ನ್ಯಾಯಸ್ಥಾಪಕರು 2:1-23

  • ಯೆಹೋವನ ದೂತನಿಂದ ಎಚ್ಚರಿಕೆ (1-5)

  • ಯೆಹೋಶುವನ ಮರಣ (6-10)

  • ಇಸ್ರಾಯೇಲ್ಯರನ್ನ ರಕ್ಷಿಸೋಕೆ ನ್ಯಾಯಾಧೀಶರ ನೇಮಕ (11-23)

2  ಆಮೇಲೆ ಯೆಹೋವನ ದೂತ+ ಗಿಲ್ಗಾಲಿಂದ+ ಬೋಕೀಮಿಗೆ ಹೋಗಿ ಇಸ್ರಾಯೇಲ್ಯರಿಗೆ ಹೀಗಂದ: “ನಾನು ನಿಮ್ಮ ಪೂರ್ವಜರಿಗೆ ಮಾತು ಕೊಟ್ಟ+ ಹಾಗೆ ನಿಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದೆ. ‘ನಾನು ನಿಮ್ಮ ಜೊತೆ ಮಾಡ್ಕೊಂಡ ಒಪ್ಪಂದವನ್ನ ಯಾವತ್ತೂ ಮುರಿಯಲ್ಲ.+  ಈ ದೇಶದ ಜನ್ರ ಜೊತೆ ನೀವು ಒಪ್ಪಂದ ಮಾಡ್ಕೊಬಾರದು,+ ಅವ್ರ ಯಜ್ಞವೇದಿಗಳನ್ನ ನಾಶ ಮಾಡಬೇಕು’+ ಅಂತ ಆಜ್ಞೆ ಕೊಟ್ಟಿದ್ದೆ. ಆದ್ರೆ ನೀವು ನನ್ನ ಮಾತು ಕೇಳಲಿಲ್ಲ.+ ಯಾಕೆ ಹೀಗೆ ಮಾಡಿದ್ರಿ?  ಅದಕ್ಕೇ ‘ನಾನು ಅವ್ರನ್ನ ನಿಮ್ಮಿಂದ ದೂರ ಓಡಿಸಿ ಬಿಡಲ್ಲ.+ ಅವರು ನಿಮ್ಮನ್ನ ಉರ್ಲಿಗೆ ಸಿಕ್ಕಿಸ್ತಾರೆ.+ ನೀವು ಅವ್ರ ದೇವರುಗಳನ್ನ ಆರಾಧಿಸೋ ಹಾಗೆ ಮಾಡಿಬಿಡ್ತಾರೆ’ ಅಂತ ಹೇಳಿದ್ದೆ.”+  ಯೆಹೋವನ ದೂತ ಎಲ್ಲ ಇಸ್ರಾಯೇಲ್ಯರಿಗೆ ಈ ಮಾತು ಹೇಳಿದ ಕೂಡ್ಲೇ, ಜನ್ರು ಜೋರಾಗಿ ಅಳೋಕೆ ಶುರು ಮಾಡಿದ್ರು.  ಹಾಗಾಗಿ ಅವರು ಆ ಜಾಗಕ್ಕೆ ಬೋಕೀಮ್‌* ಅಂತ ಹೆಸ್ರಿಟ್ಟು, ಅಲ್ಲಿ ಯೆಹೋವನಿಗೆ ಬಲಿ ಅರ್ಪಿಸಿದ್ರು.  ಯೆಹೋಶುವ ಇಸ್ರಾಯೇಲ್ಯರನ್ನ ಕಳಿಸಿದ ಮೇಲೆ ಅವರು ತಮ್ಮತಮ್ಮ ಪಾಲಿಗೆ ಬಂದ ಆಸ್ತಿ ವಶ ಮಾಡ್ಕೊಂಡ್ರು.+  ಯೆಹೋಶುವ ಬದುಕಿದ್ದಾಗ್ಲೂ ಇಸ್ರಾಯೇಲ್ಯರು ಯೆಹೋವನನ್ನ ಆರಾಧಿಸಿದ್ರು. ಇಸ್ರಾಯೇಲ್ಯರಿಗೋಸ್ಕರ ಯೆಹೋವ ಮಾಡಿದ ಕೆಲಸಗಳನ್ನೆಲ್ಲ ನೋಡಿದ ಹಿರಿಯರು ಬದುಕಿರೋ ತನಕ ಇಸ್ರಾಯೇಲ್ಯರು ಸತ್ಯ ದೇವರ ಆರಾಧನೆ ಮಾಡ್ತಾ ಇದ್ರು.+  ಯೆಹೋವನ ಸೇವಕನೂ ನೂನನ ಮಗನೂ ಆದ ಯೆಹೋಶುವನಿಗೆ 110 ವರ್ಷ ಆದಾಗ ತೀರಿಹೋದ.+  ಅವನಿಗೆ ಆಸ್ತಿಯಾಗಿ ಸಿಕ್ಕಿದ್ದ ತಿಮ್ನತ್‌-ಹೆರೆಸ್‌ನಲ್ಲಿ+ ಅವನನ್ನ ಸಮಾಧಿ ಮಾಡಿದ್ರು. ಅದು ಗಾಷ್‌ ಬೆಟ್ಟದ ಉತ್ತರದಲ್ಲಿರೋ ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿ ಇತ್ತು.+ 10  ಯೆಹೋಶುವನ ಪೀಳಿಗೆಯಲ್ಲಿದ್ದ ಜನ್ರೆಲ್ಲ ತೀರಿಹೋದ್ರು. ಆಮೇಲೆ ಬಂದ ಪೀಳಿಗೆಗೆ ಯೆಹೋವನ ಬಗ್ಗೆ, ಆತನು ಇಸ್ರಾಯೇಲ್ಯರಿಗೋಸ್ಕರ ಮಾಡಿದ ವಿಷ್ಯಗಳ ಬಗ್ಗೆ ಗೊತ್ತಿರಲಿಲ್ಲ. 11  ಹಾಗಾಗಿ ಇಸ್ರಾಯೇಲ್ಯರು ಯೆಹೋವನಿಗೆ ಸ್ವಲ್ಪನೂ ಇಷ್ಟ ಆಗದ ವಿಷ್ಯಗಳನ್ನ ಮಾಡಿದ್ರು. ಬಾಳನ ಮೂರ್ತಿಗಳನ್ನ ಆರಾಧಿಸಿದ್ರು.+ 12  ಹೀಗೆ ಅವ್ರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದ, ಅವ್ರ ಪೂರ್ವಜರ ದೇವರಾಗಿದ್ದ ಯೆಹೋವನನ್ನ ಬಿಟ್ಟುಬಿಟ್ರು.+ ತಮ್ಮ ಅಕ್ಕಪಕ್ಕದಲ್ಲಿದ್ದ ಜನ್ರ ದೇವರುಗಳ ಅಂದ್ರೆ ಬೇರೆ ದೇವರುಗಳ ಹಿಂದೆ ಹೋದ್ರು.+ ಅವುಗಳಿಗೆ ಅಡ್ಡಬಿದ್ದು ಯೆಹೋವನಿಗೆ ಸಿಟ್ಟು ಬರಿಸಿದ್ರು.+ 13  ಅವರು ಯೆಹೋವನನ್ನ ಬಿಟ್ಟು ಬಾಳ್‌, ಅಷ್ಟೋರೆತ್‌ ದೇವರುಗಳ ಮೂರ್ತಿಗಳನ್ನ ಆರಾಧಿಸಿದ್ರು.+ 14  ಆಗ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು.* ಹಾಗಾಗಿ ದೇವರು ಅವ್ರನ್ನ ಲೂಟಿ ಮಾಡೋರ ಕೈಗೆ ಒಪ್ಪಿಸಿದನು.+ ಅವರು ಇಸ್ರಾಯೇಲ್ಯರನ್ನ ಲೂಟಿ ಮಾಡಿದ್ರು. ಆತನು ಇಸ್ರಾಯೇಲ್ಯರನ್ನ ಸುತ್ತಮುತ್ತ ಇರೋ ಶತ್ರುಗಳಿಗೆ ಒಪ್ಪಿಸಿಬಿಟ್ಟನು.+ ಏನೇ ಮಾಡಿದ್ರೂ ಶತ್ರುಗಳಿಂದ ತಪ್ಪಿಸ್ಕೊಳ್ಳೋಕೆ ಆಗಲಿಲ್ಲ.+ 15  ಯೆಹೋವ ಹೇಳಿದ ಹಾಗೇ, ಯೆಹೋವ ಮಾತು ಕೊಟ್ಟ+ ಹಾಗೇ ಎಲ್ಲಿ ಹೋದ್ರೂ ಯೆಹೋವನ ಕೈ ಅವ್ರ ವಿರುದ್ಧನೇ ಇತ್ತು. ದೇವರು ಅವ್ರ ಮೇಲೆ ಕಷ್ಟ ತಂದನು.+ ಇದ್ರಿಂದಾಗಿ ಇಸ್ರಾಯೇಲ್ಯರು ತುಂಬ ಕಷ್ಟ ಪಟ್ರು.+ 16  ಆಗ ಲೂಟಿ ಮಾಡೋರ ಕೈಯಿಂದ ಅವ್ರನ್ನ ಬಿಡಿಸೋಕೆ ಯೆಹೋವ ನ್ಯಾಯಾಧೀಶರನ್ನ ನೇಮಿಸಿದನು.*+ 17  ಆದ್ರೆ ಅವರು ನ್ಯಾಯಾಧೀಶರ ಮಾತನ್ನ ಕೂಡ ಕೇಳಲಿಲ್ಲ. ಬೇರೆ ದೇವರುಗಳಿಗೆ ಅಡ್ಡಬಿದ್ದು ಆರಾಧನೆ ಮಾಡೋಕೆ* ಶುರು ಮಾಡಿದ್ರು. ಯೆಹೋವನ ಆಜ್ಞೆಗಳನ್ನ ಪಾಲಿಸ್ತಿದ್ದ ತಮ್ಮ ಪೂರ್ವಜರ+ ದಾರಿ ಬಿಟ್ಟು, ಬೇರೆ ದಾರಿ ಹಿಡಿದ್ರು. ಆ ಆಜ್ಞೆಗಳನ್ನ ಪಾಲಿಸ್ತಾ ಇರಲಿಲ್ಲ. 18  ಇಸ್ರಾಯೇಲ್ಯರ ಮೇಲೆ ಬೇರೆಯವರು ದಬ್ಬಾಳಿಕೆ ಮಾಡಿದಾಗ,+ ಕ್ರೂರವಾಗಿ ಕಷ್ಟ ಕೊಟ್ಟಾಗ ಅವ್ರ ನೋವನ್ನ ನೋಡಿ ಯೆಹೋವನ ಮನಸ್ಸು ಕರಗ್ತಾ ಇತ್ತು.*+ ಆಗೆಲ್ಲ ಯೆಹೋವ ನ್ಯಾಯಾಧೀಶರನ್ನ ನೇಮಿಸ್ತಿದ್ದನು.+ ಪ್ರತಿಯೊಬ್ಬ ನ್ಯಾಯಾಧೀಶನಿಗೂ ಬೆಂಬಲವಾಗಿ ಯೆಹೋವನೇ ಇದ್ದನು. ಆ ನ್ಯಾಯಾಧೀಶ ಇದ್ದಷ್ಟು ಕಾಲ ದೇವರು ಇಸ್ರಾಯೇಲ್ಯರನ್ನ ಶತ್ರುಗಳ ಕೈಯಿಂದ ಕಾಪಾಡ್ತಿದ್ದನು. 19  ಆದ್ರೆ ನ್ಯಾಯಾಧೀಶ ತೀರಿಹೋದ ಕೂಡ್ಲೇ ಮತ್ತೆ ಬೇರೆ ದೇವರುಗಳ ಹಿಂದೆ ಹೋಗ್ತಿದ್ರು. ಅವುಗಳನ್ನ ಆರಾಧನೆ ಮಾಡ್ತಿದ್ರು. ಅವುಗಳಿಗೆ ಅಡ್ಡಬಿದ್ದು ತಮ್ಮ ಪೂರ್ವಜರಿಗಿಂತ ಇನ್ನೂ ಜಾಸ್ತಿ ಕೆಟ್ಟವರಾದ್ರು.+ ಅವರು ತಮ್ಮ ಹಳೇ ರೂಢಿಗಳನ್ನ, ಮೊಂಡುತನವನ್ನ ಬಿಡ್ಲೇ ಇಲ್ಲ. 20  ಕೊನೆಗೆ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು.+ ಆತನು ಹೀಗಂದನು: “ನಾನು ಈ ಜನ್ರ ಪೂರ್ವಜರ ಜೊತೆ ಮಾಡ್ಕೊಂಡ ಒಪ್ಪಂದವನ್ನ ಇವರು ಮುರಿದಿದ್ದಾರೆ,+ ನನ್ನ ಮಾತು ಕೇಳ್ತಿಲ್ಲ.+ 21  ಯೆಹೋಶುವ ತೀರಿಹೋಗುವಾಗ ಯಾವೆಲ್ಲ ಪ್ರದೇಶಗಳನ್ನ ಅವನು ವಶ ಮಾಡ್ಕೊಂಡಿರಲಿಲ್ವೋ ಆ ಪ್ರದೇಶಗಳ ಜನಾಂಗಗಳಲ್ಲಿ ಒಂದನ್ನ ಸಹ ನಾನು ಇವರಿಗಾಗಿ ಓಡಿಸಿಬಿಡಲ್ಲ.+ 22  ಇವರು ಪೂರ್ವಜರ ತರ ಯೆಹೋವನಾದ ನಾನು ಹೇಳಿದ ಹಾಗೆ ನಡೀತಾರಾ ಇಲ್ವಾ ಅಂತ ಪರೀಕ್ಷಿಸ್ತೀನಿ.”+ 23  ಯೆಹೋವ ಆ ಜನ್ರನ್ನ ಅಲ್ಲೇ ಇರೋಕೆ ಬಿಟ್ಟ. ಅವ್ರನ್ನ ಕೂಡ್ಲೇ ಅಲ್ಲಿಂದ ಓಡಿಸಿಬಿಡಲಿಲ್ಲ, ಯೆಹೋಶುವನ ಕೈಗೂ ಅವ್ರನ್ನ ಒಪ್ಪಿಸಿರಲಿಲ್ಲ.

ಪಾದಟಿಪ್ಪಣಿ

ಅರ್ಥ “ಅಳೋರು.”
ಅಥವಾ “ಕೋಪದ ಜ್ವಾಲೆ ಹೊತ್ತಿ ಉರಿತು.”
ಅಕ್ಷ. “ಎಬ್ಬಿಸಿದನು.”
ಅಥವಾ “ವೇಶ್ಯೆರ ತರ ನಡ್ಕೊಳ್ಳೋಕೆ.”
ಅಥವಾ “ಮನಸ್ಸಿಗೆ ದುಃಖ ಆಯ್ತು.”