ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸದಾ ಎಚ್ಚರವಾಗಿರಿ! 

ಉಕ್ರೇನ್‌ ಯುದ್ಧದಿಂದಾಗಿ ಲೋಕದಲ್ಲಿ ಆಹಾರಕ್ಕೆ ಹಾಹಾಕಾರ!

ಉಕ್ರೇನ್‌ ಯುದ್ಧದಿಂದಾಗಿ ಲೋಕದಲ್ಲಿ ಆಹಾರಕ್ಕೆ ಹಾಹಾಕಾರ!

 ಮೇ 19, 2022ರಂದು 75ಕ್ಕಿಂತ ಜಾಸ್ತಿ ಉನ್ನತ ಅಧಿಕಾರಿಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಈ ವರದಿ ಕೊಟ್ಟರು. ಅವರು ಹೇಳಿದ್ದು, “ಕೋವಿಡ್‌ ಮತ್ತು ಹವಾಮಾನ ಬದಲಾವಣೆಯಿಂದ ಈಗಾಗಲೇ ಲೋಕದಲ್ಲಿ ಆಹಾರ ಆಭಾವ ಜಾಸ್ತಿ ಆಗಿದೆ. ಉಕ್ರೇನ್‌ನಲ್ಲಿ ಆಗ್ತಿರೋ ಯುದ್ಧ ನೋಡಿದ್ರೆ ಕೆಲವು ಜಾಗಗಳು ಬರಗಾಲಕ್ಕೆ ತುತ್ತಾಗೋದು ಜಾಸ್ತಿ ದೂರ ಇಲ್ಲ ಅನ್ಸುತ್ತೆ.” ಇದಾದ ಮೇಲೆ ದಿ ಎಕನಾಮಿಸ್ಟ್‌ ಅನ್ನೋ ಪತ್ರಿಕೆ ಹೇಳಿದ್ದು, “ಈಗಾಗಲೇ ಲೋಕದಲ್ಲಿ ಕಷ್ಟಗಳ ಸರಮಾಲೆನೇ ಇದೆ. ಅದರಲ್ಲೊಂದು ಆಹಾರದ ಕೊರತೆ. ಆದ್ರೆ ಉಕ್ರೇನ್‌ನಲ್ಲಿ ಆಗ್ತಿರೋ ಯುದ್ಧದಿಂದ ಈ ಸಮಸ್ಯೆ ಕೈಮೀರಿ ಹೋಗೋ ಸಾಧ್ಯತೆ ಇದೆ.” ನಮ್ಮ ಕಾಲದಲ್ಲಿ ಈ ತರ ಆಹಾರದ ಕೊರತೆ ಆಗುತ್ತೆ ಅಂತ ಬೈಬಲ್‌ ಮೊದಲೇ ಹೇಳಿತ್ತು, ಅಂಥ ಸಮಯದಲ್ಲಿ ಏನು ಮಾಡಬೇಕು ಅಂತನೂ ಬೈಬಲ್‌ ಸಲಹೆ ಕೊಟ್ಟಿದೆ.

ಆಹಾರದ ಕೊರತೆ ಆಗುತ್ತೆ ಅಂತ ಬೈಬಲ್‌ ಮೊದಲೇ ಹೇಳಿತ್ತು

  •    ಯೇಸು ಹೇಳಿದ್ದು: “ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ. ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆ ಇರುತ್ತೆ.”—ಮತ್ತಾಯ 24:7.

  •    ಪ್ರಕಟನೆ ಪುಸ್ತಕದಲ್ಲಿ ನಾಲ್ಕು ಕುದುರೆ ಸವಾರರ ಬಗ್ಗೆ ತಿಳಿಸಲಾಗಿದೆ. ಇವರು ನಿಜವಾದ ಕುದುರೆ ಸವಾರರಲ್ಲ. ಇದರಲ್ಲಿ ಒಬ್ಬ ಸವಾರ ಯುದ್ಧಗಳನ್ನ ಸೂಚಿಸ್ತಾನೆ. ಇದರ ನಂತರ ಬರೋ ಇನ್ನೊಬ್ಬ ಕುದುರೆ ಸವಾರ ಬರಗಾಲವನ್ನ ಸೂಚಿಸ್ತಾನೆ. ಆ ಸಮಯದಲ್ಲಿ ಜನ ಆಹಾರಕ್ಕಾಗಿ ಎಷ್ಟು ಪರದಾಡುತ್ತಾರೆ ಅಂದ್ರೆ ತುತ್ತು ಅನ್ನಕ್ಕೂ ಸಾವಿರಾರು ರೂಪಾಯಿ ಕೊಡಬೇಕಾಗುತ್ತೆ. “ನಾನು ನೋಡ್ತಿದ್ದಾಗ ಒಂದು ಕಪ್ಪು ಕುದುರೆ ಬಂತು. ಅದ್ರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ತಕ್ಕಡಿ ಇತ್ತು . . . ಒಂದು ಧ್ವನಿ ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡೆ: ‘ಒಂದು ದಿನಾರಿಗೆ [ಒಂದು ದಿನದ ಕೂಲಿಗೆ, ಪಾದಟಿಪ್ಪಣಿ] ಒಂದು ಕಿಲೋ ಗೋದಿ. ಒಂದು ದಿನಾರಿಗೆ ಮೂರು ಕಿಲೋ ಬಾರ್ಲಿ.’”—ಪ್ರಕಟನೆ 6:5, 6.

 ನಾವು ಜೀವಿಸೋ ಕಾಲವನ್ನು ಬೈಬಲ್‌ ‘ಕೊನೇ ದಿನಗಳು’ ಅಂತ ಕರೆಯುತ್ತೆ. ಆಹಾರದ ಕೊರತೆ ಇರುತ್ತೆ ಅಂತ ಬೈಬಲಿನಲ್ಲಿ ಹೇಳಿರೋ ಮಾತು ಈಗ ನಮ್ಮ ಕಣ್ಮುಂದೆನೇ ನಡೀತಾ ಇದೆ. (2 ತಿಮೊತಿ 3:1) ‘ಕೊನೇ ದಿನಗಳು’ ಮತ್ತು ಪ್ರಕಟನೆ ಪುಸ್ತಕದಲ್ಲಿ ಹೇಳಿದ ನಾಲ್ಕು ಕುದುರೆ ಸವಾರರ ಬಗ್ಗೆ ಇನ್ನೂ ಜಾಸ್ತಿ ವಿಷ್ಯ ತಿಳ್ಕೊಳ್ಳೋಕೆ 1914ರಿಂದ ಲೋಕದಲ್ಲಾದ ಬದಲಾವಣೆ ಅನ್ನೋ ವಿಡಿಯೋ ನೋಡಿ ಮತ್ತು ನವೆಂಬರ್‌ 2019ರ ಕೂಟದ ಕೈಪಿಡಿಯಲ್ಲಿರುವ “ನಾಲ್ಕು ಕುದುರೆ ಸವಾರರ ಸವಾರಿ” ಅನ್ನೋ ಲೇಖನ ಓದಿ.

ಬೈಬಲ್‌ ಕೊಡುವ ಸಹಾಯ

  •    ಆಹಾರದ ಕೊರತೆ ಮತ್ತು ಬೆಲೆಯೇರಿಕೆಯಂಥ ಅನೇಕ ಸಮಸ್ಯೆಗಳನ್ನ ನಾವು ಹೇಗೆ ನಿಭಾಯಿಸಿಕೊಂಡು ಹೋಗಬಹುದು ಅನ್ನೋದಕ್ಕೆ ಬೈಬಲ್‌ ಪ್ರಾಯೋಗಿಕ ಸಲಹೆಗಳನ್ನ ಕೊಡುತ್ತೆ. ಆ ಸಲಹೆಗಳಲ್ಲಿ ಕೆಲವನ್ನ ತಿಳ್ಕೊಳ್ಳೋಕೆ “ಕಮ್ಮಿ ಕಾಸಲ್ಲಿ ಬಂಪರ್‌ ಬದುಕು” ಅನ್ನೋ ಲೇಖನ ನೋಡಿ.

  •    ಪರಿಸ್ಥಿತಿ ಹೀಗೇ ಇರಲ್ಲ, ಮುಂದೆ ನಮಗೆ ಒಂದು ಭವ್ಯವಾದ ಭವಿಷ್ಯ ಇದೆ ಅಂತ ಬೈಬಲ್‌ ಹೇಳುತ್ತೆ. ಆ ಸಮಯದಲ್ಲಿ “ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ” ಮತ್ತೆ ಎಲ್ಲರಿಗೂ ಸಾಕಷ್ಟು ಆಹಾರನೂ ಇರುತ್ತೆ. (ಕೀರ್ತನೆ 72:16) ಬೈಬಲ್‌ ಹೇಳೋ ಈ ಭವ್ಯವಾದ ಭವಿಷ್ಯದ ಬಗ್ಗೆ ಮತ್ತು ಯಾಕೆ ಇದನ್ನ ನಂಬಬಹುದು ಅಂತ ತಿಳ್ಕೊಳ್ಳೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯಲ್ಲಿರೋ “ಸುಂದರ ಭವಿಷ್ಯದ ಬಗ್ಗೆ ಪವಿತ್ರ ಗ್ರಂಥ ಕೊಡೋ ಮಾತು” ಅನ್ನೋ 2ನೇ ಪಾಠ ಓದಿ.