮೇಲಿರೋ ಹಣ್ಣುಗಳನ್ನೂ ಕೆಳಗಿರೋ ಬೇರುಗಳನ್ನೂ ನಾಶಮಾಡಿದೆ.+ 10  ಇಸ್ರಾಯೇಲ್‌ ಜನ್ರೇ, ನಾನೇ ನಿಮ್ಮನ್ನ ಈಜಿಪ್ಟ್‌* ದೇಶದಿಂದ ಹೊರಗೆ ಕರ್ಕೊಂಡು ಬಂದೆ,+ಅಮೋರಿಯರ ದೇಶವನ್ನ ನೀವು ವಶ ಮಾಡ್ಕೊಬೇಕಂತನಾನು ನಿಮ್ಮನ್ನ 40 ವರ್ಷ ಕಾಡಲ್ಲಿ* ನಡೆಸ್ಕೊಂಡು ಬಂದೆ.+ 11  ನಾನು ನಿಮ್ಮ ಗಂಡು ಮಕ್ಕಳಲ್ಲಿ ಕೆಲವ್ರನ್ನ ಪ್ರವಾದಿಗಳನ್ನಾಗಿ,+ನಿಮ್ಮ ಯುವಕರಲ್ಲಿ ಕೆಲವ್ರನ್ನ ನಾಜೀರರನ್ನಾಗಿ ನೇಮಿಸಿದೆ.+ ನಾನು ಇದನ್ನೆಲ್ಲ ಮಾಡಿದ್ದು ನಿಜ ಅಲ್ವಾ?’ ಅಂತ ಯೆಹೋವ ಕೇಳ್ತಾನೆ. 12  ‘ಆದ್ರೆ ನೀವು ನಾಜೀರರಿಗೆ ದ್ರಾಕ್ಷಾಮದ್ಯ ಕುಡಿಸ್ತಾ ಇದ್ರಿ,+“ಪ್ರವಾದಿಸಬಾರದು” ಅಂತ ಪ್ರವಾದಿಗಳಿಗೆ ಆಜ್ಞೆ ಕೊಟ್ರಿ.+ 13  ಹಾಗಾಗಿ ತೆನೆಗಳ ಕಟ್ಟುಗಳಿಂದ ತುಂಬಿರೋ ಬಂಡಿ ಅದ್ರ ಕೆಳಗಿರೋದನ್ನೆಲ್ಲ ನಜ್ಜುಗುಜ್ಜು ಮಾಡೋ ತರನಾನು ನಿಮ್ಮನ್ನ ನೀವಿರೋ ಸ್ಥಳದಲ್ಲೇ ಜಜ್ಜಿ ಬಿಡ್ತೀನಿ. 14  ವೇಗದ ಓಟಗಾರನಿಗೆ ಓಡಿಹೋಗೋಕೆ ಸ್ಥಳವಿರಲ್ಲ,+ಬಲಶಾಲಿಗೆ ಸ್ವಲ್ಪನೂ ಬಲ ಇರಲ್ಲ,ವೀರ ಸೈನಿಕರಲ್ಲಿ ಒಬ್ಬನಿಗೂ ಜೀವವನ್ನ ಉಳಿಸ್ಕೊಳ್ಳೋಕೆ ಆಗಲ್ಲ. 15  ಬಿಲ್ಲುಗಾರ ಯುದ್ಧವನ್ನ ಎದುರಿಸಿ ನಿಲ್ಲಲ್ಲ,ವೇಗವಾಗಿ ಓಡುವವನಿಗೆ ತಪ್ಪಿಸ್ಕೊಳ್ಳೋಕೆ ಆಗಲ್ಲ,ಕುದುರೆ ಸವಾರನಿಗೆ ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಗಲ್ಲ. 16  ವೀರ ಸೈನಿಕರಲ್ಲಿ ಕೆಚ್ಚೆದೆಯವನು ಸಹ ಆ ದಿನ ಬೆತ್ತಲೆಯಾಗಿ ಓಡಿಹೋಗ್ತಾನೆ’+ಅಂತ ಯೆಹೋವ ಹೇಳ್ತಾನೆ.”

ಪಾದಟಿಪ್ಪಣಿ

ಅಕ್ಷ. “ಮೂರು, ಹೌದು ನಾಲ್ಕು ಸಲ.”
ಅಥವಾ “ಅಪರಾಧಗಳು.”
ಅಕ್ಷ. “ನ್ಯಾಯಾಧೀಶ.”
ಅಕ್ಷ. “ಮೂರು, ಹೌದು ನಾಲ್ಕು ಸಲ.”
ಅಥವಾ “ಬೋಧನೆಯನ್ನ.”
ಅಕ್ಷ. “ಮೂರು, ಹೌದು ನಾಲ್ಕು ಸಲ.”
ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.
ಅಥವಾ “ಐಗುಪ್ತ.”