ಕೊರಿಂಥದವರಿಗೆ ಬರೆದ ಮೊದಲನೇ ಪತ್ರ 8:1-13

  • ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದ (1-13)

    • ನಮಗೆ ಒಬ್ಬನೇ ದೇವರು (5, 6)

8  ಈಗ ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದದ ಬಗ್ಗೆ ಮಾತಾಡ್ತೀನಿ.+ ಇದ್ರ ಬಗ್ಗೆ ನಮಗೆಲ್ರಿಗೂ ಸ್ವಲ್ಪ ಜ್ಞಾನ ಇದೆ.+ ಸಾಮಾನ್ಯವಾಗಿ ಜ್ಞಾನ ಗರ್ವದಿಂದ ಉಬ್ಬೋ ತರ ಮಾಡುತ್ತೆ, ಆದ್ರೆ ಪ್ರೀತಿ ಬಲಪಡಿಸುತ್ತೆ.+  ಒಂದು ವಿಷ್ಯದ ಬಗ್ಗೆ ತುಂಬ ಚೆನ್ನಾಗಿ ಗೊತ್ತು ಅಂತ ಒಬ್ಬ ಅಂದ್ಕೊಂಡ್ರೂ ಅದ್ರ ಬಗ್ಗೆ ಅವನಿಗೆ ಪೂರ್ತಿ ಗೊತ್ತಿರಲ್ಲ.  ಆದ್ರೆ ಒಬ್ಬನು ದೇವರನ್ನ ಪ್ರೀತಿಸಿದ್ರೆ ದೇವರಿಗೆ ಅವನ ಬಗ್ಗೆ ಗೊತ್ತಿರುತ್ತೆ.  ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದದ ಬಗ್ಗೆ ಈಗ ಹೇಳ್ತೀನಿ. ಮೂರ್ತಿ ಏನೂ ಅಲ್ಲ,+ ದೇವರು ಒಬ್ಬನೇ, ಆತನನ್ನ ಬಿಟ್ಟು ಬೇರೆ ದೇವರಿಲ್ಲ+ ಅಂತ ನಮಗೆ ಗೊತ್ತು.  ಸ್ವರ್ಗ ಮತ್ತು ಭೂಮಿಯಲ್ಲಿ ಎಷ್ಟೋ ದೇವರುಗಳು ಇದ್ದಾರೆ ಅಂತ ಜನ ಹೇಳ್ತಾರೆ.+ ಹಾಗಾದ್ರೆ ಜನ್ರಿಗೆ ತುಂಬ ದೇವರು, ಪ್ರಭುಗಳು ಇದ್ದಾರೆ.  ಆದ್ರೆ ನಮಗೆ ಒಬ್ಬನೇ ದೇವರು.+ ಆತನು ನಮ್ಮ ತಂದೆ.+ ಆತನು ಎಲ್ಲವನ್ನ ಸೃಷ್ಟಿ ಮಾಡಿದನು. ನಾವು ಆತನಿಗಾಗಿ ಇದ್ದೀವಿ.+ ನಮಗೆ ಒಬ್ಬನೇ ಪ್ರಭು, ಆತನು ಯೇಸು ಕ್ರಿಸ್ತ. ಆತನ ಮೂಲಕ ಎಲ್ಲ ಸೃಷ್ಟಿ ಆಯ್ತು,+ ಆತನ ಮೂಲಕ ನಾವೂ ಸೃಷ್ಟಿ ಆದ್ವಿ.  ಆದ್ರೆ ಈ ಜ್ಞಾನ ಎಲ್ರಲ್ಲಿ ಇಲ್ಲ.+ ಕೆಲವರು ಮುಂಚೆ ಮೂರ್ತಿಯನ್ನ ಆರಾಧಿಸ್ತಾ ಇದ್ದದ್ರಿಂದ ಮೂರ್ತಿಗೆ ಅರ್ಪಿಸಿದ ಪ್ರಸಾದವನ್ನ ತಿನ್ನುವಾಗ ಅದನ್ನ ಮೂರ್ತಿಪೂಜೆ ಅಂತ ನೆನಸ್ತಾರೆ.+ ಅವ್ರ ಮನಸ್ಸಾಕ್ಷಿ ಸೂಕ್ಷ್ಮವಾಗಿ ಇರೋದ್ರಿಂದ ಅದು ಚುಚ್ಚುತ್ತಾ ಇರುತ್ತೆ.*+  ನಾವು ಏನು ತಿಂತೀವೋ ಅದು ನಮ್ಮನ್ನ ದೇವರಿಗೆ ಆಪ್ತರಾಗಿ ಮಾಡಲ್ಲ.+ ನಾವು ತಿನ್ನದೇ ಇದ್ರೆ ನಮಗೇನೂ ನಷ್ಟ ಇಲ್ಲ, ತಿಂದ್ರೆ ಏನೂ ಲಾಭ ಇಲ್ಲ.+  ಆಯ್ಕೆ ಮಾಡೋಕೆ ನಿಮಗಿರೋ ಸ್ವಾತಂತ್ರ್ಯ ಸೂಕ್ಷ್ಮ ಮನಸ್ಸಾಕ್ಷಿ ಇರುವವ್ರನ್ನ ಎಡವಿಸೋ ಕಲ್ಲಿನ ತರ ಆಗದ ಹಾಗೆ ನೋಡ್ಕೊಳ್ಳಿ.+ 10  ಜ್ಞಾನವಿರೋ ನೀವು ಮೂರ್ತಿಗಳ ದೇವಸ್ಥಾನದಲ್ಲಿ ಊಟ ಮಾಡ್ತಾ ಇರೋದನ್ನ ಸೂಕ್ಷ್ಮ ಮನಸ್ಸಾಕ್ಷಿ ಇರೋ ಒಬ್ಬ ಸಹೋದರ ನೋಡಿದ್ರೆ, ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದವನ್ನೂ ತಿನ್ನುವಷ್ಟು ಧೈರ್ಯ ಮಾಡಬಹುದಲ್ವಾ? 11  ಹೀಗೆ ಯಾರಿಗಾಗಿ ಕ್ರಿಸ್ತನು ಸತ್ತನೋ ಆ ನಿನ್ನ ಸಹೋದರನ ನಂಬಿಕೆ ನಿನ್ನ ಜ್ಞಾನದಿಂದಾಗಿ ಹಾಳಾಗುತ್ತೆ.+ 12  ಈ ರೀತಿ ನೀವು ನಿಮ್ಮ ಸಹೋದರರ ವಿರುದ್ಧ ಪಾಪಮಾಡಿ ಅವ್ರ ಸೂಕ್ಷ್ಮ ಮನಸ್ಸಾಕ್ಷಿಯನ್ನ ಗಾಯ ಮಾಡಿಸೋದು+ ಕ್ರಿಸ್ತನ ವಿರುದ್ಧ ಮಾಡೋ ಪಾಪವಾಗಿದೆ. 13  ಹಾಗಾಗಿ ನಾನು ತಿನ್ನೋ ಮಾಂಸದಿಂದ ನನ್ನ ಸಹೋದರನ ನಂಬಿಕೆ ಹಾಳಾಗುತ್ತೆ ಅಂದ್ರೆ ನನ್ನ ಸಹೋದರನನ್ನ ಎಡವಿಸದೇ ಇರೋಕೆ ನಾನು ಯಾವತ್ತೂ ಮಾಂಸ ತಿನ್ನಲ್ಲ.+

ಪಾದಟಿಪ್ಪಣಿ

ಅಕ್ಷ. “ಅಶುದ್ಧವಾಗುತ್ತೆ.”