ಯೆಹೆಜ್ಕೇಲ 5:1-17

  • ಯೆರೂಸಲೇಮಿನ ನಾಶದ ಚಿತ್ರಣ (1-17)

    • ಪ್ರವಾದಿಯ ತಲೆ ಗಡ್ಡ ಬೋಳಿಸಿ ಕೂದಲನ್ನ ಮೂರು ಭಾಗ ಮಾಡಿದ್ದು (1-4)

    • ಬೇರೆ ಜನಾಂಗಗಳಿಗಿಂತ ಯೆರೂಸಲೇಮ್‌ ಹೆಚ್ಚು ಕೆಟ್ಟದು (7-9)

    • ದಂಗೆಕೋರರಿಗೆ ಮೂರು ತರದ ಶಿಕ್ಷೆ (12)

5  ಮನುಷ್ಯಕುಮಾರನೇ, ನೀನು ಒಂದು ಚೂಪಾದ ಕತ್ತಿ ತಗೊ. ಅದನ್ನ ಕ್ಷೌರದ ಕತ್ತಿ ತರ ಬಳಸಿ ನಿನ್ನ ಕೂದಲನ್ನ ಗಡ್ಡವನ್ನ ಬೋಳಿಸ್ಕೊ. ಆಮೇಲೆ ಒಂದು ತಕ್ಕಡಿಯಲ್ಲಿ ಆ ಕೂದಲನ್ನ ತೂಕಮಾಡಿ ಮೂರು ಭಾಗ ಮಾಡು.  ಪಟ್ಟಣಕ್ಕೆ ನೀನು ಮುತ್ತಿಗೆ ಹಾಕೋ ದಿನಗಳು+ ಮುಗಿದ ಮೇಲೆ ಮೂರರಲ್ಲಿ ಒಂದು ಭಾಗದ ಕೂದಲನ್ನ ಪಟ್ಟಣದ ಒಳಗೆ ಸುಟ್ಟುಬಿಡು. ಇನ್ನೊಂದು ಭಾಗದ ಕೂದಲನ್ನ ಪಟ್ಟಣದ ಸುತ್ತ ಕತ್ತಿಯಿಂದ ಕತ್ತರಿಸು.+ ಮೂರನೇ ಭಾಗದ ಕೂದಲನ್ನ ಗಾಳಿಗೆ ತೂರು. ನಾನು ಕತ್ತಿಯನ್ನ ಹೊರಗೆ ತೆಗಿತೀನಿ ಮತ್ತು ಅದು ಅವ್ರನ್ನ ಅಟ್ಟಿಸ್ಕೊಂಡು ಹೋಗೋ ತರ ಮಾಡ್ತೀನಿ.+  ನೀನು ಮೂರನೇ ಭಾಗದಿಂದ ಸ್ವಲ್ಪ ಕೂದಲು ತಗೊಂಡು ನಿನ್ನ ಅಂಗಿ ಅಂಚಲ್ಲಿ ಸುತ್ತಿಡು.  ಅದೇ ಭಾಗದಿಂದ ಇನ್ನೂ ಸ್ವಲ್ಪ ಕೂದಲು ತಗೊಂಡು ಬೆಂಕಿಯಲ್ಲಿ ಸುಟ್ಟು ಬೂದಿ ಮಾಡು. ಇದ್ರಿಂದ ಬೆಂಕಿ ಹೋಗಿ ಇಸ್ರಾಯೇಲ್‌ ಜನ್ರ ಮೇಲೆಲ್ಲ ಹರಡುತ್ತೆ.+  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಇದು ಯೆರೂಸಲೇಮ್‌. ನಾನು ಅವಳನ್ನ ಜನಾಂಗಗಳ, ದೇಶಗಳ ಮಧ್ಯ ಇಟ್ಟಿದ್ದೀನಿ.  ಆದ್ರೆ ಅವಳು ನನ್ನ ತೀರ್ಪುಗಳ ವಿರುದ್ಧ, ನನ್ನ ನಿಯಮಗಳ ವಿರುದ್ಧ ದಂಗೆ ಎದ್ದಿದ್ದಾಳೆ. ಅವಳು ಸುತ್ತ ಇರೋ ಜನಾಂಗ, ದೇಶಗಳಿಗಿಂತ ತುಂಬ ಕೆಟ್ಟವಳಾಗಿ ನಡ್ಕೊಂಡಿದ್ದಾಳೆ.+ ಅವಳ ಜನ್ರು ನನ್ನ ತೀರ್ಪುಗಳನ್ನ ಧಿಕ್ಕರಿಸಿದ್ದಾರೆ, ನನ್ನ ನಿಯಮಗಳ ಪ್ರಕಾರ ನಡೀಲಿಲ್ಲ.’  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಿಮ್ಮ ನಡವಳಿಕೆ ಸುತ್ತ ಇರೋ ಜನಾಂಗಗಳಿಗಿಂತ ತುಂಬ ಕೆಟ್ಟದ್ದಾಗಿತ್ತು. ನೀವು ನನ್ನ ನಿಯಮಗಳ ಪ್ರಕಾರ ನಡಿಲಿಲ್ಲ, ನನ್ನ ತೀರ್ಪುಗಳನ್ನ ಕೇಳಲಿಲ್ಲ. ಅದಕ್ಕೆ ಬದಲಾಗಿ ನಿಮ್ಮ ಸುತ್ತ ಇರೋ ಜನಾಂಗಗಳ ಆಚಾರ-ವಿಚಾರಗಳನ್ನ ಪಾಲಿಸಿದ್ರಿ.+  ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಪಟ್ಟಣವೇ, ನಾನು ನಿನಗೆ ವಿರುದ್ಧವಾಗಿ ಇದ್ದೀನಿ.+ ನಾನು ದೇಶಗಳ ಮುಂದೆ ನಿನ್ನ ವಿರುದ್ಧ ತೀರ್ಪು ಮಾಡ್ತೀನಿ.+  ನೀನು ಮಾಡಿದ ಎಲ್ಲ ಅಸಹ್ಯ ಕೆಲಸಗಳಿಗಾಗಿ ನಿನಗೆ ಏನು ಮಾಡ್ತೀನಿ ಅಂತ ನೋಡು. ನಾನು ಯಾವತ್ತೂ ಕೊಟ್ಟಿರದ, ಮುಂದೆನೂ ಕೊಡದ ಶಿಕ್ಷೆಯನ್ನ ನಿನಗೆ ಕೊಡ್ತೀನಿ.+ 10  ಹಾಗಾಗಿ ನಿನ್ನಲ್ಲಿರೋ ಹೆತ್ತವರು ತಮ್ಮ ಮಕ್ಕಳನ್ನ ತಿಂತಾರೆ,+ ಮಕ್ಕಳು ತಮ್ಮ ಹೆತ್ತವರನ್ನ ತಿಂತಾರೆ. ನಾನು ನಿನಗೆ ಶಿಕ್ಷೆ ಕೊಡ್ತೀನಿ, ಉಳಿದವ್ರನ್ನ ಎಲ್ಲ ಕಡೆ ಚೆಲ್ಲಾಪಿಲ್ಲಿ ಮಾಡಿಬಿಡ್ತೀನಿ.”’+ 11  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನೀನು ನಿನ್ನ ಎಲ್ಲ ಅಸಹ್ಯ ಮೂರ್ತಿಗಳಿಂದ ಮತ್ತು ಅಸಹ್ಯ ಕೆಲಸಗಳಿಂದ ನನ್ನ ಆಲಯವನ್ನ ಅಶುದ್ಧ ಮಾಡಿದ್ದೀಯ.+ ಹಾಗಾಗಿ ನನಗೆ ನೀನು ಬೇಡ. ನಾನು ನಿನ್ನನ್ನ ನೋಡಿ ಸ್ವಲ್ಪಾನೂ ಕನಿಕರಪಡಲ್ಲ, ನಿನ್ನ ನೋಡಿ ‘ಅಯ್ಯೋ ಪಾಪ’ ಅನ್ನಲ್ಲ.+ 12  ನಿನ್ನ ಜನ್ರಲ್ಲಿ ಮೂರರ ಒಂದು ಭಾಗದಷ್ಟು ಜನ ಅಂಟುರೋಗದಿಂದ* ಸಾಯ್ತಾರೆ ಅಥವಾ ಬರ ಬಂದು ನಾಶವಾಗ್ತಾರೆ. ಇನ್ನೊಂದು ಭಾಗದ ಜನ ಕತ್ತಿಯಿಂದ ಸತ್ತು ನಿನ್ನ ಸುತ್ತ ಬೀಳ್ತಾರೆ.+ ಮೂರನೇ ಭಾಗದ ಜನ್ರನ್ನ ನಾನು ಎಲ್ಲ ಕಡೆ ಚೆಲ್ಲಾಪಿಲ್ಲಿ ಮಾಡಿಬಿಡ್ತೀನಿ. ನಾನು ಕತ್ತಿಯನ್ನ ಹೊರಗೆ ತೆಗೆದು ಅವ್ರನ್ನ ಅಟ್ಟಿಸ್ಕೊಂಡು ಹೋಗೋ ತರ ಮಾಡ್ತೀನಿ.+ 13  ಆಗ ನನ್ನ ಸಿಟ್ಟು ಕಮ್ಮಿ ಆಗುತ್ತೆ, ಅವ್ರ ಮೇಲಿದ್ದ ಕೋಪ ತಣ್ಣಗಾಗುತ್ತೆ, ತೃಪ್ತಿ ಆಗುತ್ತೆ.+ ನನ್ನ ರೋಷಾಗ್ನಿಯನ್ನ ಅವ್ರ ಮೇಲೆ ಸುರಿದ ಮೇಲೆ ಅವ್ರಿಗೆ ಒಂದು ವಿಷ್ಯ ಚೆನ್ನಾಗಿ ಅರ್ಥ ಆಗುತ್ತೆ. ಯೆಹೋವನಾದ ನಾನು, ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ* ದೇವರಾಗಿದ್ದೀನಿ,+ ಅದಕ್ಕೇ ಇದನ್ನೆಲ್ಲ ಅವ್ರಿಗೆ ಹೇಳಿದ್ದೀನಿ ಅನ್ನೋದನ್ನ ಅವರು ತಿಳ್ಕೊಬೇಕಾಗುತ್ತೆ. 14  ನಾನು ನಿನ್ನನ್ನ ಹಾಳುಬಿದ್ದ ಜಾಗ ಮಾಡ್ತೀನಿ. ನಿನ್ನ ಸುತ್ತ ಇರೋ ಜನಾಂಗಗಳವರು ಮತ್ತು ಹಾದುಹೋಗೋ ಜನ್ರೆಲ್ಲ ನಿನ್ನನ್ನ ನೋಡಿ ನಕ್ಕು ತಮಾಷೆ ಮಾಡ್ತಾರೆ.+ 15  ನಾನು ಕೋಪ, ಕ್ರೋಧದಿಂದ ನಿನ್ನ ವಿರುದ್ಧ ತೀರ್ಪು ಕೊಡುವಾಗ, ರೋಷದಿಂದ ಶಿಕ್ಷೆಗಳನ್ನ ಕೊಡುವಾಗ ನಿನ್ನ ಸುತ್ತ ಇರೋ ಜನಾಂಗದವರು ನಿನ್ನನ್ನ ಬೈತಾರೆ, ಅಣಕಿಸ್ತಾರೆ.+ ನಿನ್ನ ನೋಡಿ ಅವರು ಪಾಠ ಕಲಿತಾರೆ. ನಿನಗೆ ಬಂದಿರೋ ಗತಿಯನ್ನ ನೋಡಿ ಅವ್ರ ಎದೆ ಒಡೆದು ಹೋಗುತ್ತೆ. ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ. 16  ನಿಮಗೊಂದು ಗತಿ ಕಾಣಿಸೋಕೆ ನಾನು ಬರಗಾಲ ಅನ್ನೋ ಬಾಣಗಳನ್ನ ಬಿಡ್ತೀನಿ. ನಾನು ಬಿಡೋ ಬಾಣ ನಿಮ್ಮನ್ನ ನಾಶಮಾಡುತ್ತೆ.+ ನಿಮ್ಮ ಪಟ್ಟಣಕ್ಕೆ ಆಹಾರ ಬರೋದನ್ನ ನಿಲ್ಲಿಸಿ* ಬರಗಾಲವನ್ನ ಇನ್ನೂ ಜಾಸ್ತಿ ಮಾಡ್ತೀನಿ.+ 17  ನಾನು ನಿಮ್ಮ ಮಧ್ಯ ಬರಗಾಲ ಮತ್ತು ಕ್ರೂರ ಕಾಡುಪ್ರಾಣಿಗಳನ್ನ ಕಳಿಸ್ತೀನಿ.+ ಅವು ನಿನ್ನ ಮಕ್ಕಳನ್ನ ನಿನ್ನಿಂದ ಕಿತ್ಕೊಳ್ಳುತ್ತೆ. ಅಂಟುರೋಗದಿಂದ ರಕ್ತಪಾತದಿಂದ ನೀನು ತತ್ತರಿಸಿ ಹೋಗ್ತೀಯ. ನೀನು ಕತ್ತಿಗೆ ತುತ್ತಾಗೋ ತರ ಮಾಡ್ತೀನಿ.+ ಯೆಹೋವನಾದ ನಾನೇ ಇದನ್ನ ಹೇಳ್ತಿದ್ದೀನಿ.’”

ಪಾದಟಿಪ್ಪಣಿ

ಅಥವಾ “ಕಾಯಿಲೆಯಿಂದ.”
ಅಥವಾ “ಅನನ್ಯ ಭಕ್ತಿ ಕೇಳೋ ಹಕ್ಕಿರೋ.”
ಅಕ್ಷ. “ರೊಟ್ಟಿ ಕೋಲುಗಳನ್ನ ಮುರಿತೀನಿ.” ಬಹುಶಃ ರೊಟ್ಟಿ ಇಡೋಕೆ ಬಳಸ್ತಿದ್ದ ಕೋಲನ್ನ ಸೂಚಿಸುತ್ತೆ.