ಯೆರೆಮೀಯ 24:1-10

  • ಒಳ್ಳೇ ಮತ್ತು ಕೆಟ್ಟ ಅಂಜೂರ ಹಣ್ಣುಗಳು (1-10)

24  ಯೆಹೋಯಾಕೀಮನ+ ಮಗ ಯೆಹೂದದ ರಾಜ ಯೆಕೊನ್ಯನನ್ನ,*+ ಯೆಹೂದದ ಅಧಿಕಾರಿಗಳನ್ನ, ಕರಕುಶಲಗಾರರನ್ನ, ಲೋಹದ ಕೆಲಸಗಾರರನ್ನ* ಬಾಬೆಲಿನ ರಾಜನಾದ ನೆಬೂಕದ್ನೆಚ್ಚರ* ಯೆರೂಸಲೇಮಿಂದ ಬಾಬೆಲಿಗೆ ಕೈದಿಗಳಾಗಿ ಹಿಡ್ಕೊಂಡು ಹೋದ.+ ಆಮೇಲೆ ಯೆಹೋವ ನನಗೆ ಅಂಜೂರ ಹಣ್ಣುಗಳಿರೋ ಎರಡು ಬುಟ್ಟಿ ಯೆಹೋವನ ಆಲಯದ ಮುಂದೆ ಇರೋದನ್ನ ತೋರಿಸಿದನು.  ಒಂದು ಬುಟ್ಟಿಯಲ್ಲಿ ತುಂಬ ಒಳ್ಳೇ ಅಂಜೂರ ಹಣ್ಣುಗಳು ಇತ್ತು. ಅವು ಮೊದಲ ಫಸಲಿನ ಅಂಜೂರಗಳ ತರ ಇತ್ತು. ಆದ್ರೆ ಇನ್ನೊಂದು ಬುಟ್ಟಿಯಲ್ಲಿದ್ದ ಅಂಜೂರ ಹಣ್ಣುಗಳು ತುಂಬ ಕೆಟ್ಟುಹೋಗಿದ್ದವು. ಎಷ್ಟಂದ್ರೆ ಅವುಗಳನ್ನ ತಿನ್ನೋಕೆ ಆಗಲಿಲ್ಲ.  ಆಗ ಯೆಹೋವ ನನಗೆ “ಯೆರೆಮೀಯ, ನಿನಗೇನು ಕಾಣಿಸ್ತಿದೆ?” ಅಂತ ಕೇಳಿದನು. ಅದಕ್ಕೆ ನಾನು “ಅಂಜೂರ ಹಣ್ಣುಗಳು ಕಾಣಿಸ್ತಿವೆ. ಒಳ್ಳೇ ಅಂಜೂರಗಳು ತುಂಬ ಚೆನ್ನಾಗಿದೆ, ಕೆಟ್ಟುಹೋದ ಅಂಜೂರಗಳು ತುಂಬ ಕೆಟ್ಟುಹೋಗಿವೆ, ತಿನ್ನಕ್ಕಾಗಲ್ಲ”+ ಅಂದೆ.  ಆಮೇಲೆ ಯೆಹೋವ ನನಗೆ ಹೀಗೆ ಹೇಳಿದನು  “ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ, ‘ಯೆಹೂದದಿಂದ ಕೈದಿಗಳಾಗಿ ಹೋದವರು ಅಂದ್ರೆ ನಾನು ಈ ಜಾಗದಿಂದ ಕಸ್ದೀಯರ ದೇಶಕ್ಕೆ ಕಳಿಸಿದ ಜನ್ರು ಈ ಒಳ್ಳೇ ಅಂಜೂರಗಳ ತರ ಇದ್ದಾರೆ. ನಾನು ಅವ್ರನ್ನ ಮೆಚ್ತೀನಿ.  ಅವ್ರಿಗೆ ಒಳ್ಳೇದನ್ನ ಮಾಡೋಕೆ ಅವ್ರನ್ನ ನೋಡ್ತಾ ಇರ್ತಿನಿ. ಅವರು ಈ ದೇಶಕ್ಕೆ ವಾಪಸ್‌ ಬರೋ ಹಾಗೆ ಮಾಡ್ತೀನಿ.+ ಅವ್ರನ್ನ ಕಟ್ತೀನಿ, ಹಾಳು ಮಾಡಲ್ಲ. ಅವ್ರನ್ನ ನೆಡ್ತೀನಿ, ಕಿತ್ತು ಹಾಕಲ್ಲ.+  ನಾನು ಯೆಹೋವ ಅಂತ ತಿಳ್ಕೊಳ್ಳೋ ಮನಸ್ಸನ್ನ* ಅವ್ರಿಗೆ ಕೊಡ್ತೀನಿ.+ ಅವರು ನನ್ನ ಜನ್ರಾಗ್ತಾರೆ, ನಾನು ಅವ್ರ ದೇವರಾಗ್ತೀನಿ.+ ಯಾಕಂದ್ರೆ ಪೂರ್ಣ ಹೃದಯದಿಂದ ಅವರು ನನ್ನ ಹತ್ರ ವಾಪಸ್‌ ಬರ್ತಾರೆ.+  ಯಾರೂ ತಿನ್ನೋಕೆ ಆಗದಷ್ಟು ಕೆಟ್ಟು ಹೋಗಿರೋ ಅಂಜೂರಗಳ+ ಬಗ್ಗೆ ಯೆಹೋವ ಹೀಗೆ ಹೇಳ್ತಾನೆ “ಯೆಹೂದದ ರಾಜನಾದ ಚಿದ್ಕೀಯ,+ ಅವನ ಅಧಿಕಾರಿಗಳು, ಯೆರೂಸಲೇಮಿನ ನಾಶನದಿಂದ ಪಾರಾಗಿ ಈ ದೇಶದಲ್ಲಿ ಈಜಿಪ್ಟಲ್ಲಿ ವಾಸ ಮಾಡ್ತಿರೋರು+ ಕೆಟ್ಟುಹೋದ ಆ ಅಂಜೂರಗಳ ತರ ಇದ್ದಾರೆ.  ನಾನು ಅವ್ರ ಮೇಲೆ ತರೋ ಕಷ್ಟವನ್ನ ನೋಡಿ ಭೂಮಿಯ ಎಲ್ಲ ಸಾಮ್ರಾಜ್ಯಗಳು ಭಯ ಪಡೋ ತರ ಮಾಡ್ತೀನಿ.+ ನಾನು ಅವ್ರನ್ನ ಚದರಿಸಿಬಿಡೋ ಎಲ್ಲ ಜಾಗಗಳಲ್ಲಿ+ ಜನ್ರು ಅವ್ರನ್ನ ಬೈತಾರೆ, ಅವಮಾನ ಮಾಡ್ತಾರೆ, ಶಾಪ ಹಾಕ್ತಾರೆ.+ ಅವರು ಜನ್ರ ಬಾಯಲ್ಲಿ ಗಾದೆ ಮಾತಾಗ್ತಾರೆ. 10  ನಾನು ಅವ್ರಿಗೆ ಅವ್ರ ಪೂರ್ವಜರಿಗೆ ಕೊಟ್ಟ ದೇಶದಿಂದ ಅವರು ಪೂರ್ತಿ ನಾಶ ಆಗೋ ತನಕ ಅವರು ಕತ್ತಿಗೆ+ ಬರಗಾಲಕ್ಕೆ ಅಂಟುರೋಗಕ್ಕೆ* ಸಿಕ್ಕಿ ಸಾಯೋ ತರ ಮಾಡ್ತೀನಿ.”’”+

ಪಾದಟಿಪ್ಪಣಿ

ಇವನಿಗಿದ್ದ ಬೇರೆ ಹೆಸರುಗಳು, ಯೆಹೋಯಾಖೀನ ಮತ್ತು ಕೊನ್ಯ.
ಬಹುಶಃ, “ಭದ್ರಕೋಟೆಗಳನ್ನ ಕಟ್ಟೋರನ್ನ.”
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಥವಾ “ಹೃದಯವನ್ನ.”
ಅಥವಾ “ಕಾಯಿಲೆಗೆ.”