ಆಮೋಸ 7:1-17

  • ಇಸ್ರಾಯೇಲ್ಯರ ಅಂತ್ಯ ಹತ್ರ ಇದೆ ಅಂತ ತೋರಿಸೋ ದರ್ಶನಗಳು (1-9)

    • ಮಿಡತೆಗಳು (1-3), ಬೆಂಕಿ (4-6), ತೂಗುಗುಂಡು (7-9)

  • ಭವಿಷ್ಯ ಹೇಳೋದನ್ನ ನಿಲ್ಲಿಸೋಕೆ ಆಮೋಸನಿಗೆ ಹೇಳಲಾಯ್ತು (10-17)

7  ವಿಶ್ವದ ರಾಜ ಯೆಹೋವ ನನಗೆ ಒಂದು ದರ್ಶನ ತೋರಿಸಿದನು. ಅದ್ರಲ್ಲಿ ಆತನು ಮಿಡತೆಗಳ ಗುಂಪೊಂದನ್ನ ಕಳಿಸಿದನು. ಆಗ ಚಳಿಗಾಲದ* ಬೆಳೆ ಫಸಲು ಕೊಡೋಕೆ ಶುರು ಆಗಿತ್ತಷ್ಟೇ. ಅದು ರಾಜನಿಗಾಗಿ ಹುಲ್ಲನ್ನ ಕತ್ತರಿಸಿದ ಮೇಲೆ ಬೆಳೆಸಿದ ಬೆಳೆಯಾಗಿತ್ತು.  ಆ ಮಿಡತೆಗಳು ದೇಶದ ಬೆಳೆಯನ್ನೆಲ್ಲ ತಿಂದುಬಿಟ್ಟವು. ಅದನ್ನ ನೋಡಿ ನಾನು “ವಿಶ್ವದ ರಾಜ ಯೆಹೋವನೇ, ದಯವಿಟ್ಟು ನಿನ್ನ ಜನ್ರನ್ನ ಕ್ಷಮಿಸು.+ ಇಲ್ಲದಿದ್ರೆ ಯಾಕೋಬ ಬದುಕಿ ಉಳಿಯಲ್ಲ. ಯಾಕಂದ್ರೆ ಅವನು ಬಲಹೀನ”+ ಅಂದೆ.  ಹಾಗಾಗಿ ಯೆಹೋವ ತಾನು ಮಾಡಿದ ತೀರ್ಮಾನ ಬದಲಾಯಿಸ್ಕೊಂಡನು.*+ ಯೆಹೋವ ನನಗೆ “ಸರಿ, ಹಾಗೆ ಮಾಡಲ್ಲ” ಅಂದನು.  ಆಮೇಲೆ ವಿಶ್ವದ ರಾಜ ಯೆಹೋವ ಇನ್ನೊಂದು ದರ್ಶನ ತೋರಿಸಿದನು. ಅದ್ರಲ್ಲಿ ವಿಶ್ವದ ರಾಜ ಯೆಹೋವ ತನ್ನ ಜನ್ರನ್ನ ಶಿಕ್ಷಿಸೋಕೆ ಬೆಂಕಿ ಬರೋ ತರ ಆಜ್ಞೆ ಕೊಟ್ಟನು. ಆ ಬೆಂಕಿ ಉರಿತಾ ಸಮುದ್ರದ ನೀರನ್ನ ಒಣಗಿಸಿಬಿಟ್ಟಿತು ಮತ್ತು ದೇಶದ ಒಂದು ಭಾಗವನ್ನ ಸುಟ್ಟುಬಿಟ್ಟಿತು.  ಅದನ್ನ ನೋಡಿ ನಾನು “ವಿಶ್ವದ ರಾಜ ಯೆಹೋವನೇ, ಹಾಗೆ ಆಗದಿರಲಿ, ದಯವಿಟ್ಟು ಅದನ್ನ ತಡಿ.+ ಇಲ್ಲದಿದ್ರೆ ಯಾಕೋಬ ಬದುಕಿ ಉಳಿಯಲ್ಲ. ಯಾಕಂದ್ರೆ ಅವನು ಬಲಹೀನ”+ ಅಂದೆ.  ಹಾಗಾಗಿ ಯೆಹೋವ ತಾನು ಮಾಡಿದ ತೀರ್ಮಾನ ಬದಲಾಯಿಸ್ಕೊಂಡನು.*+ ವಿಶ್ವದ ರಾಜ ಯೆಹೋವ ನನಗೆ “ಸರಿ, ಇದನ್ನ ಕೂಡ ಮಾಡಲ್ಲ” ಅಂದನು.  ಆಮೇಲೆ ಆತನು ಇನ್ನೊಂದು ದರ್ಶನ ತೋರಿಸಿದನು. ಅದ್ರಲ್ಲಿ, ತೂಗುಗುಂಡು* ಬಳಸಿ ಕಟ್ಟಿದ ಒಂದು ಗೋಡೆ ಮೇಲೆ ಯೆಹೋವ ನಿಂತಿದ್ದನು. ಆತನ ಕೈಯಲ್ಲಿ ಒಂದು ತೂಗುಗುಂಡು ಇತ್ತು.  ಆಗ ಯೆಹೋವ “ಆಮೋಸ, ನಿನಗೆ ಏನು ಕಾಣ್ತಿದೆ?” ಅಂತ ಕೇಳಿದನು. ಅದಕ್ಕೆ “ತೂಗುಗುಂಡು ಕಾಣಿಸ್ತಿದೆ” ಅಂದೆ. ಆಗ ಯೆಹೋವ “ನಾನು ನನ್ನ ಜನ್ರಾದ ಇಸ್ರಾಯೇಲ್ಯರ ಮಧ್ಯದಲ್ಲಿ ತೂಗುಗುಂಡನ್ನ ಹಿಡಿತೀನಿ. ನಾನು ಇನ್ನು ಮುಂದೆ ಅವ್ರನ್ನ ಕ್ಷಮಿಸಲ್ಲ.+  ನಾನು ಇಸಾಕನ ಪೂಜಾಸ್ಥಳಗಳನ್ನ+ ಹಾಳುಮಾಡ್ತೀನಿ, ಇಸ್ರಾಯೇಲನ ಪವಿತ್ರ ಸ್ಥಳಗಳನ್ನ ನಾಶಮಾಡ್ತೀನಿ.+ ಯಾರೊಬ್ಬಾಮನ ಕುಟುಂಬದವ್ರನ್ನ ನಾಶಮಾಡೋಕೆ ಕತ್ತಿ ಹಿಡಿದು ಬರ್ತಿನಿ”+ ಅಂದನು. 10  ಬೆತೆಲಿನ+ ಪುರೋಹಿತ ಅಮಚ್ಯ ಇಸ್ರಾಯೇಲಿನ ರಾಜ ಯಾರೊಬ್ಬಾಮನಿಗೆ+ “ಆಮೋಸ ಇಸ್ರಾಯೇಲಿನ ಮಧ್ಯದಲ್ಲೇ ನಿನಗೆ ವಿರುದ್ಧ ಸಂಚು ಮಾಡ್ತಿದ್ದಾನೆ.+ ಜನ್ರಿಗೆ ಅವನು ಹೇಳ್ತಿರೋ ಮಾತುಗಳನ್ನ ಕೇಳಿಸ್ಕೊಳ್ಳೋಕೆ ಆಗ್ತಿಲ್ಲ.+ 11  ‘ಯಾರೊಬ್ಬಾಮ ಕತ್ತಿಯಿಂದ ಸಾಯ್ತಾನೆ, ಇಸ್ರಾಯೇಲಿನ ಜನ ತಮ್ಮ ಸ್ವದೇಶದಿಂದ ಖಂಡಿತ ಕೈದಿಯಾಗಿ ಹೋಗ್ತಾರೆ’+ ಅಂತ ಆಮೋಸ ಹೇಳ್ತಿದ್ದಾನೆ” ಅಂತ ಹೇಳಿ ಕಳಿಸಿದ. 12  ಆಮೇಲೆ ಅಮಚ್ಯ ಆಮೋಸನಿಗೆ “ದರ್ಶನ ನೋಡುವವನೇ, ಯೆಹೂದ ದೇಶಕ್ಕೆ ಓಡಿಹೋಗು. ಅಲ್ಲೇ ನಿನ್ನ ಹೊಟ್ಟೆ ತುಂಬಿಸ್ಕೊ ಮತ್ತು ಭವಿಷ್ಯ ಹೇಳು.+ 13  ಆದ್ರೆ ಇನ್ನು ಮುಂದೆ ಬೆತೆಲಲ್ಲಿ ನೀನು ಭವಿಷ್ಯ ಹೇಳಬಾರದು.+ ಯಾಕಂದ್ರೆ ಇದು ರಾಜನ ಪವಿತ್ರ ಸ್ಥಳ+ ಮತ್ತು ಈ ರಾಜ್ಯದ ಆಲಯ” ಅಂದ. 14  ಅದಕ್ಕೆ ಆಮೋಸ ಅಮಚ್ಯನಿಗೆ “ನಾನು ಪ್ರವಾದಿ ಆಗಿರಲಿಲ್ಲ, ನನ್ನ ತಂದೆನೂ ಪ್ರವಾದಿ ಆಗಿರಲಿಲ್ಲ. ನಾನು ಕುರುಬನಾಗಿದ್ದೆ+ ಮತ್ತು ಸಿಕಮೋರ್‌ ಅಂಜೂರ ಮರಗಳನ್ನ ನೋಡ್ಕೊಳ್ತಿದ್ದೆ.* 15  ಆದ್ರೆ ಯೆಹೋವ ನನಗೆ ಹಿಂಡನ್ನ ನೋಡ್ಕೋಳ್ಳೋದನ್ನ ಬಿಟ್ಟು ಬಾ ಅಂತ ಹೇಳಿದನು. ಅಷ್ಟೇ ಅಲ್ಲ ಯೆಹೋವ ನನಗೆ ‘ಹೋಗು, ನನ್ನ ಜನ್ರಾದ ಇಸ್ರಾಯೇಲ್ಯರಿಗೆ ಭವಿಷ್ಯವಾಣಿ ಹೇಳು’+ ಅಂದನು. 16  ಈಗ ಯೆಹೋವನ ಮಾತನ್ನ ಕೇಳು: ‘“ಇಸ್ರಾಯೇಲಿಗೆ ವಿರುದ್ಧ ಭವಿಷ್ಯ ಹೇಳಬೇಡ,+ ಇಸಾಕನ ವಂಶದವರ ವಿರುದ್ಧ ಸಾರಬೇಡ”+ ಅಂತ ನೀನು ಹೇಳ್ತಿಯಲ್ಲಾ. 17  ಹಾಗಾಗಿ ಯೆಹೋವ ಹೀಗೆ ಹೇಳ್ತಾನೆ: “ನಿನ್ನ ಹೆಂಡತಿ ಪಟ್ಟಣದಲ್ಲಿ ವೇಶ್ಯೆಯಾಗ್ತಾಳೆ. ನಿನ್ನ ಮಕ್ಕಳು ಕತ್ತಿಗೆ ಬಲಿ ಆಗ್ತಾರೆ. ನಿನ್ನ ಜಮೀನನ್ನ ಅಳತೆ ಮಾಡಿ ಪಾಲು ಮಾಡ್ಕೊಳ್ಳಲಾಗುತ್ತೆ. ಅಶುದ್ಧವಾದ ಒಂದು ದೇಶದಲ್ಲಿ ನೀನು ಸಾಯ್ತೀಯ. ಇಸ್ರಾಯೇಲ್‌ ಸ್ವದೇಶದಿಂದ ಕೈದಿಯಾಗಿ ಹೋಗೋದು ಖಂಡಿತ”’”+ ಅಂತ ಹೇಳಿದ.

ಪಾದಟಿಪ್ಪಣಿ

ಅಂದ್ರೆ, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ.
ಅಥವಾ “ಮನಮರುಗಿದನು.”
ಅಥವಾ “ಮನಮರುಗಿದನು.”
ಅಥವಾ “ನೂಲುಗುಂಡು.”
ಅಥವಾ “ಸಿಕಮೋರ್‌ ಅಂಜೂರಗಳನ್ನ ಚುಚ್ಚೋ ಕೆಲಸ ಮಾಡ್ತಿದ್ದೆ.”