ಒಂದನೇ ಪೂರ್ವಕಾಲವೃತ್ತಾಂತ 19:1-19

  • ಅಮ್ಮೋನಿಯರಿಂದ ದಾವೀದನ ಸಂದೇಶವಾಹಕರಿಗೆ ಅವಮಾನ (1-5)

  • ಅಮ್ಮೋನ್‌ ಮತ್ತು ಅರಾಮ್ಯರ ವಿರುದ್ಧ ಜಯ (6-19)

19  ಅಮ್ಮೋನಿಯರ ರಾಜ ನಾಹಾಷ ಸತ್ತುಹೋದ. ಆಮೇಲೆ ಅವನ ಮಗ ಹಾನೂನ ರಾಜ ಆದ.+  ಆಗ ದಾವೀದ “ನಾನು ನಾಹಾಷನ ಮಗ ಹಾನೂನನಿಗೆ ಶಾಶ್ವತ ಪ್ರೀತಿ ತೋರಿಸ್ತೀನಿ.+ ಯಾಕಂದ್ರೆ ಅವನ ಅಪ್ಪ ನನಗೂ ಅಂಥ ಪ್ರೀತಿ ತೋರಿಸಿದ್ದ” ಅಂದ. ಹಾಗಾಗಿ ಅಪ್ಪನನ್ನ ಕಳ್ಕೊಂಡಿದ್ದ ಹಾನೂನನಿಗೆ ಸಮಾಧಾನ ಮಾಡೋಕೆ ದಾವೀದ ತನ್ನ ಸಂದೇಶವಾಹಕರನ್ನ ಕಳಿಸಿದ. ಆದ್ರೆ ದಾವೀದನ ಸೇವಕರು ಅಮ್ಮೋನಿಯರ+ ದೇಶಕ್ಕೆ ಬಂದಾಗ  ಅಮ್ಮೋನಿಯರ ಅಧಿಕಾರಿಗಳು ಹಾನೂನನಿಗೆ “ಸಮಾಧಾನ ಮಾಡೋಕೆ ಜನ್ರನ್ನ ಕಳಿಸಿ ದಾವೀದ ನಿನ್ನ ಅಪ್ಪನನ್ನ ಗೌರವಿಸ್ತಿದ್ದಾನೆ ಅಂತ ಅಂದ್ಕೊಂಡಿದ್ದೀಯಾ? ಇಡೀ ದೇಶವನ್ನ ಚೆನ್ನಾಗಿ ನೋಡಿ, ಗೂಢಚಾರಿಕೆ ಮಾಡಿ ವಶ ಮಾಡ್ಕೊಳ್ಳೋಕೆ ದಾವೀದ ತನ್ನ ಸೇವಕರನ್ನ ಕಳಿಸಿದ್ದಾನೆ” ಅಂದ್ರು.  ಹಾಗಾಗಿ ಹಾನೂನ ದಾವೀದನ ಸೇವಕರನ್ನ ಕರ್ಕೊಂಡು ಹೋಗಿ ಅವ್ರ ಗಡ್ಡ ಬೋಳಿಸಿ+ ಅವ್ರ ಸೊಂಟದ ಕೆಳಭಾಗ ಕಾಣೋ ತರ ಬಟ್ಟೆ ಕತ್ತರಿಸಿ ಕಳಿಸಿಬಿಟ್ಟ.  ತನ್ನ ಸೇವಕರಿಗೆ ತುಂಬ ಅವಮಾನ ಮಾಡಿದ್ದು ದಾವೀದನಿಗೆ ಗೊತ್ತಾದಾಗ ಕೂಡ್ಲೇ ಅವ್ರನ್ನ ಭೇಟಿ ಮಾಡೋಕೆ ಬೇರೆ ಗಂಡಸ್ರನ್ನ ಕಳಿಸಿ “ನಿಮ್ಮ ಗಡ್ಡ ಮತ್ತೆ ಬೆಳೆಯೋ ತನಕ ಯೆರಿಕೋನಲ್ಲೇ+ ಇರಿ. ಆಮೇಲೆ ವಾಪಸ್‌ ಬನ್ನಿ” ಅಂದ.  ಅದೇ ಸಮಯಕ್ಕೆ ದಾವೀದನಿಗೆ ತಮ್ಮ ಮೇಲೆ ತುಂಬ ದ್ವೇಷ ಇದೆ ಅಂತ ಅಮ್ಮೋನಿಯರಿಗೆ ಗೊತ್ತಾಯ್ತು. ಹಾಗಾಗಿ ಹಾನೂನ ಮತ್ತು ಅಮ್ಮೋನಿಯರು ಮೆಸಪಟೇಮ್ಯದಿಂದ,* ಅರಾಮ್‌-ಮಾಕದಿಂದ, ಚೋಬದಿಂದ ರಥಗಳನ್ನ, ಕುದುರೆಸವಾರರನ್ನ ಬಾಡಿಗೆ ತಗೊಳ್ಳೋಕೆ 1,000 ಬೆಳ್ಳಿಯ ತಲಾಂತುಗಳನ್ನ* ಕಳಿಸ್ಕೊಟ್ರು.+  ಹೀಗೆ ಅವರು 32,000 ರಥಗಳನ್ನ, ಮಾಕಾದ ರಾಜನನ್ನ, ಅವನ ಜನ್ರನ್ನ ಬಾಡಿಗೆಗೆ ತಗೊಂಡು ಬಂದ್ರು. ಅವ್ರೆಲ್ಲ ಮೇದೆಬದ+ ಮುಂದೆ ಪಾಳೆಯ ಹೂಡಿದ್ರು. ಅಮ್ಮೋನಿಯರು ತಮ್ಮತಮ್ಮ ಪಟ್ಟಣಗಳಿಂದ ಯುದ್ಧಕ್ಕಾಗಿ ಬಂದ್ರು.  ಈ ಸುದ್ದಿ ಕೇಳಿಸ್ಕೊಂಡಾಗ ದಾವೀದ ಯೋವಾಬನನ್ನ,+ ತುಂಬ ಬಲಿಷ್ಠ ವೀರ ಸೈನಿಕರಿದ್ದ ತನ್ನ ಇಡೀ ಸೈನ್ಯ ಕಳಿಸಿದ.+  ಅಮ್ಮೋನಿಯರು ಪಟ್ಟಣದ ಬಾಗಿಲ ಹತ್ರ ಸೈನ್ಯ ಕಟ್ಟಿದ್ರು. ಆ ಸಮಯದಲ್ಲಿ ಯುದ್ಧಕ್ಕಾಗಿ ಬಂದಿದ್ದ ಬೇರೆ ರಾಜರು ಪ್ರತ್ಯೇಕವಾಗಿ ಬಯಲಲ್ಲಿ ನಿಂತಿದ್ರು. 10  ಯೋವಾಬ ತನ್ನ ಹಿಂದೆ ಮುಂದೆ ವೇಗವಾಗಿ ಬರ್ತಿದ್ದ ಸೈನ್ಯವನ್ನ ನೋಡಿ ಇಸ್ರಾಯೇಲಿನಲ್ಲಿ ಇದ್ದ ಉತ್ತಮ ಸೈನಿಕರನ್ನ ಆರಿಸ್ಕೊಂಡು ಅರಾಮ್ಯರ ವಿರುದ್ಧ ಹೋಗೋಕೆ ಸೈನ್ಯ ಕಟ್ಟಿದ.+ 11  ಉಳಿದ ಗಂಡಸ್ರನ್ನ ಅಣ್ಣನಾದ ಅಬೀಷೈ+ ಕೈಗೆ ಕೊಟ್ಟು ಸೈನ್ಯ ಕಟ್ಕೊಂಡು ಅಮ್ಮೋನಿಯರ ವಿರುದ್ಧ ಹೋಗೋಕೆ ಹೇಳಿದ. 12  ಆಮೇಲೆ ಯೋವಾಬ “ಅರಾಮ್ಯರು+ ನನ್ನನ್ನ ಸೋಲಿಸೋ ತರ ಕಂಡ್ರೆ ನೀನು ಸಹಾಯಕ್ಕೆ ಬರಬೇಕು, ಅಮ್ಮೋನಿಯರು ನಿನ್ನನ್ನ ಸೋಲಿಸೋ ತರ ಕಂಡ್ರೆ ನಾನು ನಿನ್ನನ್ನ ಕಾಪಾಡ್ತೀನಿ. 13  ನಾವು ದೃಢವಾಗಿರಬೇಕು. ಧೈರ್ಯದಿಂದ+ ನಮ್ಮ ಜನ್ರಿಗಾಗಿ, ನಮ್ಮ ದೇವರ ಪಟ್ಟಣಗಳಿಗಾಗಿ ಹೋರಾಡಬೇಕು. ತನಗೆ ಯಾವುದು ಒಳ್ಳೇದಂತ ಯೆಹೋವನಿಗೆ ಅನಿಸುತ್ತೋ ಅದನ್ನೇ ಆತನು ಮಾಡ್ತಾನೆ” ಅಂದ. 14  ಆಮೇಲೆ ಯೋವಾಬ, ಅವನ ಸೈನಿಕರು ಅರಾಮ್ಯರ ವಿರುದ್ಧ ಯುದ್ಧಕ್ಕೆ ಹೋದ್ರು. ಅರಾಮ್ಯರು ಅವನಿಗೆ ಹೆದರಿ ಓಡಿಹೋದ್ರು.+ 15  ಅರಾಮ್ಯರು ಓಡಿಹೋಗಿರೋದನ್ನ ನೋಡಿದಾಗ ಅಮ್ಮೋನಿಯರು ಸಹ ಯೋವಾಬನ ಸಹೋದರ ಅಬೀಷೈಗೆ ಹೆದರಿ ಪಟ್ಟಣಕ್ಕೆ ಓಡಿಹೋದ್ರು. ಆಮೇಲೆ ಯೋವಾಬ ಯೆರೂಸಲೇಮಿಗೆ ಬಂದ. 16  ಇಸ್ರಾಯೇಲ್ಯರಿಂದ ಸೋತು ಹೋಗಿದ್ದೀವಿ ಅಂತ ಅರಾಮ್ಯರಿಗೆ ಗೊತ್ತಾದಾಗ ನದಿಯ*+ ಪ್ರದೇಶದಲ್ಲಿದ್ದ ಅರಾಮ್ಯರನ್ನ ಸೇರಿಸೋಕೆ ಸಂದೇಶವಾಹಕರನ್ನ ಕಳಿಸಿದ್ರು. ಅವ್ರನ್ನ ಹದದೆಜೆರನ ಸೇನಾಪತಿಯಾಗಿದ್ದ ಶೋಫಕ ಮುನ್ನಡೆಸಿದ.+ 17  ಈ ಸುದ್ದಿ ದಾವೀದನಿಗೆ ಮುಟ್ಟಿದ ತಕ್ಷಣ ಅವನು ಎಲ್ಲ ಇಸ್ರಾಯೇಲ್ಯರನ್ನ ಒಟ್ಟುಸೇರಿಸಿ ಯೋರ್ದನ್‌ ದಾಟಿ ಅವ್ರ ಹತ್ರ ಬಂದ. ಅವನು ಅರಾಮ್ಯರ ವಿರುದ್ಧ ಯುದ್ಧ ಮಾಡೋಕೆ ಸೈನ್ಯ ಕಟ್ಟಿದ. ಅರಾಮ್ಯರು ಅವನ ವಿರುದ್ಧ ಯುದ್ಧ ಮಾಡಿದ್ರು.+ 18  ಆದ್ರೆ ಅರಾಮ್ಯರು ಇಸ್ರಾಯೇಲ್ಯರ ಮುಂದಿಂದ ಓಡಿಹೋದ್ರು. ದಾವೀದ ಅರಾಮ್ಯರ 7,000 ಸಾರಥಿಗಳನ್ನ, 40,000 ಕಾಲಾಳುಗಳನ್ನ ಕೊಂದ. ಅವ್ರ ಸೇನಾಪತಿಯಾಗಿದ್ದ ಶೋಫಕನನ್ನ ಕೊಂದ. 19  ತಾವು ಇಸ್ರಾಯೇಲ್ಯರ ಕೈಯಲ್ಲಿ ಸೋತು ಹೋಗ್ತೀವಿ+ ಅಂತ ಹದದೆಜೆರನ ಸೇವಕರು ನೋಡಿದಾಗ ತಕ್ಷಣ ದಾವೀದನ ಜೊತೆ ಸಮಾಧಾನ ಮಾಡ್ಕೊಂಡು ಅವನಿಗೆ ಅಧೀನರಾದ್ರು.+ ಅವತ್ತಿಂದ ಅಮ್ಮೋನಿಯರಿಗೆ ಸಹಾಯ ಮಾಡೋಕೆ ಅರಾಮ್ಯರಿಗೆ ಭಯ ಆಯ್ತು.

ಪಾದಟಿಪ್ಪಣಿ

ಅಕ್ಷ. “ಅರಾಮ್‌-ನಹರೈಮ್‌.”
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಅದು, ಯೂಫ್ರೆಟಿಸ್‌ ನದಿ.