ಒಂದು “ಸಾಂಕೇತಿಕ ನಾಟಕ”
ಧರ್ಮಶಾಸ್ತ್ರದ ಒಡಂಬಡಿಕೆಗಿಂತ ಹೊಸ ಒಡಂಬಡಿಕೆ ಶ್ರೇಷ್ಠ ಎಂದು ತೋರಿಸಲು ಅಪೊಸ್ತಲ ಪೌಲನು ಈ ‘ಸಾಂಕೇತಿಕ ನಾಟಕವನ್ನು’ ಹೇಳಿದನು. ಕ್ರಿಸ್ತನು ಮತ್ತು ಆತನ ಬಾಧ್ಯಸ್ಥರು ಆಡಳಿತ ನಡೆಸುವಾಗ ಎಲ್ಲ ಮಾನವರು ಪಾಪ, ಅಪರಿಪೂರ್ಣತೆ, ದುಃಖ, ಮರಣ ಯಾವುದೂ ಇಲ್ಲದೆ ಜೀವಿಸುತ್ತಾರೆ.—ಯೆಶಾ 25:8, 9.
ಸೇವಕಿಯಾದ ಹಾಗರ್ ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗಿದ್ದ ಇಸ್ರಾಯೇಲ್. ಯೆರೂಸಲೇಮ್ ಅದರ ರಾಜಧಾನಿ ಆಗಿತ್ತು |
ಸ್ವತಂತ್ರ ಸ್ತ್ರೀಯಾದ ಸಾರ ಮೇಲಣ ಯೆರೂಸಲೇಮ್. ಇದು ದೇವರ ಸಂಘಟನೆಯ ಸ್ವರ್ಗೀಯ ಭಾಗ ಆಗಿದೆ |
ಹಾಗರಳ ‘ಮಕ್ಕಳು’ ಯೇಸುವನ್ನು ಹಿಂಸಿಸಿ, ತಿರಸ್ಕರಿಸಿದ ಯೆಹೂದ್ಯರು. ಇವರು ಧರ್ಮಶಾಸ್ತ್ರವನ್ನು ಪಾಲಿಸುತ್ತೇವೆ ಎಂದು ಮಾತುಕೊಟ್ಟಿದ್ದರು |
ಸಾರಳ ‘ಮಕ್ಕಳು’ ಯೇಸು ಕ್ರಿಸ್ತ ಮತ್ತು 1,44,000 ಅಭಿಷಿಕ್ತ ಕ್ರೈಸ್ತರು |
ಧರ್ಮಶಾಸ್ತ್ರದ ಒಡಂಬಡಿಕೆಗೆ ದಾಸರು ಆಗಿನ ಇಸ್ರಾಯೇಲ್ಯರು. ಅವರು ಪಾಪದ ದಾಸತ್ವದಲ್ಲಿ ಇದ್ದಾರೆಂದು ಧರ್ಮಶಾಸ್ತ್ರ ನೆನಪಿಸುತ್ತಿತ್ತು |
ಹೊಸ ಒಡಂಬಡಿಕೆ ಬಿಡುಗಡೆ ತರುತ್ತದೆ ಕ್ರಿಸ್ತನ ವಿಮೋಚನಾ ಮೌಲ್ಯದಲ್ಲಿ ನಂಬಿಕೆ ಇಟ್ಟರೆ ಪಾಪದಿಂದ ಬಿಡುಗಡೆ ಸಿಗುತ್ತದೆ |