ಯೆಹೋಶುವ 20:1-9

  • ಆಶ್ರಯ ನಗರಗಳು (1-9)

20  ಆಮೇಲೆ ಯೆಹೋವ ಯೆಹೋಶುವನಿಗೆ  “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು ‘ನಾನು ಮೋಶೆ ಮೂಲಕ ಹೇಳಿದ ಹಾಗೆ ನೀವು ನಿಮಗೋಸ್ಕರ ಆಶ್ರಯ ನಗರಗಳನ್ನ+ ಆರಿಸ್ಕೊಳ್ಳಿ.  ಗೊತ್ತಿಲ್ದೆ ಅಥವಾ ಅಪ್ಪಿತಪ್ಪಿ ಯಾರ ಪ್ರಾಣವನ್ನಾದ್ರೂ ಒಬ್ಬ ವ್ಯಕ್ತಿ ತೆಗೆದ್ರೆ ಅಲ್ಲಿಗೆ ಓಡಿಹೋಗಬಹುದು. ಸತ್ತವನ ಹತ್ರದ ಸಂಬಂಧಿ ಸೇಡು ತೀರಿಸೋಕೆ ಬಂದಾಗ ಅಲ್ಲಿ ಆಶ್ರಯ ಸಿಗುತ್ತೆ.+  ಅವನು ಈ ನಗರಗಳಲ್ಲಿ ಯಾವುದಾದ್ರೂ ಒಂದು ನಗರಕ್ಕೆ ಓಡಿ ಹೋಗಿ+ ಆ ನಗರದ ಬಾಗಿಲಲ್ಲೇ+ ನಿಂತು, ಅಲ್ಲಿನ ಹಿರಿಯರಿಗೆ ನಡೆದ ವಿಷ್ಯ ಹೇಳಬೇಕು. ಆಮೇಲೆ ಅವರು ಅವನನ್ನ ನಗರದ ಒಳಗೆ ಕರ್ಕೊಂಡು ಹೋಗಿ ಇರೋಕೆ ಜಾಗ ಕೊಡ್ತಾರೆ. ಅವನು ಅವ್ರ ಜೊತೆ ಇರಬಹುದು.  ಸತ್ತವನ ಹತ್ರದ ಸಂಬಂಧಿ ಅವನನ್ನ ಅಟ್ಟಿಸ್ಕೊಂಡು ಅಲ್ಲಿಗೆ ಬಂದ್ರೆ ಹಿರಿಯರು ಆ ವ್ಯಕ್ತಿಯ ಕೈಗೆ ಅವನನ್ನ ಒಪ್ಪಿಸಬಾರದು. ಯಾಕಂದ್ರೆ ಕೊಂದವನು ಯಾವುದೋ ಹಳೇ ದ್ವೇಷದಿಂದಲ್ಲ, ಅಕಸ್ಮಾತ್ತಾಗಿ ಕೊಂದಿದ್ದಾನೆ.+  ನಡೆದ ವಿಷ್ಯದ ಬಗ್ಗೆ ಸಭೆ ಮುಂದೆ ವಿಚಾರಣೆ ಆಗೋ ತನಕ ಅವನು ಆ ನಗರದಲ್ಲೇ ಇರಬೇಕು.+ ಅವನು ನಿರಪರಾಧಿ ಅಂತ ಸಾಬೀತಾದ್ರೂ ಆ ಸಮಯದಲ್ಲಿ ಮಹಾ ಪುರೋಹಿತನಾಗಿ ಇರುವವನು ಸಾಯೋ ತನಕ ಅವನು ಅಲ್ಲೇ ಉಳಿಬೇಕು.+ ಆಮೇಲೆ ಅವನು ತಾನು ಬಿಟ್ಟುಬಂದ ಪಟ್ಟಣದಲ್ಲಿರೋ ತನ್ನ ಮನೆಗೆ ವಾಪಸ್‌ ಹೋಗಬಹುದು’”+ ಅಂದನು.  ಈ ಉದ್ದೇಶದಿಂದ ಇಸ್ರಾಯೇಲ್ಯರು ನಫ್ತಾಲಿ ಕುಲದವ್ರ ಬೆಟ್ಟ ಪ್ರದೇಶವಾದ ಗಲಿಲಾಯ ಪ್ರದೇಶದಲ್ಲಿ ಕೆದೆಷನ್ನ+ ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿ ಶೆಕೆಮನ್ನ+ ಯೆಹೂದ ಪ್ರಾಂತ್ಯದ ಬೆಟ್ಟ ಪ್ರದೇಶದಲ್ಲಿ ಕಿರ್ಯತ್‌-ಅರ್ಬನ+ ಅಂದ್ರೆ ಹೆಬ್ರೋನನ್ನ ಆರಿಸ್ಕೊಂಡ್ರು.*  ಅಷ್ಟೇ ಅಲ್ಲ ಯೆರಿಕೋವಿನ ಪೂರ್ವಕ್ಕಿರೋ ಯೋರ್ದನ್‌ ಪ್ರದೇಶದಲ್ಲಿ ಬೆಚೆರನ್ನ+ ಆರಿಸ್ಕೊಂಡ್ರು. ಇದು ರೂಬೇನ್‌ ಕುಲದವ್ರಿಗೆ ಸೇರಿದ ಕಾಡಲ್ಲಿತ್ತು.* ಗಾದ್‌ ಕುಲದವ್ರಿಗೆ ಸೇರಿದ ಗಿಲ್ಯಾದಿನ ರಾಮೋತನ್ನ,+ ಮನಸ್ಸೆ+ ಕುಲದವ್ರಿಗೆ ಸೇರಿದ ಬಾಷಾನಿನ ಗೋಲಾನ್‌+ ಪಟ್ಟಣವನ್ನ ಆರಿಸ್ಕೊಂಡ್ರು.  ಇಸ್ರಾಯೇಲ್ಯರಲ್ಲಿ, ಅವ್ರ ಮಧ್ಯದಲ್ಲಿದ್ದ ವಿದೇಶಿಯರಲ್ಲಿ ಯಾವನಾದ್ರೂ ಅಪ್ಪಿತಪ್ಪಿ ಬೇರೊಬ್ಬನನ್ನ ಕೊಂದ್ರೆ ಅವನು ಈ ನಗರಗಳಿಗೆ ಓಡಿಹೋಗಬಹುದಿತ್ತು.+ ಅವನನ್ನ ಸಭೆ ಮುಂದೆ ವಿಚಾರಣೆ ಮಾಡೋ ತನಕ ಸತ್ತವನ ಹತ್ರದ ಸಂಬಂಧಿಯ ಕೈಯಲ್ಲಿ ಅವನು ಸಾಯದ ಹಾಗೆ ಇಲ್ಲಿ ಅವನಿಗೆ ರಕ್ಷಣೆ ಸಿಗ್ತಿತ್ತು.+

ಪಾದಟಿಪ್ಪಣಿ

ಅಥವಾ “ಪವಿತ್ರ ಮಾಡಿದ್ರು.”
ಅಕ್ಷ. “ಪ್ರಸ್ಥಭೂಮಿಯಲ್ಲಿತ್ತು.”