ಯೆಹೆಜ್ಕೇಲ 6:1-14

  • ಇಸ್ರಾಯೇಲಿನ ಬೆಟ್ಟಗಳ ವಿರುದ್ಧ ಭವಿಷ್ಯವಾಣಿ (1-14)

    • ಅಸಹ್ಯ ಮೂರ್ತಿಗಳಿಗೆ ಅವಮಾನ ಆಗುತ್ತೆ (4-6)

    • “ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ” (7)

6  ಯೆಹೋವ ಮತ್ತೆ ನನಗೆ ಹೀಗಂದನು:  “ಮನುಷ್ಯಕುಮಾರನೇ, ಇಸ್ರಾಯೇಲಿನ ಬೆಟ್ಟಗಳ ಕಡೆ ಮುಖಮಾಡಿ ಅವುಗಳ ವಿರುದ್ಧ ಭವಿಷ್ಯ ಹೇಳು.  ನೀನು ಅವಕ್ಕೆ ಹೀಗೆ ಹೇಳಬೇಕು: ‘ಇಸ್ರಾಯೇಲಿನ ಬೆಟ್ಟಗಳೇ, ವಿಶ್ವದ ರಾಜ ಯೆಹೋವ ಹೇಳೋದನ್ನ ಕೇಳಿಸ್ಕೊಳ್ಳಿ. ವಿಶ್ವದ ರಾಜ ಯೆಹೋವ ಪರ್ವತ, ಬೆಟ್ಟ, ತೊರೆ ಮತ್ತು ಕಣಿವೆಗಳಿಗೆ ಹೀಗಂತಾನೆ: “ನೋಡಿ! ನಾನು ನಿಮ್ಮನ್ನ ಕತ್ತಿಗೆ ತುತ್ತಾಗೋ ಹಾಗೆ ಮಾಡಿ ನಿಮ್ಮ ದೇವಸ್ಥಾನಗಳನ್ನ* ನಾಶಮಾಡ್ತೀನಿ.  ನಾನು ನಿಮ್ಮ ಯಜ್ಞವೇದಿಗಳನ್ನ ನಾಶ ಮಾಡ್ತೀನಿ. ಧೂಪಸ್ತಂಭಗಳನ್ನ ಮುರಿದು ಹಾಕ್ತೀನಿ.+ ನನ್ನ ಕೈಯಿಂದ ಸಾಯೋ ಜನ್ರ ಶವಗಳನ್ನ ನಿಮ್ಮ ಅಸಹ್ಯ ಮೂರ್ತಿಗಳ* ಮುಂದೆ ಬಿಸಾಡ್ತೀನಿ.+  ಇಸ್ರಾಯೇಲಿನ ಜನ್ರ ಶವಗಳನ್ನ ಅವ್ರ ಅಸಹ್ಯ ಮೂರ್ತಿಗಳ ಮುಂದೆನೇ ಎಸಿತೀನಿ. ನಿಮ್ಮ ಮೂಳೆಗಳನ್ನ ನಿಮ್ಮ ಯಜ್ಞವೇದಿಗಳ ಸುತ್ತ ಚೆಲ್ಲಾಪಿಲ್ಲಿ ಮಾಡ್ತೀನಿ.+  ನೀವು ಎಲ್ಲೆಲ್ಲ ಇರ್ತಿರೋ ಆ ಎಲ್ಲ ಪಟ್ಟಣಗಳು ಬಿದ್ದು ಹೋಗುತ್ತೆ.+ ಅಲ್ಲಿನ ದೇವಸ್ಥಾನಗಳು* ಬಿದ್ದು ಹೋಗುತ್ತೆ ಮತ್ತು ಅವು ಹಾಳು ಬಿದ್ದಿರುತ್ತೆ.+ ನಿಮ್ಮ ಯಜ್ಞವೇದಿಗಳು ಪುಡಿಪುಡಿ ಆಗಿ ನಾಶ ಆಗುತ್ತೆ. ನಿಮ್ಮ ಅಸಹ್ಯ ಮೂರ್ತಿಗಳು ನಾಶ ಆಗುತ್ತೆ, ಧೂಪಸ್ತಂಭಗಳು ಮುರಿದು ಹೋಗುತ್ತೆ, ನಿಮ್ಮ ಕೈಕೆಲಸಗಳೆಲ್ಲ ಹಾಳಾಗುತ್ತೆ.  ಜನ್ರು ಕತ್ತಿಯಿಂದ ನಿಮ್ಮ ಮಧ್ಯ ಸತ್ತು ಬೀಳ್ತಾರೆ.+ ಆಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+  ಆದ್ರೆ ನಿಮ್ಮಲ್ಲಿ ಸ್ವಲ್ಪ ಜನ್ರನ್ನ ಉಳಿಸ್ತೀನಿ. ನೀವು ಬೇರೆಬೇರೆ ದೇಶಗಳಲ್ಲಿ ಚೆಲ್ಲಾಪಿಲ್ಲಿ ಆಗಿ ಜನಾಂಗಗಳ ಮಧ್ಯ ಇರುವಾಗ ನಿಮ್ಮಲ್ಲಿ ಕೆಲವರು ಕತ್ತಿಯಿಂದ ತಪ್ಪಿಸ್ಕೊಳ್ತಾರೆ.+  ಹಾಗೆ ತಪ್ಪಿಸ್ಕೊಂಡವರು ಕೈದಿಗಳಾಗಿ ಹೋದ ಜನಾಂಗಗಳ ಮಧ್ಯ ನನ್ನನ್ನ ನೆನಪಿಸ್ಕೊಳ್ತಾರೆ.+ ಅವರು ದ್ರೋಹ ಮಾಡಿ* ಅವ್ರ ಹೃದಯ ನನ್ನಿಂದ ದೂರ ಆದಾಗ ಮತ್ತು ಅವ್ರ ಕಣ್ಣು ಕಾಮಾತುರದಿಂದ* ಅವ್ರ ಅಸಹ್ಯ ಮೂರ್ತಿಗಳನ್ನ ನೋಡ್ತಿದ್ದಾಗ+ ನನ್ನ ಹೃದಯ ಒಡೆದುಹೋಯ್ತು+ ಅಂತ ಆಗ ಅವರು ಅರ್ಥ ಮಾಡ್ಕೊತಾರೆ. ಅವರು ಮಾಡಿದ ಎಲ್ಲ ಅಸಹ್ಯ ವಿಷ್ಯಗಳನ್ನ ನೆನಸಿ ಅವ್ರ ಬಗ್ಗೆ ಅವ್ರಿಗೇ ನಾಚಿಕೆ, ಹೇಸಿಗೆ ಆಗುತ್ತೆ.+ 10  ಆಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ. ಅವ್ರ ಮೇಲೆ ಈ ಕಷ್ಟ ತರ್ತಿನಿ ಅಂತ ನಾನು ಹೆದರಿಸಿದ್ದು ಸುಳ್ಳಲ್ಲ ಅಂತಾನೂ ಅವರು ತಿಳ್ಕೊತಾರೆ.”’+ 11  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಇಸ್ರಾಯೇಲ್‌ ಜನ್ರು ಕೆಟ್ಟ ಮತ್ತು ಅಸಹ್ಯವಾದ ಕೆಲಸಗಳನ್ನ ಮಾಡಿದ್ರಿಂದ ನೀನು ದುಃಖದಿಂದ ಕೈಗಳನ್ನ ತಟ್ಟಿ, ವ್ಯಥೆಯಿಂದ ಕಾಲನ್ನ ನೆಲಕ್ಕೆ ಬಡಿದು ಗೋಳಾಡು. ಯಾಕಂದ್ರೆ ಅವರು ಕತ್ತಿ, ಬರಗಾಲ, ಅಂಟುರೋಗದಿಂದ ಸಾಯ್ತಾರೆ.+ 12  ದೂರದಲ್ಲಿ ಇರುವವರು ಅಂಟುರೋಗದಿಂದ ಸಾಯ್ತಾರೆ. ಹತ್ರ ಇರುವವರು ಕತ್ತಿಯಿಂದ ಸಾಯ್ತಾರೆ. ಇವೆರಡರಿಂದ ತಪ್ಪಿಸ್ಕೊಂಡವರು ಬರಗಾಲದಿಂದ ಸಾಯ್ತಾರೆ. ಹೀಗೆ ನಾನು ಅವ್ರ ಮೇಲೆ ನನ್ನ ರೋಷಾಗ್ನಿಯನ್ನ ಪೂರ್ತಿ ಸುರಿದುಬಿಡ್ತೀನಿ.+ 13  ಅವ್ರ ಶವಗಳು ಅಸಹ್ಯ ಮೂರ್ತಿಗಳ ಮಧ್ಯ, ಅವ್ರ ಯಜ್ಞವೇದಿಗಳ ಸುತ್ತ,+ ಎತ್ತರವಾದ ಎಲ್ಲ ಬೆಟ್ಟಗಳ ಮೇಲೆ, ಎಲ್ಲ ಪರ್ವತಗಳ ತುದಿಗಳಲ್ಲಿ, ಸೊಂಪಾಗಿ ಬೆಳೆದಿರೋ ಎಲ್ಲ ಮರಗಳ ಕೆಳಗೆ ಮತ್ತು ದೊಡ್ಡ ದೊಡ್ಡ ಮರಗಳ ಕೊಂಬೆಗಳ ಕೆಳಗೆ ಬಿದ್ದಿರುತ್ತೆ. ಹೀಗೆ ಎಲ್ಲೆಲ್ಲಿ ಅವ್ರ ಅಸಹ್ಯ ಮೂರ್ತಿಗಳನ್ನ ಖುಷಿಪಡಿಸೋಕೆ ಸುಗಂಧಭರಿತ ಅರ್ಪಣೆಗಳನ್ನ ಕೊಡ್ತಿದ್ರೋ+ ಅಲ್ಲೆಲ್ಲ ಶವಗಳು ಬಿದ್ದಾಗ ನಾನೇ ಯೆಹೋವ ಅಂತ ಗೊತ್ತಾಗುತ್ತೆ.+ 14  ನಾನು ನನ್ನ ಕೈಚಾಚಿ ಅವ್ರನ್ನ ಶಿಕ್ಷಿಸ್ತೀನಿ. ಅವ್ರ ದೇಶದಲ್ಲಿ ಜನ್ರೇ ಇಲ್ಲದ ಹಾಗೆ ಮಾಡ್ತೀನಿ. ಅವರು ವಾಸಿಸೋ ಸ್ಥಳಗಳು ಬಿಕೋ ಅನ್ನುತ್ತವೆ. ಎಷ್ಟೆಂದ್ರೆ ಅವುಗಳ ಗತಿ ದಿಬ್ಲದ ಹತ್ರ ಇರೋ ಕಾಡಿಗಿಂತ* ಕಡೆ ಆಗಿರುತ್ತೆ. ಆಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”

ಪಾದಟಿಪ್ಪಣಿ

ಅಕ್ಷ. “ಎತ್ತರ ಸ್ಥಳಗಳನ್ನ.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಕ್ಷ. “ಎತ್ತರ ಸ್ಥಳಗಳನ್ನ.”
ಅಥವಾ “ಅನೈತಿಕವಾಗಿ.”
ಅಥವಾ “ಅನೈತಿಕವಾಗಿ ನಡೆದು”
ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.