ಪುಸ್ತಕ 1:1-20

  • ವಿಪರೀತ ಕೀಟಗಳ ಬಾಧೆ (1-14)

  • “ಯೆಹೋವನ ದಿನ ಹತ್ರವಾಗಿದೆ” (15-20)

    • ಪ್ರವಾದಿ ಯೆಹೋವನ ಹತ್ರ ಬೇಡ್ತಾನೆ (19, 20)

1  ಯೆಹೋವ ಪೆತೂವೇಲನ ಮಗನಾದ ಯೋವೇಲನ* ಮೂಲಕ ಹೇಳಿದ ಮಾತುಗಳು:   “ಹಿರಿಯರೇ ಕೇಳಿ,ದೇಶದ* ಎಲ್ಲ ಜನ್ರೇ ಗಮನಕೊಟ್ಟು ಕೇಳಿ. ನಿಮ್ಮ ಕಾಲದಲ್ಲಾಗಲಿ ನಿಮ್ಮ ಪೂರ್ವಜರ ಕಾಲದಲ್ಲಾಗಲಿ ಇಂಥದ್ದೇನಾದ್ರೂ ನಡೆದಿದ್ಯಾ?+   ಇದನ್ನ ನಿಮ್ಮ ಮಕ್ಕಳಿಗೆ ಹೇಳಿ,ನಿಮ್ಮ ಮಕ್ಕಳು ಅವ್ರ ಮಕ್ಕಳಿಗೆ ಹೇಳಲಿ,ಅವ್ರ ಮಕ್ಕಳು ಮುಂದಿನ ಪೀಳಿಗೆಗೆ ಹೇಳಲಿ.   ವಿನಾಶಕಾರಿ ಮಿಡತೆಗಳು ತಿಂದು ಉಳಿದದ್ದನ್ನಹಿಂಡು ಹಿಂಡಾಗಿರೋ ಮಿಡತೆಗಳು ತಿಂದು ಹಾಕಿವೆ,+ಹಿಂಡು ಹಿಂಡಾಗಿರೋ ಮಿಡತೆಗಳು ತಿಂದು ಉಳಿದದ್ದನ್ನಇನ್ನೂ ರೆಕ್ಕೆ ಬೆಳೆದಿರದ ಮಿಡತೆಗಳು ತಿಂದು ಹಾಕಿವೆ,ಇನ್ನೂ ರೆಕ್ಕೆ ಬೆಳೆದಿರದ ಮಿಡತೆಗಳು ತಿಂದು ಉಳಿದದ್ದನ್ನಹೊಟ್ಟೆಬಾಕ ಮಿಡತೆಗಳು ತಿಂದು ಹಾಕಿವೆ.+   ಕುಡುಕರೇ+ ಎಚ್ಚರ ಆಗಿ, ಅಳಿ! ದ್ರಾಕ್ಷಾಮದ್ಯ ಕುಡಿಯುವವ್ರೇ ಗೋಳಾಡಿ,ಯಾಕಂದ್ರೆ ಸಿಹಿ ದ್ರಾಕ್ಷಾಮದ್ಯ ಇನ್ನು ಮುಂದೆ ನಿಮ್ಮ ಬಾಯಿಗೆ ಬೀಳಲ್ಲ.+   ಲೆಕ್ಕ ಇಲ್ಲದಷ್ಟು ಮಿಡತೆಗಳು ಒಂದು ಜನಾಂಗದ ತರ ನನ್ನ ದೇಶವನ್ನ ದಾಳಿ ಮಾಡಿವೆ.+ ಅವು ಬಲಿಷ್ಠವಾಗಿವೆ, ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ತರ ಇವೆ,+ದವಡೆಗಳು ಸಿಂಹದ ದವಡೆಗಳ ತರ ಇವೆ.   ಅವು ನನ್ನ ದ್ರಾಕ್ಷಿಬಳ್ಳಿಯನ್ನ ಹಾಳು ಮಾಡಿವೆ, ಅಂಜೂರ ಮರದ ಬುಡವನ್ನ ಮಾತ್ರ ಉಳಿಸಿವೆ,ಅವುಗಳನ್ನ ಬೋಳು ಮಾಡಿ ಚೆಲ್ಲಾಪಿಲ್ಲಿ ಮಾಡಿವೆ,ರೆಂಬೆಕೊಂಬೆಗಳ ತೊಗಟೆಯನ್ನ ಸುಲಿದು ಬೆಳ್ಳಗೆ ಮಾಡಿವೆ.   ನೀವು ಗೊಳೋ ಅಂತ ಅಳಿ,ತನ್ನ ವರನನ್ನ* ಕಳ್ಕೊಂಡಿರೋದ್ರಿಂದ ಗೋಣಿ ಬಟ್ಟೆ ಹಾಕೊಂಡು ಶೋಕಿಸ್ತಿರೋ ಕನ್ಯೆ* ತರ ಗೋಳಾಡಿ.   ಯೆಹೋವನ ಆಲಯಕ್ಕೆ ಧಾನ್ಯ ಅರ್ಪಣೆ+ ಮತ್ತು ಪಾನ ಅರ್ಪಣೆ+ ಬರೋದು ನಿಂತುಹೋಗಿದೆ,ಯೆಹೋವನ ಸೇವೆ ಮಾಡೋ ಪುರೋಹಿತರು ಶೋಕಿಸ್ತಿದ್ದಾರೆ. 10  ಹೊಲ ಹಾಳಾಗಿದೆ, ನೆಲ ಶೋಕಿಸ್ತಿದೆ,+ಯಾಕಂದ್ರೆ ಬೆಳೆ ಹಾಳಾಗಿ ಹೋಗಿದೆ, ಹೊಸ ದ್ರಾಕ್ಷಾಮದ್ಯ ಇಲ್ಲವಾಗಿದೆ, ಎಣ್ಣೆ ಖಾಲಿಯಾಗಿದೆ.+ 11  ಗೋದಿ, ಬಾರ್ಲಿ* ನಾಶವಾಗಿದೆ, ಹೊಲದ ಬೆಳೆ ಹಾಳಾಗಿದೆ. ಹಾಗಾಗಿ ರೈತರು ಗಾಬರಿಯಾಗಿದ್ದಾರೆ, ದ್ರಾಕ್ಷಿ ತೋಟಗಾರರು ಗೋಳಾಡ್ತಿದ್ದಾರೆ. 12  ದ್ರಾಕ್ಷಿಬಳ್ಳಿ ಒಣಗಿಹೋಗಿದೆ,ಅಂಜೂರ ಮರ ಬಾಡಿಹೋಗಿದೆ. ದಾಳಿಂಬೆ, ಖರ್ಜೂರ, ಸೇಬು ಅಂತೂ ಎಲ್ಲ ಮರಗಳು ಒಣಗಿಹೋಗಿವೆ.+ ಜನ್ರಲ್ಲಿ ಆನಂದ ಮರೆಯಾಗಿ ಅವಮಾನ ಮನೆಮಾಡಿದೆ. 13  ಪುರೋಹಿತರೇ, ಗೋಣಿ ಬಟ್ಟೆ ಹಾಕೊಂಡು ಶೋಕಿಸಿ,*ಯಜ್ಞವೇದಿ ಹತ್ರ ಸೇವೆ ಮಾಡುವವ್ರೇ, ರೋದಿಸಿ.+ ನನ್ನ ದೇವರ ಸೇವಕರೇ ಒಳಗೆ ಬನ್ನಿ, ಗೋಣಿ ಹಾಕೊಂಡು ರಾತ್ರಿ ಕಳಿರಿ. ಯಾಕಂದ್ರೆ ದೇವರ ಆಲಯಕ್ಕೆ ಯಾರೂ ಧಾನ್ಯ ಅರ್ಪಣೆಯನ್ನಾಗಲಿ+ ಪಾನ ಅರ್ಪಣೆಯನ್ನಾಗಲಿ+ ತರ್ತಿಲ್ಲ. 14  ಉಪವಾಸ ದಿನವನ್ನ ಪ್ರಕಟಿಸಿ, ವಿಶೇಷ ಕೂಟಕ್ಕಾಗಿ ಸೇರಿಬರೋಕೆ ಕರೆಕೊಡಿ.+ ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಹಿರಿಯರನ್ನೂ ದೇಶದ ಎಲ್ಲ ಜನ್ರನ್ನೂ ಬರೋಕೆ ಹೇಳಿ.+ ಸಹಾಯ ಮಾಡೋಕೆ ಯೆಹೋವನಿಗೆ ಮೊರೆಯಿಡಿ. 15  ಅಯ್ಯೋ! ಆ ದಿನ ಬರ್ತಿದೆ! ಯೆಹೋವನ ದಿನ ಹತ್ರವಾಗಿದೆ!+ ಸರ್ವಶಕ್ತ ನಾಶವನ್ನ ತರೋ ದಿನ ಅದಾಗಿದೆ! 16  ನಮ್ಮ ಕಣ್ಮುಂದೆನೇ ಆಹಾರ ಕಿತ್ಕೊಂಡ್ರು,ನಮ್ಮ ದೇವರ ಆಲಯದಿಂದ ಹರ್ಷಾನಂದ ಕಣ್ಮರೆ ಆಯ್ತು. 17  ಸಲಿಕೆಗಳ ಕೆಳಗೆ ಬೀಜಗಳು* ಒಣಗಿ ಹೋಗಿವೆ. ಉಗ್ರಾಣಗಳು ಖಾಲಿಬಿದ್ದಿವೆ. ಬೆಳೆ ಒಣಗಿರೋದ್ರಿಂದ ಗೋಡೌನ್‌ಗಳನ್ನ ಕೆಡವಿಹಾಕಲಾಗಿದೆ. 18  ಪ್ರಾಣಿಗಳು ಕೂಡ ನರಳ್ತಿವೆ! ಮೇವು ಇಲ್ಲದ ಕಾರಣ ದನದ ಹಿಂಡುಗಳು ಗಲಿಬಿಲಿಗೊಂಡು ಅಡ್ಡಾಡ್ತಿವೆ! ಕುರಿ ಮಂದೆಗಳು ಶಿಕ್ಷೆ ಅನುಭವಿಸ್ತಿವೆ. 19  ಯೆಹೋವನೇ ನಾನು ನಿನ್ನ ಹತ್ರ ಬೇಡ್ತಿದ್ದೀನಿ,+ಯಾಕಂದ್ರೆ ಅಗ್ನಿ ಕಾಡಿನ* ಹುಲ್ಲುಗಾವಲುಗಳನ್ನ ಸುಟ್ಟು ಹಾಕಿದೆ,ಜ್ವಾಲೆ ಬಯಲಿನ ಎಲ್ಲ ಮರಗಳನ್ನ ದಹಿಸಿದೆ. 20  ಕಾಡುಪ್ರಾಣಿಗಳು ಕೂಡ ಸಹಾಯಕ್ಕಾಗಿ ನಿನ್ನ ಕಡೆ ನೋಡ್ತಿವೆ,ಯಾಕಂದ್ರೆ ತೊರೆಗಳು ಬತ್ತಿಹೋಗಿವೆ,ಅಗ್ನಿ ಕಾಡಿನ ಹುಲ್ಲುಗಾವಲುಗಳನ್ನ ಸುಟ್ಟು ಹಾಕಿದೆ.”

ಪಾದಟಿಪ್ಪಣಿ

ಈ ಹೆಸ್ರಿನ ಅರ್ಥ “ಯೆಹೋವನೇ ದೇವರು.”
ಅಥವಾ “ಭೂಮಿಯ.”
ಅಥವಾ “ಗಂಡನನ್ನ.”
ಅಥವಾ “ಯುವತಿ.”
ಅಥವಾ “ಜವೆಗೋದಿ.”
ಅಥವಾ “ಎದೆ ಬಡ್ಕೊಳ್ಳಿ.”
ಬಹುಶಃ, “ಒಣ ಅಂಜೂರಗಳು.”