ಯೆರೆಮೀಯ 2:1-37

  • ಇಸ್ರಾಯೇಲ್ಯರು ಯೆಹೋವನನ್ನ ಬಿಟ್ಟು ಬೇರೆ ದೇವರುಗಳನ್ನು ಆರಾಧಿಸಿದ್ರು (1-37)

    • ಇಸ್ರಾಯೇಲ್‌ ಕಾಡು ದ್ರಾಕ್ಷಿಬಳ್ಳಿ ತರ (21)

    • ಅವಳ ಲಂಗಗಳ ಮೇಲೆ ರಕ್ತದ ಕಲೆ (34)

2  ಯೆಹೋವ ಈ ಮಾತುಗಳನ್ನ ನನಗೆ ಹೇಳಿದನು  “ನೀನು ಹೋಗಿ ಯೆರೂಸಲೇಮಲ್ಲಿ ಇರೋರಿಗೆ ಹೀಗೆ ಸಾರಿಹೇಳು ‘ಯೆಹೋವ ಹೇಳೋದು ಏನಂದ್ರೆ,“ನಿನಗೆ ಯೌವನದಲ್ಲಿ ನನ್ನ ಮೇಲಿದ್ದ ಪ್ರೀತಿ,*+ನನಗೂ ನಿನಗೂ ಮದುವೆ ನಿಶ್ಚಯ ಆದಾಗ ನೀನು ತೋರಿಸಿದ ಪ್ರೀತಿ,+ಬೀಜವನ್ನೇ ಬಿತ್ತದ ಬರಡು ಭೂಮಿಯಲ್ಲಿ ನೀನು ನನ್ನ ಹಿಂದೆನೇ ಬಂದ ರೀತಿ ನನಗೆ ಚೆನ್ನಾಗಿ ನೆನಪಿದೆ.+   ಇಸ್ರಾಯೇಲ ಯೆಹೋವನಿಗೆ ಪವಿತ್ರನಾಗಿದ್ದ,+ ದೇವರ ಕೊಯ್ಲಿನ ಮೊದಲ ಫಲ ಅವನಾಗಿದ್ದ.”’ ‘ಅವನನ್ನ ನಾಶಮಾಡೋಕೆ ಪ್ರಯತ್ನ ಮಾಡಿದ್ರೆ ಅದು ದೊಡ್ಡ ತಪ್ಪು. ಆ ತಪ್ಪು ಮಾಡಿದವರಿಗೆ ಕೆಟ್ಟದಾಗುತ್ತೆ’ ಅಂತ ಯೆಹೋವ ಹೇಳ್ತಿದ್ದಾನೆ.”+   ಯಾಕೋಬನ ವಂಶದವರೇ,ಇಸ್ರಾಯೇಲ್‌ ಜನ್ರ ಎಲ್ಲ ಕುಟುಂಬಗಳೇ, ಯೆಹೋವನ ಮಾತು ಕೇಳಿ.   ಯೆಹೋವ ಹೇಳೋದು ಏನಂದ್ರೆ,“ನಿಮ್ಮ ಪೂರ್ವಜರು ನನ್ನಿಂದ ಯಾಕೆ ಅಷ್ಟು ದೂರ ಹೋದ್ರು? ನನ್ನಲ್ಲಿ ಅಂಥದ್ದೇನು ತಪ್ಪು ನೋಡಿದ್ರು?+ ಅವರು ಪ್ರಯೋಜನಕ್ಕೆ ಬಾರದ ಮೂರ್ತಿಗಳ+ ಹಿಂದೆ ಹೋಗಿ ಅವರೂ ಹಾಗಾಗಿ ಬಿಟ್ರಲ್ಲಾ.+   ‘ಯೆಹೋವ ಎಲ್ಲಿ?’ ಅಂತ ಅವರು ಕೇಳಲಿಲ್ಲ. ‘ಈಜಿಪ್ಟ್‌* ದೇಶದಿಂದ ನಮ್ಮನ್ನ ಹೊರಗೆ ಕರ್ಕೊಂಡು ಬಂದವನು,+ಕಾಡಲ್ಲಿ ನಮಗೆ ದಾರಿ ತೋರಿಸಿದವನು ಎಲ್ಲಿ?’ ಅಂತ ಅವರು ಕೇಳಲಿಲ್ಲ. ‘ಮರುಭೂಮಿ,+ ಗುಂಡಿ ಇದ್ದ ಪ್ರದೇಶದ ಮಧ್ಯದಲ್ಲಿ,ನೀರಿಲ್ಲದ ಒಣಪ್ರದೇಶದಲ್ಲಿ,+ ಬರೀ ಕತ್ತಲೆ ತುಂಬಿದ್ದ ಪ್ರದೇಶದಲ್ಲಿ,ಮನುಷ್ಯ ನಡೆದಾಡದ,ಜನ ವಾಸ ಮಾಡದ ಪ್ರದೇಶದಲ್ಲಿ ನಮಗೆ ದಾರಿ ತೋರಿಸಿ ಕರ್ಕೊಂಡು ಬಂದವನು ಎಲ್ಲಿ?’ ಅಂತ ಅವರು ಕೇಳಲಿಲ್ಲ.   ಆಮೇಲೆ ನಾನು ನಿಮ್ಮನ್ನ ಹಣ್ಣಿನ ತೋಟಗಳು ಇರೋ ದೇಶಕ್ಕೆ ಕರ್ಕೊಂಡು ಬಂದುಹಣ್ಣುಗಳನ್ನ ತಿನ್ನೋ ತರ, ಅಲ್ಲಿನ ಒಳ್ಳೊಳ್ಳೆ ವಸ್ತುಗಳು ನಿಮಗೆ ಸಿಗೋ ತರ ಮಾಡ್ದೆ.+ ಆದ್ರೆ ಅಲ್ಲಿಗೆ ಬಂದ ಮೇಲೆ ನೀವು ನನ್ನ ದೇಶವನ್ನ ಅಪವಿತ್ರ ಮಾಡಿದ್ರಿ,ನನ್ನ ಆಸ್ತಿಯನ್ನ ಹಾಳು ಮಾಡಿದ್ರಿ.+   ‘ಯೆಹೋವ ಎಲ್ಲಿ?’ ಅಂತ ಪುರೋಹಿತರು ಕೇಳಲಿಲ್ಲ,+ನಿಯಮ ಪುಸ್ತಕವನ್ನ ಕಲಿಸೋ ಜವಾಬ್ದಾರಿ ಇರೋರು ನನ್ನ ಬಗ್ಗೆ ತಿಳ್ಕೊಂಡಿಲ್ಲ,ಕುರುಬರು ನನ್ನ ವಿರುದ್ಧ ದಂಗೆ ಎದ್ರು,+ಪ್ರವಾದಿಗಳು ಬಾಳನ ಹೆಸ್ರಲ್ಲಿ ಭವಿಷ್ಯ ಹೇಳಿದ್ರು,+ತಮಗೆ ಯಾವ ಸಹಾಯವನ್ನೂ ಮಾಡದ ದೇವರುಗಳ ಹಿಂದೆ ಅವರು ಹೋದ್ರು.   ‘ಹಾಗಾಗಿ ನಾನು ನಿಮ್ಮ ಮೇಲೆ ಇನ್ನೂ ತಪ್ಪು ಹೊರಿಸ್ತೀನಿ,+ನಿಮ್ಮ ಮಕ್ಕಳ ಮಕ್ಕಳ ಮೇಲೂ ನಾನು ತಪ್ಪು ಹೊರಿಸ್ತೀನಿ’ ಅಂತ ಯೆಹೋವ ಹೇಳ್ತಾನೆ. 10  ‘ಆದ್ರೆ ನೀವು ಕಿತ್ತೀಮ್‌+ ಜನ್ರ ದ್ವೀಪಗಳಿಗೆ* ಹೋಗಿ ನೋಡಿ. ಕೇದಾರಿಗೆ+ ಸಂದೇಶವಾಹಕನನ್ನ ಕಳಿಸಿ ವಿಚಾರಿಸಿ ನೋಡಿ,ಇಂಥ ವಿಷ್ಯ ಅಲ್ಲಿ ಯಾವತ್ತಾದ್ರೂ ನಡಿದಿದ್ಯಾ ಅಂತ ಚೆನ್ನಾಗಿ ಯೋಚನೆ ಮಾಡಿ ನೋಡಿ. 11  ಯಾವ ದೇಶದ ಜನರಾದ್ರೂ ತಮ್ಮ ದೇವರುಗಳನ್ನ ಬಿಟ್ಟು ದೇವರಲ್ಲದವುಗಳನ್ನ ಯಾವತ್ತಾದ್ರೂ ಆರಾಧನೆ ಮಾಡಿದ್ದಾರಾ? ಆದ್ರೆ ನನ್ನ ಜನ್ರು ನನಗೆ ಗೌರವ ಕೊಡದೆ ಕೆಲಸಕ್ಕೆ ಬಾರದ ವಸ್ತುಗಳನ್ನ ಪೂಜೆ ಮಾಡ್ತಾ ಇದ್ದಾರೆ.+ 12  ಆಕಾಶವೇ, ಈಗ ನಡೀತಾ ಇರೋದನ್ನ ಆಶ್ಚರ್ಯದಿಂದ ನೋಡು,ಗಾಬರಿಯಿಂದ ಗಡಗಡ ನಡುಗು’ ಅಂತ ಯೆಹೋವ ಹೇಳ್ತಾನೆ, 13  ‘ಯಾಕಂದ್ರೆ ನನ್ನ ಜನ್ರು ಎರಡು ಅಪರಾಧಗಳನ್ನ ಮಾಡಿದ್ದಾರೆ,ಅವರು ನನ್ನನ್ನ, ಜೀವ ಕೊಡೋ ನೀರಿನ ಮೂಲನಾಗಿರೋ* ನನ್ನನ್ನ ಬಿಟ್ಟುಬಿಟ್ಟು+ತಮಗಾಗಿ ನೀರು ಗುಂಡಿಗಳನ್ನ ತೋಡ್ಕೊಂಡಿದ್ದಾರೆ,*ನೀರು ತುಂಬಿಡೋಕೆ ಆಗದ ಒಡೆದು ಹೋಗಿರೋ ಗುಂಡಿಗಳನ್ನ ತೋಡ್ಕೊಂಡಿದ್ದಾರೆ.’ 14  ‘ಇಸ್ರಾಯೇಲ ಒಬ್ಬ ಸೇವಕನಾ? ಯಜಮಾನನ ಮನೆಯಲ್ಲಿ ಹುಟ್ಟಿದ ಸೇವಕನಾ? ಮತ್ಯಾಕೆ ಜನ್ರು ಅವನನ್ನ ಕೈದಿಯಾಗಿ ಕರ್ಕೊಂಡು ಹೋದ್ರು? 15  ಅವನನ್ನ ನೋಡಿ ಎಳೇ ಸಿಂಹಗಳು* ಗರ್ಜಿಸುತ್ತೆ,+ಅವು ಜೋರಾಗಿ ಆರ್ಭಟಿಸುತ್ತೆ. ಅವು ಅವನ ದೇಶವನ್ನ ಎಂಥ ಕೆಟ್ಟ ಸ್ಥಿತಿಗೆ ತಂದಿವೆ ಅಂದ್ರೆ ನೋಡುವವರ ಎದೆ ಧಸಕ್‌ ಅಂತಿದೆ. ಅವನ ಪಟ್ಟಣಗಳಿಗೆ ಬೆಂಕಿ ಇಟ್ರು, ಅಲ್ಲಿ ಒಬ್ಬರು ಕೂಡ ವಾಸಿಸ್ತಿಲ್ಲ. 16  ನೋಫ್‌,*+ ತಹಪನೇಸ್‌+ ಪಟ್ಟಣಗಳ ಜನ ನಿನ್ನ ತಲೆ ಮೇಯ್ದು ಬೋಳು ಮಾಡಿದ್ದಾರೆ. 17  ಇದನ್ನೆಲ್ಲ ನೀನೇ ನಿನ್ನ ಮೈಮೇಲೆ ಎಳ್ಕೊಂಡೆ,ಯಾಕಂದ್ರೆ ನಿನಗೆ ದಾರಿ ತೋರಿಸ್ತಿದ್ದನಿನ್ನ ದೇವರಾದ ಯೆಹೋವನನ್ನ ನೀನು ಬಿಟ್ಟುಬಿಟ್ಟೆ.+ 18  ಈಗ ನೀನು ಶೀಹೋರಿನ* ನೀರು ಕುಡಿಯೋಕೆ ಈಜಿಪ್ಟಿಗೆ ಯಾಕೆ ಹೋಗಬೇಕಂತ ಇದ್ದೀಯಾ?+ ಅಶ್ಶೂರಕ್ಕೆ ಹೋಗಿ ಮಹಾನದಿಯ* ನೀರನ್ನ ಯಾಕೆ ಕುಡಿಬೇಕಂತ ಇಷ್ಟಪಡ್ತೀಯಾ?+ 19  ನೀನು ಮಾಡಿದ ಕೆಟ್ಟ ವಿಷ್ಯಗಳಿಂದಾನೇ ನೀನೀಗ ಬುದ್ಧಿ ಕಲಿಬೇಕು,ನೀನು ನಂಬಿಕೆದ್ರೋಹ ಮಾಡಿದ್ದೀಯಲ್ಲಾ ಅದೇ ಈಗ ನಿನ್ನನ್ನ ತಿದ್ದಬೇಕು. ನಿನ್ನ ದೇವರಾದ ಯೆಹೋವನನ್ನ ಬಿಟ್ಟುಬಿಡೋದು ಎಷ್ಟು ಕೆಟ್ಟದ್ದು,ಎಷ್ಟು ಭಯಂಕರ ಅಂತ ನೀನು ತಿಳ್ಕೊ, ಅರ್ಥಮಾಡ್ಕೊ.+ ನನಗೆ ಸ್ವಲ್ಪನೂ ಭಯಪಡಲಿಲ್ಲ’+ ಅಂತ ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ ಹೇಳ್ತಾನೆ. 20  ‘ತುಂಬ ಮುಂಚೆನೇ ನಿನ್ನ ನೊಗವನ್ನ ಜಜ್ಜಿ ಹಾಕ್ದೆ,+ನಿನ್ನ ಸಂಕೋಲೆಗಳನ್ನ ಕಿತ್ತು ಹಾಕ್ದೆ. ಆದ್ರೆ ನೀನು “ನಾನು ನಿನ್ನ ಸೇವೆ ಮಾಡಲ್ಲ” ಅಂದೆ,ಎತ್ರವಾದ ಎಲ್ಲ ಬೆಟ್ಟಗಳ ಮೇಲೆ, ಚೆನ್ನಾಗಿ ಬೆಳೆದಿದ್ದ ಎಲ್ಲ ಮರಗಳ ಕೆಳಗೆ+ ನೀನು ಬಿದ್ಕೊಂಡು ವ್ಯಭಿಚಾರ ಮಾಡ್ತಿದ್ದೆ.+ 21  ನಾನು ಒಳ್ಳೇ ಬೀಜ ಬಿತ್ತಿ ನಿನ್ನನ್ನ ಶ್ರೇಷ್ಠ ಕೆಂಪು ದ್ರಾಕ್ಷಿ ಬಳ್ಳಿಯಾಗಿ ನೆಟ್ಟೆ,+ಆದ್ರೆ ನೀನು ಹೇಗೆ ಕಾಡು ದ್ರಾಕ್ಷಿಬಳ್ಳಿಯ ಕೆಟ್ಟ ಕೊಂಬೆಗಳಾಗಿ ಬೆಳೆದುಬಿಟ್ಟೆ?’+ 22  ‘ನಿನ್ನ ಪಾಪದ ಕಲೆ ತೆಗಿಯೋಕೆ ನೀನು ಸೋಡ* ಹಾಕಿ, ಎಷ್ಟೇ ಸಾಬೂನು ಹಾಕಿ ಒಗೆದ್ರೂಆ ಕಲೆ ಹೋಗಲ್ಲ, ಅದು ನನ್ನ ಮುಂದೆ ಹಾಗೇ ಇರುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 23  ಹಾಗಿದ್ರೂ ‘ನಾನು ನನ್ನನ್ನ ಅಪವಿತ್ರ ಮಾಡ್ಕೊಂಡಿಲ್ಲ,ನಾನು ಬಾಳ್‌ ದೇವರುಗಳನ್ನ ಆರಾಧಿಸಿಲ್ಲ’ ಅಂತ ನೀನು ಹೇಗೆ ಹೇಳ್ತೀಯ? ಕಣಿವೆಯಲ್ಲಿ ನೀನು ನಡ್ಕೊಂಡ ರೀತಿ ಬಗ್ಗೆ ಸ್ವಲ್ಪ ಯೋಚಿಸು. ನೀನೇನು ಮಾಡ್ದೆ ಅಂತ ನೆನಪಿಸ್ಕೊ. ಗೊತ್ತುಗುರಿ ಇಲ್ಲದೆ ವೇಗವಾಗಿ ಅಲ್ಲಿ ಇಲ್ಲಿ ಓಡೋಹೆಣ್ಣು ಒಂಟೆ ತರ ಇದ್ದೀಯ, 24  ಕಾಡಿಗೆ ಒಗ್ಗಿಹೋಗಿರೋ ಹೆಣ್ಣು ಕಾಡುಕತ್ತೆ ತರ ಇದ್ದೀಯ,ಅದು ಗಂಡು ಕತ್ತೆಯನ್ನ ಹುಡುಕ್ತಾ ತುಂಬ ಆಸೆಯಿಂದ ಗಾಳಿಯನ್ನ ಮೂಸಿಮೂಸಿ ನೋಡ್ತಾ ಇರುತ್ತೆ. ಅದಕ್ಕೆ ಕಾಮದಿಂದ ಬಿಸಿ ಏರಿದಾಗ ತಡಿಯೋಕೆ ಯಾರಿಂದಾಗುತ್ತೆ? ಗಂಡು ಕತ್ತೆಗಳು ಅದನ್ನ ಹುಡುಕಿ ಹುಡುಕಿ ಅಲಿಬೇಕಾಗಿಲ್ಲ,ಸಂಗಮ ಕಾಲದಲ್ಲಿ ಬೇಗ ಸಿಗುತ್ತೆ. 25  ಇಸ್ರಾಯೇಲೇ, ನಿನ್ನ ಕಾಲು ಸವೆದು ಹೋಗದ ಹಾಗೆ,ಗಂಟಲು ಒಣಗಿ ಹೋಗದ ಹಾಗೆ ನೋಡ್ಕೊ. ಅದಕ್ಕೆ ನೀನು ‘ಅದು ನನ್ನಿಂದಾಗಲ್ಲ,+ನಾನು ಅಪರಿಚಿತರನ್ನ* ಪ್ರೀತಿಸ್ತಾ ಇದ್ದೀನಿ,+ಅವ್ರ ಹಿಂದೆನೇ ಹೋಗ್ತೀನಿ’+ ಅಂತ ಹೇಳ್ದೆ. 26  ಕಳ್ಳ ಸಿಕ್ಕಿಬಿದ್ದಾಗ ಅವನಿಗೆ ಹೇಗೆ ಅವಮಾನ ಆಗುತ್ತೋಹಾಗೇ ಇಸ್ರಾಯೇಲ್‌ ಜನ್ರಿಗೂ ಅವಮಾನ ಆಗುತ್ತೆ,ಅವ್ರಿಗೆ, ಅವ್ರ ರಾಜರಿಗೆ, ಅಧಿಕಾರಿಗಳಿಗೆ,ಪುರೋಹಿತರಿಗೆ, ಪ್ರವಾದಿಗಳಿಗೆ ಅವಮಾನ ಆಗುತ್ತೆ.+ 27  ಅವರು ಮರಕ್ಕೆ ‘ನೀನೇ ನನ್ನ ಅಪ್ಪ’ ಅಂತ+ಕಲ್ಲಿಗೆ ‘ನೀನೇ ನನ್ನ ಹೆತ್ತ ಅಮ್ಮ’ ಅಂತಾನೂ ಹೇಳ್ತಿದ್ದಾರೆ. ನನ್ನ ಕಡೆಗೆ ನೋಡ್ತಿಲ್ಲ, ನನಗೆ ಬೆನ್ನು ಹಾಕಿದ್ದಾರೆ.+ ಆದ್ರೆ ಕಷ್ಟ ಬಂದಾಗ ‘ಬಂದು ನಮ್ಮನ್ನ ಕಾಪಾಡು!’+ ಅಂತ ಕೂಗ್ತಾರೆ. 28  ಯೆಹೂದವೇ, ನೀನು ನಿನಗಾಗಿ ಮಾಡ್ಕೊಂಡ ದೇವರುಗಳು ಈಗ ಎಲ್ಲಿ?+ ಅವು ನಿನ್ನ ಕಷ್ಟಕಾಲದಲ್ಲಿ ಬಂದು ನಿನ್ನನ್ನ ಕಾಪಾಡಲಿ,ನಿನ್ನ ಹತ್ರ ಎಷ್ಟು ಪಟ್ಟಣ ಇದ್ಯೋ ಅಷ್ಟೇ ದೇವರುಗಳನ್ನ ಮಾಡ್ಕೊಂಡಿದ್ದೀಯಲ್ಲಾ.+ 29  ‘ನೀವು ನನ್ನ ಮೇಲೆ ಯಾಕೆ ತಪ್ಪು ಹೊರಿಸ್ತಾ ಇದ್ದೀರ? ನೀವೆಲ್ಲ ನನ್ನ ವಿರುದ್ಧ ಯಾಕೆ ದಂಗೆ ಎದ್ದಿದ್ದೀರ?’+ ಅಂತ ಯೆಹೋವ ಕೇಳ್ತಾನೆ. 30  ನಾನು ನಿಮ್ಮ ಮಕ್ಕಳಿಗೆ ಹೊಡೆದಿದ್ದೆಲ್ಲ ವ್ಯರ್ಥ ಆಯ್ತು.+ ಅವ್ರನ್ನ ತಿದ್ದಿದ್ರೂ ಅವರು ತಿದ್ಕೊಳ್ಳಲ್ಲ,+ಕೋಪ ಬಂದ ಸಿಂಹದ ತರ ನಿಮ್ಮ ಕತ್ತಿ ಪ್ರವಾದಿಗಳನ್ನ ಕೊಂದುಬಿಡ್ತು.+ 31  ಈ ಪೀಳಿಗೆ ಜನ್ರೇ, ಯೆಹೋವನ ಮಾತು ಕೇಳಿ. ನಾನು ಇಸ್ರಾಯೇಲಿಗೆ ಕಾಡಿನ ತರ ಆಗಿದ್ದೀನಾ? ಭಯ ಹುಟ್ಟಿಸೋ ಕಾರ್ಗತ್ತಲೆ ತರ ಆಗಿದ್ದೀನಾ? ನನ್ನ ಜನ್ರು ‘ನಮಗಿಷ್ಟ ಬಂದ ಕಡೆ ಹೋಗ್ತೀವಿ,ಇನ್ನು ಮುಂದೆ ನಾವು ನಿನ್ನ ಹತ್ರ ಬರಲ್ಲ’+ ಅಂತ ನನ್ನ ಹತ್ರ ಹೇಳ್ತಾರಲ್ಲಾ. 32  ಒಬ್ಬ ಕನ್ಯೆ ತನ್ನ ಒಡವೆಗಳನ್ನ ಮರಿತಾಳಾ? ಮದುಮಗಳು ತನ್ನ ಅಲಂಕಾರಿಕ ಎದೆಪಟ್ಟಿಯನ್ನ* ಮರಿತಾಳಾ? ಆದ್ರೆ ನನ್ನ ಸ್ವಂತ ಜನ್ರು ಲೆಕ್ಕ ಇಲ್ಲದಷ್ಟು ದಿನ ನನ್ನನ್ನ ಮರೆತು ಬಿಟ್ಟಿದ್ದಾರೆ.+ 33  ನೀನು* ಗಂಡಸರ ಪ್ರೇಮ ಪಡಿಯೋಕೆ ಎಷ್ಟೊಂದು ಚಾತುರ್ಯದಿಂದ ಪ್ರಯತ್ನಿಸ್ತಾ ಇದ್ದೀಯ! ಕೆಟ್ಟ ದಾರಿಗಳಲ್ಲಿ ಹೋಗೋದು ನಿನಗೆ ರೂಢಿ ಆಗಿಬಿಟ್ಟಿದೆ.+ 34  ಅಷ್ಟೇ ಅಲ್ಲ ನಿನ್ನ ಲಂಗಗಳ ಮೇಲೆ ಮುಗ್ಧ ಬಡಜನ್ರ ರಕ್ತದ ಕಲೆಗಳಿವೆ,+ಅವರು ಕದಿಯೋಕೆ ಪ್ರಯತ್ನಿಸುವಾಗ ಸಿಕ್ಕಿಬಿದ್ದವರಲ್ಲ,ಆದ್ರೂ ನಿನ್ನ ಲಂಗಗಳ ಮೇಲೆಲ್ಲಾ ಅವ್ರ ರಕ್ತದ ಕಲೆಗಳಿವೆ.+ 35  ಹಾಗಿದ್ರೂ ‘ನಾನು ತಪ್ಪು ಮಾಡಿಲ್ಲ,ಆತನಿಗೆ ನನ್ನ ಮೇಲೆ ಕೋಪ ಇಲ್ಲ’ ಅಂತ ನೀನು ಹೇಳ್ತಾ ಇದ್ದೀಯ. ‘ನಾನು ಪಾಪ ಮಾಡಲಿಲ್ಲ’ ಅಂತ ನೀನು ಹೇಳೋದ್ರಿಂದಈಗ ನಾನು ನಿನಗೆ ನ್ಯಾಯತೀರಿಸ್ತೀನಿ. 36  ನಿನ್ನ ಚಂಚಲ ನಡತೆಯನ್ನ ನೀನ್ಯಾಕೆ ಅಷ್ಟು ಸಲೀಸಾಗಿ ತಗೊಂಡಿದ್ದೀಯಾ? ಅಶ್ಶೂರದಿಂದ ನಿನಗೆ ಹೇಗೆ ಅವಮಾನ ಆಯ್ತೋ+ಹಾಗೇ ಈಜಿಪ್ಟಿಂದಾನೂ ಅವಮಾನ ಆಗುತ್ತೆ.+ 37  ನೀನು ಯಾರ ಮೇಲೆ ನಂಬಿಕೆ ಇಟ್ಟಿದ್ದೀಯೋ ಅವ್ರನ್ನ ಯೆಹೋವ ತಿರಸ್ಕರಿಸಿದ್ದಾನೆ,ಅವರು ನಿನಗೆ ಸಹಾಯ ಮಾಡಲ್ಲ. ಈ ಕಾರಣಕ್ಕಾಗಿ ಕೂಡ ನೀನು ಅವಮಾನದಿಂದ ತಲೆ ಮೇಲೆ ಕೈ ಇಟ್ಕೊಂಡು ಹೋಗ್ತೀಯ.”+

ಪಾದಟಿಪ್ಪಣಿ

ಅಥವಾ “ಶಾಶ್ವತ ಪ್ರೀತಿ.”
ಅಥವಾ “ಐಗುಪ್ತ.”
ಅಥವಾ “ಕರಾವಳಿ ಪ್ರದೇಶಗಳಿಗೆ.”
ಅಥವಾ “ಬುಗ್ಗೆ ಆಗಿರೋ.”
ಅಥವಾ “ಕಡಿದಿದ್ದಾರೆ,” ಬಂಡೆಗಳಿಂದ ಇರಬಹುದು.
ಅಥವಾ “ಕೇಸರವುಳ್ಳ ಸಿಂಹ.”
ಅಥವಾ “ಮೋಫ್‌.”
ಅದು, ಯೂಫ್ರೆಟಿಸ್‌.
ಅದು, ನೈಲ್‌ ನದಿಯ ಒಂದು ಕವಲು.
ಅಕ್ಷ. “ಕ್ಷಾರ ದ್ರಾವಣ.”
ಅಥವಾ “ಬೇರೆ ದೇವರುಗಳನ್ನ.”
ಅಥವಾ “ತನ್ನ ವಿವಾಹದ ಸೊಂಟಪಟ್ಟಿಯನ್ನ.”
“ಇಲ್ಲಿ ‘ನೀನು’ ಅನ್ನೋದು ಯೆರೂಸಲೇಮ್‌ ಅಥವಾ ಚೀಯೋನ್‌. ಅದನ್ನ ಸ್ತ್ರೀ ತರ ಹೇಳಲಾಗಿದೆ.”