ಯಾಜಕಕಾಂಡ 2:1-16

  • ಧಾನ್ಯ ಅರ್ಪಣೆ (1-16)

2  ಯಾರಾದ್ರೂ ಯೆಹೋವನಿಗೆ ಧಾನ್ಯ ಅರ್ಪಣೆ+ ಕೊಡೋಕೆ ಇಷ್ಟಪಟ್ರೆ ಧಾನ್ಯವನ್ನ ನುಣ್ಣಗೆ ಹಿಟ್ಟು* ಮಾಡಿ ಕೊಡಬೇಕು. ಅದ್ರ ಮೇಲೆ ಎಣ್ಣೆ ಸುರಿದು ಸಾಂಬ್ರಾಣಿ ಇಡಬೇಕು.+  ಅದನ್ನ ಪುರೋಹಿತರಾದ ಆರೋನನ ಮಕ್ಕಳ* ಹತ್ರ ತರಬೇಕು. ಪುರೋಹಿತ ಎಣ್ಣೆ ಬೆರೆತ ನುಣ್ಣಗಿನ ಆ ಹಿಟ್ಟನ್ನ ಮತ್ತು ಅದ್ರ ಮೇಲಿರೋ ಎಲ್ಲ ಸಾಂಬ್ರಾಣಿನ ಹಿಡಿತುಂಬ ತಗೊಂಡು ಯಜ್ಞವೇದಿ ಮೇಲಿರೋ ಬೆಂಕಿಯಲ್ಲಿ ಅರ್ಪಿಸಬೇಕು. ಈ ರೀತಿ ಮಾಡೋದು ಧಾನ್ಯ ಅರ್ಪಣೆನ+ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಯಜ್ಞವೇದಿಯಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.  ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಿದ ಆ ಧಾನ್ಯ ಅರ್ಪಣೆಯಲ್ಲಿ ಉಳಿದಿರೋದು ಅತಿ ಪವಿತ್ರವಾಗಿರುತ್ತೆ.+ ಅದು ಆರೋನನಿಗೆ, ಅವನ ಮಕ್ಕಳಿಗೆ+ ಸೇರಬೇಕು.  ನೀವು ಒಲೆಯಲ್ಲಿ ಸುಟ್ಟದ್ದನ್ನ ಧಾನ್ಯ ಅರ್ಪಣೆಯಾಗಿ ಕೊಡೋಕೆ ಇಷ್ಟಪಟ್ರೆ ನುಣ್ಣಗಿನ ಹಿಟ್ಟಿಗೆ ಎಣ್ಣೆ ಬೆರೆಸಿ ಹುಳಿ ಇಲ್ಲದ ರೊಟ್ಟಿಗಳನ್ನ ಬಳೆ ಆಕಾರದಲ್ಲಿ ಮಾಡಿ ಕೊಡಬೇಕು ಅಥವಾ ನುಣ್ಣಗಿನ ಹಿಟ್ಟಿಂದ ಹುಳಿ ಇಲ್ಲದ ತೆಳುವಾದ ರೊಟ್ಟಿಗಳನ್ನ ಮಾಡಿ ಎಣ್ಣೆ ಸವರಿ ಕೊಡಬೇಕು.+  ನೀವು ಹೆಂಚಿನ ಮೇಲೆ ಸುಟ್ಟದ್ದನ್ನ+ ಧಾನ್ಯ ಅರ್ಪಣೆಯಾಗಿ ಕೊಡೋಕೆ ಇಷ್ಟಪಟ್ರೆ ಮೊದ್ಲು ನುಣ್ಣಗಿನ ಹಿಟ್ಟಿಗೆ ಎಣ್ಣೆ ಬೆರೆಸಿ ಹುಳಿ ಇಲ್ಲದ ರೊಟ್ಟಿ ಮಾಡಬೇಕು.  ಅದನ್ನ ಮುರಿದು ತುಂಡುತುಂಡುಗಳಾಗಿ ಮಾಡಿ ಅದ್ರ ಮೇಲೆ ಎಣ್ಣೆ ಸುರಿದು ಕೊಡಬೇಕು.+ ಅದು ಧಾನ್ಯ ಅರ್ಪಣೆ.  ನೀವು ಬಾಂಡ್ಲಿಯಲ್ಲಿ ತಯಾರಿಸಿದ್ದನ್ನ ಧಾನ್ಯ ಅರ್ಪಣೆಯಾಗಿ ಕೊಡೋಕೆ ಇಷ್ಟಪಟ್ರೆ ಅದು ನುಣ್ಣಗಿನ ಹಿಟ್ಟಿಗೆ ಎಣ್ಣೆ ಬೆರೆಸಿ ಮಾಡಿದ್ದಾಗಿರಬೇಕು.  ನೀವು ಯೆಹೋವನಿಗೆ ಕೊಡಬೇಕು ಅಂತಿರೋ ಧಾನ್ಯ ಅರ್ಪಣೆನ ತಂದು ಪುರೋಹಿತನಿಗೆ ಕೊಡಬೇಕು. ಅವನು ಅದನ್ನ ಯಜ್ಞವೇದಿ ಹತ್ರ ತಗೊಂಡು ಹೋಗ್ತಾನೆ.  ಪುರೋಹಿತ ಧಾನ್ಯ ಅರ್ಪಣೆಯಲ್ಲಿ ಸ್ವಲ್ಪ ತಗೊಂಡು ಯಜ್ಞವೇದಿ ಮೇಲಿರೋ ಬೆಂಕಿಯಲ್ಲಿ ಅರ್ಪಿಸ್ತಾನೆ.+ ಇದು ಧಾನ್ಯ ಅರ್ಪಣೆನ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ. ಯಜ್ಞವೇದಿಯಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.+ 10  ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಿದ ಧಾನ್ಯ ಅರ್ಪಣೆಯಲ್ಲಿ ಉಳಿದಿರೋದು ಅತಿ ಪವಿತ್ರವಾಗಿರುತ್ತೆ. ಅದು ಆರೋನನಿಗೆ, ಅವನ ಮಕ್ಕಳಿಗೆ ಸೇರಬೇಕು.+ 11  ನೀವು ಯೆಹೋವನಿಗೆ ಕೊಡೋ ಯಾವುದೇ ಧಾನ್ಯ ಅರ್ಪಣೆಯಲ್ಲಿ ಹುಳಿ ಬೆರೆಸಬಾರದು.+ ಯಾಕಂದ್ರೆ ಹುಳಿಹಿಟ್ಟನ್ನ ಹಣ್ಣುಗಳ ರಸವನ್ನ* ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಿ ಹೊಗೆ ಮೇಲೇರಿಸೋದು ತಪ್ಪು. 12  ಹುಳಿಹಿಟ್ಟನ್ನ ಅಥವಾ ಹಣ್ಣುಗಳ ರಸವನ್ನ ನೀವು ಮೊದಲ ಬೆಳೆಯ ಅರ್ಪಣೆಯಾಗಿ ಯೆಹೋವನಿಗೆ ಕೊಡಬಹುದು.+ ಆದ್ರೆ ಸುವಾಸನೆಯ ಅರ್ಪಣೆಯಾಗಿ ಅವುಗಳನ್ನ ಯಜ್ಞವೇದಿ ಮೇಲೆ ಅರ್ಪಿಸಬಾರದು. 13  ದೇವರಿಗೆ ಅರ್ಪಿಸೋ ಪ್ರತಿಯೊಂದು ಧಾನ್ಯ ಅರ್ಪಣೆಯಲ್ಲಿ ನೀವು ಉಪ್ಪು ಸೇರಿಸಬೇಕು. ಉಪ್ಪಿಲ್ಲದೆ ಧಾನ್ಯ ಅರ್ಪಣೆ ಕೊಡಬಾರದು. ಯಾಕಂದ್ರೆ ಆ ಉಪ್ಪು ದೇವರು ನಿಮ್ಮ ಜೊತೆ ಮಾಡ್ಕೊಂಡಿರೋ ಒಪ್ಪಂದನ* ನೆನಪಿಸುತ್ತೆ. ನೀವು ಪ್ರತಿಯೊಂದು ಅರ್ಪಣೆ ಜೊತೆ ಉಪ್ಪನ್ನ ಅರ್ಪಿಸ್ಲೇಬೇಕು.+ 14  ನೀವು ಮೊದಲ ಬೆಳೆಯಿಂದ ಧಾನ್ಯ ಅರ್ಪಣೆನ ಯೆಹೋವನಿಗೆ ಕೊಡೋದಾದ್ರೆ ಆ ಹೊಸ ಧಾನ್ಯವನ್ನ* ಬೆಂಕಿಯಲ್ಲಿ ಹುರಿದು ಕುಟ್ಟಿ ನುಚ್ಚು ಮಾಡಬೇಕು. ಇದು ಧಾನ್ಯದ ಮೊದಲ ಬೆಳೆಯ ಅರ್ಪಣೆ.+ 15  ಅದ್ರ ಮೇಲೆ ಎಣ್ಣೆ ಹಾಕಿ ಸಾಂಬ್ರಾಣಿ ಇಟ್ಟು ಕೊಡಬೇಕು. ಇದೇ ಧಾನ್ಯ ಅರ್ಪಣೆ. 16  ಪುರೋಹಿತ ಎಣ್ಣೆ ಬೆರೆತ ನುಚ್ಚಿನಲ್ಲಿ ಸ್ವಲ್ಪವನ್ನ,+ ಎಲ್ಲ ಸಾಂಬ್ರಾಣಿಯನ್ನ ತಗೊಂಡು ಯಜ್ಞವೇದಿ ಮೇಲಿರೋ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಬೇಕು. ಯಜ್ಞವೇದಿಯಿಂದ ಹೊಗೆ ಮೇಲೆ ಹೋಗಬೇಕು. ಇದು ಧಾನ್ಯ ಅರ್ಪಣೆಯನ್ನ ಪೂರ್ತಿಯಾಗಿ ಅರ್ಪಿಸಿದ್ದಾರೆ ಅಂತ ಸೂಚಿಸುತ್ತೆ.

ಪಾದಟಿಪ್ಪಣಿ

ಅಥವಾ “ಉತ್ತಮ ಗುಣಮಟ್ಟದ ಹಿಟ್ಟು.”
ಅಥವಾ “ವಂಶದವರ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಕ್ಷ. “ಜೇನುತುಪ್ಪ.” ಇದು ಅಂಜೂರ ಅಥವಾ ಬೇರೆ ಹಣ್ಣುಗಳ ರಸ ಇರಬೇಕು.
ಅಥವಾ “ಒಡಂಬಡಿಕೆಯನ್ನ.”
ಅಥವಾ “ಹಸಿರು ತೆನೆಗಳನ್ನ.”